Skip to main content

ಹಣ ಕಂಡರೆ ಸಳಪಿಯ ಹೆಣವೂ ಎದ್ದು ನಿಲ್ಲುತ್ತದೆ

ಹಣ ಕಂಡರೆ ಸಳಪಿಯ ಹೆಣವೂ ಎದ್ದು ನಿಲ್ಲುತ್ತದೆ
---------------------------------------

*ಸಲಫಿಯ ತಲೆ ಆಪರೇಷನ್ ಮಾಡಿದ ಅಭೂಶಝ ರವರ 2017 ಅಕ್ಟೋಬರ್ ತಿಂಗಳ ಲೇಖನ*

ಅವನ್ಯಾರೋ ಒಬ್ಬ ಶಾರ್ಜದ ಮರಿ ಸಳಪಿ UAE ಯನ್ನು ಸಳಪಿ ರಾಷ್ಟ್ರವೆಂದು ಘೋಷಿಸಿದ್ದಾನೆ. ಅದಕ್ಕವನು ಹೇಳುವ ಕಾರಣ, 'ಯುಎಈ' ಯ ಬೆರಳೆಣಿಕೆಯ ಮಸೀದಿಯಲ್ಲಿ ನಡೆಯುವ 8 ರಕಾತ್ ತರಾವೀಹ್, ಅನರಬಿ ಖುತುಬಾ, ಹಾಗೂ ಶಾರ್ಜಾ ಸಳಪಿಯಂತಹ ಕೆಲವೊಂದು ಬಡಾ ಮೌಲವಿಗಳ ಪ್ರಭಾಷಣ ನಡೆಯುವ ವೇದಿಕೆಯನ್ನು ಬೊಟ್ಟು ಮಾಡಿದ್ದಾನೆ.
ಪಾಪ... ಅವನಿಗೇನು ಗೊತ್ತು ಮಕ್ಕಾದಿಂದ ಮದೀನಾಕ್ಕೆ ಹಿಜಿರಾ ಬಂದ ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಅಲ್ಲೊಂದು ಇಸ್ಲಾಮಿಕ್ ರಾಷ್ಟ್ರಕ್ಕೆ ಬುನಾದಿ ಹಾಕಿ ಅಲ್ಲಿದ್ದ ಯಹೂದಿಗಳಿಗೆ ಕೂಡಾ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರು. 'ಮಸ್ಜಿದ್ಳಿರಾರ್' ಕೂಡಾ ನಿರ್ಮಾಣವಾಯಿತು!!
ಅಂದರೆ ಒಂದು ರಾಷ್ಟ್ರವಾಗುವಾಗ ಅಲ್ಲಿನ ಆಡಳಿತಗಾರರು ದೇಶಕ್ಕೆ ಸವಾಲಾಗದೆ ಜೀವಿಸುವ ಎಲ್ಲರನ್ನು ಪರಿಗಣನೆಗೆ ತೆಗೆದು ಕೊಳ್ಳಬೇಕಾಗುತ್ತದೆ.
ಅವರು ತಮ್ಮ ಆಶಯ ಆದರ್ಶ ಪಾಲಿಸಿ,ಸರಕಾರಕ್ಕೆ ತೆರಿಗೆ ಕಟ್ಟಿ ಸಮಾಧಾನವಾಗಿ ಜೀವಿಸಲು ಅವಕಾಶವಿದೆ.
ಹಾಗಾಗಿಯೇ ಎಂಟು ರಕಾತ್ ಗೆ ಅವಕಾಶ ಕೊಟ್ಟ ಸರಕಾರವನ್ನು ಸಳಪಿ ಸರಕಾರ ಎಂದು ಕರೆಯಬಹುದಾದರೆ,ಶಿಯಾ ವಿಭಾಗದ 'ಬೋರಾ' ಪಂಥಕ್ಕೆ 'ಯುಎಈ' ಪೂರ್ಣ ಸ್ವಾತಂತ್ರ್ಯ ಕೊಟ್ಟಿದೆ.ಅವರಿಗೆ ಬೇರೆಯೇ ಮಸೀದಿ ಇದೆ.ಕೆಲವು ಕಡೆ ಅವರ ಬಾಂಗ್ ಕೂಡಾ ವ್ಯತ್ಯಾಸವಿದೆ. ಅವರ ಪರಮೋನ್ನತ ಗುರು ವನ್ನು ಇಲ್ಲಿನ ದೊರೆಗಳು ಆತ್ಮೀಯತೆಯಿಂದ ಬರಮಾಡಿ ಕೊಳ್ಳುತ್ತಾರೆ.ಪ್ರತಿಯೊಂದು 'ಬೋರಾ' ಗಳ ಅಂಗಡಿಗಳಲ್ಲಿಯೂ ಅವರ ಗುರು ಮತ್ತು ಇಲ್ಲಿನ ರಾಜರು ಒಟ್ಟಿಗೆ ಕೂರುವ ಫೋಟೋ ತೂಗು ಹಾಕಲಾಗಿದೆ.
ಇದನ್ನು ನೋಡಿ ಈ ಮರಿ ಸಳಪಿ ದುಬೈ 'ಬೋರಾ' ಗಳ ಸರಕಾರವೆಂದು ಹೇಳುವನೇ?
ಪ್ರಧಾನ ಮಂತ್ರಿ ಯುಎಈ ಗೆ ಬೇಟಿ ಕೊಟ್ಟಾಗ ಇಲ್ಲಿನ ಸರಕಾರ ದೇವಸ್ಥಾನ ನಿರ್ಮಿಸಲು ಎಕರು ಲೆಕ್ಕದ ಭೂಮಿ ದಾನವಾಗಿ ಕೊಟ್ಟಿತು. ಆವಾಗ ಇಲ್ಲಿನ ಸರಕಾರ ಆರ್ ಎಸ್ ಸ್ ಸರಕಾರವೆಂದು ಈ ಸಳಪಿ ಹೇಳುವನೇ?
ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಮದೀನಾಕ್ಕೆ ಬಂದು ಇಸ್ಲಾಮಿಕ್ ರಾಷ್ಟ್ರ ನಿರ್ಮಿಸಿದಾಗ ಮುಸ್ಲಿಮರಿಗೆ ಝಕಾತ್ ಕಡ್ಡಾಯ ಮಾಡಿದಂತೆ ಅಲ್ಲಿ ವಾಸಿಸುವ ಇತರರಿಗೆ ತೆರಿಗೆ ನಿರ್ಭಂಧ ಮಾಡಿತು. ಅದೇ ರೀತಿ ಯಾವುದೇ ಆಶಯದವರು ಯುಎಈ ಗೆ ಬರುವುದಾದರೂ ಅವರಿಗೆ ಯುಎಈ ಎಂಟ್ರಿ ಕೊಡುತ್ತದೆ. ದೇಶದ ಕಾನೂನಿಗೆ ಮಾರಕವಾಗದ ರೀತಿಯಲ್ಲಿ ಆಶಯ ಪ್ರಚಾರಕ್ಕೂ ಅವಕಾಶ ಕೊಡುತ್ತದೆ. ಅಂದರೆ ಅವಕಾಶ ಕೊಟ್ಟ ಕೂಡಲೇ ಆ ಸರಕಾರ ಅವರ ಪರ ಎಂದು ನಂಬುವವನು ಈ ಸಳಪಿ ಮಾತ್ರ.
ಇಷ್ಟೆಲ್ಲಾ ಅವಕಾಶ ಕೊಡುವಾಗಲೂ ಯುಎಈ ಸರಕಾರ ಸುನ್ನೀಸಂ ಪರ ಎಂದು ಹೇಳಲೇ ಬೇಕಾಗುತ್ತದೆ.
ಅದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ, ಈ ದೇಶದ ರಾಷ್ಟ್ರಪಿತ ಆಶೈಖ್ ಝಾಈದ್ ರವರ ಕಬರನ್ನು ಎತ್ತರಿಸಿ ಕಟ್ಟಿದ್ದು.
 (ಇದು ಸಳಪಿಗೆ ಅಲರ್ಜಿಯೆಂದು ಬೇರೆ ಹೇಳಬೇಕಾಗಿಲ್ಲ ತಾನೇ?)
ಅದೇ ರೀತಿ ಅಲ್ಲಿ ಇಪ್ಪತ್ತನಾಲ್ಕು ಗಂಟೆ ಮರಣ ಹೊಂದಿದ ಶೈಖ್ ಝಾಈದ್ ರವರಿಗೆ ಕುರಾನ್ ಪಾರಾಯಣ ಮಾಡಲಾಗುತ್ತದೆ.
(ಮಯ್ಯಿತ್ ನ ಸಮೀಪ ಕುರಾನ್ ಓದುದಕ್ಕಿಂತ ಮಾತೃಭೂಮಿ ಪತ್ರಿಕೆ ಓದಬೇಕೆಂದು ಪತ್ವ ಕೊಡುವ ಸಳಪಿ ಮೊಲ್ಲಾನ ಶಿಷ್ಯ ಶಾರ್ಜದ ಮರಿ ಸಳಪಿ (MIBA)ಗೆ  ಈ ಕುರಾನ್ ಪಾರಾಯಣ ಅದೇಗೆ ಪಥ್ಯವಾಗಬಹುದು?)
ರಬೀವುಲ್ ಅವ್ವಲ್ ಬಂದರೆ ಯುಎಈ ಸರಕಾರದ ವತಿಯಿಂದ ಮೌಲೂದ್ ನಡೆಯುತ್ತದೆ.ಶೈಖ್ ರ ಪುತ್ರ ಮರಣ ಹೊಂದಿದಾಗ ಮಯ್ಯತ್ ಕೊಂಡು ಹೋಗುವಾಗ ತಹ್ಲೀಲ್ ಹೇಳಲಾಗುತ್ತದೆ.
ಧಫನ್ ಮಾಡಿದ ನಂತರ ದುಆ ನೇರವೇರುತ್ತದೆ. ಇದೆಲ್ಲಾ ನಡೆಯುವುದು ರೋಯಲ್ ಫ್ಯಾಮಿಲಿಯಲ್ಲಿ ಎಂಬುದು ಗಮನಾರ್ಹ ಇದರಿಂದಲೇ.ಇಲ್ಲಿನ ರೋಯಲ್ ಫ್ಯಾಮಿಲಿ ಪ್ಯೂರ್ ಸುನ್ನಿಯೆಂದು ಸ್ಪಷ್ಟವಾಗುತ್ತದೆ.ಆದ್ದರಿಂದಲೇ ನಮ್ಮ ಉಲಮಾಗಳನ್ನು ಅವರು ಕರೆಯುವಾಗ ಅವರಿಗೆ ಸಲಾಂ ಹೇಳಿ ಕೈ ಕೊಡಲು ಯಾರದೇ ಸರ್ಟಿಫಿಕಟ್ ನ ಅಗತ್ಯ ಇಲ್ಲ.

ಮತ್ತೆ ನೀವು ಪುನಃ ಶಾಫಿ ಸಹದಿ ಉಸ್ತಾದರಿಗೆ ಪಂಥಹ್ವಾನ ನೀಡಿದ್ದೀರಿ ಅವರು ಉತ್ತರ ಕೊಡುವಂತೆ ಹೇಳಿದ್ದೀರಿ.
ದಯಮಾಡಿ ಅವರನ್ನು ಬಿಟ್ಟು ಬಿಡಿ ನಿಮ್ಮಂತಹ ಕೆಲಸವಿಲ್ಲದೆ ಅಂಡೆಲೆಯುವವರಿಗೆ ಉತ್ತರ ಕೊಡುತ್ತಾ ಇರಲು ಅವರಿಗೆಲ್ಲಿ ಸಮಯ?
ಫುಲ್ ಬ್ಯುಸಿ ಸೆಡ್ಯೂಲ್ ನಲ್ಲಿರುವ ಅವರು ನಿಮಗೆ ಯಾವತ್ತೂ ಉತ್ತರ ಕೊಡಲಾರರು.
ನಮ್ಮಂತಹ ಕೆಳಸ್ತರದವರೇ ನಿಮಗೆ ದಾರಾಳ.
ನೀವು ಮೊನ್ನೆ ಶಾಫಿ ಸಹದಿ ಉಸ್ತಾದರ ಹೋಲಿ ಕುರ್ಆನ್ ಆವಾರ್ಡ್ ಪಂಕ್ಷನ್ ಗೆ ಬರಬೇಕಿತ್ತು.
ಆ ಪಂಕ್ಷನ್ ಆರಂಭವಾದದ್ದೇ
 *ಅಲ್ ಫಾತಹಾ*ದ ಮೂಲಕ 'ಅಲ್ ಫಾತಿಹಾ' ಕೇಳಿದ ಕೂಡಲೇ ಗುದಕ್ಕೆ ಬೆಂಕಿ ಹಿಡಿದವರಂತೆ ಓಡುವ ನಿಮಗೆ ಅದೇಗೆ ಪಥ್ಯವಾಗುವುದು?
ಮಾತ್ರವಲ್ಲ ಸ್ವಾಗತ ಭಾಷಣ ಕೊನೆಯಲ್ಲಿ ಪುನಃ ಮತ್ತೊಂದು *ಅಲ್ ಫಾತಿಹಾ* ಸಮರ್ಪಿಸಲಾಯಿತು.ಅದು ಯಾರಿಗೆ ಗೊತ್ತೇ?
ಯುಎಈ ರಾಷ್ಟ್ರ ಪಿತ ಆಶೈಖ್ ಝಾಈದ್ ರವರ ಹೆಸರಿನಲ್ಲಿ ಕಾರಣ ಅಂದು ಅವರ ಹನ್ನೆರಡನೇ ಆಂಡ್ ಆಗಿತ್ತು!
ಈ ಫಾತಿಹ ಓದಿ 'ಆಂಡ್' ಆಚರಿಸುವಾಗ ದುಬೈ ಸರಕಾರದ ಜವಾಬ್ದಾರಿಯುತ ಅಧಿಕಾರಿಗಳಾದ ಅರಬಿಗಳು ಕೂಡಾ ಇದ್ದರು ಅವರು ಕೂಡಾ ತುಂಬಾ ಇಖ್ಲಾಸ್ ನಿಂದ ಫಾತಿಹ ಓದಿದರು!
ಅಂದರೆ ಶಾಫಿ ಸಹದಿ ಉಸ್ತಾದ್ ಇಲ್ಲಿ ಬಂದು ಸುನ್ನತ್ ಜಮಾತ್ ನ ಆಶಯ ಆದರ್ಶವನ್ನು ಬಾನೆತ್ತರಕ್ಕೆ ಹಾರಿಸಿಯೇ ಹೋಗಿದ್ದಾರೆ.
.ಕೊನೆಯದಾಗಿ ಕೇಳುತ್ತೇನೆ ನಿನ್ನ ನಾಯಕರೊಬ್ಬರಿದ್ದಾರಲ್ಲ ,ಹೆಸರು MM ಅಕ್ಬರ್. ಅವರು ಕೂಡಾ ಎರಡು ವರ್ಷ ಮುಂಚೆ ನಡೆದ ಶೈಖ್ ಝಾಈದರ ಆಂಡ್ ನೇರ್ಚೆಯ ಸದಸ್ಸಿನಲ್ಲಿ ಭಾಗವಹಿಸಿದ ಫೋಟೋ ವೈರಲಾಗಿತ್ತು.
ಹಣ ಕಂಡಾಗ ಸಳಪಿಯ ಹೆಣವು ಎದ್ದು ನಿಲ್ಲುತ್ತದೆ ಎಂಬುದಕ್ಕೆ ಅದೊಂದು ನಿದರ್ಶನವೇ ಧಾರಾಳ!
ಸಹರಿಗೆ ಸಮಯವಾಯಿತು.
ಬೇಕಾದರೆ ಎಗೈನ್ ಸೀ ಯು
-ಅಬೂಶಝ

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...