ಪ್ರಜೆಗಳ ಪ್ರಭು
ಭೂಮಿಯ ಸರ್ವಾಧಿಕಾರವೂ ಪ್ರವಾದಿ ವರ್ಯರಾದ ಸುಲೈಮಾನ್ ನಬಿ(ಅ) ರವರಿಗೆ ದೊರೆತಿದ್ದರೂ ಕೂಡಾ ಭಕ್ತಿ ಹಾಗೂ ವಿನಯದ ಕಾರಣದಿಂದ ಅವರು ತಲೆಯೆತ್ತಿ ನಡೆಯುತ್ತಿರಲಿಲ್ಲ. ಅವರು ಗೋಧಿಯ ಒಣರೊಟ್ಟಿಯನ್ನು ಮಾತ್ರ ತಿಂದು ತನ್ನ ಪ್ರಜೆಗಳಿಗೆ ಸ್ವಾದಿಷ್ಟವಾದ ರುಚಿಕರ ಆಹಾರಗಳನ್ನು ನೀಡುತ್ತಿದ್ದರು. ಆ ಬಗ್ಗೆ ಅವರೊಂದಿಗೆ "ಐಹಿಕವಾದ ಖಜಾನೆಗಳೆಲ್ಲವೂ ನೀಡಲ್ಪಟ್ಟಿದ್ದರೂ ತಾವು ಯಾಕೆ ಹೀಗೆ ಹಸಿದಿರುತ್ತೀರಿ?" ಎಂದು ಕೇಳಿದಾಗ ಅವರ ಪ್ರತಿಕ್ರಿಯೆ, "ಹೊಟ್ಟೆ ತುಂಬಾ ತಿಂದು ತೇಗುವಾಗ ಹಸಿದಿರುವ ನನ್ನ ಪ್ರಜೆಗಳನ್ನು ಮರೆತು ಬಿಡುವೆನೋ ಎಂಬ ಬಗ್ಗೆ ನನಗೆ ಭಯವಾಗುತ್ತಿದೆ" ಎಂದಾಗಿತ್ತು. (ಇರ್ಶಾದುಲ್ ಇಬಾದ್)
ಆಡಳಿತಗಾರರು ಪ್ರಜೆಗಳ ಬಗ್ಗೆ ಸದಾ ಜಾಗೃತರಾಗಿರುವವರಾಗಬೇಕು.
*ಜುನೈದ್ ಸಖಾಫಿ ಜೀರ್ಮುಕ್ಕಿ*
Comments