ತಾಯಿಗೆ ಬಯ್ಯುವ ವ್ಯಕ್ತಿಗೆ ಖಲೀಫ ಉಮರ್ ಈ ರೀತಿ ಪಾಠ ಕಲಿಸಿದರು
ಒಮ್ಮೆ ಇಸ್ಲಾಮಿನ ಖಲೀಫಾ ಹಝ್ರತ್ ಉಮರ್(ರ)ರವರ ಬಳಿ ತನ್ನ ತಾಯಿಗೆ ಬಯ್ಯುವ ವ್ಯಕ್ತಿಯ ಬಗ್ಗೆ ದೂರು ಬಂತು. ಕೂಡಲೇ ಖಲೀಫಾ ಆ ವ್ಯಕ್ತಿಯನ್ನು ತಮ್ಮ ಮುಂದೆ ಹಾಜರು ಪಡಿಸುವಂತೆ ಆಜ್ಞೆ ಹೊರಡಿಸಿದರು. ಭಟರು ಆ ವ್ಯಕ್ತಿಯನ್ನು ಉಮರ್ರ ಮುಂದೆ ತಂದು ನಿಲ್ಲಿಸಿದರು. ಆನಂತರ ಆತನ ಹೊಟ್ಟೆಗೆ ನೀರು ತುಂಬಿದ ಚರ್ಮದ ಚೀಲವನ್ನು ಕಟ್ಟುವಂತೆ ಆಜ್ಞಾಪಿದರು ಉಮರ್.
ಅದೇ ರೀತಿ ಆ ವ್ಯಕ್ತಿಯ ಹೊಟ್ಟೆ ನೀರು ತುಂಬಿದ ಚರ್ಮದ ಚೀಲವನ್ನು ಕಟ್ಟಲಾಯಿತು. ಆತ ಅದರ ಜೊತೆಗೇ ಮಲಗಬೇಕು.
ಅದರ ಜೊತೆಗೇ ನಡೆಯಬೇಕು. ಹಾಗೂ ತನ್ನ ಎಲ್ಲಾ ದೈನಂದಿನ ಕೆಲಸ ಕಾರ್ಯಗಳನ್ನು ಮಾಡಬೇಕು.ಒಂದು ದಿನ ಕಳೆಯಿತು.
ಆ ವ್ಯಕ್ತಿ ಖಲೀಫಾ ಉಮರ್ರ ಬಳಿ ಬಂದು, ದಯವಿಟ್ಟು ಇದನ್ನು ತೆಗೆಯಿರಿ ನನಗೆ ಬದುಕಲು ಕಷ್ಟವಾಗುತ್ತಿದೆ ಎಂದನು.
ಆಗ ಉಮರ್ ಆ ಚರ್ಮದ ಚೀಲದಲ್ಲಿ ತುಂಬಿದ ನೀರನ್ನು ತೆಗೆಯಲು ಆಜ್ಞಾಪಿಸಿದರು. ಆದರೆ ಚರ್ಮದ ಚೀಲವನ್ನು ಹಾಗೇ ಬಿಡಲಾಯಿತು.
ಒಂದು ದಿನ ಕಳೆಯಿತು. ಈಗ ಆ ವ್ಯಕ್ತಿ ತನ್ನ ತಾಯಿಯ ಜೊತೆ ಬಂದು ದಯವಿಟ್ಟು ನನ್ನ ಈ ಭಾರವನ್ನು ಕೆಳಗಿಳಿಸಿ ನಾನು ಸರಿಯಾಗಿ ನಿದ್ರೆ ಮಾಡಲಾಗುತ್ತಿಲ್ಲ. ತಿನ್ನಲೂ ಕುಡಿಯಲೂ ಯಾವುದೂ ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದನು. ಆತನ ತಾಯಿ ಕೂಡ ತನ್ನ ಮಗನನ್ನು ಕ್ಷಮಿಸುವಂತೆ ಖಲೀಫಾರಲ್ಲಿ ಬೇಡಿ ಕೊಂಡರು.
ಖಲೀಫಾ ಉಮರ್ ಈಗ ಆ ವ್ಯಕ್ತಿಗೆ ಆತನ ತಾಯಿಯನ್ನು ತೋರಿಸುತ್ತಾ, “ನೋಡು ಆಕೆಯನ್ನು ಆಕೆ ನಿನ್ನ ತಾಯಿ, ನಿನಗೆ ಈ ಚೀಲವನ್ನು ಹೊರ ಭಾಗಕ್ಕೆ ಕಟ್ಟಲಾಗಿದೆ.
ಆದರೆ ಇಷ್ಟೇ ಭಾರವನ್ನು ಆಕೆ ಒಂಭತ್ತು ತಿಂಗಳು ಹೊತ್ತು ಕೊಂಡು ನಿನ್ನನ್ನು ಹೆತ್ತಿದ್ದಾಳೆ.
ಆಗ ಅವಳಿಗೆ ಸರಿಯಾಗಿ ತಿನ್ನಲೂ, ಕುಡಿಯಲೂ, ನಿದ್ರಿಸಲೂ ಸಾಧ್ಯವಾಗುತ್ತಿರಲಿಲ್ಲ.
ನೀನು ಆಕೆಗೆ ಮರಣದ ವೇದನೆ ನೀಡಿ ಹುಟ್ಟಿದ್ದೀಯ. ಆಕೆ ನಿನಗೆ ಎರಡು ವರ್ಷ ತನ್ನ ಎದೆಹಾಲು ಕುಡಿಸಿ ಸಾಕಿದಳು.
ಆಕೆಗೆ ನೀನು ಈಗ ನಿನ್ನ ಕೈ ಕಾಲು ಬಲಿತ ನಂತರ ಕೃತಜ್ಞತೆ ಸಲ್ಲಿಸುವ ಬದಲು ಕೃತಘ್ನನಾಗಿ ವರ್ತಿಸುತ್ತೀಯ..?
ಇನ್ನು ಮುಂದೆ ನಿನ್ನ ದೂರು ಬಂದಲ್ಲಿ ಉಮರ್ನಷ್ಟು ಕೆಟ್ಟವ ಇನ್ಯಾರೂ ಇರಲಾರರು ಎಂದು ಖಲೀಫಾ ಉಮರ್ ಸೀದಾ ಮುಂದೆ ನಡೆದು ಹೋದರು.
•••••••••••••••••••••••••••••••••••••
ಒಮ್ಮೆ ಇಸ್ಲಾಮಿನ ಖಲೀಫಾ ಹಝ್ರತ್ ಉಮರ್(ರ)ರವರ ಬಳಿ ತನ್ನ ತಾಯಿಗೆ ಬಯ್ಯುವ ವ್ಯಕ್ತಿಯ ಬಗ್ಗೆ ದೂರು ಬಂತು. ಕೂಡಲೇ ಖಲೀಫಾ ಆ ವ್ಯಕ್ತಿಯನ್ನು ತಮ್ಮ ಮುಂದೆ ಹಾಜರು ಪಡಿಸುವಂತೆ ಆಜ್ಞೆ ಹೊರಡಿಸಿದರು. ಭಟರು ಆ ವ್ಯಕ್ತಿಯನ್ನು ಉಮರ್ರ ಮುಂದೆ ತಂದು ನಿಲ್ಲಿಸಿದರು. ಆನಂತರ ಆತನ ಹೊಟ್ಟೆಗೆ ನೀರು ತುಂಬಿದ ಚರ್ಮದ ಚೀಲವನ್ನು ಕಟ್ಟುವಂತೆ ಆಜ್ಞಾಪಿದರು ಉಮರ್.
ಅದೇ ರೀತಿ ಆ ವ್ಯಕ್ತಿಯ ಹೊಟ್ಟೆ ನೀರು ತುಂಬಿದ ಚರ್ಮದ ಚೀಲವನ್ನು ಕಟ್ಟಲಾಯಿತು. ಆತ ಅದರ ಜೊತೆಗೇ ಮಲಗಬೇಕು.
ಅದರ ಜೊತೆಗೇ ನಡೆಯಬೇಕು. ಹಾಗೂ ತನ್ನ ಎಲ್ಲಾ ದೈನಂದಿನ ಕೆಲಸ ಕಾರ್ಯಗಳನ್ನು ಮಾಡಬೇಕು.ಒಂದು ದಿನ ಕಳೆಯಿತು.
ಆ ವ್ಯಕ್ತಿ ಖಲೀಫಾ ಉಮರ್ರ ಬಳಿ ಬಂದು, ದಯವಿಟ್ಟು ಇದನ್ನು ತೆಗೆಯಿರಿ ನನಗೆ ಬದುಕಲು ಕಷ್ಟವಾಗುತ್ತಿದೆ ಎಂದನು.
ಆಗ ಉಮರ್ ಆ ಚರ್ಮದ ಚೀಲದಲ್ಲಿ ತುಂಬಿದ ನೀರನ್ನು ತೆಗೆಯಲು ಆಜ್ಞಾಪಿಸಿದರು. ಆದರೆ ಚರ್ಮದ ಚೀಲವನ್ನು ಹಾಗೇ ಬಿಡಲಾಯಿತು.
ಒಂದು ದಿನ ಕಳೆಯಿತು. ಈಗ ಆ ವ್ಯಕ್ತಿ ತನ್ನ ತಾಯಿಯ ಜೊತೆ ಬಂದು ದಯವಿಟ್ಟು ನನ್ನ ಈ ಭಾರವನ್ನು ಕೆಳಗಿಳಿಸಿ ನಾನು ಸರಿಯಾಗಿ ನಿದ್ರೆ ಮಾಡಲಾಗುತ್ತಿಲ್ಲ. ತಿನ್ನಲೂ ಕುಡಿಯಲೂ ಯಾವುದೂ ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದನು. ಆತನ ತಾಯಿ ಕೂಡ ತನ್ನ ಮಗನನ್ನು ಕ್ಷಮಿಸುವಂತೆ ಖಲೀಫಾರಲ್ಲಿ ಬೇಡಿ ಕೊಂಡರು.
ಖಲೀಫಾ ಉಮರ್ ಈಗ ಆ ವ್ಯಕ್ತಿಗೆ ಆತನ ತಾಯಿಯನ್ನು ತೋರಿಸುತ್ತಾ, “ನೋಡು ಆಕೆಯನ್ನು ಆಕೆ ನಿನ್ನ ತಾಯಿ, ನಿನಗೆ ಈ ಚೀಲವನ್ನು ಹೊರ ಭಾಗಕ್ಕೆ ಕಟ್ಟಲಾಗಿದೆ.
ಆದರೆ ಇಷ್ಟೇ ಭಾರವನ್ನು ಆಕೆ ಒಂಭತ್ತು ತಿಂಗಳು ಹೊತ್ತು ಕೊಂಡು ನಿನ್ನನ್ನು ಹೆತ್ತಿದ್ದಾಳೆ.
ಆಗ ಅವಳಿಗೆ ಸರಿಯಾಗಿ ತಿನ್ನಲೂ, ಕುಡಿಯಲೂ, ನಿದ್ರಿಸಲೂ ಸಾಧ್ಯವಾಗುತ್ತಿರಲಿಲ್ಲ.
ನೀನು ಆಕೆಗೆ ಮರಣದ ವೇದನೆ ನೀಡಿ ಹುಟ್ಟಿದ್ದೀಯ. ಆಕೆ ನಿನಗೆ ಎರಡು ವರ್ಷ ತನ್ನ ಎದೆಹಾಲು ಕುಡಿಸಿ ಸಾಕಿದಳು.
ಆಕೆಗೆ ನೀನು ಈಗ ನಿನ್ನ ಕೈ ಕಾಲು ಬಲಿತ ನಂತರ ಕೃತಜ್ಞತೆ ಸಲ್ಲಿಸುವ ಬದಲು ಕೃತಘ್ನನಾಗಿ ವರ್ತಿಸುತ್ತೀಯ..?
ಇನ್ನು ಮುಂದೆ ನಿನ್ನ ದೂರು ಬಂದಲ್ಲಿ ಉಮರ್ನಷ್ಟು ಕೆಟ್ಟವ ಇನ್ಯಾರೂ ಇರಲಾರರು ಎಂದು ಖಲೀಫಾ ಉಮರ್ ಸೀದಾ ಮುಂದೆ ನಡೆದು ಹೋದರು.
•••••••••••••••••••••••••••••••••••••
Comments