Skip to main content

ಖಾಝಿ ಶೈಖ್ ಸಈದ್ ಮುಸ್ಲಿಯಾರ್ (ಖ:ಸಿ) ಕಿಝೂರ್, ಪಯೊಟ್ಟ, ಕಳನಾಡ್, ಕಾಸರಗೋಡು.

ಖಾಝಿ ಶೈಖ್ ಸಈದ್ ಮುಸ್ಲಿಯಾರ್ (ಖ:ಸಿ) ಕಿಝೂರ್, ಪಯೊಟ್ಟ, ಕಳನಾಡ್, ಕಾಸರಗೋಡು.
➖➖➖➖➖➖➖
🕌🕌🕌🕌🕌🕌🕌
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
**********************

ಸುಮಾರು ಒಂದೂವರೆ ಶತಮಾನಗಳ ಹಿಂದೆ ಕೇರಳ ಸಮೂಹವನ್ನು ಆಧ್ಯಾತ್ಮಿಕ ಪ್ರಭೆಯಿಂದ ಬೆಳಗಿಸಿದ ಮಹಾ ವಿದ್ವಾಂಸರಾಗಿದ್ದಾರೆ. ಖಾಝಿ ಸ‌ಈದ್ ಮುಸ್ಲಿಯಾರ್ (ಖ.ಸಿ)ರವರು.

ಕಾಸರಗೋಡು ಜಿಲ್ಲೆಯ ಕುಂಞಾರ್‌ನ ಖಾಝಿ ಅಹ್ಮದ್ ಮುಸ್ಲಿಯಾರ್ (ಖ.ಸಿ) ಪುತ್ರರಾದ
ಖಾಝಿ ಸ‌ಈದ್ ಮುಸ್ಲಿಯಾರ್ (ಖ.ಸಿ)ರವರು ಚಿಕ್ಕ ವಯಸ್ಸಿನಲ್ಲೇ ಉತ್ಸಾಹದಿಂದ ಬಹಳಷ್ಟು ಧಾರ್ಮಿಕ ವಿದ್ಯೆ ಕರಗತ ಮಾಡಿಕೊಂಡ ನಂತರ ಅಲ್ ಅಝ್ಹರ್ ಎಂದು ಅರಿಯಲ್ಪಡುವ ಪೊನ್ನಾನಿಗೆ ತೆರಳಿ ಉನ್ನತ ವ್ಯಾಸಂಗ ಪಡೆದರು.

ಖಾಝಿ ಸ‌ಈದ್ ಮುಸ್ಲಿಯಾರ್ (ಖ.ಸಿ)ರವರು, ಪ್ರವಾದಿ ﷺِ ಪ್ರೇಮದ ಮೂಲಕ ಜಗತ್ತೇ ತಿರುಗಿ ನೋಡುವಂತಹ ಅಸಾಮಾನ್ಯ ಸಾಧನೆ ಮಾಡಿದ ಮಹಾ ವಿದ್ವಾಂಸರೂ, ಸ್ವಾತಂತ್ರ್ಯ ಹೋರಾಟಗಾರರೂ ಆದ ವೆಳಿಯಂಗೋಡು ಉಮರ್ ಖಾಝಿ (ರ) ರವರ ಸಹಪಾಠಿಯೂ, ಆತ್ಮೀಯ ಮಿತ್ರರೂ ಆಗಿದ್ದರು.

ಇಸ್ಲಾಮಿಕ್ ಧಾರ್ಮಿಕ ಸಂಹಿತೆಗಳ (ಶರಿಆತ್) ಬಗ್ಗೆ ಅಗಾಧ ಪಾಂಡಿತ್ಯ ಹೊಂದಿದ್ದ ಮಹಾನರು, ಫತ್ವಾ ನೀಡುವ ಅರ್ಹತೆ ಹೊಂದಿರುವ ಬಗ್ಗೆ ಮಹಾನರಾದ ವೆಳಿಯಂಗೋಡು ಉಮರ್ ಖಾಝಿ (ರ) ರವರಿಂದ ಅಂಗೀಕಾರ ಪಡೆದ ಫಖೀಹ್ ಕೂಡ ಆಗಿದ್ದರು.

ಉತ್ತರ ಕೇರಳದಿಂದ ಧಾರ್ಮಿಕ ವಿಧಿ ವಿಧಾನಗಳ ಬಗ್ಗೆ ತಿಳಿಯಲು ವೆಳಿಯಂಗೋಡು ಉಮರ್ ಖಾಝಿ (ರ) ರವರ ಬಳಿ ಬರುತ್ತಿದ್ದ ಜನರನ್ನು ಮಹಾನರು ಸ‌ಈದ್ ಮುಸ್ಲಿಯಾರ್ (ಖ.ಸಿ) ರವರ ಬಳಿಗೆ ಕಳುಹಿಸುತ್ತಿದ್ದರು.

ಆ ಕಾಲದ ಜಮೀನ್ದಾರರೂ, ಆಗರ್ಭ ಶ್ರೀಮಂತರೂ, ಪರೋಪಕಾರಿಯೂ ಆಗಿದ್ದ ಜನಾಬ್ ಹಸನ್ ಕುಟ್ಟಿ ಹಾಜಿಯವರು ಧಾರ್ಮಿಕ ರಂಗದಲ್ಲಿ ಬಹಳ ಆಸಕ್ತಿ ಹೊಂದಿದ್ದರು.

ಹಾಗಾಗಿ ಉನ್ನತ ಶಿಕ್ಷಣ ಗಳಿಸುವ ವಿದ್ಯಾರ್ಥಿಗಳಿಗಾಗಿ ವಿದ್ವತ್ಪೂರ್ಣ ಧಾರ್ಮಿಕ ವಿದ್ವಾಂಸರ ಸಹಯೋಗದೊಂದಿಗೆ ಒಂದು ಪಳ್ಳಿ ದರ್ಸ್ ಸ್ಥಾಪಿಸುವ ಅಭಿಲಾಷೆ ಹೊಂದಿದ್ದರು.

ಅಷ್ಟರಲ್ಲಾಗಲೇ ಕುಂಞಾರುಣ್ಣಿ ಎಂದು ಕರೆಯಲ್ಪಡುತ್ತಿದ್ದ ಖಾಝಿ ಸಈದ್ ಮುಸ್ಲಿಯಾರ್ (ಖ.ಸಿ)ರೊಂದಿಗೆ ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದರಲ್ಲದೆ ಕಾಸರಗೋಡು ಜಿಲ್ಲೆಯ  ಕಿಝೂರಿನ ಪಯೊಟ್ಟ ಎಂಬ ಸ್ಥಳದಲ್ಲಿ ಖಾಝಿ ಸ‌ಈದ್ ಮುಸ್ಲಿಯಾರ್ (ಖ.ಸಿ) ನೇತೃತ್ವದಲ್ಲಿ ಒಂದು ಪಳ್ಳಿ ದರ್ಸ್ ಪ್ರಾರಂಭಿಸಿದರು.

ಕಿಝೂರ್'ನ ಇತಿಹಾಸದಲ್ಲಿ ಇದು ಮೊಟ್ಟಮೊದಲಿಗೆ ನಿರ್ಮಿಸಿದ ಪಳ್ಳಿ ದರ್ಸ್ ಆಗಿತ್ತು. ಪಳ್ಳಿ ದರ್ಸ್ ಪ್ರಾರಂಭವಾದ ನಂತರ ಮಹಾನರು
ಕಿಝೂರಿನಲ್ಲಿ ಖಾಯಂ ಆಗಿ ವಾಸ್ತವ್ಯ ಹೂಡಿದರು.

ಉತ್ತರ ಕೇರಳದ ವಿದ್ವಾಂಸರಾದ ಅಲ್ಲಮಾ ಕಿಝೂರ್ ಇಬ್ರಾಹಿಂ ಮುಸ್ಲಿಯಾರ್ (ಖ.ಸಿ) ಕಾಸರಗೋಡು ಖಾಝಿಯಾಗಿದ್ದ ಹೆಸರಾಂತ ವಿದ್ವಾಂಸರಾದ ಖಾಝಿ ಅಬ್ದುಲ್ಲಾ ಹಾಜಿ (ಖ.ಸಿ) ಅವುಳಾಜಿ ತಂಙಳ್ (ಖ.ಸಿ) ಮೊದಲಾದ ವಿದ್ವಾಂಸರು ಈ ಪಳ್ಳಿ ದರ್ಸ್‌ನಲ್ಲಿ ವಿದ್ಯಾರ್ಥಿಗಳಾಗಿ ವ್ಯಾಸಂಗ ಮಾಡಿದ್ದಾರೆ.

ಕಳನಾಡ್ ರೈಲ್ವೆ ಸ್ಟೇಷನ್ನಿನ ಸಮೀಪದಲ್ಲಿರುವ ಅಂದಿನ ಚಿಕ್ಕ ಪಳ್ಳಿ ದರ್ಸ್'ಗೆ ದಶಕಗಳು ಕಳೆದರೂ ಜೀರ್ಣೋದ್ದಾರವಾಗದೆ ಇಂದೂ ಸಹ ಅಂದಿನಂತೆಯೇ ಇದೆ. ಅದರ ಮುಂಭಾಗದ ಪ್ರಾಂಗಣದಲ್ಲಿ ಪಳ್ಳಿ ದರ್ಸ್ ನಿರ್ಮಿಸಲು ನೆರವಾದ ಜನಾಬ್ ಹಸ್ಸನ್ ಕುಟ್ಟಿ ಹಾಜಿಯವರೊಂದಿಗೆ ಮಹಾನರಾದ ಸ‌ಈದ್ ಮುಸ್ಲಿಯಾರ್ (ಖ.ಸಿ)ರವರೂ ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.

ಉತ್ತರ ಮಲಬಾರಿನ ಧಾರ್ಮಿಕ ರಂಗಕ್ಕೆ ಅತಿ ದೊಡ್ಡ ಕೊಡುಗೆ ನೀಡಿದ ಸ‌ಈದ್ ಮುಸ್ಲಿಯಾರ್ (ಖ.ಸಿ) ರವರ ಸ್ಮರಣಾರ್ಥ 1971ರಲ್ಲಿ ಮರ್ಹೂಮ್ ಕಲ್ಲಟ್ರ ಅಬ್ದುಲ್ ಖಾದರ್ ಹಾಜಿಯವರು ತಮ್ಮ ಸ್ವಗೃಹದಲ್ಲಿ ಒಂದು ದೀನಿ ಸಂಸ್ಥೆ ಆರಂಭಿಸಿ ಅದಕ್ಕೆ *"ಸ‌ಅದಿಯ್ಯ"* ಎಂದು ನಾಮಕರಣ ಮಾಡಿದ್ದರು.

ಹಾಗೆ ಸ‌ಈದ್ ಮುಸ್ಲಿಯಾರ್ (ಖ.ಸಿ) ಹೆಸರಿನೊಂದಿಗೆ ಕಲಟ್ರ ಅಬ್ದುಲ್ ಖಾದರ್ ಹಾಜಿಯವರು ಸಂಸ್ಥಾಪಿಸಿದ ಸ‌ಅದಿಯ್ಯಾ ಸಂಸ್ಥೆಯೇ ದಶಕಗಳ ನಂತರ ನೂರುಲ್ ಉಲಮಾ ಎಂ. ಎ. ಉಸ್ತಾದರ (ಖ:ಸಿ) ನೇತೃತ್ವದಲ್ಲಿ ಅಸಂಖ್ಯ ಧಾರ್ಮಿಕ ವಿದ್ವಾಂಸರನ್ನು ರೂಪಿಸಿ ಸಮಾಜಕ್ಕೆ ಸಮರ್ಥಿಸುತ್ತಿರುವ ಜಾಮಿಯಾ ಸ‌ಅದಿಯ್ಯ ಅರೇಬಿಯಾ ಎಂಬ ಹೆಸರಾಂತ ಅರೇಬಿಕ್ ಕಾಲೇಜ್ ಆಗಿದ್ದು ಪ್ರಖ್ಯಾತಿ ಗಳಿಸಿದ್ದು ಇದು ವಿಶ್ವ ದರ್ಜೆಯ ಅರೇಬಿಕ್ ಕಾಲೇಜ್‌ಗಳಲ್ಲೊಂದಾಗಿದೆ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...