Skip to main content

ಜೀವನ ಕಾಲದಲ್ಲಿ ಹಬೀಬರೊಂದಿಗೆ ಸ್ವರ್ಗವನ್ನೆ ಬೇಡಿಕೊಂಡ ಸ್ವಹಾಬಿವರ್ಯರು

ಜೀವನ ಕಾಲದಲ್ಲಿ ಹಬೀಬರೊಂದಿಗೆ ಸ್ವರ್ಗವನ್ನೆ ಬೇಡಿಕೊಂಡ ಸ್ವಹಾಬಿವರ್ಯರು

*ಹದೀಸ್👇🏻*
*حَدَّثَنِي رَبِيعَةُ بْنُ كَعْبٍ الأَسْلَمِيُّ، قَالَ كُنْتُ أَبِيتُ مَعَ رَسُولِ اللَّهِ صلى الله عليه وسلم فَأَتَيْتُهُ بِوَضُوئِهِ👈 وَحَاجَتِهِ فَقَالَ لِي ‏"‏ سَلْ ‏"‏ ‏.‏ فَقُلْتُ أَسْأَلُكَ مُرَافَقَتَكَ👈 فِي الْجَنَّةِ ‏.‏ قَالَ ‏"‏ (أَوَغَيْرَ ذَلِكَ ‏"‏) ‏.‏ قُلْتُ هُوَ ذَاكَ ‏.‏ قَالَ ‏"‏ فَأَعِنِّي عَلَى نَفْسِكَ بِكَثْرَةِ السُّجُودِ ‏"‏*
_🌹ರಬೀಅತ್ ಬಿನ್ ಕಅ್'ಬ್  ರವರಿಂದ :ಅವರು ಹೇಳುತ್ತಾರೆ ನಾನು ಒಂದು ರಾತ್ರಿ ಪ್ರವಾದಿ(ಸ)ರವರ ಜತೆಯಲ್ಲಿ ತಂಗಿದೆ. ಪ್ರವಾದಿ(ಸ)ಯವರ ವುಳೂ ಮತ್ತು ಶುಚೀಕರಣಕ್ಕೆ ಅಗತ್ಯವಾದ ನೀರು ತಂದುಕೊಟ್ಟಾಗ *ಅವರು ನಿನಗೆ ಅಗತ್ಯವಿರುವುದನ್ನು ಕೇಳು ಎಂದರು?* ನಾನು ಹೇಳಿದೆ ಸ್ವರ್ಗದಲ್ಲಿಯೂ ನಾನು ತಮ್ಮೊಂದಿಗೆ ವಾಸಿಸಬೇಕು._
_*ಆಗ ಪ್ರವಾದಿಯವರು ಬೇರೇನೂ ಕೇಳಲಿಕ್ಕಿಲ್ಲವೇ?* ಎಂದು ಪ್ರಶ್ನಿಸಿದಾಗ ನಾನು ನನಗೆ ಅಷ್ಟೇ ಸಾಕು ಎಂದು ಉತ್ತರಿಸಿದೆ. ಪ್ರವಾದಿ ಹೇಳಿದರು. ಸುಜೂದನ್ನು ಹೆಚ್ಚಿಸುವ ಮೂಲಕ ಈ ಕಾರ್ಯದಲ್ಲಿ ನೀನು ನನಗೆ ಸಹಾಯ ಮಾಡು._
*📔Scan Page👇🏻*
*(ಮುಸ್ಲಿಮ್ 2206)*

*‼Note‼*
_ಸ್ವರ್ಗ ನೀಡುವುದು ಮಾನವ ಸಾಮರ್ಥ್ಯಕ್ಕೆ ಒಳಪಟ್ಟ ವಿಷಯವೇ? ಖಂಡಿತಾ ಅಲ್ಲ. ಆದರೂ ಸ್ವಹಾಬಿಯಾದ ರಬೀಅತ್ (ರ) ಪ್ರವಾದಿ(ಸ) ರವರೊಂದಿಗೆ ಸ್ವರ್ಗವನ್ನು ಕೇಳುತ್ತಾರೆ. ಮಾನವ ಸಾಮರ್ಥ್ಯಕ್ಕೆ ಮಿಗಿಲಾದ ಈ ಕಾರ್ಯವನ್ನು ಪ್ರವಾದಿ(ಸ) ಯವರೊಂದಿಗೆ ಕೇಳಿದರೆ ಮುಶ್ರಿಕ್‌ ಆಗುವುದಿಲ್ಲ ಎನ್ನುವುದು ರಬೀಅತ್(ರ) ವಿಶ್ವಾಸವಾಗಿತ್ತು._ _ಪ್ರವಾದಿ(ಸ)ರವರು ಈ ಘಟನೆಯ ಮೂಲಕ ಎಲ್ಲಾ ಯಾಚನೆಗಳು ಆರಾಧನೆಯಾಗುವುದಿಲ್ಲವೆಂದು ನಮಗೆ ಕಲಿಸಿಕೊಡುತ್ತಾರೆ. ಸಹಾಯಾಭ್ಯರ್ಥನೆಗಳೆಲ್ಲವೂ ಆರಾಧನೆಯಾಗುತ್ತಿದ್ದರೆ ಪ್ರವಾದಿ(ಸ) ರವರು ರಬೀಅತ್(ರ) ರೊಂದಿಗೆ ನಿಮಗೆ ಬೇಕಾದುದನ್ನು ಕೇಳಿರಿ ಎಂದು ಹೇಳುತ್ತಿರಲಿಲ್ಲ._
_ರಬೀಅತ್ ಭೌತಿಕವಾದ ಯಾವುದಾದರೊಂದನ್ನು ಕೇಳಬಹುದೆಂಬ ಕಲ್ಪನೆ ಹೀಗೆ ಹೇಳಲು ಪ್ರವಾದಿ(ಸ)ಯವರನ್ನು ಪ್ರೇರೇಪಿಸಿತೆ? ಅನಿರೀಕ್ಷಿತ ಬೇಡಿಕೆಯನ್ನು ಮುಂದಿಟ್ಟ ರಬೀಅತ್ (ರ)ರವರಿಗೆ ಪ್ರವಾದಿ(ಸ)ರವರು ಮಾನವ ಸಾಮರ್ಥ್ಯಕ್ಕೆ ಮಿಗಿಲಾದ ಕಾರ್ಯಗಳನ್ನು ಕೇಳುವುದು ಶಿರ್ಕೆಂದು ಉಪದೇಶಿಸುತ್ತಿರಲಿಲ್ಲವೇ?_ _ಪ್ರವಾದಿ(ಸ) ರವರು ಹಾಗೆ ಉಪದೇಶಿಸಲು ಮುಂದಾಗಿಲ್ಲ. ಸಂಕ್ಷಿಪ್ತದಲ್ಲಿ ಹೇಳುವುದಾದರೆ ಮಾನವ ಸಾಮರ್ಥ್ಯದ ಮಿತಿಯ ಆಚೆಗಿರುವ ಕಾರ್ಯಗಳನ್ನು ಇಸ್ಲಾಮಿನಲ್ಲಿ ವಿರೋಧವಿಲ್ಲವೆನ್ನುವುದು ಪ್ರಮಾಣಗಳಿಂದ ಸಾಬೀತಾದ ಸಂಗತಿಯಾಗಿದೆ._
*✍🏻Straight Path Ahlu Sunnah*
❣☘❣☘❣☘❣☘❣

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...