Skip to main content

*" ಮದೀನಾದಲ್ಲೊಂದು ಪಯಣ."* ✍🏿ಸಿ.ಐ.ಇಸ್ಹಾಕ್ ಫಜೀರ್. (ಸಂಚಿಕೆ-3)

*" ಮದೀನಾದಲ್ಲೊಂದು ಪಯಣ."*
✍🏿ಸಿ.ಐ.ಇಸ್ಹಾಕ್ ಫಜೀರ್.
       (ಸಂಚಿಕೆ-3)
ನಂ.8
ಮಸ್ಜಿದುಲ್ ಖಿಬ್'ಲತೈನಿ.
ಖಿಬ್'ಲತೈನಿ ಅಂದರೆ ಎರಡು ಖಿಬ್'ಲಗಳಿರುವು ಮಸೀದಿ.
ಮೊದಲು ಮಸ್ಜಿದುಲ್ ಅಖ್ಷಾ ಗೆ ಅಭಿಮುಖವಾಗಿ ನಮಾಜ್ ಮಾಡಲಾಗುತ್ತಿತ್ತು.ಆದರೆ ಪ್ರವಾದಿ ﷺರವರಿಗೆ ಮಕ್ಕಾ ಕಹ್'ಬಾ ಶರೀಫ್ ಖಿಬ್'ಲ ಆಗಬೇಕೆಂಬ ಬಯಕೆಯಾಗಿತ್ತು.
ಅದರಂತೆ ಒಮ್ಮೆ ಅಸರ್ ನಮಾಜ್ ನಲ್ಲಿ ತೊಡಗಿಕೊಂಡಿದ್ದ ಪ್ರವಾದಿ ﷺರವರಿಗೆ ಎರಡು ರಕಾಹತ್ ಪೂರ್ತಿಯಾಗುವಷ್ಟರಲ್ಲಿ ವಹ್ಯಿ ತಲುಪುತ್ತವೆ.ಅದರಂತೆ ಪ್ರವಾದಿಯ ಆಗ್ರಹದಂತೆ ನಮಾಜ್ ‌ಮಾಡುತ್ತಿದ್ದಲ್ಲಿಂದ ನೇರ ಹಿಂದೆ ತಿರುಗಿ ಬಾಕಿ ಎರಡು ರಕಾಹತ್ತನ್ನು ಪೂರ್ತಿಗಳಿಸಲಾಗುತ್ತದೆ. ನಂತರದ ದಿನಗಳಲ್ಲಿ ಮಸ್ಜಿದುಲ್ ಹರಾಂ ನಲ್ಲಿ  ನೆಲೆಗೊಳ್ಳುವ ಕಹ್ಬಾಲಯಕ್ಕೆ ಅಭಿಮುಖ ಮಾಡಿ ನಮಾಜ್ ಮಾಡಲಾಗುತ್ತದೆ.
ಇದು ಪುನರುತ್ಥಾನ ಕಾಲದ ವರೆಗೂ ಚಿರಸ್ಥಾಯಿಯಾಗಲಿವೆ.

ನಂ.8
ಮಸ್ಜಿದುಲ್ ಮಿನಾರತೈನಿ.
ಎರಡು ಮಿನಾರಗಳಿರುವ ಮಸೀದಿ.
ಹಿಂದಿನ ಕಾಲದಲ್ಲಿ ಎರಡು ಮಿನಾರಗಳಿದ್ದ ಮಸೀದಿಯಾಗಿದ್ದವು ಇವು.
ಈ ಮಸೀದಿಯ ನಡುವೆ ಎರಡು ಬೆಟ್ಟಗಳಿದ್ದವು ಇಲ್ಲೊಂದು ಮೇಕೆ ಸತ್ತು ಬಿದ್ದಿದ್ದವು.ಇದನ್ನು ಕಂಡ ಪ್ರವಾದಿ (ﷺ)ರವರು ತನ್ನ ಸ್ವಹಾಬಿಗಲೊಂದಿಗೆ ಕೇಳಿದರು.
ಈ ಮೇಕೆಯನ್ನು ಯಾರು ಹಣಕೊಟ್ಟು ಖರೀದಿಸುವಿರೆಂದು.?
ಸ್ವಹಾಬಿಗಳು ಪ್ರವಾದಿಯೊಂದಿಗೆ ಉತ್ತರಿಸಿದರು ಸತ್ತ ಮೇಕೆ ಯಾರು ತಾನೆ ಖರೀದಿಸಿವರೆಂದು.?
ಪ್ರವಾದಿ (ﷺ) ಹೇಳಿದರು ಆಗಿದ್ದರೆ ಅದೇ ಬೆಲೆಯಾಗಿದೆ ಈ ದುನಿಯಾಗೆ ಈ ದುನಿಯಾ ಸತ್ತ ಮೇಕೆಗೆ ಹೋಲಿಸಿದ ಆವೊಂದು ಘಟನೆಗೆ ಸಾಕ್ಷಿಯಾದ ಸ್ಥಳ. ನಂತರ ಅಲ್ಲಿ ಮಸೀದಿಯೊಂದನ್ನು ನಿರ್ಮಿಸಿ ಎರಡು ಮಿನಾರಗಳನ್ನು ನಿರ್ಮಿಸಲಾಯಿತು.
         __________

ನಾಳಿನ ಸಂಚಿಕೆಯಲ್ಲಿ.
ನಂ.9
ಮದೀನ ಝಂಝಂ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...