Skip to main content

ತಾಜುಲ್ ಉಲಮಾ ಖ.ಸಿ..ಸಂಚಿಕೆ - 05

*ತಾಜುಲ್ ಉಲಮಾ ಖ.ಸಿ ಉಳ್ಳಾಲದ ಮುತ್ತು*

                ಸಂಚಿಕೆ - 05

ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ

ತಾಜುಲ್ ಉಲಮಾ ಖ.ಸಿ ಜ್ಞಾನ ಸಾಗರವಾಗಿದ್ದರು.ಇಹಲೋಕದ ಸರ್ವ ಸುಖಾಡಂಭರಗಳನ್ನು ತ್ಯಜಿಸಿ ತನ್ನ ಪಾರತ್ರಿಕ ವಿಜಯದ ಗುರಿಯೊಂದಿಗೆ ತಖ್ವಾ ದೊಂದಿಗೆ ಜೀವಿಸಿದರು.ಧಾರ್ಮಿಕ ವಿದ್ಯೆ, ವಿದ್ಯೆ ಕಲಿಸುವ ವಿದ್ವಾಂಸರು ಹಾಗೂ ವಿದ್ಯೆ ಕಲಿಯುವ ಮುತಅಲ್ಲಿಮರನ್ನು ಅತೀವ ಇಷ್ಟಪಡುತ್ತಿದ್ದರು.ತನ್ನ ಜೀವನದ ಪೂರ್ಣ ಭಾಗವನ್ನು ಇಲ್ಮ್ ಕಲಿಯುವುದರಲ್ಲಿ ಮತ್ತು ಅದನ್ನು ಇತರರಿಗೆ ಪಸರಿಸುವಲ್ಲಿ ವ್ಯಯಿಸಿದರು.ತಾಜುಲ್ ಉಲಮಾ ಖ.ಸಿ ತನ್ನ ಪ್ರಮುಖ ಉಸ್ತಾದರಲ್ಲೊಬ್ಬರಾದ ಪರವಣ್ಣ ಮುಹ್ಯಿದ್ದೀನ್ ಕುಟ್ಟಿ ಮುಸ್ಲಿಯಾರ್ ರವರ ಶಿಷ್ಯತ್ವವನ್ನು ಸ್ವೀಕರಿಸಿ ಕಲಿಯುತ್ತಿದ್ದಾಗ ಉಸ್ತಾದರು ತನ್ನ ಶಿಷ್ಯನಾದ ತಾಜುಲ್ ಉಲಮಾ ಖ.ಸಿ ರವರನ್ನು ಕರೆದು ಕೇಳುತ್ತಾರೆ.ನೀನು ಯಾವ ಇಲ್ಮನ್ನು ಕಲಿಯಲು ಬಯಸಿರುವೆ ?.
ವಿದ್ಯೆಯ ಎಲ್ಲಾ ವಿಭಾಗಗಳ ಸಂಪೂರ್ಣ ವಿದ್ಯೆಯನ್ನು ಕಲಿಯುವ ಮುಸ್ಲಿಯಾರ್ ವಿದ್ಯೆಯನ್ನು ಕಲಿಯುವೆಯಾ? ಅಲ್ಲ ಅತ್ಯಾವಶ್ಯಕ ಕೆಲವೊಂದು ದ್ಸಿಕ್ರ್ ದುವಾಗಳನ್ನು ಮಾತ್ರ ಕಲಿಯುವೆಯಾ ?
ತಾಜುಲ್ ಉಲಮಾ ಹೇಳಿದರು.ನಾನು ಮುಸ್ಲಿಯಾರ್ ( ವಿದ್ವಾಂಸ ) ಆಗುವ ವಿದ್ಯೆ ಕಲಿಯಲು ಬಯಸುತ್ತೇನೆ..ನಾನೊಬ್ಬ ಉನ್ನತ ವಿದ್ವಾಂಸ ನಾಗಬೇಕು.ವಿಜ್ಞಾನ ದಾಹಿಗಳು ಜ್ಞಾನವನ್ನು ಅರಸುತ್ತಾ ನನ್ನ ಬಳಿ ಬರಬೇಕು.ಅಂತಹ ಒಬ್ಬ ಆಲಿಂ ಆಗಬೇಕು.ಅದೇ ರೀತಿ ಆಯಿತೂ ಕೂಡಾ ! ಅವರಿಂದ ಧಾರ್ಮಿಕ ವಿದ್ಯೆ ಪಡೆದು ಸಾವಿರಾರು ವಿದ್ವಾಂಸರು ವಿವಿಧ ಬಿರುದುದಾರಿಗಳಾಗಿಯೂ ಅಲ್ಲದೆಯೂ ಹೊರಹೊಮ್ಮಿದರು.ತಾಜುಲ್ ಉಲಮಾ ಖ.ಸಿ ರವರ ಬಳಿ ಸಾಮಾನ್ಯರಿಂದ ಹಿಡಿದು ಘನವೆತ್ತ ಉಲಮಾಗಳ,ವಿದ್ವಾಂಸರ ದಂಡೇ ಹರಿದು ಬರುತ್ತಿತ್ತು.ನಿಜವಾಗಿಯೂ ತಾಜುಲ್ ಉಲಮಾ ಖ.ಸಿ ಉಲಮಾಗಳ ಕಿರೀಟ ( ವಿದ್ವಾಂಸರ ಸರದಾರ ) ಆಗಿದ್ದರು.ಗಾಂಭೀರ್ಯತೆಯಿಂದ ಕೂಡಿದ ಪ್ರಶೋಭಿತ ಮುಖಭಾವ ಹೊಂದಿದವರಾಗಿದ್ದರು.ಕಷ್ಟ ಕಾರ್ಪಣ್ಯಗಳನ್ನು ಹೇಳಿ ಅವರನ್ನು ಸಂದರ್ಶಿಸಲು ಬರುತ್ತಿದ್ದ ಕೆಲವರೊಂದಿಗೆ  ಮಂದಹಾಸದದೊಂದಿಗೆ ಮಾತನಾಡಿ ಕುರಾನ್,ದ್ಸಿಕ್ರ್ ಮುಖಾಂತರ ಮಂತ್ರಿಸಿ ಅವರಿಗೆ ಪರಿಹಾರ ನೀಡುತ್ತಿದ್ದರು.ಇನ್ನೂ ಕೆಲ ಸಂದರ್ಶಕರಿಗೆ ತಾಜುಲ್ ಉಲಮಾ ಖ.ಸಿ  ಒಂದೇಟು ಕೊಟ್ಟು ಕಳುಹಿಸುತ್ತಿದ್ದರು.ಆ ಏಟೇ ತುಂಬಾ ಮಂದಿಯ ತೊಂದರೆಗಳಿಗೆ ಪರಿಹಾರವಾದ ಮತ್ತು ಕೆಲವರ ಉನ್ನತಿಗೆ ಕಾರಣವಾದ  ಸಂಭವಗಳೂ ಧಾರಾಳ ಉಂಟಾಗಿವೆ.ತಾಜುಲ್ ಉಲಮಾ ಖ.ಸಿ ತನ್ನ ಎಲ್ಲಾ ಕಾರ್ಯಗಳಲ್ಲಿ ಅಲ್ಲಾಹನೊಂದಿಗೆ ಪರಿಪೂರ್ಣವಾಗಿ ಅರ್ಪಿಸುತ್ತಿದ್ದರು.ಸುನ್ನತ್ ಜಮಾಅತಿನ ಸರ್ವ ಕಾರ್ಯಕ್ರಮಗಳು,ಸಭೆಗಳು ತಾಜುಲ್ ಉಲಮಾರ ಜೀವಿತ ಕಾಲದಲ್ಲಿ ಅವರ ನೇತ್ರತ್ವದಲ್ಲಿಯೇ ನಡೆಯುತ್ತಿತ್ತು.ಆ ಎಲ್ಲಾ ಕಾರ್ಯಕ್ರಮ ,ಸಮ್ಮೇಳನ ಗಳಲ್ಲಿ ಸುನ್ನೀ ಸಮೂಹದೊಂದಿಗೆ ಅಧಿಕವಾಗಿ ಅವರು ಮಾಡುತ್ತಿದ್ದ ವಸಿಯ್ಯತ್ 'ಸುನ್ನತ್ ಜಮಾಅತ್ ಬಿಗಿಯಾಗಿ ಹಿಡಿಯಿರಿ.ಪ್ರವಾದಿ ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ ಮತ್ತು ಸ್ವಹಾಬಿಗಳು ತೋರಿಸಿಕೊಟ್ಟ ಸುನ್ನತ್  ಜಮಾಅತಿನ ವಿಶ್ವಾಸಾಚಾರಗಳನ್ನು ಗಟ್ಟಿಯಾಗಿ ಹಿಡಿಯಿರಿ' ಎಂದಾಗಿತ್ತು.ಸ್ವಹೀಹುಲ್ ಬುಖಾರಿ ಹದೀಸ್ ಗ್ರಂಥವನ್ನು ತನ್ನ ಆಯುಷ್ಯದ ಮುಕ್ಕಾಲು ಭಾಗ ದರ್ಸ್ ನಡೆಸಿದರು.ಅತೀ ಹೆಚ್ಚು ಸಲ ಹಜ್ ಉಮ್ರಾ ನಿರ್ವಹಿದರು.
ತಾಜುಲ್ ಉಲಮಾ ಖ.ಸಿ ಈ ಕೆಳಗಿನ ಮಹತ್ತರವಾದ ಸ್ವಲಾತ್ ಇಜಾಝತ್ ನೀಡುತ್ತಿದ್ದರು

*اَللَّهُمَّ صَلِّ عَلَى مُحَمَّدٍ النَّبِيِّ الْاُمِّيِّ الْحَبِيبِ الْعَالِي الْقَدْرِ الْعَظِيمِ الْجَاهِ وَعَلَى آلِهٖ وَصَحْبِهٖ وَسَلِّم*

ತಾಜುಲ್ ಉಲಮಾ ಖ.ಸಿ ಪ್ರಸಿದ್ಧ ತ್ವರೀಖತಿನ ಶೈಖ್ ಆಗಿದ್ದರು.ಅವರ ಬಳಿ ಇಜಾಝತಿಗಾಗಿ ಎಲ್ಲಾ ಭಾಗಗಳಿಂದಲೂ ಜನರು ಬರುತ್ತಿದ್ದರು.ಹಣ ಸಂಪತ್ತು ಲಭಿಸಿದಾಗ ಸಂತೋಷ ಪಡುವವರಾಗಿರಲಿಲ್ಲ.ಅದು ಇಲ್ಲವಾದಾಗ ದುಃಖಿಸುವವರೂ ಆಗಿರಲಿಲ್ಲ......

*ಮುಂದುವರಿಯುವುದು*....

*ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ*
+918105745760

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...