ತೈಮೂರ್ನ ಸೈನ್ಯ ಬಗ್ದಾದ್ಗೆ ದಾಳಿ ನಡೆಸಿತ್ತು. ಮಾಂಗೋಲಿಯನ್ನರ ನಂತರ ಮುಸ್ಲಿಂ ಜಗತ್ತಿಗೆ ತೀವ್ರ ರೀತಿಯ ಸಂಕಟ ಎದುರಾದ ಸಂಧರ್ಭವದು. ಮುಸ್ಲಿಂ ರಾಷ್ಟ್ರಗಳಾದ ಸಿರಿಯಾ, ಇರಾಕ್, ಫೆಲೆಸ್ತೀನ್ ಮುಂತಾದ ರಾಷ್ಟ್ರಗಳನ್ನು ಆಗಲೇ ತನ್ನ ತಹಬಂಧಿಯೊಳಗಿಟ್ಟ ನೈಶಾಟ್ಯ ಸೈನ್ಯದ ತಾಂಡವಕ್ಕೆ ಆ ರಾಷ್ಟ್ರಗಳ ಇಸ್ಲಾಮೀ ಚಾರಿತ್ರಿಕ ಸ್ಮಾರಕಗಳು ಧರಾಶಾಹಿಯಾಗಿದ್ದವು. ಬಗ್ದಾದ್ನ ಸರಹದ್ದುಗಳಲ್ಲಿ ತೈಮೂರ್ನ ಸೈನ್ಯ ವಕ್ಕರಿಸಿದಾಗ ಬಗ್ದಾದ್ನ ಕೋಟೆಯೊಳಗೆ ಮುಸ್ಲಿಮರನ್ನು ಸೇರಿಸಿ ಬಾಗಿಲು ಭಧ್ರಪಡಿಸಲಾಗಿತ್ತು. ಬಗ್ದಾದ್ ನಿವಾಸಿಗಳು ಮಿಕ್ಕ ಮಂದಿಯೂ ವಿದ್ಯಾರ್ಥಿಗಳಾಗಿದ್ದರೆ, ಉಳಿದವರು ಅಧ್ಯಾಪಕರು, ಕೃಷಿಕರೂ ಆಗಿದ್ದರು. ತೈಮೂರ್ನ ಬೃಹತ್ ಸೈನ್ಯವನ್ನು ಎದುರಿಸುವಷ್ಟು ಜನಬಲ, ಮತ್ತು ಸೇನೆ ಬಗ್ದಾದಿನಲ್ಲಿರಲಿಲ್ಲ. ಆದ್ದರಿಂದಲೇ ಬಗ್ದಾದ್ನ ಕೋಟೆಯೊಳಗಿನಿಂದ ಯಾವುದೇ ಕಾರಣಕ್ಕೂ ಹೊರಹೋಗಬಾರದೆಂದು ಖಲೀಫಾ ತನ್ನ ಪ್ರಜೆಗಳಿಗೆ ಅಪ್ಪಣೆ ಹೊರಡಿಸಿದ್ದರು.
ಬಗ್ದಾದ್ಗೆ ತಲುಪುತ್ತಿದ್ದಂತೆ ಖ್ಯಾತ ಭೂಗೋಳ ಶಾಸ್ತ್ರಜ್ಞ, ಇತಿಹಾಸಕಾರ ಅಬ್ದುರ್ರಹ್ಮಾನ್ ಇಬ್ನು ಖಲ್ದೂನ್ ಅರಮನೆಯಲ್ಲಿದ್ದಾರೆಂಬ ಸುಳಿವು ತೈಮೂರ್ನಿಗೆ ಸಿಕ್ಕಿತು. ಖಲ್ದೂನ್ ಆ ಕಾಲಕ್ಕೆ ವಿಶ್ವ ಮಟ್ಟದಲ್ಲಿ ಖ್ಯಾತ ವೆತ್ತ ಬಗ್ದಾದ್ ಮೂಲದ ವಿಜ್ಞಾನಿ ಯಾಗಿದ್ದರು. ಖಲ್ದೂನ್ರು ತನ್ನನ್ನು ಭೇಟಿಯಾದರೆ ತಾನು ಬಗ್ದಾದ್ ಬಿಟ್ಟು ಮರಳುತ್ತೇನೆಂದು ಖಲೀಫಾ ರಿಗೆ ತೈಮೂರ್ ಪತ್ರ ಬರೆದ.
ಸಾಮ್ರಾಜ್ಯ ವ್ಯಾಪ್ತಿಯ ಹಪಹಪಿ ಹೊಂದಿರುವ ಬರ್ಬರಿಯನ್ ದೊರೆ ತೈಮೂರ್ ತುಂಡು ಭೂಮಿಯ ಮೇಲೆ ಕಣ್ಣಿಟ್ಟ ಧೂರ್ತ. ಆದ್ದರಿಂದಲೇ ಆತ ಕೋಟೆಯ ಬಾಗಿಲು ತೆರೆಯಲು ನಡೆಸಿದ ತಂತ್ರವಿದೆಂದು ಖಲೀಫಾ ಭಾವಿಸಿದರು. ಕೋಟೆಯೊಳಗಿದ್ದ ಖಲ್ದೂನ್ರು ಬಾಗಿಲ ಮೂಲಕ ಹೊರಹೋಗುತ್ತಿದ್ದಂತೆ ತನ್ನ ಸೈನ್ಯವನ್ನು ಕೋಟೆಯೊಳಗೆ ನುಗ್ಗಿಸಿ ಆಕ್ರಮಣ ನಡೆಸುವುದಾಗಿರಬಹುದು ತೈಮೂರ್ನ ಸೂತ್ರವೆಂದು ಖಲೀಫಾ ಆಲೋಚಿಸಿದರು. 'ತಾನು ತೈಮೂರ್ನನ್ನು ಭೇಟಿ ನೀಡಿದರೆ ಆತನ ಸೇನೆಯಿಂದ ಬಗ್ದಾದ್ ಸುರಕ್ಷಿತವಾಗುವುದಾದರೆ ಅದು ತನಗೆ ಸಂತೋಷದ ವಿಚಾರ'ವೆಂದು ಹೊರಟೇ ನಿಂತರು ಖಲ್ದೂನ್. ಆದರೆ ಅಪಾಯ ಎದುರಾಗುವ ಸಾಧ್ಯತೆಯಿರುವುದರಿಂದ ಕೋಟೆಯ ಬಾಗಿಲನ್ನು ತೆರೆಯಲು ಖಲೀಫಾ ನಿರಾಕರಿಸಿದರು. ಅರಮನೆಯೊಳಗಿನ ಮೇಲ್ಛಾವಣಿ ಯನ್ನು ತೆರೆದು ಒಂದು ಏಣಿಯ ಮೂಲಕ ಇಳಿದ ಖಲ್ದೂನ್, ಕೋಟೆಯೊಳಗಿನಿಂದ ತೈಮೂರ್ನತ್ತ ತೆರಳಿದರು. ಅಸಂಖ್ಯ ಗ್ರಂಥಗಳ ಕತೃವಾಗಿದ್ದ ಖಲ್ದೂನರು, ತೈಮೂರ್ನ ಭೇಟಿ ಸಮಯದಲ್ಲಿ ತನ್ನದಲ್ಲದ ಎರಡು ಗ್ರಂಥಗಳನ್ನು ಕೊಂಡೋಗಿದ್ದರು. ಒಂದು ಪವಿತ್ರ ಖುರ್ಆನ್, ಇನ್ನೊಂದು ಖಸೀದತುಲ್ ಬುರ್ದಾ ಆಗಿತ್ತು..! ತೈಮೂರ್ನ ಭೇಟಿ ವೇಳೆ ಈ ಎರಡೂ ಗ್ರಂಥಗಳನ್ನು ಖಲ್ದೂನ್ ಆತನ ಕೈಗಿತ್ತರು. ಖ್ಯಾತ ವಿಜ್ಞಾನಿ ಖಲ್ದೂನ್ರ ಭೇಟಿಯ ಬಳಿಕ ತಾನು ಕೊಟ್ಟ ಮಾತಿನಂತೆ ತೈಮೂರ್ ಬಗ್ದಾದ್ನಿಂದ ಮರಳಿದ.
ಚರಿತ್ರೆ ಅಲ್ಲೇ ಟರ್ನ್ ಹೊಡೆಯಿತು ನೋಡಿ.
ಸಾಮ್ರಾಜ್ಯ ಕಟ್ಟಲು ನೆತ್ತರು ಹರಿಸಿದ ತೈಮೂರ್ ಆ ಬಳಿಕ ಈ ಎರಡೂ ಗ್ರಂಥಗಳ ಪ್ರತಿಪಾದಕನಾದ. ಭಾರತದಲ್ಲಿ ಬಾಬರಿ ಮಸೀದಿ ಕಟ್ಟಿಸಿದ ಬಾಬರ್ ಗೊತ್ತಲ್ವಾ ನಿಮಗೆ..? ಇದೇ ತೈಮೂರ್ನ ವಂಶ ಪರಂಪರೆಯಲ್ಲಿ ಜನಿಸಿದವರು ಬಾಬರ್..!
*✍🏻ಟಿ.ಎಂ ಅನ್ಸಾರ್ ಸಅದಿ ತಂಬಿನಮಕ್ಕಿ*
Comments