Skip to main content

ತಾಜುಲ್ ಉಲಮಾ ಖ.ಸಿ..ಸಂಚಿಕೆ - 04

*ತಾಜುಲ್ ಉಲಮಾ ಖ.ಸಿ ಉಳ್ಳಾಲದ ಮುತ್ತು*

ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ

           *ಸಂಚಿಕೆ - 04*

------------------------------

ತಾಜುಲ್ ಉಲಮಾ ಖ.ಸಿ ರವರ ನೇತ್ರತ್ವದಲ್ಲಿ ತನ್ನ ಊರಾದ ಕರುವಂತುರುತ್ತಿ ಯಲ್ಲಿ ಬ್ರಹತ್ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ವಿವಿಧ ಊರುಗಳಿಂದ ಜನರು ಹರಿದು ಬಂದಿದ್ದರು.ಪ್ರಗಲ್ಭ ವಿದ್ವಾಂಸರುಗಳು ಅಲ್ಲಿ ಸೇರಿದ್ದರು.ಇನ್ನೇನು ಕಾರ್ಯಕ್ರಮ ಪ್ರಾರಂಭವಾಗಲಿಕ್ಕೆ ಕೆಲವು ನಿಮಿಷಗಳು ಬಾಕಿ ಉಳಿದಿತ್ತು.ಅಷ್ಟರಲ್ಲಿ ಅನಿರೀಕ್ಷಿತವಾಗಿ ಧಾರಾಕಾರ ಮಳೆಯ ಆಗಮನವಾಯಿತು.ರಸ್ತೆಗಳೆಲ್ಲಾ ನೀರಿನಿಂದ ತುಂಬಿ ಹರಿಯತೊಡಗಿತು.ಸ್ವಲಾತ್ ಮಜ್ಲಿಸ್ ಗೆ ಬಂದ ಕೆಲವರು ಮಳೆಯಿಂದ ರಕ್ಷಣೆ ಪಡೆಯಲು ಚದುರಿ ನಿಂತರು.ಎಲ್ಲರಲ್ಲೂ ಆತಂಕ,ನಿರಂತರ ಮಳೆ ಸುರಿಯುತಿದೆ.ಬಹುಮಾನ್ಯ ತಾಜುಲ್ ಉಲಮಾ ಖ.ಸಿ ಸ್ವಲಾತ್ ಮಜ್ಲಿಸ್ ಗೆ ನೇತ್ರತ್ವ ನೀಡಲಿದ್ದಾರೆ.ಅದೋ ಶೈಖುನಾ ತಾಜುಲ್ ಉಲಮಾ ಮನೆಯಿಂದ ಹೊರಟು ನಿಂತು ಆಕಾಶವನ್ನು ನೋಡುತ್ತಾ ಅಲ್ಲಾಹನ ಪವಿತ್ರ ಕುರಾನಿನ ವಚನವಾದ
*يا أرض ابلعي مائك ويا سماع أقلعي.......*
ಎಂದು ಓದಿದರು.ಓ ಭೂಮಿಯೆ ನಿನ್ನ ನೀರನ್ನು ಇಂಗಿಸು.ಓ ಆಕಾಶವೇ ಮಳೆಯನ್ನು ನಿಲ್ಲಿಸು.ನಾವು ಇಲ್ಲಿ ಮುತ್ತು ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮೇಲೆ ಸ್ವಲಾತ್ ಹೇಳುವ ಮಜ್ಲಿಸ್ ಹಮ್ಮಿಕೊಂಡಿದ್ದೇವೆ.ಏನದ್ಬುತ.ಮಳೆಯು ನಿಂತಿತು.ತಾಜುಲ್ ಉಲಮಾ ಖ.ಸಿ ಕಾರ್ಯಕ್ರಮಕ್ಕೆ ನೇತ್ರತ್ವ ನೀಡಿದರು.ಸ್ವಲಾತ್ ಮಜ್ಲಿಸ್ ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗಿ ನಡೆಯಿತು.
*ಮತ್ತೊಂದು ಘಟನೆ*
ತಾಜುಲ್ ಉಲಮಾ ಖ.ಸಿ ರವರ ಕಾರು ಯಾತ್ರೆ ಮಧ್ಯೆ ಪೆಟ್ರೋಲ್ ಮುಗಿದು ನಿಂತುಬಿಟ್ಟಿತು.ಶೈಖುನಾರೊಂದಿಗೆ ಕಾರು ಚಾಲಕ ಹೇಳಿದ.ಕಾರಿನ ಪೆಟ್ರೋಲ್ ಮುಗಿದಿದೆ.ಕಾರು ಸ್ಟಾರ್ಟ್ ಆಗುತ್ತಿಲ್ಲ.ತಾವು ಉದ್ದೇಶಿಸಿದ ಸ್ಥಳ ಮುಟ್ಟುವುದಾದರೂ ಹೇಗೆ......ತಾಜುಲ್ ಉಲಮಾ ಹೇಳಿದರು....ಏನು ಹೇಳ್ತಿದ್ದೀಯಾ?!
ಕಾರಿನ ಪೆಟ್ರೋಲ್ ಮುಗಿದಿದೆಯೆಂದೋ? ಇಲ್ಲ.ನಾವು ಉದ್ದೇಶಿಸಿದ ಸ್ಥಳ ಮುಟ್ಟಿಯೇ ತೀರುತ್ತೇವೆ.ಈಗ ಮತ್ತೊಮ್ಮೆ ಸ್ಟಾರ್ಟ್ ಮಾಡು.ತಾಜುಲ್ ಉಲಮಾ ರ ಕರಾಮತ್ ಮಗದೊಮ್ಮೆ ಪ್ರತ್ಯಕ್ಷವಾಯಿತು.ಕಾರು ಚಾಲಕ ಸ್ಟಾರ್ಟ್ ಮಾಡಿದ..ಏನದ್ಬುತ..ಕಾರು ಸ್ಟಾರ್ಟ್ ಆಯಿತು.ಅವರು ಉದ್ದೇಶಿಸಿದ ಸ್ಥಳದವರೆಗೂ ಯಾವುದೇ ತೊಂದರೆಯಿಲ್ಲದೆ ಕಾರು ಚಲಿಸಿತು.
------------------------------

ಒಮ್ಮೆ *ನೂರುಲ್ ಉಲಮಾ ಅಶ್ಶೈಖ್ ಅಬ್ದುಲ್ ಖಾದಿರ್ ಎಂ.ಎ ಉಸ್ತಾದ್ ಖ.ಸಿ ತೀವ್ರ ರೋಗ ಶಯ್ಯೆಯಲ್ಲಿದ್ದಂತಹ ಸಂದರ್ಭದಲ್ಲಿ ತಾಜುಲ್ ಉಲಮಾ ಖ.ಸಿ ರವರೊಂದಿಗೆ ಹೇಳಿದರು.ನಾನು ಅತೀವ ಅನಾರೋಗ್ಯ ಪೀಡಿತನಾಗಿದ್ದೇನೆ.ನನ್ನ ಮರಣ ಸಮೀಪಿಸುತ್ತಿದೆ.ನನ್ನ ಆಖಿಬತ್ ಉತ್ತಮವಾಗಲು ತಾವು ಅಲ್ಲಾಹನೊಂದಿಗೆ ದುವಾ ಮಾಡಿರಿ.ತಾಜುಲ್ ಉಲಮಾ ಖ.ಸಿ ಹೇಳಿದರು.ತಾವು ಏನು ಹೇಳ್ತಿದ್ದೀರಿ.ತಾವು ಈಗ ಮರಣ ಹೊಂದುವುದಿಲ್ಲ.ತಮ್ಮ ಮರಣದ ಸಮಯ ಹತ್ತಿರವಾಗಲಿಲ್ಲ.ಇಲ್ಲಿ ತಾವು ಇಸ್ಲಾಂ ದೀನಿಗಾಗಿ,ಸುನ್ನತ್ ಜಮಾಅತ್ ಗಾಗಿ ನಿರ್ವಹಿಸಬೇಕಾದ ಹಲವಾರು ಕೆಲಸಗಳು ಇನ್ನೂ ಬಾಕಿ ಇವೆ.ತಮ್ಮ ಮರಣ ಸಮೀಪಸಿದೆಯೆಂದೋ ?!! ಇಲ್ಲ.ತಾವೀಗ ಮರಣ ಹೊಂದಲಾರಿರಿ..ತಾಜುಲ್ ಉಲಮಾ ಖ.ಸಿ ರವರ ಕರಾಮತಿನ ಮೂಲಕ ಹೇಳಿದಂತಹ ಮಾತು ಇಲ್ಲಿ ಸತ್ಯವಾಯಿತು. ನೂರುಲ್ ಉಲಮಾ ಖ.ಸಿ ರವರ ಅನಾರೋಗ್ಯ ಕಡಿಮೆಯಾಯಿತು.ಅದರ ನಂತರ ಹಲವು ವರ್ಷಗಳ ಕಾಲ ಜೀವಿಸಿದರು.ಸುನ್ನತ್ ಜಮಾಅತಿನ ಕಾರ್ಯಕ್ರಮಗಳಿಗೆ ನವ ಹುರುಪು ಹುಮ್ಮಸ್ಸಿನೊಂದಿಗೆ ನೇತ್ರತ್ವ ನೀಡಿದರು.ತಾಜುಲ್ ಉಲಮಾ ಖ.ಸಿ ರವರ ವಫಾತಿನ ನಂತರ ಮತ್ತೂ ಒಂದು ವರ್ಷ ಜೀವಿಸಿದರು.ತಾಜುಲ್ ಉಲಮಾ ಖ.ಸಿ ರವರ ವಫಾತಿನ ಬಳಿಕ ಸುನ್ನೀ ಜಂಇಯ್ಯತುಲ್ ಉಲಮಾದ ಅಧ್ಯಕ್ಷರಾಗಿ ವಿದ್ವಾಂಸ ಸಭೆಯ ಸಾರಥಿಯಾಗಿ ಮುನ್ನಡೆಸುವ ಭಾಗ್ಯ ಕೂಡಾ ನೂರುಲ್ ಉಲಮಾ ಖ.ಸಿ ರವರಿಗೆ ಲಭಿಸಿತು.
ಇಂತಹ ಹಲವಾರು ಕರಾಮತುಗಳು ತಾಜುಲ್ ಉಲಮಾ ಖ.ಸಿ ರವರ ಜೀವಿತ ಕಾಲದಲ್ಲಿ ನಡೆದಿದೆ.ಅದನ್ನು ಬರೆದು ಮುಗಿಸಲೋ ಹೇಳಿ ಮುಗಿಸಲೋ ಸಾಧ್ಯವಿಲ್ಲ..ವಫಾತಿನ ಬಳಿಕದ ಹ್ರಸ್ವ ಸಮಯದಲ್ಲಿನ ಕೆಲವು ಕರಾಮತುಗಳು ತಾಜುಲ್ ಉಲಮಾ ಖ.ಸಿ ರವರಿಂದ ಪ್ರಕಟಗೊಂಡಿದೆ.

*ಮುಂದುವರಿಯುವುದು....*

ಅಲ್ಲಾಹು ನಮ್ಮನ್ನು,ನಮ್ಮ ತಂದೆ ತಾಯಂದಿರು,ನಮ್ಮ ಪತ್ನಿ ಮಕ್ಕಳು,ಉಸ್ತಾದರುಗಳನ್ನು ತಾಜುಲ್ ಉಲಮಾ ಖ.ಸಿ ರವರ ಮಹಿಮೆಯಿಂದ ಎಲ್ಲಾ ವಿಧದ ಆಪತ್ತು ಮುಸೀಬತ್ತುಗಳಿಂದ ಕಾಪಾಡಲಿ...ಆಮೀನ್..

ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ
+91 8105745760

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...