Skip to main content

*ಹಬ್ಬದ ಸಡಗರ, ಕುಟುಂಬದಲ್ಲಿ ಸೂತಕದ ಛಾಯೆಯನ್ನು ಸೃಷ್ಟಿಸದಿರಲಿ.* *ನಾಡಿನ ಸರ್ವ ಧರ್ಮೀಯರಿಗೂ ಬಕ್ರೀದ್ ಹಬ್ಬದ ಶುಭಾಶಯಗಳು.*

ವಿಶ್ವ ಭ್ರಾತೃತ್ವವವನ್ನು ಸಾರುವ, ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬದ ಸಡಗರ,ಸಂಭ್ರಮದ ಪೂರ್ವ ತಯಾರಿಗಳು ತರಾತುರಿಗಳು ಒಂದು ಕಡೆಯಾದರೆ ಮುಸ್ಲಿಮರಾಗಿ ಜನಿಸಿದ ಕಾರಣಗಳಿಂದ ಜಗತ್ತಿನ ವಿವಿಧ ಭಾಗಗಳಲ್ಲಿ ಮುಸ್ಲಿಂ ಸಮೂಹವು ಅಮಾನುಷವಾಗಿ ದೈರ್ಜನ್ಯಕ್ಕೊಳಗಾಗುತ್ತಲೇ ಇದೆ.
ಮಯನ್ಮಾರ್, ಪ್ಯಾಲೇಸ್ತೀನ್ ಸಹಿತ ಜಗತ್ತಿನ ವಿವಿಧ ಭಾಗಗಳಲ್ಲಿ ನೋವು ಅನುಭವಿಸುತ್ತಿರುವ ಮುಸ್ಲಿಂ ಸಮೂಹದ ರಕ್ಷಣೆಗಾಗಿ ಪ್ರಾರ್ಥಿಸುವ ಮೂಲಕವಾಗಿರಲಿ ನಮ್ಮ ಈ ಬಕ್ರೀದ್ ಆಚರಣೆ.

ಸಣ್ಣ ಮಕ್ಕಳಿಂದ ಹಿಡಿದು ಮುದಿ ಜೀವದವರೆಗಿನ ಪ್ರತಿಯೊಬ್ಬರು ಹಬ್ಬದ ಸಡಗರವನ್ನು ಎದುರು ನೋಡುತ್ತಿರುವಾಗ ಬಹುಷಃ ಕೆಲವು ಮನೆಗಳಲ್ಲಿನ ಅಡುಗೆ ಮನೆಗಳು ಸ್ತಬ್ಧವಾಗಿರಲೂಬಹುದು.
ಬಡತನದ ಕಾರಣಗಳಿಂದಲೋ,ಇನ್ನಿತರ ಯಾವುದೋ ಕಾರಣಗಳಿಂದಲೋ ಮನೆಯ ಬೆಳಕು ಆರಿರಲೂಬಹುದು.
ಬಕ್ರೀದ್ ಹಬ್ಬದ ಒಂದು ದಿನದ ಸಡಗರ, ಸಂಭ್ರಮದ ಹೆಸರಿನಲ್ಲಿ ಶ್ರೀ ಮಂತಿಕೆಯ ಪೌರುಷದಿಂದ ಮೆರೆದಾಡುವವರಾಗದೆ
ಹಬ್ಬದ ಸಡಗರ ನಮ್ಮೊಳಗೆ ಅದ್ಯಾವ ರೂಪದ ಸಂತೋಷವನ್ನು ಸೃಷ್ಟಿಸುತ್ತದೆಯೋ,ನಮ್ಮ ನೆರೆಯಲ್ಲಿರುವ ಅಥವಾ ಊರಿನಲ್ಲಿರುವ ಬಡವರ, ಅಸಹಾಯಕರ ಮನದಲ್ಲೂ ಸಂತೋಷವನ್ನು ಕಾಣುವಂತವರಾಗೋಣ.

ಹಬ್ಬದ ಸಂಭ್ರಮದ ಹೆಸರಿನಲ್ಲಿ ಅತಿರೇಕದಿಂದ ಹಬ್ಬದ ದಿನವನ್ನು ಮೋಜಿನ ದಿನವನ್ನಾಗಿ ಪರಿವರ್ತಿಸುವ ಯುವ ಮಿತ್ರರೇ..
ಒಂದು ದಿನದ ಸಂತೋಷದ ಹೆಸರಿನಲ್ಲಿ ಕುಟುಂಬದಲ್ಲಿ ಜೀವನ ಪರ್ಯಂತ ಸೂತಕದ ಛಾಯೆಯನ್ನು ಸೃಷ್ಟಿಯಾಗದಂತೆ ನೋಡಿಕೊಳ್ಳಿರಿ. ಬೈಕ್ ರೇಸ್, ವಾಹನಗಳ ಅಮಿತ ವೇಗ, ಸಮುದ್ರದಲ್ಲಿ ಮೋಜು,ಮುಂತಾದ ಅತಿರೇಕದ ವರ್ತನೆಗಳು ನಡೆಸುವಾಗ ನಿಮ್ಮ ಬರುವಿಕೆಯನ್ನು ಕಾಯುತ್ತಿರುವಂತಹ ಮನೆ ಮಂದಿಯನ್ನು ಹಾಗೂ ನಿಮ್ಮದೇ ಆಸರೆಯಲ್ಲಿ ಜೀವನ ನಡೆಸುವ ಸಹೋದರ,ಸಹೋದರಿಯರ ಕುರಿತು ಒಂದ್ನಿಮಿಷ ಚಿಂತಿಸಿ.
ಕಳೆದ ರಂಝಾನ್ ಹಬ್ಬಕ್ಕೆ ನಮ್ಮೊಡನೆ ಇದ್ದಂತಹ ಹಲವರು ಇಂದು ಅಲ್ಲಾಹನ ಅನುಲ್ಲಂಘನೀಯವಾದ ವಿಧಿಯ ಕರೆಗೆ ಓಗೊಟ್ಟು ಆರಡಿ ಮಣ್ಣಿನಡಿಯಲ್ಲಿದ್ದಾರೆ. ನಿಮ್ಮ ಪ್ರಾರ್ಥನೆಯಲ್ಲಿ ಅವರನ್ನೆಂದೂ ಮರೆಯದಿರಿ.

ತ್ಯಾಗದ ಸಂಕೇತವಾದ ಬಕ್ರೀದ್ ಹಬ್ಬವು ನಮ್ಮೊಳಗೂ ಕೆಡುಕನ್ನು ತ್ಯಜಿಸಿ, ಒಳಿತಿನೆಡೆಗೆ ಮುನ್ನುಗ್ಗುವಂತಹ ತ್ಯಾಗೋಜ್ಜಲವಾದ ಜೀವನವನ್ನು ನಡೆಸುವಂತಹ ಗುಣಗಳು ಬೆಳೆಯಲಿ.ಅನೈಕ್ಯ ,ಅಧರ್ಮವನ್ನು ತೊರೆದು ಜೀವಿಸುವಂತವರಾಗೋಣ.
ಸಮಾಜದ ನಡುವೆ ಶಾಂತಿ,ಸೌಹಾರ್ದತೆಯನ್ನು ಸಾರುತ್ತಾ ಬಕ್ರೀದ್ ಹಬ್ಬದ ಉದಾತ್ತ ಸಂದೇಶವನ್ನು ಪಸರಿಸೋಣ.
ಹಬ್ಬದ ಸಂದೇಶದೊಂದಿಗೆ ಸಹೋದರ ಧರ್ಮೀಯರ ಭಾವನೆಗಳಿಗೆ ಘಾಸಿಗೊಳಿಸುವಂತಹ ಬರಹ, ವರ್ತನೆಗಳನ್ನು ಸಾಮಾಜಿಕ ತಾಣಗಳಲ್ಲಿ ಬಿತ್ತರಿಸುವ,ಸಮಾಜದ ಅರಾಜಕತೆಗೆ ಮುನ್ನುಡಿಯಿಡುವಂತಹ ಘಟನೆಗಳು ನಮ್ಮಿಂದ ನಡೆಯದಂತೆ ಜಾಗರೂಕರಾಗಿರೋಣ.
ಹಬ್ಬದ ಸಂಭ್ರಮ ನಮ್ಮ ಅತಿರೇಕಗಳಿಗೆ ಇರುವ ಸರ್ಟಿಫಿಕೇಟ್ ಅಂತು ಖಂಡಿತ ಅಲ್ಲ.ಒಂದು ದಿನದ ಸಂಭ್ರಮದ ಹೆಸರಿನಲ್ಲಿ ಅಧಾರ್ಮಿಕತೆಯಿಂದ ಮೆರೆದು ಜೀವನ ಪರ್ಯಂತ ಕಷ್ಟ ಪಡುವ ಪ್ರವೃತ್ತಿಗಳು ನಡೆಯದೆ ನಾಡಿನೆಲ್ಲೆಡೆ ಶಾಂತಿ,ಸೌಹಾರ್ದತೆಯಿಂದ ಬಕ್ರೀದ್ ಹಬ್ಬವನ್ನು ಆಚರಿಸುವಂತಾಗಲಿ.
ಸರ್ವ ಧರ್ಮೀಯರಿಗೂ ತ್ಯಾಗ, ಬಲಿದಾನ, ವಿಶ್ವ ಭ್ರಾತೃತ್ವದ ಸಂಕೇತವಾದ ಬಕ್ರೀದ್ ಹಬ್ಬದ ಪ್ರೀತಿ ತುಂಬಿದ ಶುಭಾಶಯಗಳು.

ಸ್ನೇಹಜೀವಿ ಅಡ್ಕ

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...