Skip to main content

ಉಳ್ಹಿಯ್ಯತ್  ಪ್ರಶ್ನೋತ್ತರಗಳು

1. ಶ್ರೀಮಂತರಿಗೆ ಉಳ್ಹಿಯ್ಯತ್ ಕಡ್ಡಾಯವೇ?
= ಕಡ್ಡಾಯವಿಲ್ಲ, ಪ್ರಬಲ ಸುನ್ನತ್ತಾಗಿದೆ. ( ತುಹ್ಫ 9/344)

2. ಮರಣ ಹೊಂದಿದವರಿಗಾಗಿ ಬಲಿಯರ್ಪಿಸಬಹುದೇ
= ಮರಣ ಹೊಂದಿದ ವ್ಯಕ್ತಿ ಮರಣಕ್ಕೂ ಮುಂಚೆ ವಸಿಯ್ಯತ್ ಮಾಡಿದ್ದಲ್ಲಿ ಮೃತರ ಸೊತ್ತಿನಿಂದ ಬಲಿಯರ್ಪಿಸಬಹುದು. ವಸಿಯ್ಯತ್ ಮಾಡಿರದಿದ್ದರೆ ಬಲಿಯರ್ಪಿಸುವಂತಿಲ್ಲ ( ತುಹ್ಫ 9/368)

3. ಉಳ್ಹಿಯ್ಯತ್ತಿನ ಮೃಗದ ಚರ್ಮವನ್ನು ಮಾರಾಟ ಮಾಡಬಹುದೇ
= ಉಳ್ಹಿಯ್ಯತ್ತಿನ ಚರ್ಮ ಸೇರಿದಂತೆ ಯಾವುದೇ ಭಾಗವನ್ನೂ ಮಾರಾಟ ಮಾಡಕೂಡದು. ( ತುಹ್ಫ 9/365)

4. ಸ್ತ್ರೀಯರು ಸ್ವತಃ ಉಳ್ಹಿಯ್ಯತ್ತ್ ದ್ಸಬಹ್ ಮಾಡಿದರೆ ಉಳ್ಹಿಯ್ಯತ್ ಸಿಂಧುವಾಗುತ್ತದೆಯೇ ?
= ಉಳ್ಹಿಯ್ಯತ್ತಿನಲ್ಲಿ ಪಾಲುದಾರರಾಗುವುದು ಪುರುಷರಂತೆ ಸ್ತ್ರೀಯರಿಗೂ ಸುನ್ನತ್ತಾಗಿದೆ. ಆದರೆ ಸ್ತ್ರೀಯರು ಉಳ್ಹಿಯ್ಯತ್ತನ್ನು ಸ್ವತಃ ದ್ಸಬಹ್ ಮಾಡುವುದಕ್ಕಿಂತಲೂ ಉತ್ತಮ ಪುರುಷರಿಗೆ ವಹಿಸಿಕೊಡುವುದಾಗಿದೆ. ಸ್ತ್ರೀ ದ್ಸಬಹ್ ಮಾಡಿದರೂ ಸಿಂಧುವಾಗುತ್ತದೆ  ( ತುಹ್ಫ 9/348)

5. ಉಳ್ಹಿಯ್ಯತ್ತಿನ ಮಾಂಸವನ್ನು ಮಾಲಿಕ(ಬಲಿಯರ್ಪಿಸಿದ ವ್ಯಕ್ತಿ ) ಭಕ್ಷಿಸಬಹುದೇ ?
= ಸುನ್ನತ್ತಾದ ಉಳ್ಹಿಯ್ಯತ್ತಿನ ಮಾಂಸವನ್ನು ಮಾಲಿಕ ಭಕ್ಷಿಸಬಹುದು. ಅಲ್ಪವಾದರೂ ದಾನ ನೀಡುವುದು ಕಡ್ಡಾಯವಾಗಿದೆ. ಇನ್ನು ಕಡ್ಡಾಯ ಉಳ್ಹಿಯ್ಯತ್ತಿನಿಂದ ಮಾಲಿಕ ಭಕ್ಷಿಸಕೂಡದು. ( ತುಹ್ಫ 9/363,364)

5. ಉಳ್ಹಿಯ್ಯತ್ತಿನ 1/3 ಭಾಗವನ್ನು ದಾನ ಮಾಡುವುದು ಕಡ್ಡಾಯವೇ? ಮಾಲಿಕನಿಗೆ ಎಷ್ಟು ಭಕ್ಷಿಸಬಹುದು?
= ಕಡ್ಡಾಯ ಉಳ್ಹಿಯ್ಯತ್ತಿನಿಂದ ಮಾಲಿಕ ಭಕ್ಷಿಸುವಂತಿಲ್ಲ. ಸುನ್ನತ್ತಾದ ಉಳ್ಹಿಯ್ಯತ್ತಿನಿಂದ ಮಾಲಿಕನು ಅಲ್ಪ ಮಾತ್ರ ಇಟ್ಟುಕೊಂಡು ಹೆಚ್ಚಿನ ಭಾಗವನ್ನು ದಾನ ನೀಡುವುದಾಗಿದೆ ಉತ್ತಮ. ಆದರೆ ಅಲ್ಪ ಮಾತ್ರ ದಾನ ಮಾಡಿ ಉಳಿದ ಭಾಗವನ್ನು ತಾನೇ ಉಪಯೋಗಿಸುವುದಕ್ಕೆ ವಿರೋಧವಿಲ್ಲ. 1/3 ಭಾಗಕ್ಕಿಂತ ಹೆಚ್ಚಿನ ಭಾಗ ತಾನೇ ಉಪಯೋಗಿಸದಿರುವುದು ಸುನ್ನತ್ತಾಗಿದೆ. ( ತುಹ್ಫ 9/263,265)

7. ಉಳ್ಹಿಯ್ಯತ್ತಿನ ಮಾಂಸವನ್ನು ಮುಸ್ಲಿಮೇತರರಿಗೆ ದಾನ ನೀಡಬಹುದೇ ?
= ಅನುವದನೀಯವಲ್ಲ. ( ತುಹ್ಫ 9/363)

8. ಉಳ್ಹಿಯ್ಯತ್ತಿನ ಮಾಂಸ ದೊರೆತ ಬಡವನಿಗೆ ಅದನ್ನು ಮುಸ್ಲಿಮೇತರರಿಗೆ ಮಾರಬಹುದೇ?
= ಇಲ್ಲ. ಉಳ್ಹಿಯ್ಯತ್ತಿನ ಮಾಂಸ ಯಾವ ರೂಪದಲ್ಲೂ ಅಮುಸ್ಲಿಮರ ಕೈತಲುಪಕೂಡದು. ( ತುಹ್ಫ 9/363) ಉಳ್ಹಿಯ್ಯತ್ತ್ ಮುಸ್ಲಿಮರ ಆರಾಧನೆಯ ಭಾಗವಾಗಿದೆ.

9. ಉಳ್ಹಿಯ್ಯತ್ತಿನ ಮಾಂಸ ದೊರೆತ ವ್ಯಕ್ತಿಯು ಅದನ್ನು ಬೇರೆಯವರಿಗೆ ಮಾರಾಟ ಮಾಡಬಹುದೇ ?
= ಶ್ರೀಮಂತರಿಗೆ ಹದ್ಯಾ ರೂಪದಲ್ಲಿ ದೊರೆತ ಮಾಂಸವನ್ನು ಬೇರೆಯವರಿಗೆ ಮಾರಾಟ ಮಾಡುವಂತಿಲ್ಲ. ಆದರೆ , ಬಡವರು ( ಫಕೀರ್ & ಮಿಸ್ಕೀನ್) ತಮಗೆ ದೊರೆತ ಮಾಂಸವನ್ನು ಬೇರೆಯವರಿಗೆ ಮಾರಾಟ ಮಾಡಬಹುದು. ( ತುಹ್ಫ 9/363,364)

10. ರಾತ್ರಿ ಸಮಯದಲ್ಲಿ ಉಳ್ಹಿಯ್ಯತ್ತ್ ದ್ಸಬಹ್ ನಡೆಸಬಹುದೇ ?
= ಕರಾಹತ್ತಾಗಿದೆ ( ತುಹ್ಫ 9/354)

11. ಉಳ್ಹಿಯ್ಯತ್ತಿನ ಮಾಂಸವನ್ನು ಬೇಯಿಸಿ ನೀಡಿದರೆ ಸಾಕೇ ?
= ಬೇಯಿಸಿ ನೀಡಿದರೆ ಸಾಕಾಗದು. ಕಡ್ಡಾಯವಾಗಿ ನೀಡಬೇಕಾದ ಅಂಶವನ್ನು ಬೇಯಿಸದೆಯೇ ನೀಡಬೇಕು. ( ತುಹ್ಫ 9/ 364)

12. ಉಳ್ಹಿಯ್ಯತ್ತಿನ ಮೃಗ ಗಂಡು ವರ್ಗದ್ದಾಗಿದ್ದರೆ ಪ್ರತ್ಯೇಕ ಪುಣ್ಯವಿದೆಯೇ ?
= ಇದೆ. ( ತುಹ್ಫ 9/ 349)

13. ಏಳಕ್ಕಿಂತ ಕಡಿಮೆ ವ್ಯಕ್ತಿಗಳು ಸೇರಿ ಉಳ್ಹಿಯ್ಯತ್ತ್ ನೀಡಬಹುದೇ ?
= ನೀಡಬಹುದು. ಏಳಕ್ಕಿಂತ ಹೆಚ್ಚು ವ್ಯಕ್ತಿಗಳು ಸೇರಿ ನೀಡುವಂತಿಲ್ಲ. ( ತುಹ್ಫ 9 )

14. ಒಬ್ಬ ವ್ಯಕ್ತಿಯು ತನ್ನ ಉಳ್ಹಿಯ್ಯತ್ತಿನ ಪ್ರತಿಫಲವನ್ನು ಏಳಕ್ಕಿಂತ ಹೆಚ್ಚಿನ ಮಂದಿಗೆ ಹದ್ಯ ನೀಡಬಹುದೇ ?
= ನೀಡಬಹುದು. ಪ್ರವಾದಿ  (ಸ)ರು ತಮ್ಮ ಉಮ್ಮತ್ತಿಗಾಗಿ ಉಳ್ಹಿಯ್ಯತ್ ಬಲಿಯರ್ಪಿಸಿದ್ದರು. ( ತುಹ್ಫ 9/349)

15. ಇಬ್ಬರು ಒಟ್ಟಾಗಿ ಎರಡು ಆಡುಗಳನ್ನು ಖರೀದಿಸಿ ಬಲಿಯರ್ಪಿಸಿದರೆ ಸ್ವೀಕೃತವೇ ?
= ಸ್ವೀಕೃತವಲ್ಲ. ಕಾರಣ, ಈ ರೀತಿ ಖರೀದಿಸುವಾಗ ಪ್ರತೀಯೊಂದು ಆಡಿನಲ್ಲಿಯೂ ಪ್ರತಿಯೊಬ್ಬರಿಗೆ ಉಳ್ಹಿಯ್ಯತ್ತಿನ ಅರ್ಧ ಅರ್ಧ ಪಾಲು ಮಾತ್ರ ದೊರೆಯುತ್ತದೆ. ಒಂದು ಆಡನ್ನು ಪೂರ್ಣವಾಗಿ ಇಬ್ಬರೂ ಬಲಿಯರ್ಪಿಸುತ್ತಿಲ್ಲ.( ತುಹ್ಫ 9/349)

16. ಬಲಿಯರ್ಪಿಸುವ  ಸಂದರ್ಭದಲ್ಲಿ ದ್ಸಬಹಿಗೆ ಸಂಬಂಧಪಟ್ಟ  ಪ್ರಕ್ರಿಯೆಯಲ್ಲಿ ಮುಸ್ಲಿಮೇತರರನ್ನು ಸೇರಿಸಿಕೊಳ್ಳಬಹುದೇ ?
= ವಿರೋಧವಿಲ್ಲ. ಆದರೆ , ದ್ಸಬಹ್ ನಡೆಸುವುದು ಮುಸ್ಲಿಮನೋ ಅಹ್ಲುಕಿತಾಬಿಯೋ ಆಗಿರಬೇಕು. ( ತುಹ್ಫ 9/342)

17. ಗರ್ಭ ಧರಿಸಿದ ಮೃಗವನ್ನು ಬಲಿಯರ್ಪಿಸಬಹುದೇ ?
= ಅನುವದನೀಯವಲ್ಲ. ( ತುಹ್ಫ 9/ 351)

18. ಉಳ್ಹಿಯ್ಯತ್ ನೀಡಲು ಉದ್ದೇಶಿಸಿದ ವ್ಯಕ್ತಿಗೆ ದುಲ್ಹಜ್ಜ್ ತಿಂಗಳ ಪ್ರಾರಂಭದಿಂದ ಕೂದಲು , ಉಗುರು ತೆಗೆಯುವುದು ಹರಾಂ ಆಗಿದೆಯೇ ?
= ಹರಾಂ ಅಲ್ಲ. ಆದರೂ ಕರಾಹತ್ತಾಗಿದೆ. ( ತುಹ್ಫ 9/346)

19. ಬಲಿಯರ್ಪಿಸುವ ಸ್ಥಳದಲ್ಲಿ  ಅರ್ಪಿಸುವ ವ್ಯಕ್ತಿ  ಹಾಜರಿರುವುದು ಪುಣ್ಯದಾಯಕವೇ ?
= ಹೌದು . ಆ ಸ್ಥಳದಲ್ಲಿ ಉಳ್ಹಿಯ್ಯತ್ ನೀಡುವ ವ್ಯಕ್ತಿ ಹಾಜರಿರುವುದು ಸುನ್ನತ್ತಾಗಿದೆ. ( ತುಹ್ಫ 9/348)

20. ಉಳ್ಹಿಯ್ಯತ್ತ್ ಮೃಗದ ಚರ್ಮವನ್ನು ಅದರ ಕೆಲಸಗಾರರಿಗೆ ಕೂಲಿಯಾಗಿ ನೀಡಬಹುದೇ ?
= ಅನುವದನೀಯವಲ್ಲ, ಹರಾಮಾಗಿದೆ.( ತುಹ್ಫ 9/365)

            ✨✨✨✨
*By : SHAMS SAHITYA SAMAJA JNA*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...