Skip to main content

ಸಯ್ಯಿದ್ ಮದನಿ ಖ.ಸಿ..ಭಾಗ -04

ಉಳ್ಳಾಲ ಬೆಳಗಿಸಿದ ಮಹಾ ಪುರುಷ ಖುತುಬುಝ್ಝಮಾನ್ ಸಯ್ಯಿದ್ ಮದನಿ ಖ.ಸಿ*

              ಭಾಗ - 04

*✍ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ*

ಕರಾಮತ್ -4
ಸಯ್ಯಿದ್ ಮದನಿ ತಂಗಳ್ ಖ.ಸಿ ರವರ ವಫಾತ್ ಸಮೀಪಿಸಿದಾಗ ತನ್ನ ಪ್ರಿಯ ಪತ್ನಿ ಯಾದ ಬೀವಿಯವರು ಉಮ್ಮಳಿಸಿ ಬರುವ ದುಃಖದೊಂದಿಗೆ ಕೇಳಿದರು.ಓ ನನ್ನ ಪ್ರಿಯ ಪತಿಯವರೇ....
ತಾವು ನನ್ನನ್ನು ಬಿಟ್ಟು ಹೋದರೆ ನನ್ನ ಗತಿಯೇನು? ನಾನು ವಿಧವೆಯಾದರೆ ನನ್ನ ದೈನಂದಿನ ಆವಶ್ಯಕತೆಗಳಿಗೆ ನಾನು ಏನು ಮಾಡಲಿ?ನನ್ನ ಜೀವನ ನಿರ್ವಹಣೆಗೆ ನಾನು ಏನು ಮಾಡಲಿ?
ಸಯ್ಯಿದರು ಹೇಳಿದರು.ನೀನು ದುಃಖಿಸಬೇಡ.ಸಹನಾಶೀಲಳಾಗು.
ಅಲ್ಲಾಹನ ಅನುಗ್ರಹದಿಂದ ನಿನ್ನ ದೈನಂದಿನ ಖರ್ಚು ನಿಭಾಯಿಸಲು ಬೇಕಾಗುವಷ್ಟು ಹಣ ನಿನಗೆ ಸಿಗಲಿದೆ.ನನ್ನ ಮರಣದ ಬಳಿಕ ಪ್ರತೀದಿನ ಬೆಳಿಗ್ಗೆ ನನ್ನ ಖಬರಿನ ಹಿಂಬದಿಯಲ್ಲಿ ನಿನಗೆ ದೈನಂದಿನ ಖರ್ಚಿಗೆ ಬೇಕಾಗುವಷ್ಟು ಹಣ ಸಿಗಲಿರುವುದು ಇಂಶಾ ಅಲ್ಲಾಹ್...
ಸಯ್ಯಿದರು ವಫಾತಾದರು.ಇನ್ನಾಲಿಲ್ಲಾಹ್...ಮಯ್ಯಿತ್ ಪರಿಪಾಲನೆ ಎಲ್ಲವೂ ಸುಸೂತ್ರವಾಗಿ ನಡೆಯಿತು.ಮರುದಿನ ಬೆಳಿಗ್ಗೆ ಬೀವಿಯವರು ತನ್ನ ಪ್ರಿಯ ಪತಿ ಮದನಿ ತಂಗಳರ ಖಬರ್ ಬಳಿ ಬಂದರು.....ಏನಾಶ್ಚರ್ಯ....ಮದನಿ ತಂಗಳ್ ರವರ ಅದ್ಭುತ ಕರಾಮತು ಪ್ರತ್ಯಕ್ಷವಾಯಿತು....ತನ್ನ ಅಂದಿನ ಜೀವನ ನಿರ್ವಹಣೆಗೆ ಒಂದು ರೂಪಾಯಿ ಹಣ ಖಬರ್ ಬಳಿ ಇತ್ತು..( 300 ವರ್ಷಗಳ ಹಿಂದಿನ ಚರಿತ್ರೆಯಾಗಿದೆ....ಅಂದಿನ ಒಂದು ರೂಪಾಯಿ ಇಂದಿನ ಎಷ್ಟು ರೂಪಾಯಿಗಳಿಗೆ ಸಮಾನವಾಗಬಹುದು ಎಂದು ನೀವೇ ಊಹಿಸಿ ನೋಡಿ ) ಹೀಗೆ ಪ್ರತಿನಿತ್ಯವೂ ಖರ್ಚಿಗೆ ಒಂದು ರೂಪಾಯಿ ಸಿಗುತ್ತಲಿತ್ತು....ಹೀಗಿರಲು ಒಂದು ದಿವಸ ಊರಿನ ತನ್ನ ಮನೆಯ ಹತ್ತಿರದ ಸ್ತ್ರೀ ಬೀವಿಯವರಲ್ಲಿ ಹೇಳಿದರು.ನಿನಗೆ ದೈನಂದಿನ ಸಿಗುವ ಒಂದು ರೂಪಾಯಿ ಪೂರ್ತಿ ಯಾಕೆ ಖರ್ಚು ಮಾಡುತ್ತಿರುವೆ.....ಅದರಲ್ಲಿ ಅರ್ಧ ರೂಪಾಯಿಯಷ್ಟು ಹಣ ತೆಗೆದಿಡು....ನಿನಗೆ ಯಾವಾಗಲಾದರೂ ಉಪಯೋಗಕ್ಕೆ ಬರಬಹುದು...( ಸ್ತ್ರೀಯರ ಬುದ್ಧಿ ಇಂದೂ ಅಂದೂ ಎಂದೆಂದೂ ವಕ್ರಬುದ್ಧಿ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿದೆ ) ತನ್ನ ಮನೆಯ ಹತ್ತಿರದ ಮಹಿಳೆಯ ಮಾತನ್ನು ಕೇಳಿ ಬೀವಿಯವರು ಅಂದು ಅರ್ಧದಷ್ಟು ರೂಪಾಯಿಯನ್ನು ಖರ್ಚು ಮಾಡಿ ಅರ್ಧದಷ್ಟನ್ನು ತೆಗೆದಿರಿಸಿದರು...ಮರುದಿನ ಬೀವಿಯವರು ಖಬರ್ ಬಳಿ ಸಾಗಿ ನೋಡಿದಾಗ ಅರ್ಧ ರೂಪಾಯಿಯಷ್ಟು ಹಣ ಮಾತ್ರ ಕಂಡು ಅವಕ್ಕಾದರು.ನೆರೆಮನೆ ಸ್ತ್ರೀಯ ಮಾತಿಗೆ ಶರಣಾಗಿ ಮುಂದೆ ಪ್ರತಿನಿತ್ಯವೂ ಖಬರ್ ಬಳಿ ಅರ್ಧ ರೂಪಾಯಿಯೇ ಬೀವಿಗೆ ಸಿಗುವಂತಾಯಿತು...ಈ ಒಂದು ಕರಾಮತು ಇಂದು ನಾವೂ ಪ್ರತ್ಯಕ್ಷವಾಗಿ ಕಾಣುತ್ತಿದ್ದೇವೆ...ಸಯ್ಯಿದ್ ಮದನಿ ತಂಗಳ್ ಖ.ಸಿ ರವರ ದರ್ಬಾರಿನ ಮೂಲಕವೇ ಎಷ್ಟೋ ಮಸೀದಿ ಮದ್ರಸ ಶಿಕ್ಷಣ ಸಂಸ್ಥೆಗಳು ನಡೆಯುತ್ತಿವೆ.ಇವೆಲ್ಲದರ ಖರ್ಚು ವೆಚ್ಚಗಳಿಗೆ ಬೇಕಾಗುವಷ್ಟು ಸಾವಿರಾರು  ರೂಪಾಯಿಗಳು ಮದನಿ ತಂಗಳ್ ಖ.ಸಿ ರವರ ಕರಾಮತ್ ಮೂಲಕವೇ ಹರಿದು ಬರುತಿದೆ..

*ಕರಾಮತ್ -05*

ಒಂದು ದಿನ ಮದನಿ ತಂಗಳ್ ಖ.ಸಿ ಉಳ್ಳಾಲದ ಅಳೇಕಲ ಮಸೀದಿ ಸಮೀಪವಿರುವ ಕೊಲವೊಂದರಲ್ಲಿ ನಮಾಝ್ ಗಾಗಿ ವುಲೂ ನಿರ್ವಹಿಸುತ್ತಿದ್ದರು.ವುಲೂವಿನ ಮಧ್ಯೆ ಒಂದೇ ಸಮನೆ ತನ್ನ ಎರಡು ಕೈಗಳಿಂದ ನೀರನ್ನೆತ್ತಿ ಮೇಲಕ್ಕೇ ಚಿಮ್ಮುತ್ತಲಿದ್ದರು...ಸನಿಹವಿದ್ದವರು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರು..ನೀರು ಚಿಮ್ಮಿಸುವುದನ್ನು ನಿಲ್ಲಿಸಿದಾಗ ಸನಿಹವಿದ್ದವರು ಆಶ್ಚರ್ಯಚಕಿತರಾಗಿ ಕೇಳಿದರು...ಮದನಿ ತಂಗಳರೇ..ತಾವು ಯಾಕೆ ವುಲೂವಿನ ಮಧ್ಯೆ ನೀರನ್ನು ಮೇಲಕ್ಕೆ ಚಿಮ್ಮಿಸಿದಿರಿ....ಮದನಿ ತಂಗಳ್ ಹೇಳಿದರು.ನಾನು ವುಲೂ ನಿರ್ವಹಿಸುತ್ತಿರುವುದರ ಮಧ್ಯೆ ಪವಿತ್ರ ಮಕ್ಕಾದ ಹರಂ ಶರೀಫ್ ನಲ್ಲಿ ಬೆಂಕಿ ಅನಾಹುತ ಸಂಭವಿಸುವುದನ್ನು ಕಂಡೆ.ಅಲ್ಲಾಹನ ಆಜ್ಞೆಯಂತೆ ಅದನ್ನು  ನಂದಿಸಲು ನೀರನ್ನು ಚಿಮ್ಮಿಸಿದೆ..ಅಲ್ಲಾಹನ ಅನುಗ್ರಹದಿಂದ ಬೆಂಕಿ ನಂದಿತು....ಎಂದರು....ಸಯ್ಯಿದ್ ಮದನಿ ತಂಗಳ್ ರವರ ಅದ್ಬುತದಿಂದ  ಜನರು ಭಾರೀ ಅನಾಹುತದಿಂದ ರಕ್ಷೆ ಪಡೆದರು.ಆ ವರ್ಷ ಪವಿತ್ರ ಹಜ್ ಗೆ ಹೋದ ಊರಿನ ಕೆಲ ಹಜ್ಜಾಜ್ ಗಳು ಮರಳಿ ಬಂದು ಅಲ್ಲಿ ನಡೆದ ಸಂಗತಿಯನ್ನು ವಿವರಿಸಿದ್ದು ಹೀಗೆ...ಮಕ್ಕಾದಲ್ಲಿ ಭಾರೀ ಬೆಂಕಿ ಅನಾಹುತ ಸಂಭವಿಸುತ್ತಿತ್ತು.ನಾವು ಸಯ್ಯಿದ್ ಮದನಿ ತಂಗಳ್ ರವರನ್ನು ತವಸ್ಸುಲ್ ಮಾಡಿ ಅಲ್ಲಾಹನಲ್ಲಿ ಬೇಡಿದೆವು....ಅಷ್ಟರಲ್ಲಿ ಮೇಲಿನಿಂದ ನೀರು ಎಸೆಯಲ್ಪಟ್ಟು ಬೆಂಕಿ ನಂದಿತು..ಭಾರೀ ಅನಾಹುತ ಸಂಭವಿಸುವುದು ತಪ್ಪಿತು..

*ಮುಂದುವರಿಯುವುದು*

✍ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
+918105745760

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...