Skip to main content

ಇಮಾಮ್ ಗಝ್ಝಾಲಿ (ರ) ರ ಇಹ್ಯಾ ದ ಬಗ್ಗೆ ನಮಗೆಷ್ಟು ಗೊತ್ತು

ಇಮಾಮ್ ಗಝ್ಝಾಲಿ (ರ) ರ ಇಹ್ಯಾ ದ ಬಗ್ಗೆ ನಮಗೆಷ್ಟು ಗೊತ್ತು

🌷🌷🌷🌷🌷🌷🌷🌷
ಶೈಖ್ ಅಬುಲ್ ಹಸನ್ ಎಂಬ ಒಬ್ಬರಿದ್ದರು.ಅವರು ಒಮ್ಮೆ ಇಹ್ಯಾ ಉಲೂಮಿದ್ದೀನ್ ಪಾರಾಯಣ ಮಾಡಿದರು.ಅದರ ಕೆಲವೊಂದು ವಿಷಯಗಳು ನೂತನವಾದದಂತೆ ಅವರಿಗೆ ತೋಚಿತು.ಇದು ಪ್ರವಾದೀ ಚರ್ಯಗೆ ವಿರುದ್ಧವಾದ ಗ್ರಂಥವೆಂದು ಅವರು ತೀರ್ಮಾನಿಸಿದರು.ಅವರಿಗೆ ಊರಿನಲ್ಲಿ ಒಳ್ಳೆಯ ಸ್ಥಾನವಿತ್ತು.ಊರಿನಲ್ಲಿ ಎಲ್ಲರೂ ಶೇಕರಿಸಿಟ್ಟಿದ್ದ ಇಹ್ಯಾ ಗ್ರಂಥಗಳನ್ನು ಒಟ್ಟುಗೂಡಿಸುವಂತೆ ಅವರು ಊರ ಜನರಿಗೆ ಆದೇಶಿಸುವಂತೆ ಚಕ್ರವರ್ತಿಯಲ್ಲಿ  ಹೇಳಿದರು.ಗುರುವಾರ ದಂದು ಊರಿನ ಕರ್ಮಶಾಸ್ತ್ರ ಆಲಿಂಗಳೊಂದಿಗೆ ಸಮಾಲೋಚನೆ ನಡೆಸಿ ಇಹ್ಯಾ ಗ್ರಂಥದ ಎಲ್ಲಾ ಕಾಂಡಗಳನ್ನು ಬೆಂಕಿ ಹಾಕಿ ಶುಕ್ರವಾರ ದಿನ ಹೊತ್ತಿಸುವಂತೆ ತೀರ್ಮಾನಿಸಲಾಯಿತು.

ಗುರುವಾರ ಅಸ್ತ ಶುಕ್ರವಾರ ರಾತ್ರಿ  ಶೈಖ್ ಅಬುಲ್ ಹಸನ್ ಎಂಬ ಆ  ವ್ಯಕ್ತಿಗೆ ಒಂದು ಕನಸು.
ಊರಿನ ಮಸೀದಿಯ ಕಂಬದಲ್ಲಿ ಪ್ರಕಾಶ ಗೋಚರವಾಯಿತು.
ಗಮನವಿಟ್ಟು ನೋಡಿದಾಗ  ಅಲ್ಲಿ ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು  ಮತ್ತು ಅಬೂಬಕರ್(ರ) ,
ಉಮರ್ (ರ) ಹಾಗೂ ಇಮಾಮ್ ಗಝ್ಝಾಲಿ ಹಾಜರಿದ್ದರು.
ಇಮಾಮ್ ಗಝ್ಝಾಲಿಯ ಕೈಯಲ್ಲಿ ಇಹ್ಯಾ ಉಲೂಮಿದ್ದೀನ್ ಗ್ರಂಥವಿತ್ತು.ಇಮಾಮ್ ಗಝ್ಝಾಲೀ(ರ) ರವರು ಆ ಗ್ರಂಥವನ್ನು ಪ್ರವಾದೀ ವರ್ಯರ ಕೈಯಲ್ಲಿ ನೀಡಿ ಹೇಳಿದರು;
ಓ ಪುಣ್ಯ ಪ್ರವಾದೀ ವರ್ಯರೇ! ಈ ವ್ಯಕ್ತಿ (ಅಬುಲ್ ಹಸನ್ ಎಂಬವರು) ನನ್ನ ಗ್ರಂಥದ ಬಗ್ಗೆ ಅರೋಪ ಮಾಡಿದ್ದಾರೆ.ನಂತರ ಇಮಾಮ್ ಗಝ್ಝಾಲೀ(ರ) ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಬಳಿ ಹೋಗಿ ಇಹ್ಯಾ ವನ್ನು ಕೈಗೆ ನೀಡಿ ಹೇಳಿದರು; "ಇದರಲ್ಲಿ ತಮ್ಮ ಸುನ್ನತ್ ಗೆ ವಿರುಧ್ಧವಾಗಿ ಏನಾದರು ಕಂಡು ಬಂದಲ್ಲಿ ನಾನು ಸಂಪೂರ್ಣ ಪಶ್ಚಾತಾಪಮಾಡಲು ತಯಾರಾಗಿದ್ದೇನೆ.
ಇದರಲ್ಲಿರುವುದು ಸರಿಯಾಗಿದ್ದರೆ ನನ್ನ ವಿರುದ್ಧ ಆರೋಪ ಮಾಡಿದವನಿಗೆ ತಮ್ಮ ಬರ್ಕತ್ ನಿಂದ ನ್ಯಾಯ ಕೊಡಿಸಿ ಕೊಡಿ."
ಆವಾಗ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಇಹ್ಯಾ ದ
ಒಂದೊಂದೇ ಪುಟವನ್ನು ಓದುತ್ತಾ ಪರಿಶೀಲನೆ ನಡೆಸಿದರು.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು;ಇದು ಬಹಳ ಉತ್ತಮವಾದ ಗ್ರಂಥವಾಗಿದೆ.ನಂತರ ಅದನ್ನು ಸಿದ್ದೀಖ್ (ರ) ಮತ್ತು ನಂತರ ಉಮರ್(ರ) ಕೂಡಾ ಪರಿಶೀಲಿಸಿ ಉತ್ತಮವೆಂದು ಹೇಳಿದರು.
ಅರೋಪ ಹೊರಿಸಿದ ಅಬುಲ್ ಹಸನ್ ಎಂಬ ಆ ವ್ಯಕ್ತಿಗೆ ಛಾಟಿಯೇಟು ನೀಡುವಂತೆ ಆಜ್ಞೆಯಿತ್ತರು.5 ನೇ ಏಟು ಕೊಟ್ಟಾಗ ಸಿದ್ದೀಖ್ (ರ) ಶಿಫಾರಸ್ಸು ಮಾಡಿ ಹೇಳಿದರು.ಓ ಪ್ರವಾದೀ ವರ್ಯರೇ! ತಮ್ಮ ಸುನ್ನತ್ ಗಳ ಮೂಲಕ ಸಂಶೋಧನೆ ನಡೆಸಿದಾಗ ಈ ಅಬುಲ್ ಹಸನ್ ಗೆ ತಿಳಿದ ಸಂಗತಿಯನ್ನು ಅವರು ಹೇಳಿದ್ದಾರೆ.ಅವರಿಗೆ ಕ್ಷಮಿಸಿರಿ.
ಆವಾಗ ಇಮಾಮ್ ಗಝ್ಝಾಲಿಯೂ ಕೂಡಾ ಅವರಿಗೆ ಕ್ಷಮಿಸಿದರು.
ಶೈಕ್ ಅಬುಲ್ ಹಸನ್ ರವರು ನಿದ್ರೆಯಿಂದ ಎಚ್ಚೆತ್ತು ಅವರ ಗೆಳೆಯರೊಂದಿಗೆ ಈ ವಿಷಯವನ್ನು ಹಂಚಿಕೊಂಡರು.ನಿದ್ರೆಯಲ್ಲಿ ಬಿದ್ದ ಚಾಟಿಯೇಟಿನ ನೋವು ಎಚ್ಚೆತ್ತ ನಂತರ 1 ತಿಂಗಳುಗಳ ಕಾಲ ಕಾಡುತ್ತಿತ್ತು.ಚಾಟಿಯೇಟಿನ ಕುರುಹು ಮರಣದ ತನಕ ಅವರ ಶರೀರದಲ್ಲಿದ್ದವು.ಅದರ ನಂತರ ಇಹ್ಯಾ ಗ್ರಂಥ ಕಂಡರೆ ಅದನ್ನು ಚುಂಬಿಸಿ ಗೌರವಿಸುತ್ತಿದ್ದರು.ಈ ಘಟನೆ ಸತ್ಯವಾಗಿದ್ದು,  ಯಾಖೂತುಶ್ಶಾದ್ಸುಲಿ, ಅಬುಲ್ ಅಬ್ಬಾಸುಲ್ ಮುರಸೀ(ರ),ಅಬುಲ್ ಹಸನುಶ್ಶಾದ್ಸುಲೀ( ರ)ಮುಂತಾದವರಿಂದ ವರದಿ ಮಾಡಲ್ಪಟ್ಟಿದೆ.

(ತ್ವಬಖಾತುಶ್ಶಾಫಿಯ್ಯತುಲ್ ಕುಬ್ರಾ6/258,259,260)

✒ ಇಬ್ನು ಮುಹಮ್ಮದ್ ಸಖಾಫಿ,ಸಾಲೆತ್ತೂರು

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...