ದಾನದ ಫಲ
ಒಮ್ಮೆ ಮಹಿಳೆಯೊಬ್ಬರು ಬೇಡಿಕೊಂಡು ಬಂದವನೊಬ್ಬನಿಗೆ ತನ್ನ ಬಾಯಿಯಲ್ಲಿರುವ ತುತ್ತನ್ನೇ ತೆಗೆದು ನೀಡಿದರು. ಕೆಲಕಾಲದ ಬಳಿಕ ಆ ಮಹಿಳೆಗೆ ಮಗುವೊಂದು ಜನಿಸಿತು. ಮಗು ಬೆಳೆದು ದೊಡ್ಡವನಾಗುತ್ತಿದ್ದಂತೆಯೇ ತೋಳವೊಂದು ಮಗುವನ್ನು ಬೆನ್ನಟ್ಟಿಕೊಂಡು ಬಂದು ಕಚ್ಚಿಕೊಂಡು ಹೋಯಿತು. ಈ ಮಹಿಳೆ ಮಗನ ರಕ್ಷಣೆಗಾಗಿ ತೋಳದ ಹಿಂದೆಯೇ ಓಡತೊಡಗಿದರು. ತಕ್ಷಣ ಅಲ್ಲಾಹನು ಮಲಕ್ ಗಳಲ್ಲೊಬ್ಬರನ್ನು ನೇಮಿಸಿ ತೋಳದ ಬಾಯಿಯಲ್ಲಿದ್ದ ಮಗುವನ್ನು ರಕ್ಷಿಸಿದ. ನಂತರ ಆ ಮಹಿಳೆಯೊಂದಿಗೆ ಈ ರೀತಿ ಹೇಳುವಂತೆಯೂ ಸೂಚಿಸಿದ. "ನಿಮ್ಮ ಮೇಲೆ ಅಲ್ಲಾಹನ ರಕ್ಷೆಯಿದೆ. ಅವತ್ತು ನೀಡಿದ ತುತ್ತಿನ ಬದಲಾಗಿ ಈ ತುತ್ತನ್ನು ನಿಮಗೆ ನೀಡಿದ್ದೇನೆ".(ಅಂದು ಈ ಮಹಿಳೆ ತನ್ನ ಬಾಯಿಯಲ್ಲಿದ್ದ ತುತ್ತನ್ನೇ ಬಡವನೊಬ್ಬನಿಗೆ ನೀಡಿದ ಕಾರಣದಿಂದ ಈಗ ತೋಳದ ಬಾಯಿಗೆ ತುತ್ತಾದ ಮಗುವನ್ನು ಮರಳಿಸಿದ್ದೇನೆ).(ಇರ್ಶಾದುಲ್ ಇಬಾದ್)
ನಾವು ಮಾಡುವ ಯಾವ ಸತ್ಕರ್ಮ, ಯಾವ ರೀತಿ ನಮ್ಮ ಆಪತ್ಕಾಲದಲ್ಲಿ ನೆರವಾಗುತ್ತದೆಯೆಂಬುದಕ್ಕೆ ಉದಾಹರಣೆಯಾಗಿದೆ ಈ ಘಟನೆ.
*ಜುನೈದ್ ಸಖಾಫಿ ಜೀರ್ಮುಕ್ಕಿ*
16/09/2019, ಸೋಮವಾರ
Comments