ಖಬರ್ ಎತ್ತರಿಸುವುದು ಮತ್ತು ಎತ್ತರಿಸಿ ಕಟ್ಟುವುದು ಬೇರೆ ಬೇರೆ ಕಾರ್ಯಗಳಾಗಿವೆ.ಉದಾಹರಣೆಗೆ ಖಬರ್ ತೋಡಿದ ಮಣ್ಣನ್ನು ಅದರ ಮೇಲೆ ಹಾಕಿದಾಗ ಅದು ಒಂದು ಅಂಗುಲಕ್ಕಿಂತಲೂ ಹೆಚ್ಚಾಯಿತು ಎಂದಿಟ್ಟು ಕೊಳ್ಳೋಣ.ಹಾಗಿದ್ದರೆ ಅದರ ಕುರಿತು ಎತ್ತರಿಸಲಾಯಿತು ಎಂದು ಮಾತ್ರ ಹೇಳಬಹುದಲ್ಲದೆ ಎತ್ತರಿಸಿ ಕಟ್ಟಲಾಯಿತು ಎಂದು ಹೇಳಲು ಸಾಧ್ಯವಿಲ್ಲ.ಏಕೆಂದರೆ ಅಲ್ಲಿ ಕಟ್ಟುವಿಕೆ ಎಂಬ ಪ್ರಕ್ರಿಯೆ ನಡೆದಿಲ್ಲ.ಆದ್ದರಿಂದ ಇವರೆಡರ ಮಧ್ಯೆಯಿರುವ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕಾಗಿದೆ.
ಇನ್ನು ಒಬ್ಬ ಸಾಮಾನ್ಯ ಮುಸ್ಲಿಮನ ಖಬರನ್ನು ಎಷ್ಟರವರೆಗೆ ಎತ್ತರಿಸಬೇಕು ಎಂಬುವುದನ್ನು ಇಸ್ಲಾಮ್ ನಿರ್ದೇಶಿಸಿದೆ.ಫತ್ ಹುಲ್ ಮುಈನಿನಲ್ಲಿ ಹೇಳುವುದನ್ನು ನೋಡಿ. " ಖಬರನ್ನು ಒಂದು ಅಂಗುಲ ಎತ್ತರಿಸಬೇಕಾಗಿದೆ." ಫತ್ ಹುಲ್ ಮುಈನ್ , 154 )
ಈ ಆಶಯವನ್ನು ಇತರ ಎಲ್ಲಾ ಫಿಖ್ಹೀ ಗ್ರಂಥಗಳಲ್ಲೂ ಕಾಣಬಹುದು.
ಇನ್ನು ಇದಕ್ಕಿಂತ ಹೆಚ್ಚು ಎತ್ತರಿಸುವುದಾದರೆ ಅದು ಕರಾಹತ್ ಮಾತ್ರ ವಾಗಿದೆ.
ಶಿರ್ಕೋ , ಹರಾಮೋ ಅಲ್ಲ.ಬಹು ! ಇಮಾಮ್ ಅಲಿಯ್ಯುಶ್ಶಿಬ್ ರಾ ಮಲ್ಲಿಸಿ ರಳಿಯಲ್ಲಾಹು ಅನ್ಹು ಈ ಕಾರ್ಯವನ್ನು ಸ್ಪಷ್ಟಪಡಿಸಿದ್ದಾರೆ.ಹರಾಮ್ ಅಥವಾ ಶಿರ್ಕ್ ಎಂದು ಜಗತ್ತಿನ ಒಬ್ಬನೇ ಒಬ್ಬ ವಿಧ್ವಾಂಸರೂ ಹೇಳಿಲ್ಲ.ಆದರೆ ಇಸ್ಲಾಮಿನ ಕುರಿತು ಬಾಲ ಪಾಠವೂ ಇಲ್ಲದ ಸೊಳಪಿ - ಜಮ ಬಾಳಂಗೋಚಿಗಳು ಅದು ಶಿರ್ಕೆಂದು ಬೊಬ್ಬಿಡುತ್ತಿದ್ದಾರೆ.ಇವರಿಗದು ಎಲ್ಲಿಂದ ಸಿಕ್ಕಿತೋ ಅಲ್ಲಾಹನೇ ಬಲ್ಲ! ಬಹುಷ ಇಬ್ಲೀಸನ ಗ್ರಂಥದಿಂದಾಗಿರಲೂ ಬಹುದು.
ಇನ್ನು ಈ ಸೊಳಪಿಗಳಲ್ಲಿ ಎರಡು ಪ್ರಶ್ನೆಗಳು.
1.ಖಬರನ್ನು ಒಂದು ಅಂಗುಲಕ್ಕಿಂತ ಹೆಚ್ಚು ಎತ್ತರಿಸುವುದು ಹರಾಮ್ ಅಥವಾ ಶಿರ್ಕ್ ಎಂದು ಹೇಳುವ ಯಾವುದೇ ಒಂದು ಆಯತ್ ಅಥವಾ ಹದೀಸನ್ನು ತೋರಿಸಿಕೊಡಬಹುದೇ?
2.ಪೂರ್ವಿಕ ವಿಧ್ವಾಂಸರಲ್ಲಿ ಯಾರಾದರೊಬ್ಬರು ಅದು ಹರಾಮ್ ಅಥವಾ ಶಿರ್ಕ್ ಎಂದು ಹೇಳಿದ್ದಾಗಿ ತೋರಿಸಿಕೊಡಬಹುದೇ?
ಖಬರ್ ಕಟ್ಟುವುದು:
ಕಲ್ಲು , ಇಟ್ಟಿಗೆಗಳ ಮೂಲಕ ಗಾರೆ ಹಾಕಿ ಖಬರನ್ನು ಕಟ್ಟುವುದರ ವಿಧಿಯೇನೆಂಬುವುದನ್ನು ಪರಿಶೀಲಿಸುವುದಕ್ಕಿಂತ ಮುಂಚಿತವಾಗಿ ಅದರ ಹಲವು ರೂಪಗಳನ್ನು ತಿಳಿದು ಕೊಳ್ಳೋಣ.
1.ಸಾಮಾನ್ಯ ವ್ಯಕ್ತಿಯ ಖಬರನ್ನು ಸ್ವಂತ ಭೂಮಿಯಲ್ಲಿ ಕಟ್ಟುವುದು.
2.ಸಾಮನ್ಯ ವ್ಯಕ್ತಿಯ ಖಬರನ್ನು ಮೌಖೂಫ್ ( ದಫನ ಮಾಡಲು ವಖಫ್ ಮಾಡಲ್ಪಟ್ಟ ಭೂಮಿ)
ಆದ ಸ್ಥಳದಲ್ಲಿ ಕಟ್ಟುವುದು.
3.ಸಾಮಾನ್ಯ ವ್ಯಕ್ತಿಯ ಖಬರನ್ನು ಮುಸಬ್ಬಲತ್ ( ಒಂದು ಊರಿನ ಜನತೆಯ ದಫನ್ ಮಾಡುತ್ತಾ ಬಂದ ಪ್ರತ್ಯೇಕ ಭೂಮಿ) ಆದ ಭೂಮಿಯಲ್ಲಿ ದಫನ್ ಮಾಡುವುದು.
4.ಮಹಾ ಪುರುಷರ ಖಬರನ್ನು ಕಟ್ಟುವುದು.
ಇದರಲ್ಲಿ ಒಂದನೆಯದರ ವಿಧಿ ಅಂದರೆ ಸಾಮಾನ್ಯ ವ್ಯಕ್ತಿಯ ಖಬರನ್ನು ಸ್ವಂತ ಭೂಮಿಯಲ್ಲಿ ಕಟ್ಟುವುದು ಕರಾಹತ್ ಆಗಿದೆ.ಅದಕ್ಕಿರುವ ಕಾರಣ ಅದು ಅನಪೇಕ್ಷಿತವಾಗಿ ಸೌಂಧರ್ಯ ಹಾಗೂ ಜಂಭತನವನ್ನು ಸೂಚಿಸುತ್ತದೆ ಎಂಬುವುದಾಗಿದೆ.ಬಹು! ಇಮಾಮ್ ಶಾಫೀ ರಲಿಯಲ್ಲಾಹು ಅನ್ಹು ರವರು ಹೇಳುತ್ತಾರೆ,
" ಖಬರ್ ಕಟ್ಟುವಿಕೆ ಹಾಗೂ ಅದಕ್ಕೆ ಹುಡಿಸುಣ್ಣ ಹಾಕಿ ಬಿಲುಪುಗೊಳಿಸುವುದನ್ನು ನಾನು ಇಷ್ಟಪಡುವುದಿಲ್ಲ.ಏಕೆಂದರೆ ಅದು ಅನಪೇಕ್ಷಿತ ಸೌಂಧರ್ಯ ಹಾಗೂ ಜಂಭತನವನ್ನು ಹೋಲುತ್ತದೆ."
( ಕಿತಾಬುಲ್ ಇಮ್ಮ್ 316 /1)
ಇದೇ ಆಶಯವನ್ನು ಇತರ ಹಲವಾರು ಗ್ರಂಥಗಳಲ್ಲಿ ಕಾಣಬಹುದು.
ಬಹು ಮಾನ್ಯರಾದ ಇಮಾಮ್ ಝೈನುದ್ದೀನ್ ಮಖ್ದೂಂ ರಳಿಯಲ್ಲಾಹು ಅನ್ಹು ಹೇಳುತಾರೆ ,
" ಖಬರಿನೊಳಗೆ ಅಥವಾ ಮೇಲೆ ಕಟ್ಟುವುದು ಕರಾಹತ್ ಆಗಿದೆ. ( ಫತ್ ಹುಲ್ ಮುಈನ್ 154)
ಇಮಾಮ್ ನವವೀ ರಲಿಯಲ್ಲಾಹು ಅನ್ಹು ಹೇಳುತ್ತಾರೆ,
" ಖಬರಿಗೆ ಹುಡಿಸುಣ್ಣ ಹಾಕಿ ಬಿಳುಪುಗೊಳಿಸುವುದು ಮತ್ತು ಅದರ ಮೇಲೆ ಕಟ್ಟುವುದು ಕರಾಹತ್ ಆಗಿದೆ.(
ತುಹ್ಫಾ 196 /3)
ಅದೇ ರೀತಿ ನಿಹಾಯ 34/ 3 , ಶರ್ಖಾವಿ 345 / 1 , ಬುಜೈರಿಮಿ 263 / 2 , ಫತ್ ಹುಲ್ ಅಲ್ಲಾಂ 2883 / 3 , ಮುಂತಾದ ಸರ್ವ ಗ್ರಂಥಗಳಲ್ಲೂ ಕಾಣಬಹುದು.
ಈ ವಿವರಣೆಯಿಂದ ಎರಡು ಮುಖ್ಯ ಕಾರ್ಯಗಳು ಇಲ್ಲಿ ಸರಿಯಾಗಿ ತಿಳಿದು ಕೊಳ್ಳಬೇಕಾಗಿದೆ.
1.ಸಾಮಾನ್ಯ ವ್ಯಕ್ತಿಯ ಖಬರನ್ನು ಎತ್ತರಿಸಿ ಕಟ್ಟುವುದರ ವಿಧಿ ಸ್ವಂತ ಭೂಮಿಯಲ್ಲಾಗಿದ್ದರೆ ಕರಾಹತ್ ಮಾತ್ರವಾಗಿದೆ.ಶಿರ್ಕೋ , ಕುಫ್ರೋ , ಹರಾಮೋ ಅಲ್ಲ.
ಆದ್ದರಿಂದ ಖಬರ್ ಎತ್ತರಿಸಿ ಕಟ್ಟುವುದು ಶಿರ್ಕ್ , ಕುಫ್ರ್ , ಹರಾಮ್ ಎಂದು ಲಾಗ ಹಾಕುವುದು ವಹ್ಹಾಬಿ ಹಾಗೂ ಜಮ ಮೌಲವಿಗಳ ಕಾಪಟ್ಯವಾಗಿದೆ.
2. ಈ ಎತ್ತರಿಸಿ ಕಟ್ಟುವಿಕೆಯು ಖಬರ್ ಆರಾಧನೆಯೆಂದು ಅವರ್ಯಾರು ಹೇಳಿಲ್ಲ.ಹಾಗಿದ್ದರೆ ಅದು ಕುಫ್ರ್ ಆಗಬೇಕಿತ್ತು.ಅವರು ಹೇಳಿದ್ದು ಕೇವಲ ಕರಾಹತ್ ಎಂದು ಮಾತ್ರವಾಗಿದೆ.ಕರಾಹತ್ ಎಂದರೆ ಶಿಕ್ಷೆ ಇಲ್ಲದ್ದೂ ಉಪೇಕ್ಷಿಸಿದರೆ ಪುಣ್ಯ ಇರುವಂತದ್ದೂ ಆಗಿದೆ. ಈ ಎತ್ತರಿಸಿ ಕಟ್ಟುವಿಕೆಯು ಕರಾಹತ್ ಆಗಲು ಅವರು ಹೇಳಿದ ಕಾರಣವೇನೆಂದರೆ ಅದು ಜಂಭತನ ಹಾಗೂ ಅನಪೇಕ್ಷಿತ ಸೌಂಧರ್ಯವನ್ನು ಸೂಚಿಸುತ್ತದೆ ಎಂಬುವುದು ಮಾತ್ರವಾಗಿದೆ.ಹೊರತು ಖಬರ್ ಆರಾಧನೆ ಎಂದು ಅಲ್ಲ.ಆದ್ದರಿಂದ ಇಲ್ಲೂ ಕೂಡಾ ಮೌಲವಿಗಳ ಕಾಪಟ್ಯವನ್ನು ಜನ ಸಾಮಾನ್ಯರು ತಿಳಿದು ಕೊಳ್ಳಬೇಕಾಗಿದೆ.ಇವಿಷ್ಟು ಸಾಮಾನ್ಯ ವ್ಯಕ್ತಿಯ ಖಬರನ್ನು ಆತನ ಸ್ವಂತ ಭೂಮಿಯಲ್ಲಿ ಎತ್ತರಿಸಿ ಕಟ್ಟುವುದರ ವಿಷಯವಾಗಿದೆ.
ಇಲ್ಲಿ ವಹ್ಹಾಬೀ ಪಾದ್ರಿಗಳೊಂದಿಗೆ ಕೆಲವು ಪ್ರಶ್ನೆಗಳು...
1.
ಸಾಮಾನ್ಯ ವ್ಯಕ್ತಿಯ ಖಬರಿನ ಕುರಿತಾದರೂ ಸಹ ಸ್ವಂತ ಭೂಮಿಯಲ್ಲಿ ಅದನ್ನು ಎತ್ತರಿಸಿ ಕಟ್ಟುವುದು ಶಿರ್ಕೆಂದು ತಿಳಿಸುವ ಯಾವುದಾದರೊಂದು ಸೂಕ್ತ ಅಥವಾ ಹದೀಸನ್ನು ತಿಳಿಸಲು ಸಾಧ್ಯವಿದೆಯೇ?
2.
ಪೂರ್ವೀಕ ವಿದ್ವಾಂಸರು ಅದು ಶಿರ್ಕೆಂದು ಹೇಳಿದ್ದಾಗಿ ತೋರಿಸಬಹುದೇ?
3.
ಖಬರನ್ನು ಎತ್ತರಿಸಿ ಕಟ್ಟುವುದು ಖಬರ್ ಆರಾಧನೆ ಎಂದು ಯಾವುದಾದರೂಂದು ಸೂಕ್ತ ಅಥವಾ ಹದೀಸ್ ನಲ್ಲಿ ಇದೆಯೇ?
ಇನ್ನು ಎರಡು ಮತ್ತು ಮೂರನೇ ರೂಪದಲ್ಲಿ ತಿಳಿಸಲಾದ ಅಂದರೆ ಮೌಖೂಫ್ ಅಥವಾ ಮುಸಬ್ಬಲ್ ಆದ ಭೂಮಿಯಲ್ಲಿ ಸಾಮಾನ್ಯ ವ್ಯಕ್ತಿಯ ಖಬರನ್ನು ಎತ್ತರಿಸಿ ಕಟ್ಟುವುದರ ಕುರಿತು ಪರಿಶೀಲಿಸೋಣ.
ಬಹು! ಇಮಾಮ್ ಝೈನುದ್ದೀನ್ ಮಖ್ದೂಂ ರಳಿಯಲ್ಲಾಹು ಅನ್ಹು ರವರು ಹೇಳುತ್ತಾರೆ.
ಕಟ್ಟುವಿಕೆಯು ಕರಾಹತ್ ಎಂದು ಹೇಳಿದ್ದು ಸ್ವಂತ ಭೂಮಿಯಲ್ಲಾಗಿದ್ದರೆ ಮಾತ್ರವಾಗಿದೆ.ಇನ್ನು ಮುಸಬ್ಬಲ ಅಥವಾ ಮೌಖೂಫ್ ಆದ ಭೂಮಿಯಲ್ಲಾಗಿದ್ದರೆ ಅಲ್ಲಿ ಹರಾಮ್ ಆಗಿದೆ. ಮಾತ್ರವಲ್ಲ ಅದನ್ನು ಕೆಡವುದು ಕಡ್ಡಾಯವಾಗಿದೆ.ಏಕೆಂದರೆ ಖಬರಿನಲ್ಲಿರುವ ಮಯ್ಯಿತ್ ಜೀರ್ಣಿಸಿದರೆ ಅಲ್ಲಿ ಇತರರನ್ನು ದಫನ ಮಾಡಬಹುದಾಗಿದೆ.ಆದರೆ ಖಬರ್ ಕಟ್ಟಿದರೆ ಅದು ಶಾಶ್ವತವಾಗಿ ಉಳಿಯುತ್ತದೆ.ಆಗ ಯಾವುದೇ ಅವಶ್ಯಕತೆ ಇಲ್ಲದ ಒಂದು ಕಾರ್ಯದ ಮೂಲಕ ಇತರ ಮುಸ್ಲಿಮರನ್ನು ಅಲ್ಲಿ ದಫನ ಮಾಡುವುದರಿಂದ ತಡೆಯಲಾಗುತ್ತದೆ.
( ಫತ್ ಹುಲ್ ಮುಈನ್ 155)
ಖಬರಿನಲ್ಲಿ ದಫನ್ ಮಾಡಲಾದ ಮಯ್ಯಿತ್ ಜೀರ್ಣಿಸಿದರೆ ಅದರಲ್ಲಿ ಇತರರನ್ನು ದಫನ್ ಮಾಡಬಹುದಾಗಿದೆ.ಆದರೆ ಅದರ ಮೇಲೆ ಗಾರೆ ಹಾಕಿ ಭದ್ರವಾಗಿ ಕಟ್ಟಿದರೆ ಈ ಸೌಕರ್ಯವು ನಷ್ಟ ಹೊಂದುತ್ತದೆ.ಇದರಿಂದ ಇತರ ಮುಸ್ಲಿಮರನ್ನು ಅದರಲ್ಲಿ ದಫನ್ ಮಾಡಲು ಅಸಾಧ್ಯವಾಗುತ್ತದೆ.
ಆದ್ದರಿಂದ ಎಲ್ಲರಿಗೂ ಅವಕಾಶವಿರುವ ಮೌಖೂಫ್ ಅಥವಾ ಮುಸಬ್ಬಲ್ ಆದ ಭೂಮಿಯಲ್ಲಿ ಈ ರೀತಿ ಸಾಮಾನ್ಯರ ಖಬರನ್ನು ಕಟ್ಟುವುದರಿಂದ ಇತರರ ಅವಕಾಶವನ್ನು ನಿಷೇದಿಸಲಾಗುತ್ತದೆ.ಯಾರಾದರೂ ಹಾಗೆ ಕಟ್ಟಿದರೆ ಅದನ್ನು ಕೆಡುವುದು ಕಡ್ಡಾಯವಾಗಿದೆ.ಇದಾಗಿದೆ ಇಮಾಮ್ ಝೈನುದ್ದೀನ್ ಮಖ್ದೂಂ ರವರು ತಿಳಿಸಿದುದರ ಚುಟುಕು.
ಇದೇ ವಿಷಯವನ್ನು ಇಮಾಮ್ ಇಬ್ನ್ ಹಜರ್ ರಳಿಯಲ್ಲಾಹು ಅನ್ಹು ತನ್ನ ತುಹ್ಫಾ 196/ 3 ರಲ್ಲೂ ವಿವರಿಸಿದ್ದಾರೆ.
ಒಟ್ಟಿನಲ್ಲಿ ಮೌಖೂಫ್ ಅಥವಾ ಮುಸಬ್ಬಲತ್ ಆದ ಭೂಮಿಯಲ್ಲಿ ಸಾಮಾನ್ಯ ವ್ಯಕ್ತಿಯ ಖಬರನ್ನು ಎತ್ತರಿಸಿ ಕಟ್ಟುವುದು ನಿಷಿದ್ಧವೆಂದಾಗಿದೆ ಇಮಾಮರುಗಳು ಹೇಳಿದ್ದು.ಅದಕ್ಕೆ ಅವರು ನೀಡಿದ ಕಾರಣ ಅದು ಖಬರ್ ಆರಾಧನೆ ಎಂದಲ್ಲ.ಹೊರತು ಅದರಿಂದ ಇತರರನ್ನು ಆ ಖಬರಿನಲ್ಲಿ ದಫನ ಮಾಡುವುದಕ್ಕೆ ಅಡ್ಡಿಯುಂಟಾಗುತ್ತದೆ ಎಂದಾಗಿದೆ.ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೇನೆಂದರೆ ದಫನ್ ಗಾಗಿ ವಖಫ್ ಮಾಡಲ್ಪಟ್ಟ ಅಥವಾ ಮುಸಬ್ಬಲ್ ಆದ ಭೂಮಿಯಲ್ಲಿ ಸಾಮನ್ಯರ ಖಬರನ್ನು ಎತ್ತರಿಸಿ ಕಟ್ಟುವುದು ಮಾತ್ರವಲ್ಲ ನಿಷಿದ್ಧವಾಗುವುದು, ಹೊರತು ಅಲ್ಲಿ ಮದ್ರಸಾ , ಅಂಗಡಿ ಹಾಗೂ ಇನ್ನಿತರ ಕಟ್ಟಡಗಳನ್ನೂ ಕೂಡಾ ನಿರ್ಮಿಸುವುದು ನಿಷಿದ್ಧವಾಗಿದೆ.
ಇಲ್ಲೂ ಕೂಡಾ ಸಲಪಿಗಳೊಂದಿಗೆ ಒಂದೆರಡು ಪ್ರಶ್ನೆಗಳು.
1.
ಮೌಖೂಫ್ ಅಥವಾ ಮುಸಬ್ಬಲತ್ ಆದ ಭೂಮಿಯಲ್ಲಿ ಖಬರ್ ಕಟ್ಟುವುದು ಖಬರ್ ಆರಾಧನೆ ಎಂದು ಯಾವುದೇ ಪೂರ್ವೀಕ ವಿಧ್ವಾಂಸರು ಹೇಳಿದ್ದಾರೆಯೇ?
2.
ಅದು ಶಿರ್ಕೆಂದು ತಿಳಿಸುವ ಯಾವುದಾದರೊಂದು ಸೂಕ್ತ ಅಥವಾ ಹದೀಸ್ ತೋರಿಸಿ ಕೊಡಬಹುದೇ?
ಇದುವರೆಗೆ ಸಾಮಾನ್ಯ ವ್ಯಕ್ತಿಯ ಖಬರನ್ನು ಆತನ ಸ್ವಂತ ಭೂಮಿಯಲ್ಲೂ , ಮೌಖೂಫ್ ಆದ ಅಥವಾ ಸಾರ್ವಜನಿಕ ಭೂಮಿಯಲ್ಲೂ ಕಟ್ಟುವುದರ ಕುರಿತು ತಿಳಿದು ಕೊಂಡಾಯಿತು.
ಇನ್ನು ನಾಲ್ಕನೆಯದಾಗಿ ತಿಳಿಸಿದ ಮಹಾಪುರುಷರ ಖಬರ್ ಗಳ ಕುರಿತು ಪರಿಶೀಲಿಸೋಣ.
ಸಾಮಾನ್ಯ ವ್ಯಕ್ತಿಯ ಖಬರನ್ನು ಸಾರ್ವಜನಿಕ ದಫನ್ ಭೂಮಿಯಲ್ಲಿ ಕಟ್ಟುವುದು ನಿಷಿದ್ಧವೆಂದು ಹೇಳಿದ ವಿಧ್ವಾಂಸರು ಮಹಾ ಪುರುಷರ ಖಬರನ್ನು ಎತ್ತರಿಸಿ ಕಟ್ಟಬಹುದೆಂದು ತಮ್ಮ ಗ್ರಂಥಗಳಲ್ಲಿ ಸ್ಪಷ್ಟಪಡಿಸಿದ್ದಾರೆ.
ಇಮಾಮ್ ಶರ್ಖಾವೀ ರಳಿಯಲ್ಲಾಹು ಅನ್ಹು ಹೇಳುವುದನ್ನು ನೋಡಿ.
" ಸಾರ್ವಜನಿಕ ದಫನ್ ಭೂಮಿಯಲ್ಲಿ ಕಟ್ಟುವಿಕೆ ಹರಾಮ್ ಎಂಬ ನಿಯಮದಿಂದ ಅಂಬಿಯಾಗಳು , ಅವ್ ಲಿಯಾಗಳು ಮುಂತಾದ ಸಜ್ಜನರ ಖಬ್ ರ್ ಗಳನ್ನು ಹೊರತು ಪಡಿಸಲಾಗಿದೆ.
ಅದ್ದರಿಂದ ಝಿಯಾರತ್ ಜೀವಂತ ಗೊಳಿಸಲಿಕ್ಕೂ ಬರ್ಕತ್ ಗಾಗಿಯೂ ಅವರ ಖಬರ್ ಗಳನ್ನು ಎತ್ತರಿಸಿ ಕಟ್ಟಬಹುದಾಗಿದೆ.
( ಶರ್ಖಾವೀ 345 / 1)
ಇಮಾಮ್ ಬುಜೈರಿಮಿ ರಲಿಯಲ್ಲಾಹು ಅನ್ಹು ಹೇಳುತ್ತಾರೆ,
" ಸಜ್ಜನರ ಸಮಾಧಿಗಳನ್ನು ಕಟ್ಟುವುದು ಅನುವದನೀಯವಾಗಿದೆ.ಅದು ಖುಬ್ಬ ನಿರ್ಮಿಸಿಯಾದರೂ ತೊಂದರೆಯಿಲ್ಲ.ಅದಕ್ಕಿರುವ ಕಾರಣ ಝಿಯಾರತನ್ನು ಜೀವಂತಗೊಳಿಸುವುದು ಮತ್ತು ಬರ್ಕತ್ ಸಂಪಾದಿಸುವುದೂ ಆಗಿದೆ.
( ಇಖ್ ನಾಅ್ 263 / 2)
ಇಮಾಮ್ ಬುಜೈರಿಮಿಯವರೇ ಹೇಳುತ್ತಾರೆ,
" ಮೌಖೂಫ್ ಆದ ದಫನ್ ಭೂಮಿಯಲ್ಲಿ ಕಟ್ಟುವಿಕೆ ನಿಷಿದ್ಧವೆಂದು ಹೇಳಿದ್ದು ಸಜ್ಜನರ ಖಬ್ ರಗಳ ಕುರಿತಲ್ಲ.
( ಬುಜೈರಿಮಿ 496 / 1)
ಇದೇ ವಿಷಯವನ್ನು ಹಾಶಿಯತುಲ್ ಬರ್ಮಾವೀ , ಪುಟ 116 ರಲ್ಲೂ , ಬಾಜೂರಿ 267 / ರಲ್ಲೂ, ಫತ್ ಹುಲ ಅಲ್ಲಾಂ 288/ 3 , ಮಶಾರಿಖುಲ್ ಅನ್ವಾರ್ 32 ರಲ್ಲೂ ಕಾಣಬಹುದು.
ಇಮಾಮ್ ತೌರಬಶ್ತಿ ರಲಿಯಲ್ಲಾಹು ಅನ್ಹು ಹೇಳುತ್ತಾರೆ, " ಅವ್ ಲಿಯಾಗಳ ಹಾಗೂ ಪ್ರಸಿದ್ಧರಾದ ಖಬರಿನ ಮೇಲೆ ಕಟ್ಟಡ ನಿರ್ಮಿಸುವುದನ್ನು ಸಲಫ್ ಅಥವಾ ಸ್ವಹಾಬಿಗಳು ಅನುಮತಿಸಿದ್ದರು.ಅದು ಜನರು ಅವರನ್ನು ಸಂದರ್ಶಿಸಲಿಕ್ಕೂ ಹಾಗೂ ಅವರ ಬಳಿ ಮನಶ್ಶಾಂತಿ ಪಡೆಯಲಿಕ್ಕೂ ಆಗಿದೆ.( ಮಿರ್ಖಾತ್ 372/ 2)
ಅದೇ ರೀತಿ ಫತ್ ಹುಲ್ ಅಲ್ಲಾಂ 228 / 1 ,
ಹಾಶಿಯತುಲ್ ಬಾಜೂರಿ 267 /1 , ಹಾಶಿಯತುಲ್ ಬರ್ಮಾವೀ 116 , ಹಾಶಿಯತುಲ್ ಖಲ್ ಯೂಬಿ
350 / 1 ಮುಂತಾದ ಗ್ರಂಥಗಳಲ್ಲಿ ಕಾಣಬಹುದು.
Comments