Skip to main content

ಸುಬಹಿ ನಮಾಜಿನಲ್ಲಿ ಕುನೂತ್ - ಭಾಗ -,02

*ಸುಬಹಿ* *ನಮಾಝಿನಲ್ಲಿ* *ಖುನೂತ್.*

ಭಾಗ --2.
�� *ಮುನೀರ್* *ಸಖಾಫಿ,* *ಸಾಲೆತ್ತೂರು.*
---------------------------

ಇಮಾಮ್  ಖುರ್ತುಬಿ ರಲಿಯಲ್ಲಾಹು ಅನ್ಹು ಹೇಳುತ್ತಾರೆ;

وقد استدل من قال انها الصبح بقوله تعالي :وقوموا لله قانتين يعني فيها، ولا صلاة مكتوبة فيها قنوت الا الصبح.(قرطبي 3/300)

ಸ್ವಲಾತುಲ್ ಉಸ್ತ್ವ ಎಂಬುವುದರ ತಾತ್ಪರ್ಯ  ಸುಬಹಿ ನಮಾಝ್ ಎಂದು ಹೇಳಿದವರ ಅಧಾರ ನಂತರವಿರುವ
  وقوموا لله قانتين
ಎಂಬ
ಆಯತ್ ಆಗಿದೆ.ಫರ್ಲ್ ನಮಾಝಿನ ಪೈಕಿ  ಖುನೂತ್ ಇರುವ ನಮಾಝ್ ಸುಬಹಿ ನಮಾಝ್ ಮಾತ್ರವಾಗಿದೆ.(ಖುರ್ತುಬಿ 3/300)

ಇಮಾಮ್ ಬಗವೀ (ರ) ಹೇಳುತ್ತಾರೆ;
واختلف العلماء من الصحابة ومن بعدهم في الصلاة الوسطي فقال قوم :هي صلاة الفجر ، وهو قول عمر وابن عمر وابن عباس ومعاذ وجابر ،وبه قال عطاء وعكرمة ومجاهد واليه مال مالك والشافعي( معالم التنزيل 1/329)

"ಸ್ವಲಾತುಲ್ ಉಸ್ತ್ವ ಎಂಬುವುದರ ತಾತ್ಪರ್ಯವೇನು ಎಂಬುವುದರಲ್ಲಿ  ಸ್ವಹಾಬಿಗಳು ಮತ್ತು ತಾಬಿವುಗಳು ಅಭಿಪ್ರಾಯ ವ್ಯತ್ಯಾಸ ಹೊಂದಿದ್ದಾರೆ.
ಒಂದು ವಿಭಾಗವು ಅದು ಸುಬಹಿ ನಮಾಝ್ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಉಮರ್ (ರ) , ಇಬ್ನ್ ಉಮರ್ (ರ) ,ಇಬ್ನ್ ಅಬಾಸ್ (ರ) , ಮುಆದ್ಸ್ (ರ), ಜಾಬಿರ್ (ರ)ಮುಂತಾದ ಸ್ವಹಾಬಿಗಳು ಅತ್ವಾಅ (ರ) ,ಇಕ್ರಿಮ (ರ),ಮುಜಾಹಿದ್ (ರ) ಮುಂತಾದ ತಾಬಿವುಗಳು ಈ ಅಭಿಪ್ರಾಯವನ್ನು ತಾಳಿದ್ದಾರೆ.
ಇದೇ ಅಭಿಪ್ರಾಯವನ್ನು ಇಮಾಮ್ ಮಾಲಿಕ್ (ರ) ಮತ್ತು ಶಾಫೀ (ರ) ಹೇಳಿದ್ದಾರೆ".
( ಮ ಆಲಿಮುತ್ತಂಝೀಲ್ 1/329)

ಇಮಾಮ್ ಅಬುಸ್ಸುಊದ್ (ರ) ಹೇಳುವುದನ್ನು ನೋಡಿ;
وقال ابن المسيب المراد به القنوت في الصبح.(ابو السعود)

"ಸಈದು ಬಿನಿಲ್ ಮುಸಯ್ಯಿಬ್ (ರ) ಹೇಳುತ್ತಾರೆ;ಖುನೂತ್ ಓದಿ ನಮಾಝ್ ನಿರ್ವಹಿಸಿ ಎಂಬುವುದರ ಉದ್ದೇಶ ಸುಬಹಿ ನಮಾಝ್ ನಲ್ಲಿ ಖುನೂತ್ ಓದುವುದಾಗಿದೆ.
(ತಫ್ಸೀರು ಅಬುಸ್ಸುಊದು 1/282)

ಹಿಜರಿ 430 ರಲ್ಲಿ ವಫಾತ್ ಆದ ಇಮಾನ್ ಮಾವರ್ದಿ (ರ) ಹೇಳುತ್ತಾರೆ;
فاما حديث ابن عباس فقد روينا عنه انه كانت يقنت في الصبح ولذلك ذهب الي الصلاة الوسطي هي الصبح.لان القنوت فيها.
(الحاوي الكبير   2/198)

"ಇಬ್ನ್ ಅಬ್ಬಾಸ್ (ರ) ಸುಬಹಿ ನಮಾಝಿನಲ್ಲಿ ಖುನೂತ್ ಓದಿ ನಮಾಝ್ ನಿರ್ವಹಿಸುತ್ತಿದ್ದರೆಂದು ರಿಪೋರ್ಟ್ ಮಾಡಲ್ಪಟ್ಟಿದೆ.ಆದುದರಿಂದಲೇ ಮಹಾನುಭಾವರು ಸ್ವಲಾತುಲ್ ಉಸ್ತ್ವ ಎಂಬುವುದಕ್ಕೆ  ಸುಬಹಿ ನಮಾಝ್ ಎಂದು ಅರ್ಥನೀಡಿದ್ದಾರೆ.ಕಾರಣ ಖುನೂತ್ ಇರುವ ನಮಾಝ್ ಸುಬಹಿ ನಮಾಝ್ ಮಾತ್ರ"
(ಅಲ್ ಹಾವಿಲ್ ಕಬೀರ್ 2/198)

ಇಮಾಮ್ ಬೈಳಾವೀ (ರ) ಹೇಳುತ್ತಾರೆ;
وقال ابن المسيب المراد به القنوت في الصبح
(تفسير البيضاوي 1/536)

"ಇಬ್ನುಲ್ ಮುಸಯ್ಯಬ್ (ರ) ಹೇಳುತ್ತಾರೆ;ಈ ಆಯತ್ ನಲ್ಲಿ ಖುನೂತ್ ಓದಿರಿ ಎಂಬುವುದರ ಉದ್ದೇಶ ಸುಬಹಿ ನಮಾಝಿನಲ್ಲಿ ಖುನೂತ್ ಓದಿರಿ ಎಂದಾಗಿದೆ".
(ತಫ್ಸೀರುಲ್ ಬೈಳಾವೀ 1/536)

ಮುಂದುವರಿಯುದು...

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...