ಮನೆಯಲ್ಲಿಯೇ ಇರಿ
*ಘಟನೆ - 1*
ಉಮರ್(ರ.ಅ)ರ ಆಳ್ವಿಕೆಯ ಕಾಲ. ಸೈನ್ಯದ ಕಮಾಂಡರ್ ಅಬೂ ಉಬೈದಾ(ರ.ಅ) ಬೈತುಲ್ ಮುಖದ್ದಸ್ ವಿಜಯದ ನಂತರ ಶಾಮ್ ನಲ್ಲಿ ಪರ್ಯಟನೆ ಮಾಡುತ್ತಿದ್ದಾಗ ಅಲ್ಲಿ ಪ್ಲೇಗ್ ರೋಗ ಹರಡಿತು.
ಅಬೂ ಉಬೈದಾ(ರ.ಅ) ಸೈನ್ಯದಲ್ಲಿ ತುಂಬಾ ಅನಿವಾರ್ಯ ವೈಕ್ತಿಯಾಗಿದ್ದರು.ಮುಂದಿನ ವಿಜಯಕ್ಕೆ ಅವರ ಅಗತ್ಯವಿತ್ತು.
ಹೇಗಾದರೂ ಮದೀನಾಕ್ಕೆ ಮರಳಬೇಕೆಂದು ಉಮರ್(ರ.ಅ) ಒತ್ತಾಯಿಸಿದರು.
ಉಮರ್(ರ.ಅ)ರ ಆಳ್ವಿಕೆಯ ಕಾಲ. ಸೈನ್ಯದ ಕಮಾಂಡರ್ ಅಬೂ ಉಬೈದಾ(ರ.ಅ) ಬೈತುಲ್ ಮುಖದ್ದಸ್ ವಿಜಯದ ನಂತರ ಶಾಮ್ ನಲ್ಲಿ ಪರ್ಯಟನೆ ಮಾಡುತ್ತಿದ್ದಾಗ ಅಲ್ಲಿ ಪ್ಲೇಗ್ ರೋಗ ಹರಡಿತು.
ಅಬೂ ಉಬೈದಾ(ರ.ಅ) ಸೈನ್ಯದಲ್ಲಿ ತುಂಬಾ ಅನಿವಾರ್ಯ ವೈಕ್ತಿಯಾಗಿದ್ದರು.ಮುಂದಿನ ವಿಜಯಕ್ಕೆ ಅವರ ಅಗತ್ಯವಿತ್ತು.
ಹೇಗಾದರೂ ಮದೀನಾಕ್ಕೆ ಮರಳಬೇಕೆಂದು ಉಮರ್(ರ.ಅ) ಒತ್ತಾಯಿಸಿದರು.
*ಆದರೆ ಸಾಂಕ್ರಾಮಿಕ ಕಾಯಿಲೆಯ ಸಂದರ್ಭದಲ್ಲಿ ಯಾವ ನಿಲುವು ತೆಗೆದುಕೊಳ್ಳಬೇಕೇಂದು ಪ್ರವಾದಿವರ್ಯ ﷺ ರಿಂದ ಕಲಿತಿದ್ದ ಅಬೂ ಉಬೈದಾ(ರ.ಅ) ಅಲ್ಲಿಯೇ ಕುಳಿತು ಕೊಳ್ಳುವ ದಿಟ್ಟ ನಿರ್ಧಾರ ಕೈಗೊಂಡರು*. .
*ಯಾವುದೇ ಪ್ರದೇಶದಲ್ಲಿ ಪ್ಲೇಗ್ ಹರಡಿದ್ದು ನಿಮಗೆ ತಿಳಿದರೆ ನೀವು ಅಲ್ಲಿಗೆ ಹೋಗ ಬಾರದು. ನೀವು ವಾಸಿಸುವ ಸ್ಥಳದಲ್ಲಿ ಪ್ಲೇಗ್ ಹರಡಿದರೆ ನೀವು ಅಲ್ಲಿಂದ ಹೊರ ಹೋಗಲೂ ಬಾರದು."* .
ಸಾರ್ವಜನಿಕ ಸಂಪರ್ಕ ತಡೆಯ (Health courantain) ಕುರಿತ ಈ ಅಧಿಕೃತ ವಚನದ ಮಹತ್ವ ಮನಗಂಡ ಅಬೂ ಉಬೈದಾ(ರ.ಅ) ಸ್ವಯಂ-ಸಂಪರ್ಕ ತಡೆಯಲು ಹಾಗೂ ತನ್ನನ್ನು ತಾನೇ ತಡೆಯಲು ಇಚ್ಛಿಸಿದರು. ಈ ಸಮಯದಲ್ಲಿ ನಾನು ಮದೀನಾಕ್ಕೆ ಪಯಣಿಸಿದರೆ ನನ್ನ ಕಾರಣ ಈ ರೋಗ ಇತರರಿಗೆ ಹರಡುತ್ತದೆ " ಎಂದು ಅವರು ಸ್ವತಃ ಮನವರಿಕೆ ಮಾಡಿಕೊಂಡರು.
ಸಾರ್ವಜನಿಕ ಸಂಪರ್ಕ ತಡೆಯ (Health courantain) ಕುರಿತ ಈ ಅಧಿಕೃತ ವಚನದ ಮಹತ್ವ ಮನಗಂಡ ಅಬೂ ಉಬೈದಾ(ರ.ಅ) ಸ್ವಯಂ-ಸಂಪರ್ಕ ತಡೆಯಲು ಹಾಗೂ ತನ್ನನ್ನು ತಾನೇ ತಡೆಯಲು ಇಚ್ಛಿಸಿದರು. ಈ ಸಮಯದಲ್ಲಿ ನಾನು ಮದೀನಾಕ್ಕೆ ಪಯಣಿಸಿದರೆ ನನ್ನ ಕಾರಣ ಈ ರೋಗ ಇತರರಿಗೆ ಹರಡುತ್ತದೆ " ಎಂದು ಅವರು ಸ್ವತಃ ಮನವರಿಕೆ ಮಾಡಿಕೊಂಡರು.
ಕೊನೆಗೆ ಸೈನಿಕನಾಗಿ ಮತ್ತು ನಾಯಕನಾಗಿ ಅನೇಕ ಯುದ್ಧಗಳನ್ನು ಮಾಡಿದ ಕೆಚ್ಚೆದೆಯ ಧೀರೋದಾತ್ತ ಸೈನಿಕ ಅಬೂ ಉಬೈದಾ(ರ.ಅ) ಪ್ಲೇಗ್ ಎಂಬ ಈ ಮಹಾಮಾರಿಗೆ ಬಲಿಯಾಗಿ ಶಹೀದ್ ಆದರು.
*ಈ ಘಟನೆ ವಿವರಿಸಿದ ಉದ್ದೇಶ ಇಷ್ಟೇ.*
ಸಾಂಕ್ರಮಿಕ ರೋಗ ಹರಡುವ ಸಂದರ್ಭದಲ್ಲಿ ನಾವು ಸರಕಾರದ, ವೈದ್ಯರ, ಅರೋಗ್ಯ ಇಲಾಖೆಯ , ಕಾನೂನು ಪಾಲಕರ ಸಲಹೆ, ಸೂಚನೆಗಳನ್ನು ಪಾಲಿಸಬೇಕು. ಮಾತ್ರವಲ್ಲ ಅದು ಧಾರ್ಮಿಕ ಕರ್ತವ್ಯ ಕೂಡ.
ಇದನ್ನು ಉಲ್ಲಂಘಿಸುವುದು ಸಮಾಜಕ್ಕೆ, ದೇಶಕ್ಕೆ ಹಾಗೂ ಧರ್ಮಕ್ಕೆ ಮಾಡುವ ದ್ರೋಹ.
ಸಾಂಕ್ರಮಿಕ ರೋಗ ಹರಡುವ ಸಂದರ್ಭದಲ್ಲಿ ನಾವು ಸರಕಾರದ, ವೈದ್ಯರ, ಅರೋಗ್ಯ ಇಲಾಖೆಯ , ಕಾನೂನು ಪಾಲಕರ ಸಲಹೆ, ಸೂಚನೆಗಳನ್ನು ಪಾಲಿಸಬೇಕು. ಮಾತ್ರವಲ್ಲ ಅದು ಧಾರ್ಮಿಕ ಕರ್ತವ್ಯ ಕೂಡ.
ಇದನ್ನು ಉಲ್ಲಂಘಿಸುವುದು ಸಮಾಜಕ್ಕೆ, ದೇಶಕ್ಕೆ ಹಾಗೂ ಧರ್ಮಕ್ಕೆ ಮಾಡುವ ದ್ರೋಹ.
*ಎಂ ಎಂ ಸಖಾಫಿ*
Comments