Skip to main content

ಶಹೀದೇ ಮಿಲ್ಲತ್ ಟಿಪ್ಪು ಸುಲ್ತಾನ್ (ಖ.ಸಿ)ಮಹಾನ್ ದೇಶಪ್ರೇಮಿ ✍🏻ಹಾರಿಸ್ ಪೆರಿಯಪಾದೆ {ಭಾಗ 3} ಶೃಂಗೇರಿ ಮಠ ಲೂಟಿ

ಶಹೀದೇ ಮಿಲ್ಲತ್ ಟಿಪ್ಪು ಸುಲ್ತಾನ್ (ಖ.ಸಿ)ಮಹಾನ್ ದೇಶಪ್ರೇಮಿ
✍🏻ಹಾರಿಸ್ ಪೆರಿಯಪಾದೆ
{ಭಾಗ 3}
ಶೃಂಗೇರಿ ಮಠ ಲೂಟಿ

ಸಂಘ ಪರಿವಾರದವರಿಗೆ ಇಂದು ಸ್ಫೂರ್ತಿಯಾಗಿರುವ ಶಿವಾಜಿಯ ಹಿಂಗಾಮಿಗಳಾದ ನಾನಾ ಪೇಶ್ವೆಗಳು ಶೃಂಗೇರಿ ಮಠಕ್ಕೆ ದಾಳಿ ಮಾಡಿ ಸ್ವಾಮಿಗಳನ್ನು ಓಡಿಸಿದರು.
ಸಂಪತ್ತನ್ನು ವಿಗ್ರಹಗಳನ್ನು ಕೊಳ್ಳೆ ಹೊಡೆದರು. ಮತಾಂಧನೆಂದು ಸಂಘ ಪರಿವಾರದವರು ಹೇಳುತ್ತಿರುವ ಟಿಪ್ಪು ಸುಲ್ತಾನ್ ಮಠಗಳನ್ನು ಕಾಪಾಡಿ, ಸ್ವಾಮಿಗಳನ್ನು ಆಹ್ವಾನಿಸಿ ಗೌರವಿಸಿದರು. ಮಠಗಳ ಕಾಪಾಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿದರು.

ಬ್ರಿಟಿಷ್ ಇತಿಹಾಸಕಾರರು ಮೈಸೂರು ಹುಲಿ 'ಫತೇ ಅಲಿ' ಟಿಪ್ಪುರವರನ್ನು ಮತಾಂಧನಾಗಿ ಚಿತ್ರಿಸಿದರು.
"ಟಿಪ್ಪು ಸುಲ್ತಾನ್ ಮೂರು ಸಾವಿರ ಹಿಂದೂಗಳನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ನಿರ್ಬಂಧಿಸಿದಾಗ ಅವರೆಲ್ಲ ಆತ್ಮಹತ್ಯೆಗೈದರು" ( ಇಸ್ಲಾಂ ಆ್ಯಂಡ್ ಇಂಡಿಯನ್ ಕಲ್ಚರ್- ಕಲ್ಕತ್ತ ವಿಶ್ವವಿದ್ಯಾನಿಲಯದ ಸಂಸ್ಕೃತ ಮೇಧಾವಿ ಡಾ। ಹರಿಪ್ರಸಾದ್ ಗೆಜೆಟ್ನಲ್ಲಿ ಈ ರೀತಿ ಗೀಚಲಾಗಿದೆ.)

ಆದರೆ ಇದೊಂದು ದೊಡ್ಡ ಸುಳ್ಳಿನ ಕಂತೆಯಾಗಿದೆ. ಆ ಕಾಲದಲ್ಲಿ ಹಿಂದೂ ಮುಸ್ಲಿಮರು ಸೌಹಾರ್ದದಿಂದ, ಸ್ನೇಹದಿಂದ ಜೀವಿಸುತ್ತಿದ್ದರು. ಈ ಬಗ್ಗೆ ಮಹಾತ್ಮ ಗಾಂಧೀಜಿಯವರು 1945ರಲ್ಲಿ ಈ ರೀತಿ ಬರೆದಿದ್ದರು. "ಆಗ ಹಿಂದೂ ಮುಸ್ಲಿಮರ ಬಾಂಧವ್ಯ ಸ್ನೇಹ ಮಯವಾಗಿತ್ತು. ಇದು ಸತ್ಯಾಂಶ! ಟಿಪ್ಪುವಿನ ಕಾಲದಲ್ಲಿ ಅವನು ಸಾಧಿಸಿದ ಕೆಲಸವೇ ಸಾಕು. ಅದೊಂದು ಆನಂದ ಮೂಲ, ಅದೊಂದು ಸ್ಫೂರ್ತಿದಾಯಕ, ಆ ಕಾಲದಲ್ಲಿ ಹಿಂದೂ ಮುಸ್ಲಿಮರು ವಿದೇಶಿ ಶತ್ರುಗಳನ್ನು ಗುರುತಿಸದೆ ಉದಾಸೀನ ಮಾಡಿದರು. ತಮ್ಮಲ್ಲಿ ತಾವೇ ಹೊಡೆದಾಡಲು ಆರಂಭಿಸಿದರು. ಮಹಾರಾಜ ಟಿಪ್ಪುವಿನ ಮಂತ್ರಿ ಒಬ್ಬ ಹಿಂದೂವಾಗಿದ್ದ. ಸ್ವತಂತ್ರ್ಯವಾಗಿ ಟಿಪ್ಪುವನ್ನು ಬ್ರಿಟಿಷರಿಗೆ ಹಿಡಿದು ಒಪ್ಪಿಸಿದ ಸ್ವಾಮಿ ದ್ರೋಹಿ ಈತನೇ ಎಂಬುದನ್ನು ನಾವು ನಾಚಿಕೆಯಿಂದ ಒಪ್ಪಿಕೊಳ್ಳಬೇಕು."

ಶೃಂಗೇರಿ ಮಠದ ಜಗದ್ಗುರು ಶ್ರೀ ಶಂಕರಾಚಾರ್ಯರಿಗೆ ಹೈದರಲಿ, ಟಿಪ್ಪು ಸುಲ್ತಾನ್  ಇಬ್ಬರೂ ಪತ್ರಗಳನ್ನು ಬರೆದಿದ್ದಾರೆ. ಆ ಪತ್ರಗಳೆಲ್ಲವೂ ಕನ್ನಡದಲ್ಲಿಯೇ ಇದೆ. ಅದರಲ್ಲಿ ಶ್ರೀಗಳನ್ನು ಮರ್ಯಾದೆಗಾಗಿ ಸಂಭೋಧಿಸಲಾಗಿದೆ. ಪತ್ರಗಳೆಲ್ಲವೂ ಶ್ರೀ ಮತ್ಪರಮಹಂಸಾದಿ  ಯಥೇಕ್ತ ಬಿರುದಾಂಕಿತರಾದಂಥ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳವರಿಗೆ ಬಾದಶಾಹ ಟಿಪ್ಪು ಸುಲ್ತಾನ್ ಅವರ ಸಲಾಂ" ಎಂದು 
ಆರಂಭಗೊಳ್ಳುತ್ತದೆ.
ಟಿಪ್ಪು ಬರೆದ ಒಂಬತ್ತನೆಯ ಪತ್ರ (54)ರಿಂದ ಅಮೂಲ್ಯ ಅಂಶಗಳು ತಿಳಿದು ಬರುತ್ತದೆ. "ಮಠದಿಂದ ಅರುವತ್ತು ಲಕ್ಷ ರೂಪಾಯಿ ಸಂಪತ್ತುಗಳನ್ನು ಮರಾಠರು ಲೂಟಿ ಮಾಡಿರುವುದಾಗಿ ತಿಳಿಸಿದ್ದೀರಷ್ಟೇ. ಈ ತಾಕೀತು ಪರಶುರಾಮನಿಗೆ ತೋರಿಸಿ, ಸಾಮಾನು ಕೊಡು ಎಂಬುದಾಗಿ ಕೇಳುವುದು. ಸಾಮಾನು ಕೊಟ್ಟರೆ ಸರಿ ಇಲ್ಲವಾದರೆ ತಾಕೀತು ಹಿಂದಕ್ಕೆ ತೆಗೆದುಕೊಳ್ಳುವ ಸಾಬೀತು ಅಪ್ಪಣೆ ಕೊಡಿಸಿ" ಎಂಬುದಾಗಿ ಮರಾಠರ ವಿರುದ್ಧ ಕಾರ್ಯಾಚರಣೆಗೆ ಮಠಾದೀಶರಿಂದ ಅಪ್ಪಣೆ ಪಡೆದು ಪುಣೆಯ ಪೇಶ್ವೆಗೆ ಬರೆದು ಪರಿಹಾರ ಪಡೆದು, ಶೃಂಗೇರಿ ಶಾರದಮ್ಮ ಪುನರ್ ಪ್ರತಿಷ್ಠೆಗೆ ನೆರವಾಗಿದ್ದರು ಟಿಪ್ಪು ಸುಲ್ತಾನ್.
( ಮುಂದುವರಿಯುವುದು)

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...