Skip to main content

ದೂರು ಕೊಡಲು ಹೋದವನ ಮೇಲೆ ಕೇಸು ದಾಖಲು

ದೂರು ಕೊಡಲು ಹೋದವನ ಮೇಲೆ ಕೇಸು ದಾಖಲು

*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 553499119


   ▪ *ಖಲೀಫಾ* ಉಮರ್ (ರ) ರ ಆಡಳಿತ ಕಾಲದಲ್ಲಿ ಒಬ್ಬ ಬಡಪಾಯಿಯು ಖಲೀಫರ ಸನ್ನಿಧಿಗೆ ಬಂದು ಹೇಳಿದನು. *"ಖಲೀಫರೇ.., ನನ್ನ ಮಗನ ಸ್ವಭಾವ ಮತ್ತು ಗುಣ ನಡತೆ ಸರಿ ಇಲ್ಲ. ತಂದೆ ತಾಯಿಗಳಿಗೆ ಗೌರವ ಕೊಡುವುದಿಲ್ಲ. ನಾವು ಹೇಳಿದಂತೆ ಕೇಳುವುದಿಲ್ಲ. ಹೇಳಿದ ಯಾವ ಕೆಲಸವನ್ನು ಕೂಡ ಮಾಡುವುದಿಲ್ಲ. ಯಾವ ಕೆಲಸಕ್ಕೆ ಹೋಗುವುದಿಲ್ಲ."*
   ▪  *ಕೂಡಲೇ* ಖಲೀಫರು ಅವನ ಮಗನನ್ನು ತನ್ನ ಸನ್ನಿಧಿಗೆ ಹಾಜರುಪಡಿಸಿ ತಂದೆ ತಾಯಿಗಳ ಗೌರವ ಮತ್ತು ಅವರಿಗೆ ಇಸ್ಲಾಮಿನಲ್ಲಿರುವ ಬೆಲೆಯ ಬಗ್ಗೆ ಸವಿಸ್ತಾರವಾಗಿ ಅವನಿಗೆ ವಿವರಿಸಿ ಕೊಟ್ಟರು. ಖಲೀಫರ ಉಪದೇಶವನ್ನು ಚೆನ್ನಾಗಿ ಆಲಿಸಿದ ಆ ಬಾಲಕನು ಕೊನೆಗೆ ಖಲೀಫರಲ್ಲಿ ಕೇಳಿದನು. *"ಖಲೀಫರೇ.., ಹಾಗಾದರೆ ತಂದೆಯಾದ ಒಬ್ಬರಿಗೆ ಮಕ್ಕಳಿಗೆ ಬೇಕಾಗಿ ಮಾಡಬೇಕಾದ ಕರ್ತವ್ಯ ಏನೂ ಇಲ್ಲವೇ.."*  ಖಲೀಫರು ಹೇಳಿದರು. *"ಖಂಡಿತವಾಗಿ ಇದೆ"*  ಆಗ ಆ ಹುಡುಗ ಹೇಳಿದನು. *"ಹಾಗಾದರೆ ಅದೇನೆಂದು ನನಗೆ ಒಂದು ಸವಿಸ್ತಾರವಾಗಿ ವಿವರಿಸಿ ಕೊಡುವಿರೇ ಖಲೀಫರೇ..?"*
   ▪ *ಹಝ್ರತ್* ಉಮರ್ (ರ) ರವರು ಹೇಳಿದರು. *"ಮೊದಲಾಗಿ ಹುಟ್ಟಿದ ಕೂಡಲೇ ಒಂದು ಒಳ್ಳೆಯ ಹೆಸರು ಇಡಬೇಕು. ನಂತರ ವಿವೇಕ ಪ್ರಾಯ ತಲುಪುವಾಗ ಇಸ್ಲಾಮಿನ ಬಗ್ಗೆ ಕಲಿಸಿ ಕೊಡಬೇಕು. ಮದ್ರಸಕ್ಕೆ ದಾಖಲು ಮಾಡಬೇಕು ಇತ್ಯಾದಿ..ಇತ್ಯಾದಿ.. "* ಆಗ ಆ ಹುಡುಗ ಹೇಳಿದ  "ಇವರು ನನ್ನನ್ನು ಹುಟ್ಟಿಸಿದ್ದೇ ವಿನಾ ಪ್ರಾರಂಭದ ಕರ್ತವ್ಯವಾದ ಒಂದು ಒಳ್ಳೆಯ ಹೆಸರು ಕೂಡ ನನಗೆ ಇಡಲಿಲ್ಲ. ನನ್ನ ಹೆಸರು *ಜುಅ್‌ಲ್.* (ಜೀರುಂಡೆ, ಕುರುಡಕ್ಕೆ) ನನಗೆ ಇಟ್ಟ ಈ ಹೆಸರನ್ನು ಯಾರಾದರೂ ಹೆಸರು ಕೇಳಿದರೆ ಹೇಳಲಿಕ್ಕೆ ನಾಚಿಕೆಯಾಗುತ್ತದೆ. ಸಹಪಾಠಿಗಳು ಹೆಸರು ಕರೆದು ನನ್ನನ್ನು ತಮಾಷೆ ಮಾಡುತ್ತಾರೆ. ಅಂತೆಯೇ ನಾನು ನನ್ನ ಜನ್ಮದಲ್ಲಿ ಮದ್ರಸದ ಮೆಟ್ಟಲು ಹತ್ತಲಿಲ್ಲ. ತಂದೆಯಾದ ಇವರು ಕುರ್‌ಆನಿನ ಒಂದು ಅಕ್ಷರ ಕೂಡ ನನಗೆ ಈ ತನಕ ಕಲಿಸಿ ಕೊಡಲಿಲ್ಲ."
   ▪ *ಸಾಧು* ಹುಡುಗನಿಂದ ಇದನ್ನು ಕೇಳಿದಾಕ್ಷಣ ಖಲೀಫರು ಆತನ ತಂದೆಯತ್ತ ತಿರುಗಿ ನಿಂತು *"ನೀನಾ ಮಗನ ಗುಣ ನಡತೆ ಸರಿ ಇಲ್ಲ ಎಂದು ಹೇಳಿ ದೂರು ತೆಗೆದುಕೊಂಡು ನನ್ನ ಹತ್ತಿರ ಬಂದದ್ದು..? ಅನುಸರಣೆ ಇಲ್ಲದ್ದು ಅವನಿಗಲ್ಲ ನಿನಗೆ. ಅವನ ಕುರಿತು ಆಕ್ಷೇಪಣೆ ಮಾಡುವ ಅಧಿಕಾರ ನಿನಗೇನಿದೆ..? ನಿನಗೆ ನಾಚಿಕೆ ಆಗುವುದಿಲ್ಲವೇ..? ಇಸ್ಲಾಮಿನ ಬಗ್ಗೆ ಒಂದಕ್ಷರ ಕೂಡ ಕಲಿಯದ ಆತ ನಿನಗೆ ಹೇಗೆ ಗೌರವ ಕೊಡಲು ಕಲಿಯುವುದು..? ಹೋಗು ಇಲ್ಲಿಂದ. ಮೊದಲಾಗಿ ಮಗನಿಗೆ ಏನಾದರು ಕಲಿಸಿ ಕೊಡು"* ಎಂದು ಹೇಳಿ ಆತನನ್ನು ಅಲ್ಲಿಂದ ಓಡಿಸಿದರು.

ಸಂಗ್ರಹ ; ಇಮಾಮ್ ಬಿನ್ ಅಲ್ ಖಯ್ಯಿಮ್ ಅಲ್ ಜವ್‌ಝಿಯವರ *ಬಿರ್ ಅಲ್ ವಾಲಿದಯಿನ್* ಎಂಬ ಗ್ರಂಥ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...