Skip to main content

ಮದ್ಯಪಾನ ನಿಷಿದ್ಧ

ಮದ್ಯಪಾನ ನಿಷಿದ್ದ

ಎಂ.ಫಯಾಝ್*
*ಬೀಸಿರೋಡು(ಪಿಸಿ)

*ಓ ಸತ್ಯವಿಶ್ವಾಸಿಗಳೇ ನಿಶ್ಚಯವಾಗಿಯೂ ಮದ್ಯ, ಜೂಜು, ವಿಗ್ರಹಗಳು, ಸಮಸ್ಯೆ ಪರಿಹಾರಾರ್ಥ ಎಸೆಯುವ ಬಿಲ್ಲುಗಳು ಮ್ಲೇಚ್ಛ ಪ್ರವೃತ್ತಿಗಳಾಗಿವೆ. (ಆದುದರಿಂದ) ಅವುಗಳೆಲ್ಲವನ್ನು ತೊರೆಯಿರಿ. ನೀವು ವಿಜಯಿಗಳಾಗಬಹುದು. (ಪವಿತ್ರ ಕುರ್ಆನ್)*

ಮದ್ಯವು ಅಮಲು ಪದಾರ್ಥವಾಗಿದೆ. *ಪ್ರವಾದಿ(ﷺ)ರವರು ಅಮಲು ಉಂಟುಮಾಡುವ ಪದಾರ್ಥಗಳೆಲ್ಲವೂ ನಿಷಿದ್ದವಾಗಿದೆಯೆಂದು ಹೇಳಿರುವರು.*
(ಬುಖಾರಿ, ಮುಸ್ಲಿಮ್, ಅಬೂದಾವೂದ್, ತಿರ್ಮುದಿ)

*ಪ್ರವಾದಿ(ﷺ ) ಹೇಳಿದರು: ನಶೆಯುಂಟುಮಾಡುವ ಪದಾರ್ಥಗಳೆಲ್ಲವೂ ಮದ್ಯವಾಗಿದೆ. ಎಲ್ಲಾ ಮದ್ಯಗಳು ನಿಷಿದ್ಧವಾಗಿದೆ. (ಅಹ್ಮದ್, ಅಬೂಯಹ್عಲ)*

ನಶೆಯ ಪ್ರತಿಯೊಂದು ವಸ್ತು (ದೇಹದಲ್ಲಿ ಆಲಸ್ಯ ಹಾಗೂ ಅವಯವಗಳಿಗೆ ಕೇಡುಂಟುಮಾಡುವ) ಹಾಗೂ ಪಾನೀಯಗಳನ್ನು *ಪ್ರವಾದಿ(ﷺ )ರವರು ನಿಷೇಧಿಸಿರುವರು. (ಅಬೂದಾವೂದ್)*

*ಅಬೂಹುರೈರಾ(ರ)ರವರಿಂದ ವರದಿ: ಪ್ರವಾದಿ(ﷺ )ರವರು ಹೇಳಿದರು: ಒಬ್ಬನು ಸತ್ಯವಿಶ್ವಾಸಿಯಾಗಿದ್ದುಕೊಂಡು ವ್ಯಭಿಚರಿಸಲಾರ, ಸತ್ಯವಿಶ್ವಾಸಿಯಾಗಿದ್ದುಕೊಂಡು ಮದ್ಯಪಾನ ಮಾಡಲಾರ, ಸತ್ಯವಿಶ್ವಾಸಿಯಾಗಿದ್ದುಕೊಂಡು ಮೋಸಮಾಡಲಾರ.*
*(ಬುಖಾರಿ, ಮುಸ್ಲಿಮ್)*

ಮದ್ಯಪಾನಿಯಿಂದ ಸತ್ಯವಿಶ್ಚಾಸದ ಪ್ರಕಾಶವನ್ನು ಕಸಿದುಕೊಳ್ಳಲಾಗುವುದು. (ತ್ವಬರಾನಿ)

*ಮದ್ಯಪಾನವನ್ನು ರೂಢಿಯಾಗಿಟ್ಬುಕೊಂಡವನು ಪಶ್ಚಾತ್ತಾಪ ಪಡದೆ ಮೃತಪಟ್ಟರೆ ಅವನೋರ್ವ ವಿಗ್ರಹಾರಾಧಕನಂತೆ ಅಲ್ಲಾಹನನ್ನುﷻ ಎದುರುಗೊಳ್ಳುವುದು (ಸ್ವಹೀಹ್ ಸನದಿನೊಂದಿಗೆ ಅಹ್ಮದ್ ನಿವೇದಿಸಿದ ಹದೀಸ್) ಸರಿಸುಮಾರು ಇದೇ ಅರ್ಥವಿರುವ ಹದೀಸನ್ನು ಇಬ್ನ್ ಹಿಬ್ಬಾನ್ ಕೂಡ ನಿವೇದಿಸಿದ್ದಾರೆ. (ಮದ್ಯಪಾನದ ಹವ್ಯಾಸವನ್ನಿಟ್ಟುಕೊಂಡವನು ವಿಗ್ರಹರಾಧಕನಂತೆ ಪಾಪಿಯಾಗಿದ್ದಾನೆ)*

ಮದ್ಯವು ನಿಷೇಧಿಸಲ್ಟಟ್ಟಾಗ ಸ್ವಹಾಬಿಗಳು ಅದು ವಿಗ್ರಹಾರಾಧನೆಯಂತಹ ಕೆಡುಕಾಗಿರುವುದರಿಂದ ನಿಷೇಧಿಸಲ್ಪಟ್ಟಿದೆಯೆಂದು ಸಾರಿದರು.
(ಇಬ್ನ್ ಅಬ್ಬಾಸ್(ರ)ರವರಿಂದ ತ್ವಬರಾನಿ ನಿವೇದನೆ)

*ಅಲ್ಲಾಹುﷻ ಮತ್ತು ಅಂತ್ಯದಿನದಲ್ಲಿ ವಿಶ್ಚಾಸವಿರಿಸುವ ಒಬ್ಬನು ಮದ್ಯ ಸೇವಿಸದಿರಲಿ ಮತ್ತು ಮದ್ಯವನ್ನೊಳಗೊಂಡ ಭೋಜನ ಕೂಟದಲ್ಲಿ ಪಾಲ್ಗೊಳ್ಳದಿರಲಿ. (ತ್ವಬರಾನಿ)*

ಮದ್ಯಪಾನಿಯ ನಲುವತ್ತು ದಿನಗಳ ನಮಾಝನ್ನು *ಅಲ್ಲಾಹನುﷻ* ಸ್ವೀಕಸುವುದಿಲ್ಲ.ಆದರೆ ಅವನು ಪಶ್ಚಾತಾಪಪಟ್ಟು ಮರಳಿದರೆ *ಅಲ್ಲಾಹನುﷻ* ಅದನ್ನು ಸ್ವೀಕರಿಸುತ್ತಾನೆ.ಪುನಃ ಕುಡಿದರೆ ಅವನ ನಲುವತ್ತು ದಿನಗಳ ನಮಾಝನ್ನು *ಅಲ್ಲಾಹನುﷻ* ಸ್ವೀಕರಿಸಲಾರ, ಮಾತ್ರವಲ್ಲದೆ ಅವನ ತೌಬಾವನ್ನೂ ತಿರಸ್ಕರಿಸುವನು. ಇಂತವರಿಗೆ *ಅಲ್ಲಾಹನುﷻ* ನಹ್ರುಲ್ ಖಬಾಲ್ನಿಂದ ಕುಡಿಸುವನು.
(ಇಬ್ನು ಉಮರ್ ರವರಿಂದ ನಿವೇದನೆ) ನಹ್ರುಲ್ ಖಬಾಲ್ ಎಂದರೇನು ಎಂಬ ಪ್ರಶ್ನೆಗೆ ಇಬ್ನು ಉಮರ್ ಅದು ನರಕವಾಸಿಗಳ ಕೀವು ಮಿಶ್ರಿತ ರಕ್ತ ಎಂದು ಉತ್ತರಿಸಿದರು. ಈ ಹದೀಸನ್ನು ಸ್ವಹೀಹ್ ಸನದಿನೊಂದಿಗೆ ತ್ವಬರಾನಿಯವರು ಕೂಡಾ ಉಲ್ಲೇಖಿಸಿದ್ದಾರೆ.
ಮದ್ಯವು ಎಲ್ಲಾ ಕೆಡುಕುಗಳ ಕೀಲಿಕೈಯಾಗಿದೆ. ಅದನ್ನು ಸೇವಿಸಿದಾಗ ಮನುಷ್ಯ ಸರಿ-ತಪ್ಪುಗಳ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಾನೆ.ನಶೆಯೇರಿದಾಗ ತಾನೇನು ಮಾಡುತ್ತಿದ್ದೇನೆಂದು ಆತನು ಅರಿತಿರುವುದಿಲ್ಲ. *ಆದುದರಿಂದಲೇ ಇಸ್ಲಾಮ್ ಈ ಕೆಡುಕಿನ ಮುಂದಾಲೋಚನೆಗಾಗಿ ಕರೆ ನೀಡಿದೆ.*

*ಮದ್ಯಪಾನಿಗೆ ಛಡಿಯೇಟು ನೀಡಿರಿ ಪುನಃ ಸೇವಿಸಿದಿರೆ ಛಡಿಯೇಟನ್ನೇ ನೀಡಿರಿ.ಮೂರನೇ ಬಾರಿಯೂ ಹೀಗೆಯೇ ಮಾಡಿರಿ.ನಾಲ್ಕನೇ ಬಾರಿ ಪುನರಾವರ್ತಿಸಿದರೆ ಅವನನ್ನು ವಧಿಸಿ ಬಿಡಿರಿ.*
*(ಅಬೂದಾವೂದ್,ಇಬ್ನು ಹಿಬ್ಬಾನರು ತಮ್ಮ ಸ್ವಹೀಹ್ನಲ್ಲಿ ಇದನ್ನು ಉಲ್ಲೇಖಿಸಿದ್ದಾರೆ.)*

ಮದ್ಯಪಾನಿಗೆ ಛಡಿಯೇಟು ನೀಡಿರಿ.ನಾಲ್ಕನೇ ಬಾರಿ ಪುನರಾವರ್ತಿಸಿದರೆ ಅವನನ್ನು ಕೊಂದುಬಿಡಿರಿ.(ತಿರ್ಮುದಿ)

*ಮದ್ಯವನ್ನು ತಯಾರಿಸಿದವನು,ಕುಡಿದವನು,ಕುಡಿಸಿಸಿದವನು,ಅದನ್ನು ಹೊತ್ತುಕೊಂಡು ನಡೆದವನು ಮಾರಾಟಗಾರನು ಅದರ ಬೆಲೆಯನ್ನು ಪಡೆದು ಉಪಯೋಗಿಸಿಕೊಂಡವನು,ಅದಕ್ಕೆ ಬೇಕಾದ ವಸ್ತುಗಳನ್ನು ತಂದು ಕೊಟ್ಟವನು,ಅದನ್ನು ಮಾರಿದವರು ಇವರೆಲ್ಲರನ್ನೂ ಅಲ್ಲಾಹನﷻ ಪ್ರವಾದಿ ನಬಿﷺ ರವರು ಶಪಿಸಿರುವರು.(ತಿರ್ಮುದಿ)*

ಕೇವಲ ಒಂದು ತೊಟ್ಟು ಮದ್ಯ ಬಾವಿಯೊಂದಕ್ಕೆ ಬಿದ್ದು ಅದು ಮಲಿನಗೊಂಡ ನಂತರ ಅದೇ ಸ್ಥಾನದಲ್ಲಿ ಒಂದು ಮಿನಾರ ತಲೆಯೆತ್ತಿದರೆ ನಾನು ಅದರಲ್ಲಿ ಆಝಾನ್ ಮೊಳಗಿಸಲಾರೆ.ಸಮುದ್ರವೊಂದಕ್ಕೆ ಒಂದು ತೊಟ್ಟು ಮದ್ಯವು ಬಿದ್ದು ಆನಂತರ ಸಮುದ್ರವು ಬತ್ತಿಹೋಗಿ ಪ್ರಸ್ತುತ ಜಾಗದಲ್ಲಿ ಹುಲ್ಲು ಬೆಳೆದರೆ ಆ ಹುಲ್ಲನ್ನು ಮೇಯಲು ನನ್ನ ಜಾನುವಾರುಗಳನ್ನೂ ಕೂಡಾ ಬಿಟ್ಟು ಬಿಡುವುದಿಲ್ಲವೆಂದು ಹಝ್ರತ್ ಅಲಿ(ರ) ಹೇಳಿರುವರು.

*ನನ್ನ ಬೆರಳು ಅಪ್ಪಿತಪ್ಪಿ ಪಾತ್ರೆಯೊಳಗೆ ಮುಳುಗಿದರೆ ಅನಂತರ ನಾನು ಅದನ್ನು ಉಪಯೋಗಿಸಲಾರೆ.ಕತ್ತರಿಸಿ ಹಾಕುತ್ತೇನೆಂದು ಇಬ್ನು ಉಮರ್(ರ) ಹೇಳಿರುವರು.*

*ಟಿಪ್ಪಣಿ:* ದ್ರಾಕ್ಷೆ ಮತ್ತಿತರ ವಸ್ತುಗಳಿಂದ ತಯಾರಿಸಿದ ಮದ್ಯದ ಒಂದು ತೊಟ್ಟು ಗಂಟಲಿಗಿಳಿಯುವುದು ನಿಷಿದ್ಧವಾಗಿದೆ.ಮಾತ್ರವಲ್ಲದೆ,ಅದು ಮಹಾಪಾಪ ಎಂಬ ವಿಷಯದಲ್ಲಿ ಯಾರಿಗೂ ಭಿನ್ನಾಭಿಪ್ರಾಯವಿಲ್ಲ. ಮದ್ಯಪಾನ ಹಲಾಲ್ ಎಂದು ಭಾವಿಸಿದವನು ಸತ್ಯ ನಿಷೇಧಿಗಳಲ್ಲಿ ಸೇರಿದವನಾಗುತ್ತಾನೆ.

*ನಶೆಯೇರಿಸುವ  ಪ್ರತಿಯೊಂದು ವಸ್ತು ಕೂಡಾ ನಿಷಿದ್ಧವಾಗಿದೆ.ಆಫೀಮು,ಚರಸ್, ಭಂಗಿ,ಹಷೀಷ್,ಬ್ರೌನ್ ಶುಗರ್, ಅಮಲು ತರಿಸುವ ಇಂಜೆಕ್ಷನ್ ಇವೆಲ್ಲವೂ ಅದೇ ಯಾದಿಯಲ್ಲಿ ಒಳಪಡುತ್ತದೆ.*

*ಮುಗಿಯಿತು...*

*ನಮ್ಮ ಹಬೀಬ್ ತ್ವಾಹ ರಸೂಲ್  ಮುತ್ತು ನಬಿ ಮುಹಮ್ಮದ್ ಮುಸ್ತಫಾﷺ ತಂಙಳ ಮೇಲೆ 3 ಸ್ವಲಾತ್ ಹೇಳುವ.*
*📿📿اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله.*📿

✍🏻 *ಎಂ.ಫಯಾಝ್*
*ಬೀಸಿರೋಡು(ಪಿಸಿ)*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...