ಸಮಸ್ಯೆಗಳ ವೇಳೆ ಅಲ್ಲಾಹನ ಪ್ರವಾದಿಗಳು ಏನು ಮಾಡುತ್ತಿದ್ದರು?.... ಹೌದು ನಮಗೆದುರಾಗುವ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಭೌತಿಕ, ಅಭೌತಿಕ ಹೀಗೆ ಎರಡು ಪರಿಹಾರ ಮಾರ್ಗಳು ನಮಗಿರುತ್ತದೆ... *ಎಲ್ಲಾ ಸೃಷ್ಟಿಗಳ ಸೃಷ್ಠಿಕರ್ತನೂ, ಸರ್ವಾಧಿಕಾರಿಯೂ, ಸರ್ವ ಶಕ್ತನೂ, ಸೃಷ್ಟಿ ಸಂರಕ್ಷಕನೂ ಆದ ಅಲ್ಲಾಹನ ಮೊರೆ ಹೋಗುವುದು, ಅವನಲ್ಲಿ ಪರಿಹಾರ ಬೇಡುವುದು, ಅವನಿಗೆ ಇಷ್ಠವಾಗುವ ಕಾರ್ಯಗಳನ್ನು ಹೆಚ್ಚಾಗಿ ಮಾಡುವುದು, ಅವನಿಗೆ ಇಷ್ಟವಾಗದ ತಪ್ಪುಗಳು ನಮ್ಮಲ್ಲಿದ್ದರೆ ಅವುಗಳನ್ನು ತಿದ್ದುವುದು ಇವೆಲ್ಲಾ ಅಭೌತಿಕ ಪರಿಹಾರ ಮಾರ್ಗಗಳಾಗಿವೆ.* ಅಲ್ಲಾಹನ ಪ್ರವಾದಿಗಳಿಗೆ ಸಮಸ್ಯಗಳೆದುರಾದಾಗ ಅವರು ವಿವಿಧ ರೀತಿಯ ಅಭೌತಿಕ ಪರಿಹಾರ ಮಾರ್ಗಗಳನ್ನು ಕಂಡುಕ್ಕೊಂಡದ್ದಾಗಿ ಕುರ್ಆನ್ ಹೇಳಿವೆ. ಉದಾಹರಣೆಗೆ *ಆದಮ್ ಅಲೈಹಿಸ್ಸಲಾಮ್-ರವರು* ತಾನು ಸಿಲುಕಿದ ಸಮಸ್ಯೆದ ಪರಿಹಾರಕ್ಕಾಗಿ .. ربنا ظلمنا أنفسنا و ان لم تغفر لنا وترحمنا لنكونن من الخاسرين ا... ಎಂಬ ದುಆ ಮಾಡಿ ಪರಿಹಾರ ಕಂಡುಕೊಂಡಿದ್ದರು, *ಇಬ್ರಾಹೀಮ್ (ಅ)ರವರು* ನಂರೂದನ ಅಕ್ರಮಕ್ಕೆ ವಿದೇಯರಾದಾಗ حسبي الله و نعم الوكيل ಎಂದು ಹೇಳಿ ರಕ್ಷಣೆಯ ದಾರಿ ಕಂಡು ಕೊಂಡಿದ್ದರು, *ಯಅಕೂಬ್(ಅ)* ತನ್ನ ಮಗ ಯೂಸುಫ್(ಅ)ರವರ ವಿಷಯದಲ್ಲಿ ದುಖಕ್ಕೀಡಾದಾಗ وبثي وحزني الي الله ಎಂದೇಳಿ ಪರಿಹಾರಕ್ಕಾಗಿ ಅಲ್ಲಾಹನ ಮೊರೆ ಹೋಗಿದ್ದರು, *ಹಬೀಬ್ (ಸ)ರವರವರಲ್ಲಿ* ನಿಮ್ಮಲ್ಲಿ ಯುದ್ಧ ಮಾಡಲು ಶತ್ರುಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆಂದು ಹೇಳಲ್ಪಟ್ಟಾಗ ಈ ಮೇಲಿನ ಝಿಕ್ರ್ ಹೇಳಿದ್ದಾಗಿ ಇಮಾಮ್ ಮುಸ್ಲಿಮ್(ರ)ರವರು ವರದಿ ಮಾಡಿದ್ದಾರೆ. *ಯೂನುಸ್ ನೆಬಿ(ಅ)* ಮೀನಿನ ಉರರದೊಳಗೆ ಸಿಕ್ಕಿ ತೊಂದರಕ್ಕೀಡಾದಾಗ لا اله الا انت سبحانك اني كنت من الظالمين ಎಂದೇಳಿದಾಗಿಯೂ ಇದನ್ನೇಳದಿರುತ್ತಿದ್ದರೆ ಅಂತ್ಯ ದಿನ ತನಕ ಅವರಲ್ಲೇ ಉಳಿಯುತ್ತಿದ್ದರೆಂದೂ ಕುರ್ಆನ್ ಹೇಳಿವೆ. *ಆದ್ದರಿಂದ ನಮ್ಮ ಯಾವುದೇ ಸಮಸ್ಯಗಳಿಗೆ ದುಆ ಅಧಿಕ ಗೊಳಿಸುವುದು, ಈ ಮೇಲಿನಂತಹ ಝಿಕ್ರ್-ಗಳನ್ನು ಹೇಳುವುದು, ವಿವಿಧ ಮಜ್ಲಿಸ್-ಗಳನ್ನು ಸಂಘಟಿಸುವುದು ಇವುಗಳನ್ನು ನಾವು ಹೆಚ್ಚೆಚ್ಚಾಗಿ ಮಾಡಬೇಕಾಗಿವೆ. ಇದೆಲ್ಲವೂ ಬಹಳ ಪರಿಣಾಮಕಾರೀ ಪರಿಹಾರ ಮಾರ್ಗಗಳಾಗಿವೆ.*
ಇತೀ.....ಮದನಿ ಅಬೂ ಮುನಝ್ಝಹ:
ಇತೀ.....ಮದನಿ ಅಬೂ ಮುನಝ್ಝಹ:
Comments