Skip to main content

ಕಲ್ಲಡಿ ಮಸ್ತಾನ್ ವಲಿಯ್ಯುಲ್ಲಾಹಿ (ಖ:ಸಿ) ಬಿಮಾಪಳ್ಳಿ ತಿರುವನಂತಪುರಂ

ಕಲ್ಲಡಿ ಮಸ್ತಾನ್ ವಲಿಯ್ಯುಲ್ಲಾಹಿ (ಖ:ಸಿ)
ಬಿಮಾಪಳ್ಳಿ ತಿರುವನಂತಪುರಂ
*********************
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ _ಗಫೂರ್ ಬಾಯಾರ್_
**********************

ಕೇರಳದ ಹೆಸರಾಂತ ಝಿಯಾರತ್ ಕೇಂದ್ರಗಳಲ್ಲೊಂದಾದ ತಿರುವನಂತಪುರಂ ಸಮೀಪದ ಬಿಮಾ ಪಳ್ಳಿಯಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಸಯ್ಯಿದ್ ಶುಹದಾ ಮಾಹಿನ್ ಅಬೂಬಕರ್ (ರ)ರವರು ಶಹೀದಾದ ಸ್ಥಳದಲ್ಲಿರುವ (ಮರುನ್ನು ಕಿಣರ್) "ಔಷಧಿಯ ಬಾವಿ" ಸಮೀಪ ಕಲ್ಲಡಿ ಮಸ್ತಾನ್ ಉಪ್ಪಾಪ (ರ)ಎಂಬ ಮಹಾನರು ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.

ಮೂಲತಃ ತಮಿಳುನಾಡಿನವರಾದ ಮಸ್ತಾನ್ ಉಪ್ಪಾಪ (ರ)ರವರು ಇಂದಿನಂತೆ ಯಾತ್ರಾ ಸೌಕರ್ಯವಿಲ್ಲದ ಆ ಕಾಲದಲ್ಲಿ ಬಿಮಾಪಳ್ಳಿಯ ಝಿಯಾರತ್ ನಿಮಿತ್ತ ಹಳ್ಳ ಕೊಳ್ಳಗಳನ್ನು ದಾಟಿ ಬೆಟ್ಟ ಗುಡ್ಡಗಳ ದುರ್ಗಮ ಹಾದಿಯಲ್ಲಿ ಬಿಮಾ ಪಳ್ಳಿಗೆ ತಲುಪಿದರು.

ಹಾಗೆ ಬಿಮಾ ಪಳ್ಳಿಗೆ ತಲುಪಿದ ಮಸ್ತಾನ್ ಉಪ್ಪಾಪ (ರ) ರವರಿಗೆ ಬಿಮಾ ಪಳ್ಳಿಯಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಸಯ್ಯಿದ್ ಶುಹದಾ ಮಾಹಿನ್ ಅಬೂಬಕರ್ (ರ) ರವರು ಕನಸಿನಲ್ಲಿ ನೀಡಿದ ಸಲಹೆಯ ಮೇರೆಗೆ ಬಿಮಾ ಪಳ್ಳಿಯಲ್ಲೇ ವಾಸ್ತವ್ಯ ಹೂಡಿದರು.

ಸದಾ ಇಲಾಹಿ ಸ್ಮರಣೆಯಲ್ಲಿ ತಲ್ಲೀನರಾಗಿರುತ್ತಿದ್ದ ಮಸ್ತಾನ್ ಉಪ್ಪಾಪ (ರ)ರವರು ಇಹಲೇೂಕದ ಪರಿವಿಲ್ಲದ "ಮಜ್‌ದೂಬಾ" ಆಗಿದ್ದರು. (ಅನ್ನಾಹಾರ, ವಸ್ತ್ರ, ಕಾಲ, ಸ್ಥಳ ಇದ್ಯಾವುದರ ಪರಿವೂ ಇಲ್ಲದೆ ಸಂಪೂರ್ಣವಾಗಿ ಅಲ್ಲಾಹನ ಸ್ಮರಣೆಯಲ್ಲಿ ತೊಡಗಿಸಿಕೊಳ್ಳುವ ಸ್ಥಿತಿಗೆ ಮಜ್‌ದೂಬಾ ಎನ್ನುತ್ತಾರೆ. ಕಾರಣ ಅಂಥವರು ನೋಡುವವರ ಕಣ್ಣಿಗೆ ಮಾನಸಿಕ ಸ್ಥಿಮಿತ ಕಳೆದು ಕೊಂಡವರಂತೆ ಕಾಣಬಹುದು)

ಹಾಗೆ ಐಹಿಕ ಲೇೂಕದ ಪರಿವಿಲ್ಲದೆ ಸದಾ ಇಲಾಹಿ ಸ್ಮರಣೆಯಲ್ಲಿ ತಲ್ಲೀನರಾಗಿರುತ್ತಿದ್ದ ಮಹಾನರನ್ನು ಕಂಡ ಹಲವರು ಅವರನ್ನು ಮಾನಸಿಕ ಅಸ್ವಸ್ಥರಾಗಿರಬಹುದೆಂದು ಭಾವಿಸಿದ್ದರು. ಮಾತ್ರವಲ್ಲ ಕೆಲವರು ಕೀಟಲೆಯನ್ನೂ ಮಾಡುತ್ತಿದ್ದರು. ಆದರೆ ಇಲಾಹಿ ಸ್ಮರಣೆಯನ್ನೇ ಉಸಿರಾಗಿಸಿಕೊಂಡಿದ್ದ ಮಹಾನರು ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.

ಮಹಾನರು ಒಮ್ಮೆ ವಲಿಯುಲ್ಲಾಹಿ ಕಣಿಯಾಪುರಂ ಅಬ್ದುರ್ರಝಾಕ್ (ರ) ರವರ ಮಹತ್ವವನ್ನು ವಿವರಿಸಿದರು. ಕಣಿಯಾಪುರಂ ಅಬ್ದುರ್ರಝಾಕ್ (ರ)ರವರ ಮಹತ್ವದ ಬಗ್ಗೆ ಅಲ್ಪ ಸ್ವಲ್ಪ ಅರಿತಿದ್ದ ಜನಸಾಮಾನ್ಯರಿಗೆ ಈ ವಿವರಣೆಯ ನಂತರ ಮಸ್ತಾನ್ ಉಪ್ಪಾಪ (ರ) ರವರು ವಿಲಾಯತ್ತಿನ ಪದವಿಗೇರಿದ ಸಾತ್ವಿಕರಾಗಿದ್ದಾರೆಂಬುದು ಜನತೆಗೆ ಮನವರಿಕೆಯಾಯಿತು.

ಅನಂತರ ಮಹಾನರನ್ನು ಜನ ಜಾತಿ ಮತ ಭೇದವಿಲ್ಲದೆ ತುಂಬು ಗೌರವದಿಂದ ಆಧರಿಸಲಾರಂಭಿಸಿದರು. ಹಾಗೂ ತಮ್ಮ ಕಷ್ಟ-ಕಾರ್ಪಣ್ಯ, ನೇೂವು ಮತ್ತು ಸಂಕಟಗಳಿಗೆ ಮಹಾನರ ಬಳಿ ಆಗಮಿಸಲಾರಂಭಿಸಿದರು.

ವಿಲಾಯತ್ತಿನ ಉನ್ನತ ಪದವಿಗೇರಿದ್ದ ಮಹಾನರು ಹಲವಾರು ಕರಾಮತ್ತುಗಳನ್ನು ಕಾಣಿಸಿದ್ದಾರೆ.

ಮಹಾನರ ಬರ್ಕತ್'ನಿಂದ ಅಲ್ಲಾಹನು ನಮ್ಮೆಲ್ಲರಿಗೂ ಆಫಿಯತ್ ನಿಂದೊಡಗೂಡಿದ ದೀರ್ಘಾಯಸ್ಸನ್ನು ಕರುಣಿಸಿ ಅನುಗ್ರಹಿಸಲಿ ಆಮೀನ್.
🆘🆘🆘🆘🆘🆘🆘

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...