Skip to main content

ಮಯ್ಯತ್ ಸ್ನಾನ ಪೂರ್ಣ ರೂಪ ಹೇಗೆ.

ಮಯ್ಯತ್ ಸ್ನಾನ ಪೂರ್ಣ ರೂಪ ಹೇಗೆ.
🚿🚿🚿🚿🚿🚿
🔆ಯಾರೂ ನೋಡಲಾಗದ  ಮೇಲ್ಬಾಗ ಬಂದ್ ಇರುವ ಸ್ಥಳದಲ್ಲಿ ತೆಳುವಾದ ಕಮೀಸ್ ಹಾಕಿಸಿ ಮಯ್ಯಿತನ್ನು ಒಂದು ಬಾಗಕ್ಕೆ ಸರಿಸಿ ಇಡಬೇಕು.
🔆 ಮೂರು ಮಂದಿಗಿಂತ ಜಾಸ್ತಿ ಇರಬಾರದು .ಒಬ್ಬನು ನೀರು ಹೊಯ್ದು ತೊಳೆಯಲು ಇನ್ನೊಬ್ಬ ನೀರು ತಂದು ಕೊಡಲು ಮೂರನೆಯವ ಮಯ್ಯಿತನ್ನು ಕುಳ್ಳಿಸಲು(ಈಗ ಮಂಚದಲ್ಲೇ ಆ ಸೌಕರ್ಯ ಇದೆ)
🔆ಮೊದಲನೆಯದಾಗಿ ಮಯ್ಯಿತನ್ನು ಕುಳ್ಳಿರಿಸಿ ಎಡಕೈತಿಂದ ಹೊಟ್ಟೆಯನ್ನು ಸವರಿ ಮಾಲಿನ್ಯ ಹೊರಬರಿಸಬೇಕು
🔆ಬಲ ಕಾಲನ ಮೇಲೆ ಮಯ್ಯಿತಿನ ಬೆನ್ನು ಇರಿಸಿ ಬಲಕೈಯಿನ್ದ ಕುತ್ತಿಗೆ ತಲೆ ಹಿಡೀಬೇಕು. ಎಡ ಕೈಯಿಂದ ಹೊಟ್ಟೆ ಸವರಬೇಕು.(ಈಗ ಮಂಚದಲ್ಲೇ ಇರಿಸುವ ಸೌಕರ್ಯ ಇದೆ.
🔆ನಿಧಾನ ನಿಧಾನ ಸವರಬೇಕು.
🔆ನಂತರ ಸರಿಸಿ ಮಲಗಿಸಿ ಎಡಕೈಯಿಂದ (ಕೈಗೆ ಕವರ್ ಹಾಕಿ) ಮಲಮೂತ್ರದ ದ್ವಾರಗಳನ್ನು ತೊಳೆಯಬೇಕು.ತೋರುಬೆರಳಿನಿಂದ
🔆 ನಂತರ ಕೈತೊಳೆದು ಕಿರುಬೆರಳಿಗೆ ಕವರ್ ಹಾಕಿ ಹಲ್ಲುಜ್ಜಬೇಕು.
🔆ಚಿಕ್ಕ ಕಡ್ಡಿಯಿಂದ ಕಾಲಿನ ಉಗುರಿನ ಇಡೆಯ ಮಣ್ಣು ತೆಗೆಯಬೇಕು.
🔆ನಂತರ ಉಲೂ ಮಾಡಿಸಬೇಕು.
🔆ನಂತರ ತಲೆ ಗಡ್ಡ ತೊಳೆಯಬೇಕು.
🔆ತೊಳೆಯುವಾಗ ರೊಮ, ಉಗುರಿನಂತಹದ್ದು ಕಳಚಿದರೆ ಕಫನಿನೊಂದಿಗೆ ಇಡಬೇಕು.
🔆ನಂತರ ಬಲಬಾಗ ತೊಳೆಯಿರಿ.
🔆ನಂತರ ಎಡಬಾಗ ತೊಳೆಯಿರಿ.
🔆ನಂತರ ಎಡಬಾಗಕ್ಕೆ ಸರಿಸಿ ಬಲಬಾಗವೂ ಬಲಬಾಗಕ್ಕೆ ಸರಿಸಿ ಎಡಬಾಗವೂ ತೊಳೆಯಬೇಕು.
🔆ತೊಳೆಯುವಾಗ ಸಾಬೂನು, ಹಾಕಿ ತೊಳೆಯಿರಿ
🔆ಸಾಬೂನಿನ ನೀರು ಹೋದ ನಂತರ ಶುದ್ದ ನೀರು ತಲೆಯಿಂದ ಕಾಲಿನ ತನಕ ಸುರಿಯಿರಿ.
🔆ಇದು ಮೊದಲನೇ ಸಲವಾಗಿದೆ.ನಂತರ ಎರಡು ಮೂರನೇ ಸಲ ಇದೇ ರೀತಿ ಮಾಡಿರಿ.
🔆ಮೂರು ಸಲದಿಂದ ಸಾಕಾಗದಿದ್ದರೆ ಐದು ಏಳು ಈ ತರ ಬೆಸ ಸಂಖ್ಯೆ ರೂಪದಲ್ಲಿ ತೊಳೆಯಿರಿ.
🔆ನೀರಿಗೆ ಕರ್ಪೂರ ಮಿಕ್ಸ್ ಮಾಡಿರಿ.
🔆ಕೂನೆಯ ಸಲದಲ್ಲಿ ಕರ್ಪೂರ ಮಿಕ್ಷ್ ಉತ್ತಮ.
🔆ಇಹ್ರಾಂ ಕಟ್ಟಿದ((ಹಜ್ ಉಮ್ರಾಕ್ಕೆ) ಮಯ್ಯಿತ್ ಆದರೆ ಕಫನ್ ವಸ್ತ್ರ. ಶರೀರ ಸ್ನಾನಕ್ಕೆ ಸುಗಂಧ ಹರಾಂ
🔆ಸ್ನಾನ ಮುಗಿದರೆ ನೀರು ವರೆಸಿ ಸ್ನಾನದ ಸ್ಥಳದಿಂದ ಬೇರೆ ಕಡೆಗೆ ವರ್ಖಾಯಿಸಿ.
🔆ಸ್ನಾನ ಮಾಡಿಸುವವ ನಂಬಿಕೆಗೆ ಅರ್ಹ ವ್ಯಕ್ತಿ  ಶುದ್ದಿಯಿರುವವ( ಉಲೂ, ಸ್ನಾನ) ಆಗಲು ಸುನ್ನತ್ತಾಗಿದೆ.
🔆ಮಯ್ಯಿತಿನಿಂದ ಒಳ್ಳೆಯದು ಕಂಡರೆ ಹೇಳಲು ಸುನ್ನತ್. ಕೆಟ್ಟದು ಕಂಡರೆ ಹೇಳಬಾರದು.
🔆 ಈ ಮಯಿತಿಗೆ ನಮಾಝ್ ಹಲಾಲಾಗಲು., ಅಥವಾ ಈ ಮಯ್ಯಿತಿಗೆ ಸ್ನಾನ ಮಾಡಿಸುತ್ತೀನೆ ಎಂದು ನಿಯ್ಯತ್ ಮಾಡಿರಿ.
🔆ಮಯ್ಯಿತ್ ನೂತನವಾದಿಯದಾಗಿದ್ದರೆ ಕೆಟ್ಟದು ಕಂಡರೆ ಬಹಿರಂಗಗೊಳಿಸಬೇಕು.ಆತನ ಮಾರ್ಗದಲ್ಲಿ ಹೋಗದಿರಲಿಕ್ಕಾಗಿ.
➖➖➖➖➖➖
ವಿಧ್ಯೆ ತಲುಪಿಸಿರಿ ಅಲ್ಲಾಹು ಫ್ರತಿಫಲ ನೀಡಲಿ ಆಮೀನ್.
➖➖➖➖➖➖
ಇದು ಬಾವಾ ಉಸ್ತಾದರ ಖುಲಾಸ (ಗಸ್ಲುಲ್ ಮಯ್ಯಿತಿ) ಬಾಗದಿಂದ. ತಪ್ಪು ಕಂಡಲ್ಲಿ ತಿಳಿಸಿರಿ. ಎಂದು.
💎💎💎💎💎💎
ಇತೀ ನಿಮ್ಮವ ಮುಹಮ್ಮದ್ ಹುಸೈನ್ ಸಖಾಫಿ ವೇಣೂರು

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...