Skip to main content

ತಾಜುಲ್ ಉಲಮಾ ಖ.ಸಿ..ಸಂಚಿಕೆ - 03

*ತಾಜುಲ್ ಉಲಮಾ ಖ.ಸಿ ಉಳ್ಳಾಲದ ಮುತ್ತು*

ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ

              *ಸಂಚಿಕೆ - 03*

------------------------------
ತಾಜುಲ್ ಉಲಮಾ ಖ.ಸಿ ಕಡ್ಡಾಯವಾದ ಇಬಾದತ್ ಗಳನ್ನು ನಿರ್ವಹಿಸುವುದರೊಂದಿಗೆ ಸುನ್ನತ್ತಾದ ಇಬಾದತ್ ಗಳಲ್ಲಿ ಅಧಿಕವಾಗಿ ಮಗ್ನರಾಗುತ್ತಿದ್ದರು.ಸದಾ ಸಮಯ ಅಲ್ಲಾಹನ ದ್ಸಿಕ್ರ್ ,ಪ್ರವಾದಿ ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಸ್ವಲಾತ್ ಹೇಳುವುದರಲ್ಲಿ ತಲ್ಲೀನರಾಗುತ್ತಿದ್ದರು.ತನ್ನ ಜೀವನದ ಕೊನೆ ತನಕವೂ ರಾತ್ರಿಯ ವಿತ್ರ್ ನಮಾಜು *ಹನ್ನೊಂದು* ರಕ್ಅತ್ ನಿರ್ವಹಿಸುತ್ತಿದ್ದರು.ಸಯ್ಯಿದ್ ಮದನಿ ಉಳ್ಳಾಲ ಜುಮಾ ಮಸೀದಿಯಲ್ಲಿ ರಮಳಾನಿನ ಇಶಾ ಮತ್ತು ತರಾವೀಹ್ ನಮಾಜು ಮುಗಿದ ತಕ್ಷಣ ಎದ್ದು ಹೊರ ಮಸೀದಿಗೆ ಹೋಗಿ ತಾಜುಲ್ ಉಲಮಾ ಖ.ಸಿ ವಿತ್ರ್ ನಮಾಜು ಹನ್ನೊಂದು ರಕ್ಅತ್ ನಿರ್ವಹಿಸುವಾಗ ಅವರ ಹಿಂದೆ ಜಮಾಅತ್ತಾಗಿ ಹಲವಾರು ಮಂದಿ ಸೇರುತ್ತಿದ್ದರು.ತಾಜುಲ್ ಉಲಮಾ ಖ.ಸಿ ರವರ ತನ್ನ ಬದುಕಿನ ಕೊನೆಯ ಆ ಇಳಿ ವಯಸ್ಸಿನಲ್ಲೂ ವಿತ್ರ್ ನಮಾಜು ಹನ್ನೊಂದು ರಕ್ಅತ್ ನಿಂತು ನಿರ್ವಹಿಸುತ್ತಿದ್ದುದನ್ನು ಕಾಣುತ್ತಿದ್ದಾಗ ಸುನ್ನತ್ತಾದ ಇಬಾದತ್ತಿಗೆ ಎಷ್ಟೊಂದು ಪ್ರಾಮುಖ್ಯತೆಯನ್ನು ತಾಜುಲ್ ಉಲಮಾ ಖ.ಸಿ ನೀಡುತ್ತಿದ್ದರು ಎಂದು ತಿಳಿದುಕೊಳ್ಳಬಹುದು.
ಹೀಗೆ ಧಾರಾಳವಾಗಿ ಅಲ್ಲಾಹನಿಗೆ ಇಬಾದತ್ ನಿರ್ವಹಿಸುವ ಮೂಲಕ ಸಾಮೀಪ್ಯ ಬಯಸಿದಾಗ ಅಲ್ಲಾಹನು ತಾಜುಲ್ ಉಲಮಾ ಖ.ಸಿ ರವರನ್ನು ಅವನ ಇಷ್ಟದಾಸರುಗಳಿಗೆ ನೀಡುವಂತಹ *ಕರಾಮತ್* ಎಂಬ ಮಹೋನ್ನತ ಪದವಿಯನ್ನು ನೀಡಿ ಗೌರವಿಸಿದನು.ಅವನು ತಾಜುಲ್ ಉಲಮಾ ಖ.ಸಿ ರವರ ಮೂಲಕ ಹಲವಾರು ಸಂದರ್ಭಗಳಲ್ಲಿ ಕರಾಮತ್ ತೋರ್ಪಡಿಸುವ ಮೂಲಕ ಅವರ ಸ್ಥಾನವನ್ನು ಇನ್ನಷ್ಟು ಉತ್ತುಂಗಕ್ಕೇರಿಸಿದನು.ತಾಜುಲ್ ಉಲಮಾ ಖ.ಸಿ ರವರ ಕಲ್ಪನೆಯ ಮೇರೆಗೆ ಹಲವು ಸಂದರ್ಭಗಳಲ್ಲಿ ಆಕಾಶವು ಅವರ ಆದೇಶವನ್ನು ಪಾಲಿಸಿದೆ.
ಒಮ್ಮೆ ತನ್ನ ಅಹ್ಲುಸ್ಸುನ್ನಃದ ಅನುಯಾಯಿಗಳು ಒಂದು ಸ್ಥಳದಲ್ಲಿ ಬ್ರಹತ್ ಸಮಾವೇಶವನ್ನು ಹಮ್ಮಿಕೊಂಡಿದ್ದರು.ಆದರೆ ಅಂದು ಮಳೆಯ ವಾತಾವರಣ ಆಗಿತ್ತು.ನೋಡನೋಡುತ್ತಿದ್ದಂತಯೇ ಧಾರಾಕಾರ ಮಳೆಯೂ ಸುರಿಯಲಾರಂಭಿಸಿತು. ಎಡೆಬಿಡದೆ ಮಳೆ ಮುಂದುವರಿದಿತ್ತು.ಸುನ್ನೀ ಸಮೂಹ ಆತಂಕಕ್ಕೊಳಗಾದರು.ನಮ್ಮ ಇಂದಿನ ಸಮಾವೇಶಕ್ಕೆ ಮಳೆಯು ಅಡ್ಡಿಯಾಗಬಹುದೋ ಎಂಬ ಬೇಸರ ಮಡುಗಟ್ಟಿತು.ತಾಜುಲ್ ಉಲಮಾ ಖ.ಸಿ ರವರೊಂದಿಗೆ ತಮ್ಮ ಆತಂಕವನ್ನು ತೋರಿಕೊಂಡರು.ತಾಜುಲ್ ಉಲಮಾ ತನ್ನ ಎರಡು ಕೈಗಳನ್ನು ಮೇಲಕ್ಕೆತ್ತಿ ದುವಾ ಮಾಡಿದರು.
*أللهم حوالينا ولاعلينا* *أللهم حوالينا ولاعلينا* *أللهم حوالينا ولاعلينا*
ಓ ಅಲ್ಲಾಹುವೇ ನಿನ್ನ ಇಸ್ಲಾಂ ದೀನಿನ ಸುಂದರ ಆಶಯಾದರ್ಶಗಳನ್ನು ಸಮೂಹಕ್ಕೆ ಮನದಟ್ಟು ಮಾಡಿಕೊಡಲು ನಿನ್ನ ಅಹ್ಲುಸ್ಸುನ್ನಃದ ದಾಸರು ಇಲ್ಲಿ ಸುನ್ನೀ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ.ಆದುದರಿಂದ ನಿನ್ನ ಕಾರುಣ್ಯದ ಮಳೆಯು ಇಂದು ಇಲ್ಲಿಗೆ ಬೇಡ.ಅದನ್ನು ಸುತ್ತ ಮುತ್ತಲ ಪ್ರದೇಶಕ್ಕೆ ಸುರಿಸು. *ಏನದ್ಭುತ* ಸಮಾವೇಶ ಹಮ್ಮಿಕೊಂಡ ಪ್ರದೇಶದಲ್ಲಿ ಮಳೆಯು ನಿಂತಿತು.ಸುತ್ತಮುತ್ತಲ ಊರಿಗೆ ಮಳೆಯೂ ಶಿಫ್ಟ್ ಆಯಿತು.ಸುನ್ನೀ ಸಮೂಹ ಹರ್ಷೋಲ್ಲಸಿತರಾದರು.ಸಮಾವೇಶ ಉನ್ನತ ವಿಜಯವಾಗಿ ಮಾರ್ಪಟ್ಟಿತು.

*****************************
ಮುಂದುವರಿಯುವುದು.

ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ
8105745760

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...