Skip to main content

*ಟೋಪಿ ಧರಿಸುವಿಕೆ : ಇಸ್ಲಾಮಿನಲ್ಲಿ..* *ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

*ಟೋಪಿ ಧರಿಸುವಿಕೆ : ಇಸ್ಲಾಮಿನಲ್ಲಿ..*

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

ಮುದಿ ಸಲಫಿಗಳಿಗೆ ಹಲಾಲ್, ಚೋಟಾ ಸಲಫಿಗಳಿಗೆ ಹರಾಂ..! ಹಂಗಾಯಿತು ನಮ್ಮ ಈ ಆಧುನಿಕ ಸಲಫಿಗಳ ಅವಸ್ಥೆ. ತಲೆ ಮರೆಯುವುದು ಸುನ್ನತ್ ಅಲ್ಲವಂತೆ. ಅದನ್ನು ಪ್ರವಾದಿ (ಸ.ಅ) ಸುನ್ನತ್ ಆಗಿ ಕಲಿಸಿಲ್ಲವಂತೆ.

ಇನ್ನು ಈ ಸಲಫಿಗಳ ಸ್ವಾರಸ್ಯಕರ ವಾದ ವಾದವೇನೆಂದರೆ, ಪ್ರವಾದಿ (ಸ.ಅ) ರು ತಲೆಗೆ ಟೊಪ್ಪಿ ಇಡುತ್ತಿರಲಿಲ್ಲವಂತೆ. ಆದರೂ, ತಲೆ ಮರೆಸುತ್ತಿದ್ದರಂತೆ.!  ಎಂತಹ ಬುದ್ಧಿವಂತರಲ್ಲವೇ ಇವರು.ಯಾವುದರ ಮರೆಗಾಗಿ ಟೋಪಿ ಧರಿಸಲಾಗುತ್ತದೆ ಎಂದು ಈ ಸಲಫಿಗಳಿಗೆ ಯಾರಾದರು ಹೇಳಿಕೊಟ್ಟಿದ್ದರೆ ಒಳ್ಳೆಯದಿತ್ತು.

*ಟೋಪಿ ಧರಿಸುವಿಕೆ ಸಲಫಿಗಳ ದೃಷ್ಟಿಯಲ್ಲಿ...*

*ಸಲಫಿ ಗಳ ಪತ್ರಿಕೆ, ಅಲ್ ಮನಾರ್ ನಲ್ಲಿ ಮುಜಾಹಿದ್ ನೇತಾರರು ಬರೆಯುತ್ತಾರೆ,  "ಟೊಪ್ಪಿ ಇಂದಲೋ, ಇನ್ಯಾವುದೇ ವಸ್ತ್ರಗಳಿಂದಲೋ ತಲೆ ಮುಚ್ಚುವುದು ಸುನ್ನತ್ ಆಗಿದೆ". ಅದೇರೀತಿ ಸಲಫಿಗಳ ಪ್ರಮುಖ ನೇತಾರರಾಗಿದ್ದ ಉಮರ್ ಮೌಲವಿ ತನ್ನ ಸಲ್'ಸಬೀಲ್ ಎಂಬ ಗ್ರಂಥದಲ್ಲಿ ಹೇಳುತ್ತಾರೆ, "ತಲೆ ಮರೆಯುವ ವಿಷಯದಲ್ಲಿ ನಾನು ದೃಢವಾಗಿ ಹೇಳುತ್ತೇನೆ, ಅದು ಪ್ರವಾದಿ (ಸ.ಅ) ರ ಸುನ್ನತ್ ಆಗಿದೆ" ಎಂದು.*

ಅಂದರೆ, ಹತ್ತಿಪ್ಪತ್ತು ವರ್ಷಗಳ ಮುಂಚಿನವರೆಗೂ, ತಲೆ ಮರೆಸುವುದು ಸುನ್ನತ್ ಎಂಬ ವಿಷಯದಲ್ಲಿ ಸಲಫಿ ಗಳಿಗೂ ತರ್ಕವಿದ್ದಿಲ್ಲ ಎಂದಾಯಿತು.

*5 ನೇ ಶತಮಾನದ ಮುಜದ್ದಿದ್ ಎಂದೇ ಕರೆಸಲ್ಪಡುವ, ಹುಜ್ಜತುಲ್ ಇಸ್ಲಾಂ ಅಬೂಹಾಮಿದಿಲ್ ಗಝ್ಝಾಲಿ (ರ) ರವರು ತಮ್ಮ ಇಹ್'ಯಾವುಲ್ ಉಲೂಂ ಎಂಬ ಗ್ರಂಥದಲ್ಲಿ "ನಬಿ (ಸ.ಅ) ರು ತಲೆಗೆ ಟೊಪ್ಪಿ ಇಡುತ್ತಿದ್ದರು, ಮತ್ತು ಅದರ ಮೇಲೆ ತಲೆಕಟ್ಟು ಕಟ್ಟುತ್ತಿದ್ದರು" ಎಂದು ಉಲ್ಲೇಖಿಸಿದ್ದಾರೆ.*

ನಮಾಝ್ ನಲ್ಲಿ ತಲೆ ತೆರೆದಿಡುವುದು ಕರಾಹತ್ ಎಂದು ಶಾಫಿಹೀ ಮಝ್'ಹಬ್ ನ ಫಿಖ್ಹ್ ಗ್ರಂಥಗಳಲ್ಲಿ ಇವೆ. ಕರಾಹತ್ ಅಂದರೆ, ಮಾಡಿದರೆ ಶಿಕ್ಷೆಯಿಲ್ಲ, ಉಪೇಕ್ಷಿಸಿದರೆ ಪ್ರತಿಫಲ ಸಿಗುವಂತದ್ದೂ ಆಗಿದೆ. ಅಂದರೆ, ನಮಾಝ್ ನಲ್ಲಿ ತಲೆ ಮರೆಸುವುದು ಸುನ್ನತ್ ಆದ ಕಾರ್ಯವಾಗಿದೆ.

ತಲೆ ಮರೆಸುವುದು ಸುನ್ನತ್ ಎಂಬ ವಿಷಯದಲ್ಲಿ ವಿಶ್ವದ ಯಾವೊಬ್ಬ ಮುಸ್ಲಿಮನಿಗೂ ಸಂಶಯವಿಲ್ಲ. ನಾಲ್ಕು ಮಝ್'ಹಬ್ ಅನ್ನು ಅಂಗೀಕರಿಸುವ ವಿಶ್ವದ ಎಲ್ಲಾ ಮುಸ್ಲಿಮರೂ ಸುನ್ನತ್ ಎಂಬ ಉದ್ದೇಶದಿಂದ ತಲೆ ಮರೆಸುತ್ತಿರುವಾಗ, ತಲೆ ಮರೆಸಲು ಸುನ್ನತ್ ಇಲ್ಲ ಎಂದು ವಾದಿಸುವ ಏಕೈಕ ವಿಭಾಗ ಕೇರಳ-ಕರ್ನಾಟಕದ ಬೆರಳೆಣಿಕೆಯ ಸಲಫಿಗಳು ಮಾತ್ರ.

ಇನ್ನು  ಫಿಖ್ಹ್  ಗ್ರಂಥಗಳಲ್ಲಿನ ಇಮಾಮ್ ಗಳ ಉಲ್ಲೇಖದ ಬಗ್ಗೆ ಸಲಫಿಗಳು ಹೇಳುವುದೇನೆಂದರೆ, ಫಿಖ್ಹ್ ಗಳು ಇಮಾಮ್ ಗಳ ‌ಸ್ವಂತ ಅಭಿಪ್ರಾಯವಂತೆ, ಇಮಾಮರುಗಳು ಹದೀಸ್ ಗೆ ವಿರುದ್ಧ ಇದ್ದಾರಂತೆ. ವಾಹ್, ಹೇಗಿದೆಯಲ್ಲವೇ ಸಲಫಿಗಳ ದೊಡ್ಡಸ್ತಿಕೆ ಮತ್ತು ಅಹಂಕಾರ. ಇವರಾದರೊ, ಇಂದು ಹೇಳಿದ್ದನ್ನು ನಾಳೆ, ನಾಳೆಯದನ್ನು ನಾಡಿದ್ದು  ಈ ರೀತಿ ಮನಬಂದಂತೆ ತಮ್ಮ ವಾದವನ್ನು ಬದಲಿಸುವವರಾಗಿದ್ದಾರೆ.

ಫಿಖ್ಹ್  ಅಂದರೇನೆಂದೇ ಗೊತ್ತಿಲ್ಲದ, ಸರಿಯಾಗಿ ಕಿತಾಬ್ ಓದಲು ಬರದ, ಹತ್ತಿಪ್ಪತ್ತು ಹದೀಸ್ ಗಳ ಜ್ಞಾನವೂ ಇರದ, ಗೋಸುಂಬೆ ಯಂತೆ ಕಾಲಕ್ಕೆ  ತಕ್ಕಂತೆ ಬಣ್ಣ ಬದಲಿಸುತ್ತಲೇ ಇರುವ ಈ ಅಜ್ಞಾನಿ ಸಲಫಿ ಗಳನ್ನು ನಾವು ಅನುಸರಿಸಬೇಕಾ, ಅಲ್ಲ, ಲಕ್ಷಾಂತರ ಹದೀಸ್ ಗಳ ಜ್ಞಾನ ಇರುವ, ಸಾವಿರಾರು ವರ್ಷಗಳಿಂದ ಯಾವುದೇ ಅಭಿಪ್ರಾಯ ವ್ಯತ್ಯಾಸವಿಲ್ಲದೆ, ಲೊಕದ ಪ್ರಗಲ್ಭ ಇಮಾಮರುಗಳೂ, ವಿಶ್ವದ ಮುಸ್ಲಿಮರೆಲ್ಲರೂ ಅಂಗೀಕರಿಸುತ್ತಾ ಬಂದಂತಹ ಮಝ್'ಹಬ್ ನ ಇಮಾಮರುಗಳನ್ನು ನಾವು ಅನುಸರಿಸಬೇಕಾ ಎಂದು ಇವರ ಹಿಂದೆ ಹೋಗುವವರು ಎದೆಮೇಲೆ ಕೈ ಇಟ್ಟು  ಚಿಂತಿಸಬೇಕಾಗಿದೆ.

ಅಲ್ಲಾಹು ನಮ್ಮೆಲ್ಲರನ್ನು ಇಹ-ಪರ ವಿಜಯಿಗಳ ಸಾಲಿನಲ್ಲಿ ಸೇರಿಸಲಿ, ಆಮೀನ್.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...