ಪ್ರಜ್ಞೆ ತಪ್ಪಿಹೋದ ಇಮಾಮ್ ಅಬೂ ಹನೀಫಃ (ರ)
*✒ಯೂಸುಫ್ ನಬ್ಹಾನಿ ಕುಕ್ಕಾಜೆ*
▪ಒಮ್ಮೆ ಹನಫೀ ಮದ್ಹಬಿನ ನೇತಾರ, ಲಕ್ಷೋಪಲಕ್ಷ ಪ್ರವಾದಿ ಹದೀಸುಗಳನ್ನು ಕಂಠಪಾಠ ಮಾಡಿದ್ದ, ಪ್ರವಾದಿ ಮುಹಮ್ಮದ್ (ಸ) ರನ್ನು ಎಷ್ಟೋ ಸಲ ಕನಸಿನಲ್ಲೂ ಎಚ್ಚರದಲ್ಲೂ ಕಂಡಿದ್ದ, ಇಮಾನಿನ ಪ್ರಭೆ ಜ್ಞಾನಸೂರ್ಯ ಇಮಾಮ್ *ಅಬೂಹನೀಫ* (ರ) ರು ಇರಾಕಿನ ಒಂದು ಒಳ ದಾರಿಯಲ್ಲಿ ನಡೆದು ಹೋಗುತ್ತಿದ್ದರು. ವಿಶಾಲವಲ್ಲದ ದಾರಿಯಾದ್ದರಿಂದ ಎದುರಿನಿಂದ ಮದ್ರಸ ಬಿಟ್ಟು ಬರುತ್ತಿದ್ದ ಒಬ್ಬ ಪುಟ್ಟ ಬಾಲಕನ ಕಾಲಿಗೆ ಅವರರಿಯದೆಯೇ ತುಳಿದುಹೋಯಿತು.
▪ಇಮಾಮರ ತುಳಿತದಿಂದ ಕಾಲಿಗೆ ನೋವಾದ ಬಾಲಕ ಇಮಾಮರ ಮುಖಕ್ಕೆ ನೋಡಿ ಹೇಳಿದ. *"ಇಮಾಮರೇ..., ನಾಳೆ ಆಖಿರವಿದೆಯೆಂದೂ (ಪರಲೋಕ) ಅಲ್ಲಿ ವಿಚಾರಣೆಯಿದೆ ಎಂಬ ನೆನಪಿರಲಿ. ಅಲ್ಲಾಹನ ಶಿಕ್ಷೆಯ ಬಗ್ಗೆ ನಿಮಗೆ ಗೊತ್ತಿದೆಯಲ್ಲವೇ...?*
▪ಸುಬ್ಹಾನಲ್ಲಾಹ್!!! ಇದು ಕೇಳಿದಾಕ್ಷಣ ಹುಡುಗನ ಮಾತಿನ ಗೌರವ ಈಮಾನಿನ ತೇಜಸ್ಸು ಇಮಾಮ್ ಅಬೂ ಹನೀಫರ ಹೃದಯಕ್ಕೆ ಸಿಡಿಲು ಬಡಿದಂತಾಗಿ ಅಲ್ಲೇ ಪ್ರಜ್ಞೆತಪ್ಪಿ ಬಿದ್ದರು.
ಸಂಗ್ರಹ : ಇಮಾಮ್ ಸ್ವಫೂರಿಯವರ *ನುಝ್ಹತುಲ್ ಮಜಾಲಿಸ್* ಎಂಬ ಗ್ರಂಥ.
Comments