Skip to main content

☪ಝಿಯಾರತ್ತ್ ಕೇಂದ್ರ☪ 👉5⃣👈🏽 ✍🏾 ಗಫೂರ್ ಬಾಯಾರ್.

☪ಝಿಯಾರತ್ತ್ ಕೇಂದ್ರ☪
          👉5⃣👈🏽

    ✍🏾 ಗಫೂರ್ ಬಾಯಾರ್.
🔰🔰🔰🔰🔰🔰🔰🔰

🕌ಪ್ರಭೆ ಪ್ರಸರಿಸಿದ ಮಹಾಗುರು
ಅಶೈಖ್ ಅಬ್ದುರ್ರಹ್ಮಾನ್
ನಖ್ ಶ ಬಂದಿ(ರ) ತಾನೂರ್.
➖➖➖➖➖➖➖➖

🕌ಕೇರಳದ ಮಲಪ್ಪುರಂ ಜಿಲ್ಲೆಯ ತಾನೂರಿನ ಮಖಾಮಿನಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಪುಣ್ಯ ಯೋಗಿ. ಮಹಾನರವರು ಯಮನ್ ದೇಶದವರಾಗಿದ್ದಾರೆ. ಪೂರ್ವಿಕರಲ್ಲಿ ಹೆಚ್ಚಾಗಿ ಯಮನ್ ದೇಶದಿಂದಾಗಿದೆ ಕೇರಳಕ್ಕೆ ಆಗಮಿರುವುದು.

ಶೈಖ್ ಅಹ್ಮದುಲ್ ಯಮನಿ (ರ) ರವರು ಯಮನ್ ನಿಂದ ಭಾರತಕ್ಕೆ ಬಂದರು. ಜೊತೆಗೆ  ಮೂವತ್ತು ಜನರ ಸಂಘವು ಇತ್ತು.

ಉಡುಪಿ ಜಿಲ್ಲೆಯ ಕುಂದಾಪುರದ ಪರಿಸರದಲ್ಲಿ ವಾಸವಾಗಿದ್ದರು. ಅಲ್ಲಿಯೇ ಅವರ  ಮಕ್ಬರ ಕೂಡ ಇರುವುದು.

ಅದೇ ಪ್ರಕಾರ ಇದೇ ಪರಂಪರೆಯಲ್ಲಿ ಒಳಗೊಂಡ ಶೈಖ್ ಅಹ್ಮದುಲ್ ಯಮನಿ (ರ) ಎರಡನೇಯವರು ಪಾಂಡಿಚೇರಿ ರಾಜ್ಯದ ಮಾಹಿ ಎಂಬಲ್ಲಿ ಸ್ಥಿರ ವಾಸವಾಗಿದ್ದರು. ಅಲ್ಲಿಯೇ ಒಂದು ಮಸ್ಜಿದ್ ನಿರ್ಮಿಸಿದರು. ಅವರ ಪುತ್ರರಾಗಿದ್ದಾರೆ ಶೈಖ್ ಅಲಿಯ್ಯುಲ್ ಮದನಿ (ರ) ರವರು.

ಇವರ ಹಾಗೂ ಪಿತೃರವರ ಮಕ್ಬರಗಳು ಮಾಹಿಯಲ್ಲಾಗಿದೆ ಇರುವುದು. ಶೈಖ್ ಅಲಿಯ್ಯುಲ್ ಮದನಿಯವರ (ರ) ಮಗನಾಗಿದ್ದಾರೆ " ತಾನೂರಿನ ಶೈಖ್ ಅಬ್ದು ರ್ರಹ್ಮಾನ್ ನಖ್ ಶ ಬಂದಿ (ರ) ರವರು."

ನೂಜ್ಞೆರಿಯ ಅಹ್ಮದ್ ಅಬೂ
ಅಬ್ದಿಲ್ಲಾಹಿ ಸೂಫಿ (ರ)  ಅವರಾಗಿದ್ದಾರೆ ಮಹಾನವರುಗಳ ಪ್ರಧಾನ ಶೈಖ್.
ನಖ್ ಶಬಂದಿ ತ್ವರೀಖತ್ತ್ ನ ಶೈಖ್ ಕೂಡ ಆಗಿದ್ದಾರೆ ಇವರು.

ಮಹಾನರಾದ ಪುತ್ತನ್ ಪಳ್ಳಿ ಶೈಖ್ ಕುಂಞ ಅಹಮ್ಮದ್ ಮುಸ್ಲಿಯಾರ್ (ರ) ರವರು ಪ್ರಧಾನ ಶಿಷ್ಯರಾಗಿದ್ದಾರೆ.

ಆತ್ಮಿಯ ತರಗತಿಗಳಿಂದಲೂ, ತನ್ನ ರಚನೆಗಳಿಂದಲೂ, ಪ್ರಭೆ ಪ್ರಸರಿಸಿದ ಮಹಾನರವರು, ಇಲಾಹೀ ಪ್ರೇಮದ ಅನಂತವಿಹಾಸ್ಸಿಗೆ ಹೃದಯವನ್ನು ಬಡಿದೆಬ್ಬಿಸಿ ಕೈ ಹಿಡಿದು ಮುನ್ನಡೆಸಿದರು.

اسرار المحققين في معرفة ربّ العالمين
                                                                        افاضة القدسية

ಮೊದಲಾದ ಹಲವಾರು ಅತೀಂದ್ರಿಯ ಜ್ಞಾನದ ಬಾಗಿಲುಗಳು ತೆರೆದಿಟ್ಟುಕೊಂಡು ಮಹತ್ತಾದ ರಚನೆಗಳು ಸಮ್ಮಾನಿಸಿದರು.

ಮಲಪ್ಪುರಂ ತಾನೂರಿನಲ್ಲಿ ಸ್ವತಃ ನಿರ್ಮಿಸಿದ ಮಸ್ಜಿದ್ ನ ಅಂಗಳದಲ್ಲಿಯೇ ಅಂತ್ಯ ವಿಶ್ರಮ ಹೊಂದುತ್ತಿರುತ್ತಾರೆ.

115 ವರ್ಷಗಳಿಗೆ ಮೊದಲು ಶವ್ವಾಲ್ 22 ರಂದು ಮಹಾನರವರು ವಫಾತಾದರು.

ಮಹಾತ್ಮಾರುಗಳ ನೆರಳಿನಲ್ಲಿ ಅಲ್ಲಾಹು ನಮ್ಮನ್ನೂ ಕುಟುಂಬದವರನ್ನೂ ಅನುಗ್ರಹಿಸಲಿ,
ಆಮೀನ್....

  ✍🏾ಗಫೂರ್ ಬಾಯಾರ್
🔰🔰🔰🔰🔰🔰🔰🔰

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...