Skip to main content

ಮಳೆಗಾಲದಲ್ಲಿ ವಿದ್ಯುತ್ ನಿಂದ ಸ್ವಲ್ಪ ದೂರ ಇರಿ

ಓದಲೇ ಬೇಕಾದ ಮಾಹಿತಿ
ನಿಮ್ಮ ಅವೆರ್ನಸ್ ಸರ್ಕಲ್ ಪೇಜಲ್ಲಿ
ಮಳೆಗಾಲದಲ್ಲಿ ವಿದ್ಯುತ್ ನಿಂದ ಸ್ವಲ್ಪ ದೂರ ಇರಿ
ದಯವಿಟ್ಟು ಓದಿ ಇತರರಿಗೂ ಹಂಚಿ

ಕರಾವಳಿ ಮತ್ತು ಕರ್ನಾಟಕದ ಇತರೆ ಪ್ರದೇಶಗಳಲ್ಲಿ ಗಾಳಿ ಮಳೆ ಭಾರೀ ಜೋರಾಗಿದ್ದು ಚಂಡಮಾರುತದ ಭೀತಿ ಎದುರಾಗಿದೆ. ಈ ಗಾಳಿ ಮಳೆಗೆ ನಗರದ ಹೊರ ಭಾಗದಲ್ಲಿ ಮರಗಳ ಎಡೆಯಿಂದ ವಿದ್ಯುತ್ ತಂತಿಗಳು ಹಾದು ಹೋಗಿದ್ದು ಯಾವಾಗ ಬೇಕಾದರೂ ಅಪಾಯ ಆಗಬಹುದು. ಗುಡುಗು ಮಿಂಚಿನದ್ದು ಪ್ರತ್ಯೇಕವಾಗಿ ಹೇಳುವಂತಿಲ್ಲ. ಸಾರ್ವಜನಿಕರು ಎಚ್ಚರಿಕೆಯಿಂದ ಇರುವುದು ಉತ್ತಮ.

ಮಳೆಗಾಲದಲ್ಲಿ ವಿದ್ಯುತ್ ‘ಶಾಕ್' ಯಾವಾಗ ನಮ್ಮ ಮೇಲೆ ಬಂದೆರಗುತ್ತದೆ ಎನ್ನುವ ನಿರೀಕ್ಷೆಯೇ ಇರುವುದಿಲ್ಲ. ಮನೆಯಿಂದ ಹೊರಗಿಳಿಯುವ ಸಂದರ್ಭದಲ್ಲಿ ರಸ್ತೆಯ–ಲ್ಲೆಲ್ಲೋ ಬಿದ್ದಿರುವ ವಿದ್ಯುತ್ ತಂತಿ ತುಳಿದು ಸಾವು ಸಂಭವಿಸಬಹುದು; ಮರದ ರೆಂಬೆ ಮುರಿದು ವಿದ್ಯುತ್ ತಂತಿ ಕೆಳಗುರುಳಿ ಅಪಾಯ ತಂದೊಡ್ಡಬಹುದು; ಅದೆಲ್ಲೋ ತಂತಿ ಬಿದ್ದ ಪರಿಣಾಮ ಹರಿವ ನೀರಲ್ಲೂ ಕರೆಂಟ್ ಇರಬಹುದು; ಮಳೆ-ಗಾಳಿಗೆ ಕಂಡಕ್ಟರ್ ತುಂಡಾಗುವುದು, ಲೈನ್‌ಗಳ ಮೇಲೆ ಗಿಡಗಳು ಬೀಳುವುದು, ಜಂಪ್ಸ್, ಪ್ರಾಣಿಗಳು ಹೊಲ-ಗದ್ದೆಗಳಿಗೆ ನುಗ್ಗದಂತೆ ಅಳವಡಿಸಿದ ಬೇಲಿಗೆ ಹರಿಸಿದ ವಿದ್ಯುತ್‌ನಿಂದ, ತಂತಿ ಕೆಳಗಡೆ ಮನೆಗಳಿರುವುದು... ಸಾವು ಹೇಗೆ ಬೇಕಾದರೂ ಎರಗಬಹುದು.

ಮಳೆಗಾಲದ ಶಾಕ್‌ನಿಂದ ದೂರ ಇರಲು 10 ಟಿಪ್ಸ್

1) ಮಳೆ ಬರುತ್ತಿದ್ದರೆ ರಕ್ಷಣೆಗೆ ಮರದ ಅಡಿ ನಿಲ್ಲಬೇಡಿ. ಮರಗಳ ಕೊಂಬೆ ವಿದ್ಯುತ್ ತಂತಿಗೆ ತಾಕಿದ್ದರೆ, ನಿಮಗೂ ವಿದ್ಯುತ್ ಹರಿಯುವ ಅಪಾಯ ಇರುತ್ತದೆ

2) ಜೋರಾಗಿ ಮಳೆ ಸುರಿಯುತ್ತಿದ್ದರೆ ವಿದ್ಯುತ್ ಪ್ರಸರಣ ಜಾಲದ ಅಡಿಯಲ್ಲಿ ಸಂಚರಿಸುವ ರಿಸ್ಕ್ ತೆಗೆದುಕೊಳ್ಳಬೇಡಿ. ವಿದ್ಯುತ್ ಆಕರ್ಷಣೆಯಿಂದಲೂ (ಇಂಡಕ್ಷನ್) ಶಾಕ್ ಹೊಡೆಯುವ ಗಂಡಾಂತರ ಇರುತ್ತದೆ

3) ಸಿಡಿಲು, ಗುಡುಗು ಇದ್ದರೆ ತಕ್ಷಣ ಹತ್ತಿರದ ಮನೆ ಇಲ್ಲವೆ ಯಾವುದೇ ಸುರಕ್ಷಿತ ಪ್ರದೇಶದಲ್ಲಿ ಆಶ್ರಯ ಪಡೆಯಿರಿ.

4) ಮಳೆಯಿಂದ ವಿದ್ಯುತ್ ಕಂಬದ ಮೇಲೆ ಮರಗಳ ಕೊಂಬೆ ಇಲ್ಲವೆ ತೆಂಗಿನ ಗರಿ ಬಿದ್ದಿದ್ದರೆ, ಅವುಗಳನ್ನು ತೆರವುಗೊಳಿಸುವ ಪ್ರಯತ್ನ ಮಾಡಬೇಡಿ

5) ವಿದ್ಯುತ್ ತಂತಿ ನೆಲಕ್ಕೆ ಬಿದ್ದಿದ್ದರೆ- ಇದನ್ನು ಪ್ಲಾಸ್ಟಿಕ್ ಪೈಪು ಇಲ್ಲವೆ ಕೋಲಿನಿಂದ ಪಕ್ಕಕ್ಕೆ ಸರಿಸುವ ಅನಾಹುತಕಾರಿ ಕೆಲಸಕ್ಕೆ ಕೈಹಾಕಬೇಡಿ

6) ಮಳೆಯಿಂದ ಕೆಲವು ಬಾರಿ ಮನೆಗಳಲ್ಲಿ ಗ್ರೌಂಡಿಂಗ್ ಇಲ್ಲವೆ ಅರ್ಥಿಂಗ್ ಸಮಸ್ಯೆ ಕಾಣಿಸಿಕೊಂಡು, ಸ್ವಿಚ್ಚುಗಳು ಶಾಕ್ ಹೊಡೆಯಲು ಆರಂಭಿಸುತ್ತವೆ. ಕೂಡಲೆ ಮನೆಯ ಮುಖ್ಯ ಸ್ವಿಚ್ ಆಫ್ ಮಾಡಿ

7) ದೊಡ್ಡ ಮಳೆ, ಗುಡುಗು- ಸಿಡಿಲು ಇದ್ದಾಗ ಟಿವಿ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ವಸ್ತುಗಳ ಪ್ಲಗ್‌ಗಳನ್ನು ತೆಗೆದಿಡಿ ಮತ್ತು ಒದ್ದೆ ಬೆರಳುಗಳಲ್ಲಿ ಇವುಗಳನ್ನು ಮುಟ್ಟಬೇಡಿ

8) ನದಿ ಪಾತ್ರ, ಹಳ್ಳ ಇತ್ಯಾದಿಗಳ ಪಾತ್ರದಲ್ಲಿ ನೆಲಮಟ್ಟದಲ್ಲಿ ಟ್ರಾರ್ನ್‌ಫಾರ್ಮರ್ ಇದ್ದರೆ ಕೂಡಲೆ ಎಸ್ಕಾಂ ಸಿಬ್ಬಂದಿಗೆ ತಿಳಿಸಿ. ನೀರಿನಲ್ಲಿ ವಿದ್ಯುತ್ ಬೆಳಕಿನ ವೇಗದಲ್ಲಿ ಸಂಚರಿಸುತ್ತದೆ

9) ರಸ್ತೆ, ಮನೆ, ಹೊಲ, ಕಚೇರಿ ಹೀಗೆ ಎಲ್ಲೇ ವಿದ್ಯುತ್ ಕಂಬ ಇಲ್ಲವೆ ತಂತಿ ವಾಲಿದ್ದರೂ, ಕಿಡಿ ಕಾರಿಕೊಳ್ಳುತ್ತಿದ್ದರೂ- ಎಸ್ಕಾಂ ಸಿಬ್ಬಂದಿಗೆ ಈ ಬಗ್ಗೆ ದೂರು ನೀಡಿ. ಇಲ್ಲವಾದರೆ, ಮಳೆ ಮತ್ತು ಗಾಳಿ- ದೊಡ್ಡ ಅನಾಹುತಕ್ಕೆ ಕಾರಣವಾದೀತು

10) ವಿದ್ಯುತ್ ಕಂಬ, ಟ್ರಾರ್ನ್‌ಫಾರ್ಮರ್ ಬೇಲಿ, ಹೈಟೆನ್ಷನ್ ಲೈನ್‌ಗಳಿಗೆ ಜಾನುವಾರುಗಳನ್ನು ಕಟ್ಟಬೇಡಿ. ಬಟ್ಟೆ ಇತ್ಯಾದಿಗಳನ್ನು ಒಣಗಿಸುವ ಸಾಹಸ ಮಾಡಬೇಡಿ..

ಮಾಹಿತಿ:
*ಅವೆರ್ನಸ್ ಸರ್ಕಲ್*
*Awareness Circle*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...