Skip to main content

ಮೆಹಂದಿ ಮತ್ತು ವುಳೂ...



    ಮೆಹಂದಿ ಮತ್ತು ವುಳೂ...

   ಕೈಗೆ ಹಚ್ಚಿದರೆ ಬಳಿಕ ಸಿಪ್ಪೆ ಎಳೆದು ಬರುವ, ಶಾಪ್ ನಲ್ಲಿ ಸಿಗುವ ಕೋನ್ ಮೆಹಂದಿಯನ್ನು ಹಚ್ಚಬಹುದೇ..? ಇದು ಸ್ನಾನ ಮತ್ತು ವುಳೂಇನ ಸಿಂಧುತ್ವಕ್ಕೆ ಅಡ್ಡಿಯಾಗಬಹುದೇ..? ಸರಿಯಾಗಿ ಈ ಬಗ್ಗೆ ಮಾಹಿತಿ ನೀಡುವಿರಾ...?

➡ ವುಳೂಇನ ಅಂಗಾಂಗಗಳಲ್ಲಿ ನೀರಿನ ಸ್ಪರ್ಶವನ್ನು ತಡೆಯುವ ವಸ್ತುಗಳು ಇಲ್ಲದಿರುವುದು ವುಳೂಇನ ನಿಬಂಧನೆಯಾಗಿದೆ. ಪೈಂಟು, ಕ್ಯೂಟೆಕ್ಸು ಮುಂತಾದ ವಸ್ತುಗಳನ್ನು ಇದಕ್ಕೆ ಉದಾಹರಿಸಬಹುದು. ಇವು ವುಳೂವಿನ ಅಂಗಗಳಲ್ಲಿದ್ದರೆ ಒಳಗಿನ ಚರ್ಮಕ್ಕೆ ನೀರು ಸ್ಪರ್ಶವಾಗುವುದಿಲ್ಲ. ಆದ್ದರಿಂದಲೇ ಪೈಂಟು ತಾಗಿದರೆ ಸೀಮೆ ಎಣ್ಣೆಯಂತಹಾ ವಸ್ತುಗಳನ್ನು ಬಳಸಿ ಅದನ್ನು ನಿವಾರಿಸಿ ವುಳೂ ಮಾಡಬೇಕು.

      ಮದುವೆಯಾದ ಮಹಿಳೆಯರಿಗೆ ಮೆಹಂದಿ ಹಚ್ಚುವುದು ಸುನ್ನತ್ತಿದೆ. ಕೈಗಳಿಗೆ ಮೆಹಂದಿ ಹಚ್ಚಿ ಬಳಿಕ ತೊಳೆದರೆ ಮೆಹಂದಿಯಲ್ಲಿರುವ ಬಣ್ಣವು ಚರ್ಮದಲ್ಲಿ ಉಳಿಯುತ್ತದೆ. ಈ ಬಣ್ಣವೂ ಚರ್ಮಕ್ಕೆ ನೀರು ಸ್ಪರ್ಶವಾಗುವುದನ್ನು ತಡೆಯುವುದಿಲ್ಲ. ಆದರೆ ಕೆಮಿಕಲ್ ಗಳನ್ನು ಬೆರೆಸಲಾದ ಕೆಲವು ಕೃತಕ ಮೆಹಂದಿಗಳು ಚರ್ಮಕ್ಕೆ ಬಣ್ಣವನ್ನು ನೀಡುವ ಬದಲು ತೆಳುವಾದ ಪೊರೆಯು ಚರ್ಮದ ಮೇಲೆ ಅಂಟಿಕೊಳ್ಳುವಂತೆ ಮಾಡಿಬಿಡುತ್ತವೆ. ಈ ಮೆಹಂದಿ ಹಚ್ಚಿ ಬಳಿಕ ಉಗುರಿನಲ್ಲಿ ಕೆರೆಯುವಾಗ ಈ ಪೊರೆಯೂ ಸಿಪ್ಪೆಯಂತೆ ಕಳಚಿ ಬರುತ್ತದೆ. ಇದರಿಂದ ಈ ಮೆಹಂದಿ ಚರ್ಮದ ಬಣ್ಣ ಬದಲಾವಣೆ ಮಾಡಿದ್ದಲ್ಲವೆಂದೂ ಬದಲಾಗಿ ಚರ್ಮಕ್ಕೆ ಒಂದು ಪೊರೆಯನ್ನು ಅಂಟಿಸಿಬಿಟ್ಟಿದೆಯೆಂದೂ ತಿಳಿಯಬಹುದು. ಇಂತಹಾ ತೆಳು ಪೊರೆಗಳು ಅಂಗಾಂಗಗಳಿಗೆ ನೀರು ಸ್ಪರ್ಶವಾಗಲು ಬಿಡುವುದಿಲ್ಲ. ಆದ್ದರಿಂದ ಇಂತಹಾ ಮೆಹಂದಿಯನ್ನು ಹಚ್ಚಿದ್ದಲ್ಲಿ ವುಳೂ ಹಾಗೂ ಸ್ನಾನಗಳು ಸಿಂಧುವಾಗುವುದಿಲ್ಲ.
➖➖➖➖➖➖➖➖➖➖➖

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...