Skip to main content

ಲೈಲತುಲ್ ಖದ್ರ್

ಲೈಲತುಲ್ ಖದ್ರ್ ರಮಳಾನಿನ ರಾತ್ರಿಗಳಲ್ಲಿ ಅತ್ಯಂತ ಮಹೋನ್ನತ ಒಂದು ರಾತ್ರಿಯಾಗಿದೆ. ಅಲ್ಲಾಹನು ಪ್ರವಾದಿ ಮುಹಮ್ಮದ್ ಸ.ಅ ರವರ ಮೇಲೆ ಪವಿತ್ರ ಕುರಾನ್ ಅವತೀರ್ಣಗೊಳಿಸಲು ಪ್ರಾರಂಭ ಮಾಡಿದ ರಾತ್ರಿಯಾಗಿದೆ. ರಕ್ಷೆ, ಅನುಗ್ರಹ, ಒಳಿತು ಹಾಗು ಪ್ರತಿಫಲದ ರಾತ್ರಿಯಾಗಿದೆ. ಲೈಲತುಲ್ ಖದ್ರ್ ಅಂದರೆ ಗೌರವದ ರಾತ್ರಿ, ಮಹೋನ್ನತ ರಾತ್ರಿ, ಶ್ರೇಷ್ಟತೆಯ ರಾತ್ರಿ ಎಂಬೀ ಅರ್ಥಗಳಿವೆ. ಆ ರಾತ್ರಿಯಲ್ಲಿ ಪ್ರಾರ್ಥನೆ ಸ್ವೀಕರಿಸಲ್ಪಡಲು, ಆಪತ್ತು, ಮುಸೀಬತ್ತು, ರೋಗ ರುಜಿನಗಳು ನೀಗಿ ಹೋಗಲು, ಸುಖ ಸಂತೋಷ, ಕ್ಷೇಮ, ಐಶ್ವರ್ಯ ಇಳಿಯಲು ಆಕಾಶದ ಬಾಗಿಲುಗಳು ತೆರೆಯಲಾಗುತ್ತದೆ. ಇದು ಲೈಲತುಲ್ ಖದ್ರಿನ ಮಹತ್ವವಾಗಿದೆ. ಈ ರಾತ್ರಿಯು ಅತ್ಯಂತ ಉನ್ನತ ರಾತ್ರಿಯಾಗಿದೆ.
ಇಮಾಮ್ ಅಬೂಬಕರಿನಿಲ್ ವರ್ರಾಖ್ ರಹಿಮಹುಲ್ಲಾಹು ಹೇಳುತ್ತಾರೆ : ""ನಿಶ್ಚಯವಾಗಿಯೂ ಈ ರಾತ್ರಿಯಲ್ಲಿ ಅತಿ ಮಹೋನ್ನತ ಗ್ರಂಥ ಪವಿತ್ರ ಕುರಾನ್ ಅತಿ ಮಹೋನ್ನತ ಮಲಕ್ ಜಿಬ್ರೀಲ್ ಅ.ಸ ರವರ ಮುಖಾಂತರ ಅತಿ ಮಹೋನ್ನತ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ರವರ ಮೇಲೆ ಹಾಗು ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ರವರ ಅತಿ ಮಹೋನ್ನತ ಸಮುದಾಯದ ಮೇಲೆ ಅವತೀರ್ಣವಾಯಿತು. ಈ ಕಾರಣದಿಂದಲೇ ಈ ರಾತ್ರಿಗೆ ಲೈಲತುಲ್ ಖದ್ರ್ ( ಅತಿ ಮಹೋನ್ನತ ರಾತ್ರಿ ) ಎಂಬ ಹೆಸರು ಬಂತು.
ಅಲ್ಲಾಹು ಪವಿತ್ರ ಕುರಾನಿನಲ್ಲಿ ತಿಳಿಸಿದ ಹಾಗೆ ""ಲೈಲತುಲ್ ಖದ್ರ್ ಸಾವಿರ ತಿಂಗಳುಗಳಿಗಿಂತ ಶ್ರೇಷ್ಟವಾಗಿದೆ"". ಸಾವಿರ ತಿಂಗಳು ಅಂದರೆ ಎಂಭತ್ತಮೂರು ವರುಷ ನಾಲ್ಕು ತಿಂಗಳು ಆಗುತ್ತದೆ. ಇದು ಇಹದಲ್ಲಿ ಜೀವಿಸುವ ಒಬ್ಬ ಮನುಷ್ಯನ ಒಟ್ಟಾರೆ ಆಯುಷ್ಯವಾಗಿದೆ. ಹೀಗೆ ನೋಡುವಾಗ ಲೈಲತುಲ್ ಖದರಿನ ಒಂದು ರಾತ್ರಿ ಒಬ್ಬ ಮನುಷ್ಯನ ಆಯುಷ್ಯಕ್ಕಿಂತಲೂ ಹೆಚ್ಚು ಶ್ರೇಷ್ಠವಾಗಿದೆ ಎಂದು ತಿಳಿಯಬಹುದು.
ಸಹೋದರಾ... ನಿಶ್ಚಯವಾಗಿಯೂ ಲೈಲತುಲ್ ಖದರಿನ ರಾತ್ರಿಗೆ ಅತ್ಯಂತ ಹೆಚ್ಚು ಮಹತ್ವವಿದೆ. ಅಲ್ಲಾಹನು ಅವನ ಪವಿತ್ರ ಕುರಾನಿನಲ್ಲಿ ಲೈಲತುಲ್ ಖದ್ರಿನ ವಿಶೇಷತೆಗಳನ್ನು ತಿಳಿಸುತ್ತಾನೆ. "" ನಿಶ್ಚಯವಾಗಿಯೂ ಲೈಲತುಲ್ ಖದರ್ ಬರ್ಕತ್ ( ಕ್ಷೇಮಾಭಿವ್ರದ್ಧಿ ) ನ ರಾತ್ರಿಯಾಗಿದೆ, ಅತ್ಯಂತ ಉನ್ನತ ರಾತ್ರಿಯಾಗಿದೆ, ಪವಿತ್ರ ಕುರಾನ್ ಅವತೀರ್ಣವಾದ ರಾತ್ರಿಯಾಗಿದೆ, ಸಾವಿರ ತಿಂಗಳುಗಳಿಗಿಂತ ಶ್ರೇಷ್ಠತೆ ಇರುವ ರಾತ್ರಿಯಾಗಿದೆ, ಮಲಕುಗಳು ಧರೆಗೆ ಇಳಿದು ಬರುವ ರಾತ್ರಿಯಾಗಿದೆ, ರಕ್ಷೆಯ ರಾತ್ರಿಯಾಗಿದೆ, ಫಜರ್ ನ ವೇಳೆಯ ತನಕ ಆ ರಾತ್ರಿಯು ನೀಳವಾಗಿರುತ್ತದೆ.""ಇದೆಲ್ಲವೂ ಅಲ್ಲಾಹನ ಪವಿತ್ರ ವಚನಗಳಿಂದ ತಿಳಿಯುವ ಕಾರ್ಯಗಳಾಗಿವೆ.

ಲೈಲತುಲ್ ಖದ್ರಿನ ಶ್ರೇಷ್ಟತೆ..

ನೆಬಿ ಸ.ಅ ಹೇಳಿದರು : ""ಯಾರಾದರೂ ಲೈಲತುಲ್ ಖದ್ರಿನ ರಾತ್ರಿ ದ್ರಢ ನಂಬಿಕೆಯೊಂದಿಗೆ ಹಾಗು ಪ್ರತಿಫಲಾಪೇಕ್ಷೆಯೊಂದಿಗೆ ಸುನ್ನತ್ ನಮಾಜು ಮಾಡಿದರೆ ಅವನ ಗತಕಾಲದ ಪಾಪಗಳನ್ನು ಮನ್ನಿಸಲಾಗುವುದು"" ( ವರದಿ : ಅಬೂಹುರೈರಾ ರ.ಅ ).
ಅಳ್ಳಹಾಕ್ ರಹಿಮಹುಲ್ಲಾಹ್ ಹೇಳುತ್ತಾರೆ "" ಲೈಲತುಲ್ ಖದ್ರಿನ ರಾತ್ರಿ ಅಲ್ಲಾಹನು ರಕ್ಷೆಯನ್ನು ಮಾತ್ರ ನೀಡುತ್ತಾನೆ, ಅಲ್ಲದ ರಾತ್ರಿಗಳಲ್ಲಿ ರಕ್ಷೆ ಮತ್ತು ಸಂಕಷ್ಟ ಎರಡನ್ನೂ ನೀಡುತ್ತಾನೆ""
ಮುಜಾಹಿದ್ ರಹಿಮಹುಲ್ಲಾಹ್ ಹೇಳುತ್ತಾರೆ ""ಲೈಲತುಲ್ ಖದ್ರಿನ ರಾತ್ರಿ ಶೈತಾನನಿಂದ ಕೆಡುಕು ಮತ್ತು ಉಪದ್ರವ ಉಂಟಾಗಲು ಸಾಧ್ಯವಿಲ್ಲ""

> ಲೈಲತುಲ್ ಖದ್ರಿನ ರಾತ್ರಿಯನ್ನು ಅಲ್ಲಾಹು ಗುಪ್ತವಾಗಿರಿಸಿದುದರ ರಹಸ್ಯಗಳು <

ಲೈಲತುಲ್ ಖದ್ರಿನ ರಾತ್ರಿಯ ವಿಚಾರದಲ್ಲಿ ವಿದ್ವಾಂಸರೆಡೆಯಲ್ಲಿ 23 ಅಭಿಪ್ರಾಯಗಳಿವೆ. ಲೈಲತುಲ್ ಖದ್ರ್ ರಮಳಾನ್ ತಿಂಗಳಲ್ಲಿಯಾಗಿದೆ, ರಮಳಾನ್ ತಿಂಗಳ ಅಂತಿಮ ಹತ್ತರಲ್ಲಿಯಾಗಿದೆ, ಅಂತಿಮ ಹತ್ತರ 21,23,25,27,29 ರ ರಾತ್ರಿಗಳಲ್ಲಿಯಾಗಿದೆ ಎಂಬುದು ಅವುಗಳಲ್ಲಿ ಮೂರು ಉನ್ನತ ಅಭಿಪ್ರಾಯಗಳು ಆಗಿದೆ. ಲೈಲತುಲ್ ಖದ್ರ್ ನ ಗೌಪ್ಯತೆಯಲ್ಲಿ ಹಲವಾರು ರಹಸ್ಯಗಳು, ತಂತ್ರಗಾರಿಕೆಗಳು ಅಡಗಿವೆ.ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ.

1- ಲೈಲತುಲ್ ಖದ್ರ್ ನಿರೀಕ್ಷಿಸುವ ಅಲ್ಲಾಹನ ದಾಸ ಎಲ್ಲಾ ರಾತ್ರಿಗಳಲ್ಲಿಯೂ ಅಲ್ಲಾಹನ ಆರಾಧನೆಯಲ್ಲಿ ಶ್ರಮಿಸಲು ಲೈಲತುಲ್ ಖದ್ರನ್ನು ಗುಪ್ತವಾಗಿರಿಸಲಾಯಿತು.ಇದೇ ಕಾರಣದಿಂದ ಪೂರ್ವ ಕಾಲ ಸಜ್ಜನರು ಎಲ್ಲಾ ರಾತ್ರಿಗಳಲ್ಲಿಯೂ ಅಲ್ಲಾಹನ ಇಬಾದತ್ ನಲ್ಲಿ ತಲ್ಲೀನರಾಗುತ್ತಿದ್ದರು.

2- ಹಲವು ಒಳಿತುಗಳು ನಿರ್ವಹಿಸಲು ಆಗಿದೆ. ದ್ಸಿಕ್ರ್, ಇಸ್ತಿಗ್ಫಾರ್, ಸ್ವಲಾತ್, ದುಆ ಮುಂತಾದ ಹಲವು ಒಳಿತುಗಳಲ್ಲಿ ಏರ್ಪಡಲು ಸಮಯವಕಾಶ ಒದಗಿಸಿದಂತಾಗುತ್ತದೆ.

3- ಇಮಾಮ್ ಫಖ್ರುರ್ರಾಝಿ ರಹಿಮಹುಲ್ಲಾಹ್ ತನ್ನ ತಫ್ಸೀರ್ ನಲ್ಲಿ ವಿವರಿಸುತ್ತಾರೆ. "" ಇತರ ಹಲವು ಕಾರ್ಯಗಳಲ್ಲಿ ಅಲ್ಲಾಹನು ಗೌಪ್ಯತೆ ಕಾಪಾಡಿದ ಹಾಗೆ ಲೈಲತುಲ್ ಖದ್ರಿನ ರಾತ್ರಿಯನ್ನು ಗುಪ್ತವಾಗಿರಿಸಿದನು. ಅಲ್ಲಾಹನ ದಾಸ ಸರ್ವ ಇಬಾದತುಗಳಲ್ಲಿ ಹಂಬಲಿಸುವವನಾಗಲು ಅಲ್ಲಾಹನಿಗೆ ಇಬಾದತ್ ನಿರ್ವಹಿಸಿದರೆ ಲಭಿಸುವ ಅಲ್ಲಾಹನ ತ್ರಪ್ತಿಯನ್ನು ಗೌಪ್ಯವಾಗಿರಿಸಿದನು. ಸರ್ವ ಪಾಪಗಳಿಂದ ಮುಕ್ತವಾಗಿ ಜೀವಿಸಲು ಅಲ್ಲಾಹನ ದಾಸ ಒಂದು ತಪ್ಪು ಮಾಡಿದರೆ ಅದರ ಶಿಕ್ಷೆಯನ್ನು ಅಲ್ಲಾಹನು ಗೌಪ್ಯವಾಗಿರಿಸಿದನು. ದುಆದಲ್ಲಿ ಇನ್ನಷ್ಟು ಶಕ್ತಿ ತುಂಬಿಸಲು ದುಆದಲ್ಲಿ ಅಲ್ಲಾಹು ಉತ್ತರ ನೀಡುವಿಕೆಯನ್ನು ಗೌಪ್ಯವಾಗಿರಿಸಿದನು. ಅಲ್ಲಾಹನ ಎಲ್ಲಾ ನಾಮಗಳನ್ನು ಗೌರವಿಸಲು ಅವನ ಪವಿತ್ರ ನಾಮವಾದ ಇಸ್ಮುಲ್ ಅಹ್ಲಂ ಯವುದೆಂದು ತಿಳಿಸದೆ ಗೌಪ್ಯವಾಗಿರಿಸಿದನು.   ಇದೇ ರೀತಿ ರಮಳಾನಿನ ಎಲ್ಲಾ ರಾತ್ರಿಗಳನ್ನು ಅಲ್ಲಾಹನ ದಾಸ ಗೌರವಿಸಲು ಲೈಲತುಲ್ ಖದ್ರಿನ ರಾತ್ರಿಯನ್ನು ಅಲ್ಲಾಹು ಗೌಪ್ಯವಾಗಿರಿಸಿದನು. ಯಾಕೆಂದರೆ ಒಬ್ಬ ದಾಸನಿಗೆ ರಮಳಾನಿನ ಯಾವ ರಾತ್ರಿ ಲೈಲತುಲ್ ಖದ್ರ್ ಎಂದು ತಿಳಿಯದಾದರೆ ಅವನು ರಮಳಾನಿನ ಎಲ್ಲಾ ರಾತ್ರಿಗಳಲ್ಲಿಯೂ ಲೈಲತುಲ್ ಖದ್ರನ್ನು ನಿರೀಕ್ಷಿಸಿ ಅದರ ಶ್ರೇಷ್ಟತೆಯನ್ನು ಮನಗಂಡು ಆರಾಧನೆಯಲ್ಲಿ ತಲ್ಲೀನನಾಗುವನು. ಆವಾಗ ಲೈಲತುಲ್ ಖದ್ರ್ ನಿರೀಕ್ಷಿಸಿ ಆರಾಧನೆ ನಿರ್ವಹಿಸಿದ ಮುಸ್ಲಿಮನಿಗೆ ಲೈಲತುಲ್ ಖದ್ರಿನ ಪ್ರತಿಫಲ ಲಭಿಸುವುದರಲ್ಲಿ ಸಂಶಯವಿಲ್ಲ""
ಈ ಕುರಿತು ಅಲ್ಲಾಹನು ತನ್ನ ಮಲಕುಗಳೊಂದಿಗೆ ತನ್ನ ದಾಸರ ಬಗ್ಗೆ ಪ್ರಶಂಸಿಸುವನು. ""ಮನುಷ್ಯರ ಸ್ರಷ್ಟಿ ಮಾಡುವ ಸಂದರ್ಭದಲ್ಲಿ ನೀವು ಹೇಳಿದಿರಿ. ಮನುಷ್ಯರು ಭೂಮಿಯಲ್ಲಿ ಕೆಡುಕುಗಳನ್ನುಂಟು ಮಾಡುವರು, ರಕ್ತ ಹರಿಸುವರು ಎಂದು. ಈವಾಗ ನೋಡಿದಿರಾ.. ಯಾವ ರಾತ್ರಿ ಲೈಲತುಲ್ ಖದ್ರ್ ಎಂದು ತಿಳಿಯದೇನೇ ಅವರು ಇಬಾದತ್ ನಿರ್ವಹಿಸುತ್ತಿದ್ದಾರೆ. ಅತಿ ಹೆಚ್ಚು ಶ್ರಮ ಪಡುತ್ತಿದ್ದಾರೆ. ಇನ್ನು ಅವರಿಗೆ ಲೈಲತುಲ್ ಖದ್ರ್ ಇಂತಿಂತಹ ರಾತ್ರಿ ಎಂದು ತಿಳಿಸಿಕೊಟ್ಟಿದ್ದರೆ ಅವರ ಆವೇಶ ಹೇಗಿರಬಹುದು. ಅವರು ಎಷ್ಟೊಂದು ಉತ್ಸಾಹದಿಂದ ಇಬಾದತ್ ಮಾಡುತ್ತಿದ್ದರು.

4- ಅಲ್ಲಾಹನು ಹೇಳುತ್ತಾನೆ. ""ಲೈಲತುಲ್ ಖದ್ರಿನ ರಾತ್ರಿ ಯಾವಾಗ ಎಂದು ತಿಳಿಯಲ್ಪಟ್ಟು ಅಂದಿನ ರಾತ್ರಿ ನಿನ್ನನ್ನು ಕೆಡುಕಿನತ್ತ ನಿನ್ನ ದೇಹೇಚ್ಚೆ ಕೊಂಡು ಹೋದರೆ ನೀನು ಲೈಲತುಲ್ ಖದ್ರಿನ ರಾತ್ರಿಯನ್ನು ಅರಿತು ಪಾಪ ಮಾಡಿದ ಹಾಗಾಗುತ್ತೆ. ಲೈಲತುಲ್ ಖದ್ರಿನ ರಾತ್ರಿಯನ್ನು ತಿಳಿಯದೆ ಕೆಡುಕು ಮಾಡುವುದಕ್ಕಿಂತ ತಿಳಿದು ಕೆಡುಕು ಮಾಡುವುದು ಘೋರ ಪಾಪವಾಗಿದೆ. ಆದುದರಿಂದ ಲೈಲತುಲ್ ಖದ್ರಿನ ರಾತ್ರಿಯನ್ನು ನಾನು ಗೌಪ್ಯವಾಗಿರಿಸಿದೆ""
ತನ್ನ ದಾಸರ ಮೇಲೆ ಅಲ್ಲಾಹನ ಕರುಣೆ ಅಪಾರವಾದುದಾಗಿದೆ. ಲೈಲತುಲ್ ಖದ್ರಿನ ರಾತ್ರಿಯೆಂದು ತಿಳಿದು ಅಂದಿನ ರಾತ್ರಿ ನೀನು ಒಳಿತು ಕಾರ್ಯಗಳು ನಿರ್ವಹಿಸಿದರೆ ಸಾವಿರ ತಿಂಗಳು ಒಳಿತು ನಿರ್ವಹಿಸಿದ ಪ್ರತಿಫಲವಾಗಿದೆ. ಆದರೆ ಲೈಲತುಲ್ ಖದ್ರಿನ ರಾತ್ರಿಯೆಂದು ತಿಳಿದು ಕೆಡುಕು ಮಾಡಿದರೂ  ಸಾವಿರ ತಿಂಗಳು ಕೆಡುಕು ಮಾಡಿದ ಶಿಕ್ಷೆಯು ಲಭಿಸುತ್ತದೆ. ಆದುದರಿಂದ ಲೈಲತುಲ್ ಖದ್ರಿನ ರಾತ್ರಿಯನ್ನು ಗೌಪ್ಯವಾಗಿರಿಸಿ ಶಿಕ್ಷೆಯನ್ನು ತಡೆಯುವುದು ಪ್ರತಿಫಲ ಪ್ರಾಪ್ತಿಗಿಂತಲೂ ಅತ್ಯಂತ ಉತ್ತಮವಾಗಿದೆ..

ಲೈಲತುಲ್ ಖದ್ರಿನ ರಾತ್ರಿಯನ್ನು ಧನ್ಯಗೊಳಿಸುವುದು ಹೇಗೆ..

ಲೈಲತುಲ್ ಖದ್ರ್ ಮುಸ್ಲಿಮನಿಗೆ ಲಭಿಸಿದ ಮಹೋನ್ನತ ಸೌಭಾಗ್ಯವಾಗಿದೆ ಎಂದು ತಿಳಿಯುವುದು ಆತನ ಮೇಲೆ ಅನಿವಾರ್ಯವಾಗಿದೆ. ಕಾರಣ ಮುಂದಿನ ವರ್ಷದ ಲೈಲತುಲ್ ಖದ್ರಿನ ಆಗಮನವಾಗುವಾಗ ಆತ ಜೀವಿಸಿರುವನೋ ಅಲ್ಲ ಮರಣಹೊಂದಿರುವನೋ ಎಂದು ತಿಳಿದಿರುವುದಿಲ್ಲ. ಆದುದರಿಂದ ಸತ್ಯ ವಿಶ್ವಾಸಿಯು ಲೈಲತುಲ್ ಖದ್ರನ್ನು ನಿರೀಕ್ಷಿಸಿ ಇಸ್ತಿಗ್ಫಾರ್, ತೌಬಾ, ದುವಾ ಹೆಚ್ಚಿಸಬೇಕು, ದ್ಸಿಕ್ರ್, ತಸ್ಬೀಹ್ ಹಾಗು ನೆಬಿ ಸ.ಅ ರವರ ಮೇಲೆ ಸ್ವಲಾತ್ ಅಧಿಕಗೊಳಿಸಬೇಕು. ಅಲ್ಲಾಹು ಸತ್ಯ ವಿಶ್ವಾಸಿಗೆ ನೀಡಿದ ಸಂಪತ್ತಿನಲ್ಲಿ ಆತ ದಾನಧರ್ಮ ನೀಡಬೇಕು. ಪಾಪಗಳಿಂದ ಆತ ಅವನ ಅಂಗಾಂಗಗಳನ್ನು ಮುಕ್ತವಾಗಿರಿಸಬೇಕು. ತಹಜ್ಜುದ್ ನಮಾಜ್ ನಿರ್ವಹಿಸಬೇಕು. ಅಲ್ಲಾಹನ ಆರಾಧನೆಯಲ್ಲಿ ರಾತ್ರಿ ಜೀವಂತಿಕೆಗೊಳಿಸಬೇಕು. ಅಂದು ಅತ ಹೆಚ್ಚಾಗಿ ದುಆ ಮಾಡಬೇಕಾದುದು ಪಾಪ ವಿಮೋಚನೆಗೆ ಆಗಿರಬೇಕು.
ಆಯಿಶ ರ.ಅ ನೆಬಿ ಸ.ಅ ರವರೊಂದಿಗೆ ಕೇಳಿದರು : ಅಲ್ಲಾಹನ ಪ್ರವಾದಿಯವರೇ.. ಲೈಲತುಲ್ ಖದ್ರಿನ ರಾತ್ರಿ ನಾನು ಯಾವ ದುಆ ನಿರ್ವಹಿಸಬೇಕು. ಆಗ ನೆಬಿ ಸ.ಅ ಈ ಕೆಳಗಿನ ದುಆ ನಿರ್ವಹಿಸಲು ವಸಿಯ್ಯತ್ ಮಾಡಿದರು :
( اللهم إنك عفو  تحب العفو فأعف عنا )

ಅಲ್ಲಾಹುಮ್ಮ ಇನ್ನಕ ಅಫುವ್ವುನ್ ತುಹಿಬ್ಬುಲ್ ಅಫ್ವ ಫಹ್ಫು ಅನ್ನಾ..

ಲೈಲತುಲ್ ಖದ್ರ್ ನಿರೀಕ್ಷಿತ ರಾತ್ರಿಯ ನಮಾಜಿನಲ್ಲಿ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಿಲ್ಲದವನು ಹೆಚ್ಚು ಪೃತಿಫಲ ಲಭಿಸುವ ಸೂರತ್ ಗಳು ಅಥವಾ ಆಯತ್ ಗಳು ಓದಬೇಕು. ಉದಾಹರಣೆಗೆ ಕುರಾನಿನ ಆಯತುಗಳಲ್ಲಿ ಅತ್ಯಂತ ಶ್ರೇಷ್ಟ ಆಯತ್ ಆದ ಆಯತುಲ್ ಕುರ್ಸಿಯ್ಯ್,
ಅಲ್ ಬಖರ ಸೂರತಿನ ಅಂತಿಮ 3 ಆಯತುಗಳು, ಯಾರಾದರೂ ಆಯತುಲ್ ಕುರ್ಸಿಯ್ಯ್ ಮತ್ತು ಅಲ್ ಬಖರ ಸೂರತಿನ ಅಂತಿಮ ಆಯತುಗಳು ಒಂದು ರಾತ್ರಿ ಓದಿದರೆ ಅಂದು ಕಾವಲು ಆಗಿ ಆ ಆಯತುಗಳೇ ಸಾಕು.
ಕುರಾನಿನ ಅರ್ಧ ಭಾಗದಷ್ಟು ಓದಿದ ಪ್ರತಿಫಲ ಲಭಿಸುವ '' ಝಿಲ್ ಝಾಲ್  '' ಸೂರತ್,
ಕುರಾನಿನ ನಾಲ್ಕನೇ ಒಂದರಷ್ಟು ಓದಿದ ಪ್ರತಿಫಲ ಸಿಗುವ ಕಾಫಿರೂನ ಸೂರತ್,
ಕುರಾನಿನ ಮೂರನೇ ಒಂದರಷ್ಟು ಓದಿದ ಪ್ರತಿಫಲ ಲಭಿಸುವ ಇಖ್ಲಾಸ್ ಸೂರತ್,
ಕುರಾನಿನ ಹ್ರದಯವಾದ ಮತ್ತು ಯಾವ ಉದ್ಧೇಶಕ್ಕಾಗಿ ಓದುತ್ತೇವೆಯೋ ಅದು ಈಡೇರಲ್ಪಡುವ ಯಾಸೀನ್ ಸೂರತ್ ಮುಂತಾದ ಹೆಚ್ಚು ಪ್ರತಿಫಲ ಲಭಿಸುವ ಆಯತುಗಳು ಮತ್ತು ಸೂರತುಗಳು ಲೈಲತುಲ್ ಖದರ್ ನಿರೀಕ್ಷಿತ ರಾತ್ರಿ ಓದಬೇಕು.
ಯಾರಾದರೂ  لا اله الا الله الحليم الكريم , سبحان الله رب السماوات السبع ورب العرش العظيم

ಎಂದು ಮೂರುಸಲ ಹೇಳಿದರೆ ಲೈಲತುಲ್ ಖದರಿನ ಭಾಗ್ಯ ಲಭಿಸಿದಂತೆ ಆಗಿದೆ ಎಂಬ ವರದಿಯಿದೆ. ಆದುದರಿಂದ ಈ ದ್ಸಿಕ್ರನ್ನು ಎಲ್ಲಾ ದಿವಸವೂ ಕೊಂಡು ಬರಬೇಕು.

>>>>>>>>>>

ತಪ್ಪುಗಳೇನಾದರೂ ಇದ್ದಲ್ಲಿ ತಿಳಿಸಿ >>>>>>

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍&#127995;ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...