Skip to main content

ಸುಬಹಿ ನಮಾಜಿನಲ್ಲಿ ಕುನೂತ್..ಭಾಗ 11

*ಸುಬಹಿ* *ನಮಾಝಿನಲ್ಲಿ* *ಖುನೂತ್.*

*ಭಾಗ* *--11*
�� *ಮುನೀರ್* *ಸಖಾಫಿ,* *ಸಾಲೆತ್ತೂರು.*
---------------------------
*ಹದೀಸ್* *ನಂ* *:06*
عن عبد الله قال : لم يقنت النبي الاشهرا واحدا ،لم يقنت قبله ولا بعده.
(مسند البزار 1569)

ಅಬ್ದುಲ್ಲಾ (ರ) ಹೇಳುತ್ತಾರೆ;
"ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಒಂದು ತಿಂಗಳು ಮಾತ್ರ ಖುನೂತ್ ಓದಿದ್ದಾರೆ.ಅದಕ್ಕಿಂತ ಮುಂಚೆ ಓದಿಲ್ಲ,ಅದರ ನಂತರವೂ ಓದಿಲ್ಲ.
(ಮುಸ್ನದುಲ್ ಬಝ್ಝಾರ್ 1569)

ಈ ಹದೀಸಿನ ವರದಿಗಾರರ ಹೆಸರು ಈ ರೀತಿಯಾಗಿದೆ
"1:ಶರೀಕ್.(شريك)
2.ಅಬೂ ಹಂಝತ್ .(ابو حمزة)
3.ಇಬ್ರಾಹೀಂ .(ابراهيم)
4.ಅಲ್ಖಮತ್ .(علقمة)
5.ಅಬ್ದುಲ್ಲಾ (ರ)(عبد الله).

ಇದರಲ್ಲಿರುವ ಅಬೂ ಹಂಝ ಎಂಬವರು ದುರ್ಬಲಾಗಿದ್ದಾರೆ.
ಇಮಾಮ್ ಹೈಸಮೀ (ರ) ಹೇಳುತ್ತಾರೆ ;
"وفيه ابو حمزة الاعور القصاب وهو ضعيف (مجمع الزوائد 2/137)

ಇದರ ಪರಂಪರೆಯಲ್ಲಿ ಅಬೂ ಹಂಝ ಅಲ್ ಅ ಅವರ್ ಎಂಬವರು ಇದ್ದಾರೆ.ಅವರು ದುರ್ಬಲರಾಗಿದ್ದಾರೆ.
(ಮಜ್ ಮಉಝ್ಝವಾಯಿದ್ 2/137)
      -----------------
ಇಮಾಮ್ ಮುಝ್ಝಿ ಅವರ ಕುರಿತು ಹೇಳುತಾರೆ;
"وقال عبد الله بن احمد حنبل عن ابيه ابو حمزة صاحب ابراهيم ضعيف الحديث
وقال في موضع اخر متروك الحديث
وقال ابو بكر بن ابي خيثمة سألت يحي بن معين عن ميمون ابي حمزة القصاب فقال ليس بشيء لا يكتب حديثه
وقال محمد بن عثمان بن ابي شيبة سمعت يحي بن معين وسئل عن ابي حمزة صاحب ابراهيم فقال كان اسمه ميمون وليس بشيء...
وقال ابراهيم بن يعقوب الجوزجاني ابو حمزة ميمون صاحب ابراهيم ضعيف الحديث وكذلك الدار قطني
وقال البخاري ميمون ابو حمزة القصاب الاعور الكوفي ليس بذاك وقال في موضع اخر ضعيف ذاهب الحديث
وقال ابو حاتم ليس بقوي
وقال النسائي ميمون ابو حمزة يروي عن ابراهيم ليس بثقة.
وقال ابو بكر الخطيب لا تقوم به حجة.(تهذيب الكمال 29/240)

ಅಹ್ಮದ್ ಬಿನ್ ಹಂಬಲ್ ರವರ ಪುತ್ರರಾದ ಅಬ್ದುಲ್ಲಾ (ರ) ಹೇಳುತ್ತಾರೆ;ಅಬೂ ಹಂಝ ದುರ್ಬಲರಾಗಿದ್ದಾರೆ.ಅವರ ಹದೀಸ್ ಅಯೋಗ್ಯವಾಗಿದೆ.

ಅಬೂಬಕರ್ ಬಿನ್ ಕೈಸಮತ್ ಹೇಳಿದರು;
ನಾನು ಯಹ್ಯಬಿನ್ ಮುಯೀನ್ ರೊಂದಿಗೆ ಅವರ ಬಗ್ಗೆ ಕೇಳಿದಾಗ ಅವರು ದುರ್ಬಲರೆಂದು ಮತ್ತು ಅವರ ಹದೀಸ್ ಬರೆಯಕೂಡದೆಂದು  ಹೇಳಿದರು.

ಮುಹಮ್ಮದ್ ಬಿನ್ ಉಸ್ಮಾನ್ (ರ) ಹೇಳಿದರು;ನಾನು ಯಹ್ಯ ಬಿನ್ ಮುಯೀನ್ ರೊಂದಿಗೆ ಅಬೂ ಹಂಝ ರ ಕುರಿತು ಕೇಳಿದಾಗ ಅವರು ಸ್ವೀಕಾರ್ಹರಲ್ಲವೆಂದು ಹೇಳಿದರು.

ಇಬ್ರಾಹಿಮ್ ಬಿನ್ ಯ ಅಖೂಬ್ (ರ) ಹೇಳುತ್ತಾರೆ; ಅಬೂ ಹಂಝರವರು ದುರ್ಬಲರಾಗಿದ್ದಾರೆ.ಅದೇ ರೀತಿ ಇಮಾಮ್ ದರಖುತ್ ನಿ ಕೂಡಾ ಹೇಳಿದ್ದಾರೆ.

ಇಮಾಮ್ ಬುಖಾರಿ ಹೇಳುತ್ತಾರೆ ಅವರು ದುರ್ಬಲರಾಗಿದ್ದಾರೆ.

ಇಮಾಮ್ ಹಾತಿಮ್ ಹೇಳುತ್ತಾರೆ; ಅವರು ದುರ್ಬಲರಾಗಿದ್ದಾರೆ.

ಇಮಾಮ್ ನಸಈ ಹೇಳುತ್ತಾರೆ; ಅವರು ವಿಶ್ವಸ್ಥರಲ್ಲ.

ಅಬೂಬಕರ್ ಅಲ್ ಖತೀಬ್ (ರ) ಹೇಳುತ್ತಾರೆ; ಅವರು ಅವರನ್ನು ಸ್ವೀಕರಿಸಲ್ಪಡದು.
(ತಹ್ದೀಬುಲ್ ಕಮಾಲ್ 29/240)
     ----------------
ವಹ್ಹಾಬಿಗಳ ಅಂಗೀಕೃತ ನೇತಾರ ಹಾಫಿಲು ದಹಬೀ ಹೇಳುತ್ತಾರೆ;
ميمون ابو حمزة القصاب الكوفي التمار وقال احمد متروك الحديث
وقال الدارقطني ضعيف
وقال البخاري ليس بالقوي عندهم
وقال النسائي ليس بثقة
(ميزان الاعتدال 4/234)

ಮೈಮೂನ್ ಅಬೂ ಹಂಝ ಅಲ್ ಕಸ್ಸಾಬ್ ಎಂಬವರ ಕುರಿತಿ ಇಮಾಮ್ ಅಹ್ಮದ್ (ರ) ಹೇಳುತ್ತಾರೆ; ಅವರ ಹದೀಸ್ ಸ್ವೀಕರಿಸಲ್ಪಡದು.
ಇಮಾಮ್ ದಾರಖುತ್ ನೀ ಹೇಳುತ್ತಾರೆ,ಅವರು ದುರ್ಬಲರಾಗಿದ್ದಾರೆ.
ಅಬೂ ಹಾತಿಂ ಹೇಳುತ್ತಾರೆ;ಅವರು ವಿಶ್ವಸ್ಥರಲ್ಲ.
ಇಮಾಮ್ ನಸಾಈ ಹೇಳುತ್ತಾರೆ ; ಅವರು ವಿಶ್ವಾಸಯೋಗ್ಯರಾದ ವ್ಯಕ್ತಿಯಲ್ಲ.(
ಮೀಝಾನುಲ್ ಇಅತಿದಾಲ್ 4/234)
       -----------------
ಈ ಮೇಲೆ ಹೇಳಿದ ಹದೀಸ್ ಇಮಾಮ್ ಬಝ್ಝಾರ್ (ರ) ಕೂಡಾ ವರದಿ ಮಾಡಿದ್ದಾರೆ.
ಇಮಾಮ್ ಬಝ್ಝಾರ್ (ರ) ಮತ್ತೊಂದು ಸ್ಥಳದಲ್ಲಿ ಅನಸ್ (ರ) ರಿಂದ ಸ್ವಹೀಹ್ ಆದ ಹದೀಸೊಂದನ್ನು ವರದಿ ಮಾಡಿದ್ದಾರೆ.
ಅದು ಈ ರೀತಿಯಾಗಿದೆ.
عن انس ان رسول الله صلي الله عليه وسلم قنت حتي مات وابو بكر حتي مات وعمر حتي مات رواه البزار ورجاله موثوقون (مجمع الزوائد 2/139)
ಅನಸ್ (ರ) ಹೇಳುತ್ತಾರೆ;
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಮತ್ತು ಅಬೂ ಬಕರ್ ,ಉಮರ್ (ರ) ಕೊನೆಯ ತನಕ ಖುನೂತ್ ಓದಿದ್ದರು.
(ಮಜ್ ಮಉಝ್ಝವಾಯಿದ್ 2/139)

ಈ ರೀತಿ ಇಮಾಮ್ ಬಝ್ಝಾರ್ (ರ) ವರದಿ ಮಾಡಿರುವಾಗ ಖುನೂತ್ ಇಲ್ಲ ಎಂದು ಹೇಳಿದ ಹದೀಸ್ ಲಈಫೆಂದೇ ತಿಳಿದು ಬರುತ್ತದೆ.

ಒಟ್ಟಿನಲ್ಲಿ ವಹ್ಹಾಬಿಗಳು ಪ್ರಸ್ತುತ ಹದೀಸಿನ ಅಧಾರದಲ್ಲಿ ಖುನೂತ್ ನಿಷೇಧಿಸುವುದಾದರೆ ಅವರಿಗೆ ಅದರಲ್ಲಿ ಪ್ರಮಾಣವಿಲ್ಲ.ಕಾರಣ ಆ ಹದೀಸ್ ದುರ್ಬಲವೆಂದು ಹಾಫಿಲ್ ಗಳಾದ ಮುಹದ್ದಿಸ್ ಗಳು ಹೇಳಿದ್ದನ್ನು ನೀವು ಓದಿದ್ದೀರಿ.

ಇನ್ನಷ್ಟು ವಿಷಯಗಳು ಮುಂದಿನ ಬಾಗದಲ್ಲಿ ....
ಇಂಶಾ ಅಲ್ಲಾಹ್

---------------------------------

ಮುಂದುವರಿಯುವುದು...
*-----------------------------------*

THE HERITAGE manglore
Run By
darul musthafa moral academy , nechabettu.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...