Skip to main content

ಹೆಬ್ಬಾವಿನ ಸವಾಲಿಗೆ ನಾನು ಕೊಟ್ಟ ಉತ್ತರ


🎓🎓 ಮಾಸ್ಟರ್ ಮೈಂಡ್ 🎓🎓 

 ಹೆಬ್ಬಾವಿನ ಸವಾಲಿಗೆ ನಾನು ಕೊಟ್ಟ ಉತ್ತರ

ಅವತ್ತೊಂದು ದಿನ ರಾತ್ರಿ 11 ಗಂಟೆ ಕಳೆದಿತ್ತು.ನಾನು ನಿದ್ರೆಯಲ್ಲಿದ್ದೆ. ತಂದೆಯವರು ಹೊರಗಡೆಯ ವಾಶ್ ರೂಮ್ ನಿಂದ ಮನೆಯೊಳಗೆ ಪ್ರವೇಶಿಸುವಾಗ ಮೇಲ್ಗಡೆಯಿಂದ ಏನೇೂ ಹೇೂದಂತೆ ಕಂಡಿತು.
ಕತ್ತಲೆ ಕವಿದಿದ್ದರಿಂದ ಅದು ಏನೆಂದು ತಿಳಿಯದಾದಾಗ ನಿದ್ದೆಯಿಂದ ಎದ್ದು ನಾನು ನೆರೆ ಮನೆಯವರನ್ನೆಲ್ಲಾ ಕರೆದೆ. ಅವರಲ್ಲೊಬ್ಬರು ಟಾರ್ಚ್ ಹಿಡಿದು ಮನೆಯ ಮೇಲ್ಬಾಗ ಹತ್ತಿ ನೇೂಡಿದರು. ಆಶ್ಚರ್ಯವಂಬಂತೆ ಮನೆಯ ಮೇಲ್ಛಾವಣಿಯಲ್ಲಿ ಒಂದು ಡೊಡ್ಡ ಹೆಬ್ಬಾವು ಅಂಗಾತ ಮಲಗಿತ್ತು.
ತಕ್ಷಣವೇ ಹಾವು ಹಿಡಿಯಬಲ್ಲ ಪರಿಣತ ಅಲ್ಲಿಗಾಗಮಿಸಿದ ಮತ್ತು ಅದನ್ನು ತನ್ನ ಕೈಯಲ್ಲಿಡಿದು ನಮ್ಮ ಮನೆಯ ಎದುರುಗಡೆ ತಂದಾಕಿದ.
ಹಾವು ಸುರುಟಿ ಕೊಂಡಿತ್ತು ಮತ್ತು ತಲೆ ಮಾತ್ರ ಹೊರ ಕಾಣುವಂತಿತ್ತು.ನಾವೆಲ್ಲ ಮನೆಯ ಜಗಲಿಯಲ್ಲಿ ನಿಂತು ಹಾವನ್ನೇ ನೇೂಡುತ್ತಿದ್ದೆವು.
ಅಷ್ಟರಲ್ಲಿ ನಮ್ಮನ್ನೇ ನೇೂಡುತ್ತಿದ್ದ ಹಾವು ಏನೇೂ ಒಂದು ವಿಷಯ ಹೇಳುವಂತೆ ಭಾಸವಾಯಿತು.
ಓ ಮನುಜಾ ಇಂದು ನಾನು ನಿಮ್ಮ ಮನೆಗೆ ಬಂದಾಗ ನೀವೆಲ್ಲರೂ ಹೆದರಿ ನನ್ನಿಂದ ರಕ್ಷಣೆ ಪಡೆಯಲು ನೆರೆಮನೆಯವರನ್ನು ಕರೆದಿರಿ ಹಾಗೂ ನನ್ನನ್ನು ಹಿಡಿಯಲು ಪರಿಣತನೂ ಬಂದು ನಿಮಗೆ ನೆರವಾದನು.
ಆದರೆ , ಒಂದು ವೇಳೆ ನಾಳೆ ನೀನು ಮರಣ ಹೊಂದಿ ಆರಡಿ ಮಣ್ಣಿನಡಿಯ ಖಬ್ರ್ ನಲ್ಲಿ ನಿನ್ನನ್ನಿಟ್ಟರೆ ಅಲ್ಲಿ ಇದೇ ನಾನು ನಿನ್ನ ಖಬ್ರ್ ನೊಳಗೆ ಬಂದು ನಿನ್ನ ಎದೆಯ ಮೇಲೆ ಕುಳಿತರೆ ನಿನ್ನ ನೆರವಿಗೆ ಯಾರಿದ್ದಾರೆ ಎಂದು ಹಾವು ಕೇಳಿದಾಗ ನಾನು ಹೇಳಿದ ಉತ್ತರ ಒಂದು ಮಾತ್ರ.....
ಹೌದು ನನ್ನ ರಕ್ಷಣೆಗೆ SSF ಇದೆ.ಜೀವಿತಾವದಿಯಲ್ಲಿ ನನ್ನಲ್ಲಿ ಸಂಭವಿಸಿದ ಪ್ರಮಾದಗಳಿಗೆ ಶಿಕ್ಷೆಯಾಗಿ ನೀನು ನನ್ನ ಬಳಿ ಬಂದರೆ.ನನ್ನ ಮೇಲೆ ತಹ್ಲೀಲ್ ಸಮರ್ಪಿಸಿ, ಕುರ್ ಆನ್ ಹದಿಯಾ ಮಾಡಿ ಭಕ್ತಿನಿರ್ಭರವಾಗಿ ಪ್ರಾರ್ಥಿಸಿ ನನ್ನನ್ನು ಶಿಕ್ಷೆಯಿಂದ ರಕ್ಷಿಸಲು ನೂರಾರು SSF ನ ಕಾರ್ಯಕರ್ತರು ನನ್ನೊಂದಿಗಿದ್ದಾರೆ ಎಂದು ಹೇಳಿದಾಗ ಹಾವು ಮರುತ್ತರವಿಲ್ಲದೆ ಮೌನಕ್ಕೆ ಜಾರಿದಂತೆ ನನಗನಿಸಿತು.

SSF ಕ್ಯಾಂಪಸ್ ಪ್ರತಿಭೆ ಮುಹ್ಸಿನ್ ನಮ್ಮನ್ನಗಲಿ ಒಂದು ವರ್ಷ.
ಅಲ್ಲಾಹನು ಖಬ್ರ್ ಸಂತೇೂಷಮಯಗೊಳಿಸಲಿ - ಆಮೀನ್

✍ Musthafa Master Ullal
======================
ನಮ್ಮನ್ನಗಲಿ ಒಂದು ವರ್ಷವಾದ ಮರ್ಹೂಂ ಮುಹ್ಸಿನ್ ಖಬ್ರ್ ಬಳಿ ಇಂದು ಬೆಳಿಗ್ಗೆ ನಡೆದ  ಅನುಸ್ಮರಣಾ ಮಜ್ಲಿಸ್ @ ಕೆ.ಸಿ ನಗರ. 10-10-2019 👇👇




Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...