Skip to main content

ಗೌಸೇ ಆಝಮ್ ಪವಾಡಗಳು

ಗೌಸೇ ಆಝಮ್ ಪವಾಡಗಳು
(ಲೇಖಕರು: ಎಂ. ಎ ಅಬ್ದುಲ್ ಖಾದರ್ ಮುಸ್ಲಿಯಾರ್ (ರಹಿಮಹುಲ್ಲಾ)
ಕನ್ನಡಕ್ಕೆ- ಇಸ್ಮಾಯಿಲ್ ಸ'ಅದಿ ಮಾಚಾರ್ )

ಕೋಳಿಯ ಮುಳ್ಳು
ಮುಹಮ್ಮದಿಬ್ನು ಖಾಇದುಲ್ ಅವಾನಿ  (ರದಿಯಲ್ಲಾಹು ಅನ್ಹು) ಎಂಬವರು ಹೇಳಿದರು. 'ಒಬ್ಬಳು ಸ್ತ್ರೀ ತನ್ನ ಮಗನೊಂದಿಗೆ ಶೈಖ್ ಜೀಲಾನಿಯ ಬಳಿ ತಲುಪಿದರು. ತನ್ನ ಮಗುವನ್ನು ಶೈಖವರಿಗೆ ಸಮರ್ಪಿಸಿ ಇವನನ್ನು ನೀವು ಆತ್ಮೀಯ ರಂಗದಲ್ಲಿ ಪಳಗಿಸಬೇಕೆಂದು ಕೋರಿದರು. ಅವರು ಮಗುವನ್ನು ಸ್ವೀಕರಿಸಿ ಆತ್ಮೀಯವಾಗಿ ಬೆಳೆಸತೊಡಗಿದರು.

ಹೀಗಿರಲು ಒಂದು ಬಾರಿ ಮಗನನ್ನು ನೋಡಲು ಆ ತಾಯಿ ಬಂದರು. ಹಸಿವಿನಿಂದಲೂ, ನಿದ್ರಾಹೀನತೆಯಿಂದಲೂ ತನ್ನ ಮಗ ಸಣಕಲಾಗಿದ್ದನ್ನು ಕಂಡ ತಾಯಿ, ತನ್ನ ಮಗನ ಆಹಾರ ಒಣಗಿದ ರೊಟ್ಟಿ ಎಂದು ತಿಳಿದ ಕೂಡಲೇ ದುಃಖದಿಂದ ಶೈಖವರ ಬಳಿ ಬಂದರು.

ಆಗ ಶೈಖವರ ಮುಂಭಾಗದಲ್ಲಿ ತಿಂದು ಮುಗಿದ ಕೋಳಿಯೊಂದರ ಮುಳ್ಳು ರಾಶಿಬಿದ್ದಿತ್ತು. ಆ ಸ್ತ್ರೀ ಹೇಳಿದರು. “ನೀವು ಕೋಳಿಮಾಂಸ ತಿನ್ನುತ್ತಾ ನನ್ನ ಮಗನಿಗೆ ಒಣಗಿದ ರೊಟ್ಟಿ ನೀಡುವುದಾ?”
ಶೈಖ್ ಮುಳ್ಳುಗಳ ಮೇಲೆ ಕೈಯಿಟ್ಟು ಹೇಳಿದರು. 'ಕೊಳೆತು ಹೋದ ಎಲುಬುಗಳನ್ನು ಜೀವಂತಗೊಳಿಸುವ ಅಲ್ಲಾಹನ ಅನುಮತಿಯೊಂದಿಗೆ ನೀ ಎದ್ದು ನಿಲ್ಲು' ಹೇಳಿದ್ದೇ ತಡ ಅದು ಜೀವಂತ ಕೋಳಿಯಾಗಿ ಮಾರ್ಪಟ್ಟಿತು. ಅದು ಜೋರಾಗಿ ಹೀಗೆ ಹೇಳಿತು. “ಲಾ ಇಲಾಹ ಇಲ್ಲಲ್ಲಾಹು”

ಶೈಖವರು ಸ್ತ್ರೀಯೊಂದಿಗೆ ಹೇಳಿದರು. 'ಈ ಒಂದು ಅವಸ್ಥೆಗೆ ನಿಮ್ಮ ಮಗ ತಲುಪಿದರೆ ಅವನಿಗೆ ಇಷ್ಟವಿರುವುದೆಲ್ಲವನ್ನು ತಿನ್ನಬಹುದು'
(ಖಲಾಇದ್-37)

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...