Skip to main content

ಐಕ್ಯತೆಯನ್ನು 2 ವಿಭಾಗಗಳಾಗಿ ವಿಂಗಡಿಸಬಹುದಾಗಿದೆ.

ಐಕ್ಯತೆಯನ್ನು 2 ವಿಭಾಗಗಳಾಗಿ  ವಿಂಗಡಿಸಬಹುದಾಗಿದೆ.

*1) ಧಾರ್ಮಿಕ ಐಕ್ಯತೆ*,
*2) ಸಾಮಾಜಿಕ ಐಕ್ಯತೆ.*

*ಧಾರ್ಮಿಕ ಐಕ್ಯತೆ =* ಧರ್ಮದ ಎಲ್ಲಾ ವಿಷಯದಲ್ಲೂ ಐಕ್ಯರಾಗುವುದು.
*ಸಾಮಾಜಿಕ ಐಕ್ಯತೆ =* ಸಾಮಾಜಿಕವಾದ ಎಲ್ಲಾ ವಿಷಯದಲ್ಲೂ ಐಕ್ಯರಾಗುವುದು.

*ಮುಸ್ಲಿಂ ಸಮುದಾಯದ ಐಕ್ಯತೆ ಅನಿವಾರ್ಯವೇ ಆಗಿದ್ದರೆ,  ಈ ಎರಡು ವಿಭಾಗದಲ್ಲೂ  ಐಕ್ಯತೆ ಮಾಡಬೇಕಾಗುತ್ತದೆ.*
  ಒಂದು ವಿಷಯದಲ್ಲಿ ಮಾತ್ರ ಐಕ್ಯತೆ ಮಾಡಿ,  ಮತ್ತೊಂದರಲ್ಲಿ ಐಕ್ಯತೆ ಮಾಡದೆ ಬಿಟ್ಟು ಬಿಡುವುದರಿಂದ ಐಕ್ಯತೆ ಎಂಬ ಪದಕ್ಕೆ ಅರ್ಥವಿರುವುದಿಲ್ಲ. ಅಂತಹ ಐಕ್ಯತೆ ಯೂ ಅರ್ಥ ಶೂನ್ಯ.
ಒಂದುವೇಳೆ,  ಒಂದನ್ನು ಬಿಟ್ಟು ಒಂದರಲ್ಲಿ ಮಾತ್ರ ಐಕ್ಯತೆ ಮಾಡುವುದಾದರೆ,  ಅದು ಸಾಮಾಜಿಕ ರಂಗವನ್ನು ಬಿಟ್ಟು,  ಧಾರ್ಮಿಕ ರಂಗದಲ್ಲಿ ಮಾತ್ರ ಮಾಡಬೇಕು.  
ಧಾರ್ಮಿಕ ರಂಗವನ್ನು ಬಿಟ್ಟು ಸಾಮಾಜಿಕ ರಂಗದಲ್ಲಿ ಮಾತ್ರ ಮಾಡುವ ಐಕ್ಯತೆಗೆ ಅಲ್ಲಾಹನ ಬಳಿ ಯಾವುದೇ ಮಾನ್ಯತೆ ಇರುವುದಿಲ್ಲ. 

*ಉದಾಹರಣೆಗೆ: ವಿಶ್ವಾಸ ಮತ್ತು ಆರಾಧನೆ.*
ಈ ಎರಡೂ ಇದ್ದಾಗ ಮಾತ್ರ ಮನುಷ್ಯನ ಆರಾಧನೆಯನ್ನು ಅಲ್ಲಾಹು ಸ್ವೀಕರಿಸುವುದು.  
ವಿಶ್ವಾಸ ಹೇಗಿದ್ದರೂ  ಆರಾಧನೆಯನ್ನು  ಮಾತ್ರ ಕೈಬಿಡಬಾರದು ಎನ್ನುವವರ ಆರಾಧನೆಗೆ ಅಲ್ಲಾಹನ ಬಳಿ ಯಾವುದೇ ಮಾನ್ಯತೆ ಇರುವುದಿಲ್ಲ.
ಒಂದುವೇಳೆ,  ಒಂದನ್ನು ಮಾತ್ರ ಅನುಸರಿಸುವುದಾದರೆ, (ಕಡ್ಡಾಯವಲ್ಲದ ಆರಾಧನೆಯನ್ನು ತ್ಯಜಿಸಿದರೂ),  ವಿಶ್ವಾಸಕ್ಕೆ ನಾವು ಹೆಚ್ಚು ಪ್ರಾಮುಖ್ಯತೆ ಕೊಡಬೇಕು.

*ವಿಶ್ವಾಸ ದೃಢವಾಗಿದ್ದಾಗ ಮಾತ್ರ ಆರಾಧನೆಗೆ ಮಾನ್ಯತೆ ಇರುವಂತೆ,*
*ಧಾರ್ಮಿಕ ರಂಗದಲ್ಲಿ ಐಕ್ಯತೆ ಇದ್ದಾಗ ಮಾತ್ರ, ಸಾಮಾಜಿಕ ರಂಗದ ಐಕ್ಯತೆಗೆ ಮಹತ್ವವಿರುವುದು.*

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...