Skip to main content

ಪರಿಶ್ರಮವಿಲ್ಲದೆ ಅಲ್ಲಾಹನಾಗಿ ಲಾಭದಾಯಕ ವ್ಯಾಪಾರ

ಪರಿಶ್ರಮವಿಲ್ಲದೆ ಅಲ್ಲಾಹನಾಗಿ ಲಾಭದಾಯಕ ವ್ಯಾಪಾರ

*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 553499119


▪ *ವಿಶ್ವ ವಿಖ್ಯಾತ* ಪಂಡಿತ ಇಮಾಮ್ *ಅಸ್‌ಮ‌ಈ* (ರ) ರವರು (ಹಿಜ್‌ರಾ 121 - 216) ಒಂದು ದಾರಿಯಾಗಿ ಹೋಗುತ್ತಿರುವಾಗ ಒಬ್ಬಳು ಕೆಲಸದಾಳು ಒಂದು ಬುಟ್ಟಿ ತುಂಬಾ ದಾಳಿಂಬೆ ಹಣ್ಣನ್ನು ತಲೆಯಲ್ಲಿ ಹೊತ್ತುಕೊಂಡು ಹೋಗುತ್ತಿದ್ದಳು.
   ▪ *ಆ ದಾರಿಯಾಗಿ* ಹೋಗುತ್ತಿದ್ದ ಒಬ್ಬ ಯುವಕ ಆ ಬಡಪಾಯಿ ಮಹಿಳೆಯ ಹಿಂದಿನಿಂದ ಹೋಗಿ ದಾಳಿಂಬೆ ಬುಟ್ಟಿಯಿಂದ ಒಂದು ದಾಳಿಂಬೆಯನ್ನು ಕದ್ದು ತೆಗೆದನು. ಇಮಾಮ್ ಅಸ್‌ಮ‌ಈ (ರ) ರವರು ಈ ಕದ್ದ ದಾಳಿಂಬೆಯನ್ನು ಈತ ಏನು ಮಾಡುತ್ತಾನೆಂದು ನೋಡಲು ಅವನ ಹಿಂದಿನಿಂದ ಹೋದರು. ಸ್ವಲ್ಪ ಮುಂದೆ ಸಾಗಿದಾಗ ಯುವಕನು ಅದನ್ನು ಒಬ್ಬ ಭಿಕ್ಷುಕನಿಗೆ ಕೊಟ್ಟನು.
   ▪ *ಇಮಾಮ್‌ರವರು* ಅವನಲ್ಲಿ ಕೇಳಿದರು. *"ಏನಿದು ಅವಸ್ಥೆ..? ನಾನು ಭಾವಿಸಿದ್ದು ನಿನಗೆ ಹಸಿವಿಗೆ ತಿನ್ನಲಿಕ್ಕೆ ಆಗಿರಬಹುದು ಎಂದು. ಆದರೆ ನೀನು ಇದನ್ನು ಬೇರೊಬ್ಬರಿಗೆ ದಾನ ಮಾಡಿದಿ. ಇದು ಬಹಳ ಅದ್ಭುತವಾದ ಒಂದು ಸಂಗತಿ"*  ಆಗ ಆತ ಹೇಳಿದ. *"ಇಮಾಮರೇ., ನೀವು ಯಾವ ಯುಗದಲ್ಲಿ ಇದ್ದೀರಿ..? ನಾನು ಯಾವುದೇ ಪರಿಶ್ರಮವಿಲ್ಲದೆ ಅಲ್ಲಾಹನಾಗಿ ಒಂದು ಲಾಭದಾಯಕ ವ್ಯಾಪಾರ ಮಾಡಿದ್ದು. ಕುಳಿತಲ್ಲಿಗೇ ಪ್ರತಿಫಲ."*
   ▪ *ಇಮಾಮರು* ಕೇಳಿದರು. *"ಅದೇನು ಅಂತಹಾ ಲಾಭದಾಯಕ ವ್ಯಾಪಾರ..? ವಿವರಿಸಿ ಕೊಡುತ್ತಿಯಾ..?"* ಆಗ ಆತ ಹೇಳಿದ. *"ನಾನು ಒಂದು ದಾಳಿಂಬೆ ಕದ್ದು ತೆಗೆದ ಕಾರಣಕ್ಕೆ ನನ್ನ ಖಾತೆಯಲ್ಲಿ ಒಂದು ತಪ್ಪು ಅಥವಾ ದೋಷ ಸೇರ್ಪಡೆ ಆಯಿತು. ನಂತರ ನಾನು ಅದನ್ನು ದಾನ ಮಾಡಿದಾಗ ಒಂದು ದಾನಕ್ಕೆ ಹತ್ತು ಪ್ರತಿಫಲ ಇರುವುದರಿಂದ ನನ್ನ ಖಾತೆಗೆ ಹತ್ತು ಪ್ರತಿಫಲ (ಸವಾಬ್) ಬಂತು. ಆಗ ಮೊದಲಿನ ತಪ್ಪಿನ ಖಾತೆಯಲ್ಲಿದ್ದ ತಪ್ಪಿಗೆ ಬದಲಾಗಿ ಒಂದು ಪ್ರತಿಫಲ ಮಾಯ (ಡಿಲೀಟ್) ಆಗುವುದಾದರೂ   ಒಂಬತ್ತು ಇದೆಯಲ್ವಾ..? ಹೇಗಿದೆ ವ್ಯಾಪಾರ..?"*
   ▪ *ಯುವಕನ* ವಿವರಣೆಯಿಂದ ಕೋಪಗೊಂಡ ಇಮಾಮರು *"ಹೇ.. ಮೂರ್ಖ.. ನೀನು ಒಂದು ತಪ್ಪು ಮಾಡಿದಾಗ ಅದಕ್ಕೆ ಒಂದು ದೋಷ ಸೇರ್ಪಡೆಯಾಯಿತು. ಆದರೆ ನೀನು ಕದ್ದು ತೆಗೆದು ಕೊಟ್ಟದ್ದಕ್ಕೆ ಯಾವುದೇ ಪ್ರತಿಫಲ ಇಲ್ಲ. ನೀನೀಗ ಮಲಿನವಾದ ಮೂತ್ರದಲ್ಲಿ ಬಟ್ಟೆ ತೊಳೆಯುವಂತಹಾ ಕೆಲಸವನ್ನು ಮಾಡಿದಿಯಷ್ಟೆ."* ಎಂದು ಹೇಳಿ ಅಲ್ಲಿಂದ ಹೋದರು.

ಸಂಗ್ರಹ; *ಖಸಸ್ ವ ಇಬರ್* ಎಂಬ ಗ್ರಂಥದಿಂದ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...