Skip to main content

*ಝಿಯಾರತ್ತ್ ಕೇಂದ್ರ* 👉 22 〰〰〰〰〰〰〰 ಅಲಿಯ್ಯುಲ್ ಕೂಫಿ ರ. ಪೆರುಙತ್ತೂರು, ಕಣ್ಣೂರು 〰〰〰〰〰〰〰 ✍ ಗಫೂರ್ ಬಾಯಾರು

*ಝಿಯಾರತ್ತ್ ಕೇಂದ್ರ*
       👉 22
〰〰〰〰〰〰〰
ಅಲಿಯ್ಯುಲ್ ಕೂಫಿ ರ.
ಪೆರುಙತ್ತೂರು, ಕಣ್ಣೂರು
〰〰〰〰〰〰〰
✍ ಗಫೂರ್ ಬಾಯಾರು
〰〰〰〰〰〰〰

🕌ಹಿಜರಿ ವರ್ಷ ಆರನೇ ಶತಮಾನದಲ್ಲಿ ಅಂದರೆ 800 ವರ್ಷಗಳ ಮೊದಲು ಕೇರಳಕ್ಕೆ ಆಗಮಿಸಿದ ಆಬಿದು ಮತ್ತು ವಲಿಯ್ಯು ಆಗಿದ್ದರು *ಅಲಿಯ್ಯುಲ್ ಕೂಫಿ ರ.*

ಕೇರಳದ ಕಣ್ಣೂರು ಜಿಲ್ಲೆಯ ತಲೆಶ್ಯೇರಿ, ನಾದಾಪುರಮ್ ಮಾರ್ಗದಲ್ಲಿ ಪೆರುಙತ್ತೂರು ಜುಮಾಅತ್ತ್ ಮಸೀದಿಯ ಪಶ್ಚಿಮ ಭಾಗದಲ್ಲಾಗಿದೆ ಮಖಾಂ ಇರುವುದು.

ಇರಾಖಿನ ಕೂಫಿಯಲ್ಲಾಗಿದೆ ಶೈಖ್ ಅಲಿಯವರ ರ. ರವರ ಜನನ. ಸ್ವತಃ ಊರಿನಿಂದ ಕರಾಮತ್ತಿನ ಮುಖಾಂತರ ಕಡಲಿನಲ್ಲಿ ಈಜಿ ಕೊಂಡಾಗಿದೆ
ಮಹಾನವರು ಭಾರತಕ್ಕೆ ತಲುಪಿರುವುದು. ಪೆರುಙತ್ತೂರಿನ ಪರಿಸರ ಪ್ರದೇಶವಾದ *ಕನಕ ಮಲೆ* ಎಂಬ ಸ್ಥಳದಲ್ಲಾಗಿದೆ ಅವರ ಮೊದಲು ಪ್ರವೇಶ.

ಇಲ್ಲಿ ಒಂದು ಗುಹೆಯಲ್ಲಾಗಿತ್ತು ಅವರ ವಾಸಸ್ಥಳ!.  ಈ ಗುಹೆಯಿಂದ
ಪೆರುಙತ್ತೂರ್ ನದಿಗೆ ಒಂದು
ಸುರಂಗ ಇತ್ತಂತೆ.

ಪೆರುಙತ್ತೂರು ಜುಮಾಅತ್ತ್
ಮಸೀದಿ ಮತ್ತು ಸಮೀಪವಿರುವ ದೊಡ್ಡ ಕೆರೆಯನ್ನು ಮಹಾನವರು ನಿರ್ಮಿಸಿರುದಾಗಿ ಚರಿತ್ರೆ ಇದೆ
ಅಲ್ಲಿರುವ ಮಸೀದಿ ಒಂದು ಅದ್ಬುತವಾಗಿದೆ ನೋಡಲೇ ಬೇಕಾದ ಮಸೀದಿಯಾಗಿದೆ.
ಆ ಮಸೀದಿಗೆ ಹಲವು ವಿಶೇಷತೆಗಳಿವೆ.

ಪೆರುಙತ್ತೂರಿನ ಮಸೀದಿಯ ಅಂಗಣದಲ್ಲೇ ತನ್ನನ್ನು ದಫನ್ ಮಾಡಬೇಕೆಂದೂ, ಅಲ್ಲಿ ಬೇರೆ ಯಾರನ್ನೂ ದಫನ್ ಮಾಡಬಾರದೆಂದು ಆ ಮಹಾನರ ( *ವಸಿಯ್ಯತ್ತ್*) ಅಂತಿಮ ನುಡಿ ಆಗಿದ್ದಂತೆ!.

ಆದರೂ ಈ ನಿರ್ದೇಶದ ವಿರುದ್ಧವಾಗಿ ಪೆರುಙತ್ತೂರು ಖಾಝಿಯವರ ಖಬರನ್ನು ಆ ಮಹಾನವರ ಪಕ್ಕದಲ್ಲೇ ಮಾಡಲಾಗಿತ್ತು.
ಆದರೆ ಮರುದಿನ ಬೆಳಿಗ್ಗೆ ನೋಡುವಾಗ ಆ ಖಬರ್ ಕಟ್ಟಡದ ಹೊರಗೆ ಇತ್ತು!.

ಈ ಕರಾಮತ್ತಿನ ಕುರುಹುಗಳು ಈಗಲೂ ಅಲ್ಲಿ ಈಗಲೂ ಕಾಣಲು ಸಿಗಬಹುದು.
ಮಹಾನವರ ಮುಖಾಂತರ
ಹಲವಾರು ಜನರು ಇಸ್ಲಾಂ  ಸ್ವೀಕರಿಸಿದ್ದಾರೆ.

ಹಲವಾರು ಜನರುಗಳು ದಿನಾಲೂ ಇಲ್ಲಿಗೆ ಝಿಯಾರತ್ತಿಗೆ ಬರುತ್ತಾರೆ.

ಮಹಾನವರ ಬರ್ಕತ್ತಿನಿಂದ ಅಲ್ಲಾಹು ನಮ್ಮ ಇಹಪರ ವಿಜಯಗೊಳಿಸಲಿ ಆಮೀನ್.

✍ಗಫೂರ್ ಬಾಯಾರ್
〰〰〰〰〰〰〰

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...