Skip to main content

*ಮನದಾಳದಲ್ಲಿ ಮದೀನಾ* ಸಂಚಿಕೆ-0⃣9⃣ ✍🏿ಸಿ.ಐ.ಇಸ್ಹಾಕ್ ಫಜೀರ್.

*ಮನದಾಳದಲ್ಲಿ  ಮದೀನಾ*  

ಸಂಚಿಕೆ-0⃣9⃣

  ✍🏿ಸಿ.ಐ.ಇಸ್ಹಾಕ್ ಫಜೀರ್.

ನಂ30.ವಾದಿ ಜಿನ್ನ್.
ಇದು ಜಗತ್ತಿನ ಎಂಟನೇ ಅದ್ಭುತ ಎನ್ನಬಹುದಾದ ಸ್ಥಳ.
ಸಮತಟ್ಟಾದ ರಾಜಮಾರ್ಗದಲ್ಲಿ ಸುಮಾರು ಕಿ.ಮೀ ನಷ್ಟು ದೂರ ವಾಹನ ಚಾಲನೆ ರಹಿತವಾಗಿ ಶರವೇಗದಲ್ಲಿ ಚಲಿಸುತ್ತದೆ.ಇಲ್ಲಿ ನೀರು ರಸ್ತೆ ಮೇಲೆ ಸುರಿದರೆ ಕೆಳ ಬಾಗಕ್ಕೆ ಇಳಿಯದೆ ವಿರುದ್ಧ ದಿಕ್ಕಿಗೆ ಹರಿಯುತ್ತದೆ.
ಈ ಸ್ಥಳದಲ್ಲಿ ಭೂಮಿಗೆ ಆಯಸ್ಕಾಂತೀಯ ಶಕ್ತಿ ಇದೆ ಎಂದು ಪ್ರಖ್ಯಾತ ಪಾಶ್ಚಾತ್ಯ ಸಂಶೋಧಕರ ಅಭಿಪ್ರಾಯ.

ನಂ.31.ಬೀರ್ ರೌವ್ಹಾ.
ಮದೀನ ದಾಟಿ ಬದ್ರ್ ದಾರಿ ಮದ್ಯೆ ಸಿಗುವ ಒಂದು ಪ್ರದೇಶ.
ಪ್ರವಾದಿ ﷺ ಹಾಗೂ ಅವರ ಪೂರ್ವ ಕಾಲದ ಎಪ್ಪತ್ತಕ್ಕೂ ಮಿಕ್ಕಿದ ಪ್ರವಾದಿಗಳು ನೀರು ಕುಡಿದ ಹಾಗೂ ವುಲೂಹ್ ಮಾಡಿದ ಬಾವಿಯಾಗಿದೆ ಬೀರ್ ರೌವ್ಹಾ.
ಪುನರುತ್ಥಾನ ದಿನ ಬರಲಿರುವ ಈಸಾ ನಭಿ ಕೂಡಾ ಈ ಬಾವಿಯ ನೀರಿನಿಂದ ವುಲೂಹ್ ಮಾಡಿ ಬಳಿಕ ಪಕ್ಕದಲ್ಲಿರುವ ಮಸೀದಿಯಲ್ಲಿ ಎಪ್ಪತ್ತಕ್ಕೂ ಮಿಕ್ಕಿದ ಅಂಬಿಯಾಗಳು ನಮಜ್ ನಿರ್ವಯಿಸಿದ ಜಾಗದಲ್ಲಿ ನಮಾಜ್ ನಿರ್ವಯಿಸಲಿದ್ದಾರೆ ಎಂಬುದು ಇತಿಹಾಸ.
ಈ ಬಾವಿ ಬಹಳ ಆಳವಾಗಿದೆ ಶತ ಶತಮಾನ ಕಳೆದರೂ ಬಾವಿಯಲ್ಲಿ ನೀರು ಬತ್ತದೇ ಈಗಲೂ ದೊರೆಯುತ್ತಿದೆ. ಈ ಪುನೀತ ಜಲ ಕಿಡ್ನಿ ಸ್ಟೋನ್'ಗೆ ಸಿದ್ದೌಷದ ಕೂಡಾ ಆಗಿರುತ್ತದೆ.
ನೂರಾರು ಯಾತ್ರಿಕರು ದಿನವೊಮ್ಮೆ ಸಾವಿರಾರು ಲೀಟರ್ ನೀರು ತಂಬಿಗೆ ತುಂಬಿಸಿ ಕೊಂಡು ಹೋಗುತ್ತಾರೆ.

ನಂ.32.ಶುಹದಾ ಮಖ್ಬರಾ.
ನಲರ್ ಬಿನ್ ಝಿರಾರ" ಎಂಬ ಮಹಾನ್ ಬದ್ರ್ ಶುಹದಾ ಚಿರನಿದ್ರೆ ಹೊಂದಿದ ಸ್ಥಳ.ಇದು ಮೇಲೆ ತಿಳಿಸಿದ ಬೀರ್ ರೌವ್ಹಾ ಪಕ್ಕದಲ್ಲಿ ನೆಲೆಗೊಂಡಿದೆ.

ನಂ.33
ನಾಳಿನ ಸಂಚಿಕೆಯಲ್ಲಿ.
ಬದ್ರ್ ಯುದ್ಧ ಭೂಮಿ.

    *✍🏿ಸಿ.ಐ.ಇಸ್ಹಾಕ್ ಫಜೀರ್.*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...