*ಮನದಾಳದಲ್ಲಿ ಮದೀನಾ
✍🏿 *ಸಿ.ಐ.ಇಸ್ಹಾಕ್ ಫಜೀರ್*
* (ಸಂಚಿಕೆ-5⃣)
* ನಂ.12 ತುರಾಬ್ ಶಿಫಾ*
ತುರಾಬ್ ಶಿಫಾ ಅಂದರೆ ರೋಗ ಶಮನಗೊಳಿಸಿದ ಮಣ್ಣು.
ಪ್ರವಾದಿ (ﷺ)ಕಾಲದಲ್ಲಿ ಒಬ್ಬಾತ ಮಾರಕ ರೋಗದಿಂದ ಬಳಲುತ್ತಿದ್ದರು.
ಆ ರೋಗಿ ಪ್ರವಾದಿ (ﷺ)ರವರ ಸನ್ನಿಧಿಗೆ ತೆರಳಿ ತನ್ನ ಅಸಾಯಕತೆಯನ್ನು ಮುಂದಿಟ್ಟರು.
ಪ್ರವಾದಿ (ﷺ)ರವರು ಇಂತಹ ಪ್ರದೇಶದಿಂದ ಒಂದು ಹಿಡಿ ಮಣ್ಣು ತರಲು ತಿಳಿಸಿದರು.
ಅದರಂತೆ ರೋಗಿ ತಂದ ಮಣ್ಣಿಗೆ
ಪ್ರವಾದಿ (ﷺ) ರವರು ಮಂತ್ರಿಸಿ ಊದಿ ಕೊಟ್ಟು ನೀರಲ್ಲಿ ಕಳಸಿಸಿ ಕುಡಿಯುವ ತಿಳಿಸಿದರು. ಪರಿಣಾಮ ರೋಗ ಶಮನಗೊಂಡವು.
ಈ ಘಟನೆಗೆ ಕುರುಹುವಾದ
ಆ ಮಣ್ಣಿನ ರಾಶಿ ಈಗಲೂ ಅದೇ ಪ್ರದೇಶದಲ್ಲಿದೆ.
*ನಂ13. ಬೀರ್ ಘರಸ್.*
ಪ್ರವಾದಿ (ﷺ)ರವರ ಮೃತ ದೇಹ ಸ್ನಾನ ಮಾಡಲು ನೀರು ಬಳಸಿದ ಬಾವಿ.
ಒಮ್ಮೆ ಪ್ರವಾದಿ (ﷺ)ರವರು ಆ ದಾರಿಯಾಗಿ ಹೋಗುತ್ತಿರುವಾಗ
ಅಲ್ಲಿ ಆ ಬಾವಿಯ ನೀರು ಕುಡಿದು "ಇದು ಸ್ವರ್ಗದ ಬಾವಿ" ಎಂದು ಹೇಳಿ ನನ್ನ ಮಯ್ಯಿತ್ತನ್ನು ಈ ನೀರಿನಿಂದ ಮೀಯಿಸ ಬೇಕೆಂದು ನಂತರ ಪ್ರವಾದಿ ಯವರ ವಫಾತಿನ ಬಳಿಕ ಅಲಿ ರ.ಅ ರವರ ನೇತೃತ್ವದಲ್ಲಿ ಸ್ವಹಾಬಿಗಳು ಬಂದು ಏಳು ತಂಬಿಗೆ ನೀರು ಶೇಖರಿಸಿ ಪ್ರವಾದಿ (ﷺ)ರವರ ಮೃತ ದೇಹವನ್ನು ಸ್ನಾನ ಮಾಡಲಾಯಿತು.
ಇಂದು ಈ ಬಾವಿಯ ಸುತ್ತಲೂ ತಡೆಗೋಡೆ ನಿರ್ಮಿಸಲಾಗಿದೆ.
__________
ನಾಳಿನ ಸಂಚಿಕೆಯಲ್ಲಿ.
ನಂ.14
*(ಜುಹ್ಫ್ ಬೆಟ್ಟ.)*
Comments