ಚಿಕ್ಕಸತ್ಕರ್ಮˌದೊಡ್ಡ ಪ್ರತಿಫಲ
〰〰〰〰〰〰〰〰〰
💢ಎಂ.ಕೆ.ಸಿನಾನ್ ಅಜಿಲಮೊಗರು💢
ನಾವು ನಬಿ (ಸ.ಅ) ರ ಉಮ್ಮತ್...
ಯಾವ ಉಮ್ಮತಿಗೂ ನೀಡದಂತಹ ಸ್ಥಾನವನ್ನು ಅಲ್ಲಾಹು ನಮಗೆ ನೀಡಿದ್ದಾನೆ.........
ಅಲ್ಲಾಹನ ಬಳಿˌಚಿಕ್ಕ ಸತ್ಕರ್ಮವನ್ನು ಮಾಡಿದರೆˌದೊಡ್ಡ ಪ್ರತಿಫಲವುˌ ನಬಿ(ಸ.ಅ)ರ ಉಮ್ಮತ್ತಿಯಾದ ನಮಗಿದೆ........!
ಮೂಸಾ ನಬಿ (ಅ.ಸ)ರ ಉಮ್ಮತಿಗಳ ವಸ್ತ್ರದಲ್ಲಿ ಮೂತ್ರವಾದರೆˌ ಆ ವಸ್ತ್ರವನ್ನು ಮರು ಉಪಯೋಗಿಸುವಂತಿಲ್ಲˌಅಥವಾ ಮೂತ್ರಸ್ಪರ್ಶವಾದಂತಹ ವಸ್ತ್ರದ ಆ ಭಾಗವನ್ನು ಕತ್ತರಿಸಬೇಕು..........
ಆದರೆˌ
ನಬಿ (ಸˌಅ) ರ ಉಮ್ಮತಿಯಾದ ನಮ್ಮ ವಸ್ತ್ರದಲ್ಲಿ ಮೂತ್ರವಾದಲ್ಲಿ ಅದನ್ನು ಶುಚಿತ್ವಗೊಳಿಸಿದರೆ ಸಾಕು..
ಕತ್ತರಿಸಬೇಕೆಂದಿಲ್ಲˌಮರುಪಯೋಗವು ಮಾಡಬಹುದು.
(ಬೇರೆ ಉಮ್ಮತ್ಗೆ ನೀಡಿದಂತಹ ಕಷ್ಟ ನಿಯಮವನ್ನು ಅಲ್ಲಾಹನು ನಮಗೆ ನೀಡಿಲ್ಲ)
*ನಮಗಿರುವಂತಹ ಆಫರ್ ಗಳು ಬೇರೆ ಯಾವ ಉಮ್ಮತಿಗೂ ಇರಲಿಲ್ಲ......*
ಅದರಲ್ಲಿ *ಕೆಲವೊಂದನ್ನು*ನೋಡಿ........
👇
*ಯಾರಾದರುˌ*
*ನಾಲ್ಕು ಆಯತ್ ಉಳ್ಳˌಕೇವಲ ಐದು ಸೆಕೆಂಡ್ ಗಳಲ್ಲಿ ಓದಿ ಮುಗಿಸಬಹುದಾದಂತಹ ಸೂರತುಲ್ ಇಖ್ಲಾಸನ್ನು ಮೂರು ಬಾರಿ ಪರಾಯಣ ಮಾಡಿದರೆˌಒಂದು ಖತಂ ಓದಿದ ಪ್ರತಿಫಲವಿದೆ.........*
👉 *ಯಾರಾದರುˌಇಶಾ ನಮಾಝ್ ಮಾಡಿˌಮಲಗಿ ಸುಬಹ್ ನಮಾಝನ್ನು ಮಾಡಿದರೆˌರಾತ್ರಿ ಮಲಗಿ ನಿದ್ರಿಸಿದರೂಕೂಡ ಅಲ್ಲಾಹನಬಳಿ ನಿದ್ರಿಸದೆˌಇಬಾದತ್ ಮಾಡಿದ ಪ್ರತಿಫಲವಿದೆ....*
👉 *ಮುಹರ್ರಂನ ಒಂದು ಸುನ್ನತ್ ಉಪವಾಸವನ್ನು ಅನುಷ್ಠಿಸಿದರೆˌಒಂದು ವರ್ಷ ಸುನ್ನತ್ ಉಪವಾಸ ಆಚರಿಸಿದ ಪ್ರತಿಫಲವಿದೆ......*
👉 *ಒಬ್ಬಂಟಿಯಾಗಿ ನಮಾಝ್ ಮಾಡುವುದಕ್ಕಿಂತˌಜಮಾಅತ್ತಾಗಿ ನಮಾಝ್ ನಿರ್ವಹಿಸಿದರೆˌಇಪ್ಪತ್ತೇಳು ಪಟ್ಟು ಹೆಚ್ಚು ಪ್ರತಿಫಲ............*
👉 *ನಲವತ್ತು ದಿವಸ ಯಾರಾದರುˌಜಮಾಅತ್ತಾಗಿ ನಮಾಝ್ ನಿರ್ವಹಿಸಿದರೆˌಅವನನ್ನು ನರಕದಿಂದ ವಿಮೋಚಿಸಲಾಗುವುದು......*
👉 *ಮಸೀದಿಗೆ ಮನೆಯಿಂದ ನಡೆಯುವ ಒಂದೊಂದು ಹೆಜ್ಜೆಗೆ ಅವನ ಒಂದೊಂದು ಪಾಪವನ್ನು ಮನ್ನಿಸಲಾಗುವುದು.......*
👉 *ಇಸ್ಲಾಮಿಕ ಆಶಯ ಆದರ್ಶವನ್ನು ಕಲಿಸುವಂತಹ ತರಗತಿಯಲ್ಲಿ ಪಾಲ್ಗೊಳ್ಳುವುದು ಸಾವಿರ ರಕಅತ್ ನಮಾಝ್ ಮಾಡುವುದಕ್ಕಿಂತ ಶ್ರೇಷ್ಠ...*
👉 *ಅತ್ಯಂತ ಸುಲಭವಾದ ಕಾರ್ಯವಾಗಿದೆ ನೀರು ಕುಡಿಯುವುದುˌನೀರು ಕುಡಿಯುವಾಗ ಈ ಕೆಳಗಿನ ಒಂದೊಂದು ಕಾರ್ಯಕ್ಕೆ ಒಂದೊಂದು ಪ್ರತಿಫಲ,*
🎍ಬಿಸ್ಮಿ ಹೇಳಬೇಕು
🎍ಕುಳಿತುಕೊಂಡು ಕುಡಿಯಬೇಕು
🎍ಬಲ ಕೈಯಿಂದ ಕುಡಿಯಬೇಕು
🎍3 ಬಾರಿಯನ್ನಾಗಿಸಿ ಕುಡಿಯಬೇಕು
🎍ನೀರನ್ನು ನೋಡಿ ಕುಡಿಯಬೇಕು
🎍ಅಲ್ಹಂದುಲಿಲ್ಲಾಹ್ ಎಂದು ಹೇಳಬೇಕು
👉 *ಯಾರಾದರು ದಿನನಿತ್ಯ ಹತ್ತು ಸ್ವಲಾತ್ ಹೇಳಿದರೆ*
*ಅವನು ಮರಣ ಹೊಂದುವಾಗ ಬಾಯಾರಿಕೆಯನ್ನು ತಾಳಲಾಗದಾಗ ಜಿಬ್ರೀಲ್ (ಅ.ಸ)ಬಂದು ನೀರನ್ನು ಕೊಡುವರು,*
👉 *ದಿನನಿತ್ಯ ಹತ್ತು ಸ್ವಲಾತ್ ಹೇಳಿದರೆˌ ಕಬರ್ ನಲ್ಲಿ ಅವನು ಹೇಳಿದಂತಹ ಸ್ವಲಾತ್ ಕಬ್ರಿನಲ್ಲಿ ಕೇಳಲ್ಪಡುವ ಪ್ರಶ್ನೆಗೆ ಉತ್ತರಿಸುತ್ತದೆˌ*
👉 *ದಿನನಿತ್ಯ ಹತ್ತು ಸ್ವಲಾತ್ ಹೇಳಿದರೆˌ ಮೀಕಾಈಲ್(ಅ.ಸ) ಹವ್ಲುಲ್ ಕೌಸರ್ ಪಾನೀಯವನ್ನು ನೀಡುವರುˌ*
👉 *ದಿನನಿತ್ಯ ಹತ್ತು ಸ್ವಲಾತ್ ಹೇಳಿದರೆˌಸ್ವಿರಾತ್ ಎಂಬ ಸೇತುವೆಯಲ್ಲಿ ಮಿಂಚಿನಂತೆ ಜಿಬ್ರೀಲ್ (ಅ.ಸ) ಅವನನ್ನು ಕರೆದು ಕೊಂಡುಹೋಗುವರು..*
👉 *ಪ್ರವಾದಿ (ಸ.ಅ)ರೊಂದಿಗೆ ಯುಧ್ಧದಲ್ಲಿ ಭಾಗವಹಿಸಿ ದೀನುಲ್ ಇಸ್ಲಾಂಗೆ ಬೇಕಾಗಿ ಪ್ರಾಣತ್ಯಾಗವನ್ನು ಮಾಡಿದಂತಹ ಸ್ವಹಾಬಿಗಳಿಗೆ ಒಂದು ಶಹೀದ್ ನ ಫ್ರತಿಫಲವಾದರೆˌನೂತನವಾದಿಗಳು ತುಂಬಿರುವ ಈ ಕಾಲದಲ್ಲಿ ಪ್ರವಾದೀ ಚರ್ಯೆಯನ್ನು ಅನುಸರಿಸುವವನಿಗೆ ನೂರು ಶಹೀದ್ ನ ಪ್ರತಿಫಲ.......*
*💢ಎಂ.ಕೆ.ಸಿನಾನ್ ಅಜಿಲಮೊಗರು💢*
Comments