Skip to main content

*ಝಿಯಾರತ್ ಕೇಂದ್ರ:* ➖➖➖➖➖➖➖➖➖ ☪3⃣9⃣☪ ➖➖➖➖➖➖➖➖➖ *​ತಝವಾ ಮುಹಮ್ಮದ್ ಕುಂಞಿ ಮುಸ್ಲಿಯಾರ್ (ನ:ಮ)​* *​ತಝವಾ, ಕರುನಾಗಪ್ಪಳ್ಳಿ,*​ *​ಕೊಲ್ಲಂ ಜಿಲ್ಲೆ.​*

*ಝಿಯಾರತ್ ಕೇಂದ್ರ:*
➖➖➖➖➖➖➖➖➖
       ☪3⃣9⃣☪
➖➖➖➖➖➖➖➖➖
*​ತಝವಾ ಮುಹಮ್ಮದ್ ಕುಂಞಿ ಮುಸ್ಲಿಯಾರ್ (ನ:ಮ)​* *​ತಝವಾ, ಕರುನಾಗಪ್ಪಳ್ಳಿ,*​
*​ಕೊಲ್ಲಂ ಜಿಲ್ಲೆ.​*
🔹🔹🔹🔹🔹🔹🔹🔹🔹
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
〰〰〰〰〰〰〰〰〰
✍ _ಗಫೂರ್ ಬಾಯಾರ್_
〰〰〰〰〰〰〰〰〰
🕌 ವೈಜ್ಞಾನಿಕ ರಂಗದಲ್ಲೂ ಆತ್ಮೀಯ ಲೋಕದಲ್ಲೂ ಅತ್ಯುನ್ನತಿಗೆ ತಲುಪಿದ ಈ ಮಹಾನರ ಜೀವನ ಶೈಲಿ ಉಳಿದವರಿಗಿಂತ ವಿಭಿನ್ನವಾಗಿತ್ತು.

ತಝವಾ ಉಸ್ತಾದ್ (ನ:ಮ)ರವರು ಐಹಿಕ ಪರಿತ್ಯಾಗಿಯಾದ ಮಹಾನ್  ವಿದ್ವಾಂಸ ಮೇಧಾವಿಯಾಗಿದ್ದರು.

*"ಅಲ್ ಮವಾಹಿಬುಲ್ ಜಲಿಯ್ಯ"* ಎಂಬ ವಿಶ್ವವಿಖ್ಯಾತ ಕಾವ್ಯದ ಸಾಲುಗಳನ್ನು ಹಲವಾರು ವಿದ್ವಾಂಸರು ತಮ್ಮ ಪ್ರಭಾಷಣಗಳಲ್ಲಿ ಆಲಾಪಿಸುತ್ತಾರೆ. ಪ್ರಭಾಷಣಗಾರರ ಪ್ರಭಾಷಣ ವೇದಿಕೆಗಳಲ್ಲಿ ಇಂದಿಗೂ ವ್ಯಾಪಕವಾಗಿ ಚರ್ಚಿಸುವ ಕಾವ್ಯ ರಚನೆಯಾಗಿದೆ ಇದು.

ಆತ್ಮೀಯ ಸಂತೃಪ್ತಿ ಲಭಿಸುವ ರೀತಿಯಲ್ಲಿ ವಿವಿಧ ವಿಷಯಗಳಲ್ಲಿ ಪೋಣಿಸಲ್ಪಟ್ಟ ತಝವಾ ಉಸ್ತಾದ್ (ನ:ಮ)ರವರ ಅಲ್ ಮವಾಹಿಬುಲ್ ಜಲಿಯ್ಯದ ಸಾಲುಗಳನ್ನು ಕೇಳದವರು ಅತೀ ವಿರಳ.

ಅದರ ಒಂದೆರಡು ಸಾಲುಗಳು
ಈ ರೀತಿ ಇದೆ👇😰

*ಕಬರೆನ್ನ್ ಕೇಟ್ಟಾಲ್ ತಲ್'ಕ್ಷಣಂ ಞೆಟ್ಟೇಂಡದಾ..*
*ಕಂಡಾಲ್ ಉಡನ್ ವಾವಿಟ್ಟ್  ನಿ ಕರಯೇಂಡದಾ...*

*ಮೇಡಕ್ಕ್ ಪಗರಮ್ ಮಾಳಮಾ ಸುಬ್'ಹಾನಾ..*
*ರಬ್ಬೀ ಅದಿಲ್ ಕೆಡಕ್ಕೇಂಡದಾ ಅಝ್'ಮಾನಾ..*

_*ಈ ಕಾವ್ಯವು ಎಷ್ಟೊಂದು ಅರ್ಥಪೂರ್ಣ...!*_

*ಕಬ್'ರೆಂದು ಕೇಳಿದರೆ ತಕ್ಷಣ ನೀನು ಬೆಚ್ಚಿ ಬೀಳಬೇಕು..*
*ಅದನ್ನು ಕಂಡ ಕೂಡಲೇ ನೀನು ಪಶ್ಚಾತ್ತಾಪದಿಂದ  ಗಟ್ಟಿಯಾಗಿ ಅಳಬೇಕು..*

*ನಿನ್ನ ಕೋಣೆಗೆ ಬದಲಾಗಿ ಬರಿ ಒಂದು ಗುಂಡಿಯಾಗಿದೆ ಅದು..*
*ಅಂತ್ಯ ದಿನದ ತನಕ ನೀನಲ್ಲಿ ಮಲಗಲೇಬೇಕು...*
🔹🔹🔹🔹🔹🔹🔹

ಜೀವನಾಂತ್ಯದವರೆಗೆ ಆತ್ಮೀಯ ಪರಿಶುದ್ಧತೆಯಿಂದ ಜೀವಿಸಿದ ಮಹಾನುಭಾವರು ತನಗೆ ಬೇಕಾಗಿ ಸ್ವತಃ ಖಬರ್ ತೋಡಿದ್ದರು.

*ಇಸ್ಲಾಮಿನ ಮಾದರಿ ಮಹಿಳೆ ಬೀವಿ ನಫೀಸತುಲ್ ಮಿಸ್ರಿಯ್ಯ (ರ) ರವರು ತನಗಾಗಿ ಖಬರ್ ತೋಡಿ ಅದರಲ್ಲಿ ಕುಳಿತು 2000 ಬಾರಿ ಖುರ್'ಆನ್ ಖತಂ ಪಾರಾಯಣ ಮಾಡಿ ಮುಗಿಸಿದ ಚರಿತ್ರೆಯನ್ನು ಅನುಸ್ಮರಿಸುವ ಆತ್ಮೀಯ ಶೈಲಿಯನ್ನಾಗಿತ್ತು ತಝವಾ ಉಸ್ತಾದ್ (ನ:ಮ)ರವರು ಕೂಡ ಅನುಸರಿಸಿರುವುದು.*

ಪ್ರಸಿದ್ಧ ಆತ್ಮೀಯ ಭಾಷಣಗಾರರೂ ಆದ ಉಸ್ತಾದರ ಜ್ಞಾನಸಿದ್ಧಿಯು ಅಪಾರವಾಗಿತ್ತು.
*ಲಾ ಹೌಲ*ದ ಇಜಾಝತ್  ಪರಂಪರಾಗತವಾಗಿ ಲಭಿಸಿದ ಮಹಾನರು, ಯೋಗ್ಯರಾದವರಿಗೆ ಅದರ ಇಜಾಝತ್ ನೀಡುತ್ತಿದ್ದರು.

*ದಾರಿ:* ಕರುನಾಗಪ್ಪಳ್ಳಿ ನಗರದ ಪುದಿಯಕಾವ್ ಜಂಕ್ಷನ್'ನಿಂದ ಕೆಳಗಡೆ ಸಂಚರಿಸಿದರೆ ತಝವಾ SRP ಮಾರ್ಕೆಟಿನ ಪಕ್ಕದಲ್ಲಿರುವ ಮಸೀದಿಯ ಪಕ್ಕದಲ್ಲೇ ಮಹಾನರು ಅಂತ್ಯ ವಿಶ್ರಾಂತಿಗೊಳ್ಳುತ್ತಿರುವ ಮಖ್ಬರವಿದೆ.

✍ಗಫೂರ್ ಬಾಯಾರ್
⚠⚠⚠⚠⚠⚠⚠

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...