Skip to main content

ಹದ್ದಾದ್ ರಾತೀಬ್'ನ ಮಹತ್ವ 〰〰〰〰〰〰〰〰〰

    ರಾತೀಬುಲ್ ಹದ್ದಾದ್ ರೂಢಿ ಮಾಡಿಕೊಳ್ಳುವುದು ವಿಪತ್ತುಗಳಿಂದ ರಕ್ಷೆ ಹೊಂದಲು ಉತ್ತಮ ಮಾರ್ಗ. ಹದ್ದಾದ್ ಮಹತ್ವವನ್ನು ಸಾರುವ ಅನೇಕ ಘಟನೆಗಳು ವಿಶ್ವಾಸಯೋಗ್ಯರಾದ ಹಲವು ಮಹನೀಯರಿಂದ ವರದಿಯಾಗಿದೆ.
'ಖುತುಬಿ ಮುಹಮ್ಮದ್ ಮುಸ್ಲಿಯಾರ್(ನ.ಮ)ರವರ ಜೀವನ ಚರಿತ್ರೆ ಪುಸ್ತಕದಲ್ಲಿ ಹದ್ದಾದ್ ಮಹತ್ವವನ್ನು ಸಾರುವ ಒಂದು ಘಟನೆ.👇�

ಒಮ್ಮೆ ಮಹಾನುಬಾವರಾದ ಮುಹಮ್ಮದ್ ಮುಸ್ಲಿಯಾರ್'ರವರು(ನ.ಮ) ತೀವ್ರ ಚಳಿಯಿರುವ ರಾತ್ರಿಯಲ್ಲಿ ದಾರಿಯೊಂದರಲ್ಲಿ ಸಾಗುತ್ತಿದ್ದರು.ಜತೆಗೆ ಅನೇಕ ಶಿಷ್ಯರೂ ಇದ್ದರು.ದಾರಿ ಮಧ್ಯದಲ್ಲಿ ಮಹಾನುಬಾವರ ಕಾಲಿಗೆ ಏನೋ ಕಚ್ಚಿತು.ಶಿಷ್ಯರು ಬೆಳಕಿನ ಸಹಾಯದಿಂದ ಕಚ್ಚಿದ ವಸ್ತುವನ್ನು ಹುಡುಕಾಡಿದರು.ಏನೂ ಸಿಗದಿದ್ದರೂ ಕಚ್ಚಿದ ವಸ್ತು ಸರ್ಪವೆಂದು ಎಲ್ಲರಿಗೂ ಖಚಿತತೆಯಿತ್ತು.ಶಿಷ್ಯಂದಿರು ಗರಬಡಿದವರಂತೆ ನಿಂತಿರುವಾಗ ಮಹಾನುಭಾವರು ಅವರನ್ನು ಸಮಾಧಾನ ಪಡಿಸುತ್ತಾ ಹೇಳಿದರು.

" _ಅದು_ _ಅದರ_ _ಪಾಡಿಗೆ_ _ಹೋಗಲಿ_. _ನಾವು_ _ನಮ್ಮ_ _ಪಾಡಿಗೆ_ _ಹೋಗೋಣ_."

ಅದೇ ದಾರಿಯಲ್ಲಿ ಮರಳಿ ಬರುವಾಗ ಸ್ವಲ್ಪ ದೂರದಲ್ಲಿ ಸರ್ಪವೊಂದು ಸತ್ತು ಬಿದ್ದಿತ್ತು. ಕಠಿಣ ವಿಷವಿರುವ ಸರ್ಪವಾಗಿತ್ತದು.ಆ ಸರ್ಪ ಕಚ್ಚಿದರೆ ಎಂಟು ಹೆಜ್ಜೆ ಹಾಕುವುದಕ್ಕಿಂತ ಮುಂಚಿತವಾಗಿಯೇ ಶವವಾಗುತ್ತಾರೆಂದು ನಂಬಲ್ಪಡುವ ಸರ್ಪವಾಗಿತ್ತದು.ಸತ್ತು ಬಿದ್ದು ಸ್ವಲ್ಪ ಸಮಯ ಮಾತ್ರವಾಯಿತು ಎಂದು ಯಾರೋ ಹೇಳಿದಾಗ ಶಿಷ್ಯಂದಿರಿಗೆ ಏನೋ ಒಂದು ಅವ್ಯಕ್ತ ಭಯವು ಮಿಂಚಿ ಮಾಯವಾಯಿತು.ಉಸ್ತಾದರಿಗೆ ಕಚ್ಚಿದ ಹಾವು ಈ ಹಾವು ಆಗಿದ್ದರೆ ಉಸ್ತಾದರ ಗತಿಯೇನು ? ಎಂದು ಚಿಂತಿಸತೊಡಗಿದರು.ಇದೆಲ್ಲವನ್ನೂ ಗಮನಿಸುತ್ತಿದ್ದ ಖುತುಬಿ ಮುಹಮ್ಮದ್ ಮುಸ್ಲಿಯಾರ್ ಹೇಳಿದರು.

" _ನಾವು_ _ಆಗ_ _ಈ_ _ದಾರಿಯಲ್ಲಿ_ _ಹೋಗುವಾಗ_ _ನನಗೆ_ _ಕಚ್ಚಿದ_ _ಸರ್ಪವದು_. _ಸಾಮಾನ್ಯವಾಗಿ_ _ಹಾವಿನ_ _ವಿಷವು_ _ಮನುಷ್ಯರಿಗೆ_ _ತಗುಲುತ್ತೆ_. _ಇಲ್ಲಿ_ _ನನ್ನ_ _ವಿಷವು_ _ಹಾವಿಗೆ_ _ತಗುಲಿದೆ_. _ಆ_ _ಕಾರಣದಿಂದ_ _ಹಾವು_ _ಸತ್ತು_ _ಬಿದ್ದಿದೆ_. _ನನಗೇನೂ_ _ಸಂಭವಿಸಲೂ_ _ಇಲ್ಲ_. _ಕಾರಣ_ ,  _ನಾನಿವತ್ತೂ_ _*ಹದ್ದಾದ್*_ _ಓದಿರುವೆ_. _ಹದ್ದಾದನ್ನು_ _ನಿತ್ಯ_ _ರೂಡಿ_ _ಮಾಡಿದವನು_ _ಯಾವ_ _ವಸ್ತುವಿನಿಂದಲೂ_ _ತೊಂದರೆ_ _ಉಂಟಾಗದು_."

ಅನೇಕ ಶ್ರೇಷ್ಠತೆಯಿರುವ ದಿಕ್ರ್'ಗಳಿರುವ ಮಸೀದಿಯಲ್ಲಿ ನಡೆಯುವ ಹದ್ದಾದ್ ರಾತೀಬಿನಲ್ಲಿ ಭಾಗವಹಿಸಿದರೆ ದಿಕ್ರ್ ಮಜ್ಲಿಸಿನಲ್ಲಿ ಭಾಗವಹಿಸಿದ ಪುಣ್ಯವನ್ನು ಸಂಪಾದಿಸಬಹುದು.ದಿಕ್ರ್ ಮಜ್ಲಿಸಿನಲ್ಲಿ ಭಾಗವಹಿಸಿದವರ ಪಾಪಗಳನ್ನು ಕ್ಷಮಿಸಲಾಗುವುದೆಂದು ಇಮಾಮ್ ಮುಸ್ಲಿಂ ವರದಿ ಮಾಡಿದ ಹದೀಸಿನಲ್ಲಿದೆ.

ಹದ್ದಾದ್ ರಾತೀಬ್'ನಲ್ಲಿ ಇರುವ ಒಂದು ಪ್ರಮುಖ ದಿಕ್ರ್ ಆಗಿದೆಇದು👇�

*اعوذ بكلمات الله� التامات من شر ما خلق*

ಈ ದಿಕ್ರನ್ನು ಒಬ್ಬನು ಬೆಳಗ್ಗೆ ಹೇಳಿದರೆ ಸಂಜೆ ತನಕ,ಸಂಜೆ ಹೇಳಿದರೆ ಬೆಳಗಿನ ತನಕ ಅವನಿಗೆ ವಿಷಭಾದೆ ತಟ್ಟದು ಎಂಬ ಹದೀಸ್ ವಚನವಿದೆ.

_ಹದ್ದಾದ್_ _ರಾತೀಬನ್ನು_ _ನಿತ್ಯರೂಡಿ_ _ಮಾಡಲು_ _ಅಲ್ಲಾಹು_ _ನಮಗೆ_ _ತೌಫೀಕ್_ _ನೀಡಲಿ_... _ಆಮೀನ್_

*اللهم صل علي محمد وعلي اله وصحبه وسلم*

✍� *PM ಪಾಲ್ತಾಡು*
🌿🌿🌿🌿🌿🌿🌿🌿

Comments

Br.Taslim said…
117) Haddad majlis in Islam? ಇಸ್ಲಾಂನಲ್ಲಿ ಹದ್ದಾದ್ ಮಜ್ಲಿಸ್?
http://brtaslim.com/wp-content/uploads/2016/02/0577e72d27e1ba3771290ab0b9a59dd7.mp3

PLEASE SUBSCRIBE, CLICK🔔 & FOLLOW MY BLOG
░▒▓█🌐Br. Taslim█▓▒░
لا تنسوني من صالح دعائكم
🌺🌺🌺🌺🌺🌺🌺🌺
BLOG: https://brtaslim.blogspot.com
FCBOOK: https://www.facebook.com/groups/1037573722952731/
WEB: https://brtaslim.com

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...