ಟಿಪ್ಪು ಸುಲ್ತಾನ್ ಮಹಾನ್ ದೇಶಪ್ರೇಮಿ
✍🏻ಹಾರಿಸ್ ಪೆರಿಯಪಾದೆ
{ಭಾಗ 1}
*ಹದಿನೆಂಟನೆಯ ಶತಮಾನದಲ್ಲಿ ಬ್ರಿಟಿಷರು ಭಾರತ ಉಪಖಂಡದ ಸಾಮ್ರಾಜ್ಯವನ್ನು ಸ್ಥಾಪಿಸಲು ಹೊರಟಿರುವುದನ್ನು ಎಲ್ಲರಿಗಿಂತ ಮೊದಲೇ ಗುರುತಿಸಿದವರು ಮೈಸೂರಿನ ಹೈದರಲಿ ಮತ್ತು ಟಿಪ್ಪು ಸುಲ್ತಾನ್ ಬ್ರಿಟಿಷರನ್ನು ಇಲ್ಲಿ ನೆಲೆಯೂರಲು ಬಿಡಬಾರದೆಂದು ಅವರೊಡನೆ ಛಲದಿಂದ ಹೋರಾಡಿದರು.
ಭಾರತದ ಇತಿಹಾಸದಲ್ಲೇ ನೌಕಾ ಬಲ ಹೊಂದಿದ್ದ ನೌಕಾಪಡೆ ಹೈದರಾಲಿಯದ್ದು . ಆಗಿನ ಕಾಲದ ಭಾರತದ ಅರಸರು ನೌಕಾ ಪಡೆಯ ಬಗ್ಗೆ ನಿರ್ಲಕ್ಷ್ಯ ತೋರಿದ್ದರೆ, ಹೈದರಲಿ ಮತ್ತು ಟಿಪ್ಪು ಇದಕ್ಕೆ ಅಪವಾದ ಟಿಪ್ಪು ಸುಲ್ತಾನರ ನೌಕಾಪಡೆ ಬಲಪಡಿಸುವ ಮತ್ತು ವಿದೇಶ ರಾಯಭಾರಗಳಿಂದ ಭಾರತಕ್ಕೆ ವಿಶ್ವ ಭೂಪಟದಲ್ಲಿ ಒಂದು ಸ್ಥಾನವನ್ನು ಕೊಟ್ಟಿದ್ದರು
ಭಾರತದಿಂದ ಬ್ರಿಟಿಷರನ್ನು ಹೊಡೆದೋಡಿಸಲು ಅಖಿಲ ಭಾರತ ಯೋಜನೆಯನ್ನು ಹೈದರಾಲಿ 1779 ರಲ್ಲಿ ಪ್ರಕಟಿಸಿದ ನಿಜಾಮರನ್ನೂ, ಮರಾಠರನ್ನೂ ಒಂದುಗೂಡಿಸುವ ಪ್ರಯತ್ನ ಮಾಡಿದ. ಮಹಾರಾಷ್ಟ್ರ ಹೈದರಾಬಾದ್, ಮೈಸೂರು ರಾಜ್ಯಗಳ ಮುಖ್ಯಸ್ಥರು ಶ್ರೀರಂಗಪಟ್ಟಣದಲ್ಲಿ ಸೇರಿ ಒಪ್ಪಂದ ಏರ್ಪಡಿಸಿದರು. ಬ್ರಿಟಿಷರ ಪಾಲಿಗದು ಮರಣ ಗಂಟೆಯಾಗಿತ್ತು.
ವೀರಕೇಸರಿಯಂತೆ ಹೈದರಾಲಿಯು ಬ್ರಿಟಿಷರ ವಿರುದ್ಧ ಸಂಗ್ರಾಮ ಪ್ರಾರಂಭಿಸಿದ್ದ. ಆದರೆ ಭಾರತದ ದುರ್ದೈವ, ಮರಾಠರೂ ನಿಜಾಮರೂ ಕ್ರಮವಾಗಿ ಬ್ರಿಟಿಷರ ವಂಚನೆಗೆ ಒಳಪಟ್ಟರು. ಶ್ರೀರಂಗಪಟ್ಟಣದ ಒಪ್ಪಂದವನ್ನು ನಿರ್ಲಕ್ಷಿಸಿದರು. ಅನಾರೋಗ್ಯದ ನೆಪವೊಡ್ಡಿದ ಹೈದರಾಬಾದಿನ ನಿಜಾಮ ತನ್ನ ಅರಮನೆಯಲ್ಲಿಯೇ ಬಾಕಿಯಾದರೆ, ಮರಾಠರು ಮುಂಬಯಿಯ ಬ್ರಿಟಿಷ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡು ಕೆಲವು ತುಂಡರಸರ ರಾಜ್ಯಗಳನ್ನು ವಶಪಡಿಸಿಕೊಂಡರು. ಹಾಗೂ ಹೈದರಾಲಿಯ ಸಹಾಯಕ್ಕೆ ಹೋಗದೆ ಮೋಸ ಮಾಡಿದರು. ಏಕೈಕ ವೀರನಾಗಿ ಹೈದರಲಿ ಬ್ರಿಟಿಷರ ವಿರುದ್ಧ ಹೋರಾಡಿದ ಭಾರತದ ಯಾವ ಒಬ್ಬ ಅರಸ ಅವರ ಸಹಾಯಕ್ಕೆ ಹೋಗಲಿಲ್ಲ ಆದರೆ ಸಮರ ತಂತ್ರಜ್ಞತೆಯಲ್ಲಿ ನಿಪುಣನಾಗಿದ್ದ ಹೈದರಾಲಿಯು ಬ್ರಿಟಿಷರನ್ನು ಸದೆಬಡಿದು ಅವರ ಕೀರ್ತಿ ಪ್ರತಾಪವನ್ನು ಮಣ್ಣುಪಾಲು ಮಾಡಿ ಸೋಲಿನ ಸವಿಯುಣಿಸಿದರು.
ಮದ್ರಾಸಿಗೆ ಮುತ್ತಿಗೆ ಹಾಕಿದ್ದ ಹೈದರಾಲಿಯೊಂದಿಗೆ ಬ್ರಿಟಿಷರು ಸಂಧಿಗೆ ಬದ್ಧರಾದರು. ಪರಸ್ಪರ ಸಹಾಯದ ಒಪ್ಪಂದಕ್ಕೆ ನಡೆದುಕೊಳ್ಳದೆ ದ್ರೋಹ ಎಸಗಿದಾಗ ಬ್ರಿಟಿಷ್ ರಾಯಭಾರಿಗೆ "ಆಂಗ್ಲರ ಹೆಸರನ್ನು ಕರ್ನಾಟಕದಿಂದಲೇ ಅಳಿಸಿ ಹಾಕಿ ಬಿಡುತ್ತೇನೆ ಎಂದು ಬಿರುಸಾಗಿ ಗುಡುಗಿದ ಹೈದರಾಲಿಯು ಅಂದಿನಿಂದ ಬ್ರಿಟಿಷರ ಬದ್ಧ ವೈರಿಯಾಗಿ ಅವರನ್ನು ಭಾರತದಿಂದ ಹೊಡೆದೋಡಿಸುವ ಪಣ ತೊಟ್ಟಿದ್ದ! ಮಗ ಟಿಪ್ಪು ಸುಲ್ತಾನರಲ್ಲಿ ಬ್ರಿಟಿಷರು ಭಾರತದ ಶಾಶ್ವತ ಶತ್ರುಗಳೆಂದು ಶಪಥ ಮಾಡುವಂತೆ ಉಪದೇಶ ನೀಡಿದ ಮಹಾನ್ ದೇಶಭಕ್ತ ಹೈದರಾಲಿ.
(ಮುಂದುವರಿಯುವುದು)
*✍🏻 ಹಾರಿಸ್ ಪೆರಿಯಪಾದೆ*
Comments