Skip to main content

ನಾವು ಎಷ್ಟು ಸ್ವಲಾತ್ ಹೇಳಿದರೂ ಕೆಲವೊಮ್ಮೆ ನಮ್ಮ ಉದ್ದೇಶ ಈಡೇರುವುದಿಲ್ಲ ಯಾಕೆ

ನಾವು ಎಷ್ಟು ಸ್ವಲಾತ್ ಹೇಳಿದರೂ ಕೆಲವೊಮ್ಮೆ ನಮ್ಮ ಉದ್ದೇಶ ಈಡೇರುವುದಿಲ್ಲ ಯಾಕೆ
✍🏻 ಎಂ.ಫಯಾಝ್
         ಬೀಸಿರೋಡು(ಪಿಸಿ)
ನಾನು ದಿನನಿತ್ಯ ಸ್ವಲಾತ್ ಹೇಳುವೆನು.ನಾನು ನಿನ್ನೆ 4444 ನಾರಿಯತ್ ಸ್ವಲಾತ್ ಇಬ್ ರಾಹೀಂ ಸ್ವಲಾತ್ ಹಾಗೂ ಸ್ವಲಾತುತ್ತಾಜ್,ಅಹ್ ಲಮು ಸ್ವಲಾತ್ ಹಾಗೂ ಇತರ ಎಲ್ಲಾ ಸ್ವಲಾತನ್ನು ಹೇಳಿರುವೆನು.
ಆದರೂ ನಾನುದ್ದೇಶಿಸಿದ ಯಾವ ಕಾರ್ಯನೂ ಆಗ್ತಾ ಇಲ್ಲಾ. ಯಾಕೆ ಎಂದು ಮನಸ್ಸಿನಲ್ಲಿ ಗೊಂದಲ ಪಡುವವರಿಗೆ..

ನಾವು ಸ್ವಲಾತ್ ಹೇಳುವಾಗ ಬರೀಭೂಲೋಕದ ಕಾರ್ಯ ನೆರವೇರಲು ಮಾತ್ರ ಸ್ವಲಾತ್ ಹೇಳಬಾರದು. ಪರಲೋಕ ವಿಜಯಕ್ಕಾಗಿಯು ಸ್ವಲಾತ್ ಹೇಳಬೇಕು.ಒಳ್ಳೆಯ ಇಖ್ಲಾಸಿನೊಂದಿರಬೇಕು.
ನಮಾಝ್ ದಿನನಿತ್ಯ ಕಳಾ ಮಾಡದೇ ನಿರ್ವಹಿಸಬೇಕು.ಸುಳ್ಳು,ವಂಚನೆ,ವ್ಯಭಿಚಾರ ಮತ್ತೊಬ್ಬರ ಬಗ್ಗೆ ಗೀಬತ್ ಫಿತ್ನ ಫಸಾದ್ ಮುಂತಾದವುಗಳಿಂದ ದೂರವಿರಬೇಕು. ಆಲಿಂಗಳನ್ನು ಅಪಹಾಸ್ಯ ಮಾಡಬಾರದು.ತಪ್ಪು ಮಾಡದ ನಿರಪರಾಧಿಗಳನ್ನು ಅಪರಾಧಿಗಳಾಗಿ ಮಾಡಬಾರದು. ಅಲ್ಲಾಹನಿಗೆ  ಇಷ್ಟವಿಲ್ಲದ ಯಾವುದೇ ಕಾರ್ಯದಲ್ಲೂ ತೊಡಗಬಾರದು.ಬಿದ್ಅತ್ ನಿಂದ ಬಿದ್ಅತ್ ಗಾರನಿಂದ ದೂರವಿರಬೇಕು.
ಯಾರಿಗೂ ನೋವಾಗುವಂತಹ ಮಾತನ್ನಾಡಬಾರದು.ಸನ್ಮನಸ್ಸಿನಿಂದ ಜೀವಿಸಬೇಕು,ತಪ್ಪು ಮಾಡಿದವರಿಗೆ ಮತ್ತೊಬ್ಬರ ಮುಂದೆ ಫಳೀಹತ್ ಮಾಡದೇ ಗೊತ್ತಾಗುವ ರೀತಿಯಲ್ಲಿ ಅವರಿಗೆ ಒಳ್ಳೆಯದನ್ನು ಹೇಳಿಕೊಡಬೇಕು.

ಎಲ್ಲರೊಂದಿಗೆ ಪ್ರೀತಿಯಿಂದಿರಬೇಕು. ತಂದೆ ತಾಯಿಯನ್ನು ನೋವಿಸುವವರಾಗಬಾರದು.ಇಸ್ಲಾಮಿನ ಶರೀಅತನ್ನು ಅನುಸರಿಸಬೇಕು.ಶರೀಅತಿಗೆ ವಿರುದ್ಧವಾಗಿರಬಾರದು.ಎಲ್ಲವೂ ದೀನೀ ಚೌಕಟ್ಟಿನಲ್ಲಿರಬೇಕು.
ನಮ್ಮ ಎಲ್ಲಾ ಗುಣ ನಡತೆಗಳು ಅಲ್ಲಾಹುﷻ ವಿಗೂ ಹಾಗೂ ನಬಿ ಮುಹಮ್ಮದ್ ಮುಸ್ತಫಾ ﷺ ತಂಗಳವರಿಗೂ ಇಷ್ಟವಾಗುವ ರೀತಿಯಲ್ಲಿರಬೇಕು.

ಈ ರೀತಿ ಇದ್ದರೆ ಮಾತ್ರ ನಾವು ಉದ್ದೇಶಿಸಿದ ಇಹದ ಕಾರ್ಯವೆಲ್ಲವೂ ತಕ್ಷಣ ನೆರವೇರುತ್ತದೆ.
ಇಹದ ಉದ್ದೇಶವಿಟ್ಟು ಮಾತ್ರ ಸ್ವಲಾತ್ ಹೇಳಿಯೂ ಈಡೇರದಿದ್ದರೆ ಇಂಷಾಅಲ್ಲಾಹ್ ಅವರು ಹೇಳಿದ ಎಲ್ಲಾ ಸ್ವಲಾತಿಗೂ ಪರಲೋಕದಲ್ಲಿ ಪುಣ್ಯ ಸಿಗುವುದಂತೂ ಖಂಡಿತಾ ಅದರಲ್ಲಿ ಯಾರೂ ಸಂಶಯಪಡಬೇಕಾಗಿಲ್ಲ.

ಅಲ್ಲಾಹುﷻ ನಮ್ಮೆಲ್ಲರ ಪರಲೋಕ ಜೀವನವನ್ನು ಸಲಾಮತ್  ಮಾಡಲಿ.ಆಮೀನ್ ಯಾರಬ್ಬಲ್ ಆಲಮೀನ್.

✍🏻 ಎಂ.ಫಯಾಝ್
         ಬೀಸಿರೋಡು(ಪಿಸಿ)

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...