Skip to main content

ಮರದೊಳಗೆ ನುಗ್ಗಿದ ಪ್ರವಾದಿ ಝಕರಿಯ್ಯಾ (ಅ)

ಮರದೊಳಗೆ ನುಗ್ಗಿದ ಪ್ರವಾದಿ ಝಕರಿಯ್ಯಾ (ಅ)

*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 553499119


   ▪ *ಪ್ರವಾದಿ* ಝಕರಿಯ್ಯಾ (ಅ) ರನ್ನು ಹತ್ಯೆ ಮಾಡಲು ಅವರ ಅಂದಿನ ಜನಾಂಗವಾದ ಇಸ್ರೇಲೀ ಸಂತತಿಗಳು ಖಡ್ಗ, ಕತ್ತಿ , ದೊಣ್ಣೆಯೊಂದಿಗೆ ಅವರ ವಾಸಸ್ಥಳಕ್ಕೆ ಬಂದರು.
   ▪ *ಶತ್ರುಗಳು* ಕೊಲ್ಲಲು ಬರುತ್ತಾರೆಂದು ತಿಳಿದಾಗ ಅವರು ಮನೆಯಿಂದ ಹತ್ತಿರದ ಕಾಡಿನೊಳಗೆ ನುಗ್ಗಿದರು. ಇದನ್ನರಿತ ಶತ್ರುಗಳು ನಾಲ್ಕು ದಿಕ್ಕಿನಿಂದಲೂ ಆಯುಧಗಳೊಂದಿಗೆ ಕಾಡಿಗೆ ಪ್ರವೇಶಿಸಿದರು.
   ▪ *ಏನು* ಮಾಡಬೇಕೆಂದು ತಿಳಿಯದೆ ಕಾಡಿನಲ್ಲಿ ತನ್ನ ಜೀವವನ್ನು ಒಂದು ಕೈಯಲ್ಲಿ ಹಿಡಿದು ಓಡುತ್ತಿದ್ದ ಹಝ್ರತ್ ಝಕರಿಯ್ಯಾ (ಅ) ರನ್ನು ಕಾಡಿನಲ್ಲಿ ಒಂದು ದೊಡ್ಡ ಮರವು  ಕರೆದು ಹೇಳಿತು. *"ಹಝ್ರತ್ ಝಕರಿಯ್ಯಾರವರೇ., ಈ ಕಡೆ ಬನ್ನಿ . ನಾನು ನನ್ನ ಕಾಂಡದ ಭಾಗವನ್ನು ಸೀಳಿ ಕೊಡುತ್ತೇನೆ. ನೀವು ಅದರೊಳಗೆ ಅವಿತುಕೊಳ್ಳಿ.*"
   ▪ *ಅಂತೆಯೇ* ಬೃಹದಾಕಾರದ ಮರದ ಕಾಂಡವು ಇಭ್ಭಾಗವಾಯಿತು. ಕೂಡಲೇ ಪ್ರವಾದಿ ಝಕರಿಯ್ಯಾ (ಅ) ಅದರೊಳಗೆ ನುಗ್ಗಿದರು. ಅಷ್ಟರಲ್ಲಿ ಕಾಂಡವು ಜೋಡಿಕೊಂಡಿತು.
   ▪ *ಇತ್ತ* ಅವರು ಮರದ ಒಳಗೆ ನುಗ್ಗಲು ಶ್ರಮಿಸುತ್ತಿರುವಾಗ ಅದನ್ನು ನೋಡಿದ  ಇಬ್‌ಲೀಸನು (ಲ) ಅವರ ಹಿಂದಿನಿಂದ ಓಡಿಹೋಗಿ ಅವರ ವಸ್ತ್ರವನ್ನು ಕೈಯಿಂದ ಹಿಡಿದು ಎಳೆದನು. ಇಭ್ಭಾಗವಾದ ಮರದ ಕಾಂಡವು ಪರಸ್ಪರ ಜೋಡನೆಯಾದರೂ ಅವರು ಧರಿಸಿದ್ದ ಬಟ್ಟೆಯ ಒಂದು ತುದಿ ಮರದ ಕಾಂಡದಲ್ಲಿ ಹೊರಗೆ ಚೆನ್ನಾಗಿ ಕಾಣುತ್ತಿತ್ತು.
   ▪ *ಆಯುಧಗಳೊಂದಿಗೆ* ಕಾಡಿನಲ್ಲಿ ಸುತ್ತಾಡುತ್ತಿದ್ದ ಶತ್ರುಗಳಲ್ಲಿ ಇಬ್‌ಲೀಸನು ಹೇಳಿದನು. *"ನೀವು ಹುಡುಕುತ್ತಿರುವ ವ್ಯಕ್ತಿ ಇದರೊಳಗಿದ್ದಾನೆ. ಈ ಕಾಣುವ ಬಟ್ಟೆಯ ತುದಿಯೇ ಅದಕ್ಕೆ ಸಾಕ್ಷಿ. ತಡಮಾಡಬೇಡಿ. ಮರದ ಮೇಲಿನ ರೆಂಬೆಗಳನ್ನು ಕಡಿದು ನಂತರ ಕಾಂಡದ ಮೇಲ್ಭಾಗದಿಂದ ಗರಗಸದಲ್ಲಿ ಕೊಯ್ಯುತ್ತಾ ಬನ್ನಿ. ಮೊದಲಿಗೆ ಅವನ ತಲೆಗೆ ಅದರ ನೋವು ಸಿಗುತ್ತದೆ."*
   ▪ *ಇಬ್‌ಲೀಸನ* (ಲ) ಉಪಾಯವು ಬಹಳ ಸೂಕ್ತವಾದದ್ದೆಂದು ತಿಳಿದ ಅವರು ರೆಂಬೆಗಳನ್ನು ಕಡಿದು ನಂತರ ಮರದ ಕಾಂಡದ ಮೇಲ್ಭಾಗದಿಂದ ಗರಗಸದಲ್ಲಿ ಕೊಯ್ಯುತ್ತಾ ಬಂದ‌ರು. ಸುಬ್‌ಹಾನಲ್ಲಾಹ್.. ಹರಿತವಾದ ಗರಗಸದ ಹಲ್ಲು ಅವರ ತಲೆಯ ಮೇಲೆ ಸ್ಪರ್ಶವಾದಾಗ ನೋವು ತಡೆಯಲಾಗದೆ *"ಯಾ ಅಲ್ಲಾ.. ಅಬ್ಬಾ...ಅಬ್ಬಾ.."* ಇತ್ಯಾದಿ ಸಾಮಾನ್ಯವಾಗಿ ನಾವು ನೋವು ಉಂಟಾಗುವಾಗ ಹೇಳುವ ಮಾತು ಹೇಳಿ ಬೊಬ್ಬೆ ಹಾಕಿದರು.
   ▪ *ಅಷ್ಟು* ಹೇಳಿ ಬೊಬ್ಬೆ ಹಾಕಿದ್ದೇ ತಡ ಅಲ್ಲಾಹನ ಕಡೆಯಿಂದ ಅವರಿಗೆ ಸಂದೇಶ ಬಂತು. *"ನೀವು ನೋವು ತಡೆಯಲಾಗದೆ ಒಮ್ಮೆ ಬೊಬ್ಬೆ ಹಾಕಿದ್ದು ಪರವಾಗಿಲ್ಲ. ಹೀಗೆಯೇ ಎರಡನೇ ಬಾರಿ ಬೊಬ್ಬೆ ಹಾಕಿದ್ದರೆ ಅಂಬಿಯಾಗಳ (ಪ್ರವಾದಿಗಳ) ಪಟ್ಟಿಯಿಂದ ನಿಮ್ಮ ಹೆಸರನ್ನೇ ತೆಗೆಯುತ್ತಿದ್ದೆನು."*
   ▪ *ನಂತರ* ಅವರ ಶರೀರವನ್ನು ತಲೆಯಿಂದ ಹಿಡಿದು ಕಾಲಿನ ತನಕ ಗರಗಸದಲ್ಲಿ ಎರಡು ಸೀಳು ಮಾಡಿದರು.

ಸಂಗ್ರಹ; ಇಮಾಮ್
ಸ್ವಫೂರಿಯ *ನುಝ್‌ಹತುಲ್ ಮಜಾಲಿಸ್* ಎಂಬ ಗ್ರಂಥ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...