Skip to main content

ಅಪ್ಪಾ : ತಾವೆಷ್ಟು ಭಾಗ್ಯವಂತರು..ಸಿ ಐ ಇಸಾಕ್ ಫಜೀರ್

ತಬ್ಬಲಿಯಾದೆ ನಾವು
ತಂದೆಯ ಅಗಲುವಿಕೆಯಿಂದ  ದುಃಖಪ್ತನಾದ ಗೆಳೆಯ ಇಸ್ಹಾಕ್ ಫಜೀರ್ ಬರೆದ ಕಣ್ಣೀರ ಕವನ..

*▫ತಬ್ಬಲಿಯಾದೆವು ನಾವು.▫*
ಸಹನೆಯ ಕಟ್ಟೆ ಒಡೆಯಿತು
ಸಹಿಸಲಾಗದೆ ಹೃದಯ ಮೇಣದ
ಬತ್ತಿಯಂತೆ ಕರಗಿ ಹೋಯಿತು
ನಂಬಲರ್ಹ ಮಾತು..
ಒಲವಿನ ಅಬ್ಬನ ಮರಣ
ಬೆಳಸಿದರು ಕಾಣದ ಜಗತ್ತಿಗೆ ಪಯಣ.!!

ಬಿಕ್ಕಿ ಬಿಕ್ಕಿ ಅತ್ತರೂ
ಅಬ್ಬ ಅಬ್ಬ ಎಂದು ಮೊರೆಯಿಟ್ಟರೂ
ಕೇಳಿಲ್ಲ..
ಹಿಂತಿರುಗಿ ನೋಡಿಲ್ಲ..
ನವ ನವ್ಯ ಶ್ವೇತ ಬಟ್ಟೆ ಧರಿಸಿ
ಹೊರಟೇ ಹೋದರು.
ಪಂಜರದೊಳಗೆ ಬಂಧಿಯಾದ
ಹಕ್ಕಿ ಪಕ್ಷಿಗಳಂತೆ
ಚಡಪಡಿಸಿದೆ ನಾ
ಕಡಲಾಚೆಯ ಕನಸಿನ ಲೋಕದಲಿ
ಭಾವುಕನಾದೆ..
ತೋಡಿನಂತೆ ಹರಿಯಿತು ಅಸ್ರುಧಾರೆ..!!

ಲಾಲಿಸಿ ಪಾಲಿಸಿ ವಿದ್ಯೆ ಬದ್ದಿ ಕಲಿಸಿ
ಎರಡಕ್ಷರ ಬರೆಯಲು
ಜನರೆಡೆಯಲು ಬೆರೆಯಲು
ಪಿತ ಕರ್ಮ ಪೂರೈಸಿ
ಪೌರುಷ ಮೆರೆದ ಸೌಮ್ಯ ನಡತೆಯ
ನಲಿವು ನಲುಮೆಯ ಅಬ್ಬ.
ನಿಮ್ಮಿಂದ ದೊರಕಿತು ಎನಗೆ
ಬರಹಕ್ಕೆ ನಿಲುಕದ ಲಾಭ..!!

ಓ ಅಬ್ಬಾ...
ನನ್ನ ಬಿಟ್ಟು ಅಗಲಿರುವಿರಿ ಹೌದಾ.??

ನಿಮ್ಮ ಉಳಿಸಲು ಪಟ್ಟ ಪ್ರಯತ್ನ
ವಿಫಲವಾಯಿತು ಅಬ್ಬ..
ನಿಮ್ಮ ಅಂತಿಮ ದರ್ಶನಗೈಯಲು
ಓಡೋಡಿ ಕಡಲು ದಾಟಿ ಊರು ಸೇರಲು
ಎಲ್ಲವೂ ಶೂನ್ಯವಾಯಿತು ಅಬ್ಬ..
ಎಲ್ಲವೂ ಶೂನ್ಯವಾಯಿತು..!!

ನಿಮ್ಮ ನೆನಪಿಸಲು ನಿಮಗಾಗಿ
ತಹ್ಲೀಲ್ ಖತಂ ಓದಲು
ನನ್ನೊಂದಿಗೆ ಕೆ‌.ಸಿ.ಎಫ್ ಸನ್ನದ್ದ ಪಡೆ
ಸಿದ್ದರಿರುವಾಗ
ಓ ಅಬ್ಬಾ ನೀವೆಷ್ಟು ಭಾಗ್ಯಶಾಲಿ.!!

ಯಾ ಅಲ್ಲಾಹ್ ಅಬ್ಬನೊಂದಿಗೆ
ಒಗ್ಗೂಡಿಸು ಸ್ವರ್ಗೀಯ ಉದ್ಯಾನದಲ್ಲಿ
ಮಗ್ಫರತ್ ಮರ್ಹಮತ್'ನ ಗೊಂಚಲು
ನೀಡಿ
ಬರ್ಝಕಿ ಜೀವನ ಪ್ರಕಾಶಪೂರಿತ ಗೊಳ್ಳಲಿ..!!

-ಸಿ ಐ ಇಸಾಕ್ ಫಜೀರ್

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...