Skip to main content

ಹಿರಿನುಡಿಗಳು

ಹಿರಿನುಡಿಗಳು

1)ಮಾನವನನ್ನು ದಾರಿಗೆಡಿಸುವುದಕ್ಕೆ ಶೈತಾನನು ಬಳಸುವ ಅತ್ಯಂತ ದೊಡ್ಡ ಅಸ್ತ್ರವೆಂದರೆ ನಾಲಗೆ!
_ *ಇಮಾo ಗಝ್ಝಾಲಿ (ರ)*

2)ಗುಣನಡತೆ ಒಂದು ಅಂಗಡಿಯಿದ್ದಂತೆ. ನಾಲಗೆ ಅದರ ಕೀಲಿಕೈ. ಬೀಗ ತೆರೆದಾಗಲೇ, ಅದು ಚಿನ್ನದಂಗಡಿಯೋ ಅಥವಾ ಬೇರೆ ಅಂಗಡಿಯೋ ಎಂದು ತಿಳಿಯುತ್ತದೆ. _*ಅಲೀ (ರ)*

3)ಬುದ್ದಿವಂತ ಮೌನ ಪಾಲಿಸಿದನೆಂದರೆ ಅಲ್ಲಾಹನ ಮಹಿಮೆಯ ಬಗ್ಗೆ ಯೋಚಿಸುತ್ತಿರುತ್ತಾನೆ. _ *ಅಲೀ(ರ)*

4)ಖಡ್ಗವು ದೇಹವನ್ನು ಗಾಯಗೊಳಿಸಿದರೆ ಮಾತು ಆತ್ಮವನ್ನು ಘಾಸಿಗೊಳಿಸುತ್ತದೆ. *_ಉಸ್ಮಾನ್(ರ)*

5)ನೀನು ಇಹಲೋಕದಲ್ಲಿ ವಿರಾಗಿಯಾಗಿರು.ಪರಲೋಕದ ವಿಷಯದಲ್ಲಿ ಅತ್ಯಾಗ್ರಹಿಯಾಗಿರು.ನಿನ್ನ ಪ್ರತಿಯೊಂದು ವಿಷಯದಲ್ಲೂ ಅಲ್ಲಾಹನಲ್ಲಿ ವಿಶ್ವಾಸವಿಡು.ಹಾಗಿದ್ದರೆ ಸುರಕ್ಷಿತರ ಜತೆಗಿರುವೆ. _ *ಇಮಾಂ ಶಾಫಿಈ (ರ)*

6) ನಾನು ಮೌನವಹಿಸಿದ ಕಾರಣಕ್ಕೆ ಯಾವತ್ತೂ ದುಃಖಿಸಬೇಕಾಗಿ ಬಂದಿಲ್ಲ.ಆದರೆ ಮಾತನಾಡಿದ್ದಕ್ಕೆ ಹಲವು ಬಾರಿ ದುಃಖಿಸಬೇಕಾಗಿ ಬಂದಿತ್ತು. *_ಉಮರ್(ರ)*

7)ಸಾವಿರ ಸಾರಿ ಕಡಲಿನಿಂದ ನೀರು ತೆಗೆದರೂ ಮುತ್ತುರತ್ನಗಳು ಸಿಗಲಾರವು.ಅವು ಸಿಗಬೇಕಾದರೆ ಸಾಮರ್ಥ್ಯವೂ, ಸೌಭಾಗ್ಯವೂ ಇರುವ ಮುಳುಗು ತಜ್ಞನೇ ಆಗಬೇಕು.ಜ್ಞಾನವೆಂಬ ಮುತ್ತು ಕೂಡ ಹಾಗೆಯೇ. *_ಶೈಖ್ ಜಲಾಲುಧ್ಧೀನ್* *ರೂಮಿ (ರ)*

8)ಯಾರಾದರೂ ನಿನ್ನ ಮನಸ್ಸಿಗೆ ನೋವುಂಟು ಮಾಡಿದರೆ ದುಃಖಿಸದಿರು.ಯಾಕೆಂದರೆ ಯಾವ ಮರದ ಫಲ ಹೆಚ್ಚು ರುಚಿಯಾಗಿರುತ್ತೋ, ಆ ಮರಕ್ಕೆ ಜನರು ಹೆಚ್ಚು ಕಲ್ಲುಗಳನ್ನು ಎಸೆಯುತ್ತಾರೆ.ಇದು ಪೃಕೃತಿ ನಿಯಮ *. _ ಅಲೀ (ರ)*

9)ನನ್ನ ಪ್ರಾರ್ಥನೆಗಳು ಈಡೇರಿದಾಗ ನಾನು ಖುಷಿ ಪಡುತ್ತೇನೆ.ಕಾರಣ ಅದು ನನ್ನ ಇಚ್ಛೆ. ನನ್ನ ಪ್ರಾರ್ಥನೆಗಳು ಈಡೇರದೇ ಇದ್ದಾಗಲೂ ನಾನು ಖುಷಿಪಡುತ್ತೇನೆ.ಏಕೆಂದರೆ, ಅದು ಅಲ್ಲಾಹನ ಇಚ್ಛೆ!. *_ಅಲೀ (ರ)*

10)ನೀನು ಜ್ಣಾನಿಗಳಿಸು. ನೀನು ಬಡವನಾಗಿದ್ದರೆ ಅದು ನಿನಗೆ ಸಂಪತ್ತಾಗುವುದು.ನೀನು ಧನಿಕನಾಗಿದ್ದರೆ,ಅದು ನಿನಗೆ ಅಲಂಕಾರವಾಗುವುದು_*ಅಬೂಬಕರ್ ಸಿಧ್ಧೀಕ್ (ರ)*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...