Skip to main content

ಭಾಷಣ ಮಾಡದೆಯೇ ಭಾಷಣಗಾರನಾದ ಅ‌ಅ್‌ರಾಬಿ

ಭಾಷಣ ಮಾಡದೆಯೇ ಭಾಷಣಗಾರನಾದ ಅ‌ಅ್‌ರಾಬಿ

*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 553499119

   ▪ *ಎಲ್ಲರೂ*  ಭಾಷಣ ಮಾಡಿ ಜನರೆಡೆಯಲ್ಲಿ ಹೆಸರು ವಾಸಿಯಾಗುತ್ತಿರುವಾಗ ಏನೂ ತಿಳಿಯದ ಒಬ್ಬ ಗ್ರಾಮವಾಸಿ ಅ‌ಅ್‌ರಾಬಿಗೆ  ಹೆಸರುವಾಸಿಯಾಗಬೇಕೆಂಬ ಹಂಬಲವಾಯಿತು.
   ▪ *ಒಂದು* ದಿನ ತನ್ನ ಊರಿನಲ್ಲಿ ಜುಮಾಃ ನಮಾಝು ಕಳೆದ ಕೂಡಲೇ ಆತ ಎದ್ದುನಿಂತು ಹೇಳಿದ. *"ಜುಮಾಃ ನಮಾಝಿನಿ ದುಆ ಮುಗಿದ ನಂತರ ಯಾರೂ ಹೋಗಬಾರದು. ನನಗೆ ಒಂದು ಗಂಭೀರ ಭಾಷಣ ಮಾಡಲಿಕ್ಕಿದೆ."*
   ▪ *ನಮಾಝು* ಮುಗಿದ ನಂತರ ಯಾರೂ ಹೊರ ಹೋಗದೆ *ಅ‌ಅ್‌ರಾಬಿ* ಏನು ಭಾಷಣ ಮಾಡುತ್ತಾನೆಂದು ನೋಡಬೇಕೆಂದು ಬಹಳ ಕುತೂಹಲದಿಂದ ಎಲ್ಲರೂ ಕಾದು ಕುಳಿತರು.
   ▪ *ಭಾಷಣದ* ಪ್ರಾರಂಭದ ಬಿಸ್ಮಿ, ಹಂದ್, ಸ್ವಲಾತ್ ಮುಗಿದ ಕೂಡಲೇ ಅ‌ಅ್‌ರಾಬಿ ಹೇಳಿದ. *"ನಾನಿವತ್ತು ನಿಮ್ಮಲ್ಲಿ ಭಾಷಣ ಮಾಡುವ ವಿಷಯ ನಿಮಗೆ ಏನೆಂದು ಗೊತ್ತಿದೆಯಾ.?*" ಎಲ್ಲರೂ ಏಕ ಸ್ವರದಲ್ಲಿ ಹೇಳಿದರು. *"ಗೊತ್ತಿಲ್ಲ."*
   ▪ *"ಇಷ್ಟೊಂದು ಮಹತ್ವದ ವಿಷಯದಲ್ಲಿ ಭಾಷಣ ಮಾಡುವಾಗ ಅದರ ವಿಷಯ ಏನೆಂದು ತಿಳಿಯದ ನಿಮ್ಮಂತಹಾ ಮೂರ್ಖರಿಗೆ ನನ್ನಂತಹಾ ಬುದ್ದಿವಂತರು ಏನು ಭಾಷಣ ಮಾಡುವುದು.? ಸುಮ್ಮನೆ ಸಮಯ ಹಾಳು ಮಾಡಬೇಕಷ್ಟೆ."* ಎಂದು ಹೇಳಿ ಭಾಷಣ ಮಾಡದೆ ವೇದಿಕೆಯಿಂದ ಕೆಳಗಿಳಿದು ಹೋದನು.
 ‌ ▪ *ಎರಡನೆಯ* ಶುಕ್ರವಾರವೂ ಕಳೆದ ಶುಕ್ರವಾರದಂದು ಹೇಳಿದಂತೆಯೇ ಅ‌ಅ್‌ರಾಬಿ ಹೇಳಿದ. *"ಇವತ್ತು ಬಹಳ ಮುಖ್ಯವಾದ ಒಂದು ವಿಷಯದ ಬಗ್ಗೆ ನನಗೆ ಭಾಷಣ ಮಾಡಲಿಕ್ಕಿದೆ. ಯಾವತ್ತೂ ಕಳೆದ ವಾರದಂತೆ ಆಗದು. ಯಾರೂ ಹೋಗಬಾರದು"*
   ▪ *ಜುಮುಅಕ್ಕೆ* ಹಾಜರಾಗಿದ್ದ ಎಲ್ಲರೂ ಒಂದು ತೀರ್ಮಾನಕ್ಕೆ ಬಂದರು. *"ಇವತ್ತು ಈತನನ್ನು ಹೀಗೆಯೇ ಬಿಡಬಾರದು. ಈತ ಭಾಷಣ ಪ್ರಾರಂಭಿಸಿ ನಿಮಗೆ ವಿಷಯ ಗೊತ್ತಿದೆಯಾ ಎಂದು ಕೇಳಿದರೆ, ನಾವೆಲ್ಲರೂ "ಗೊತ್ತಿದೆ" ಎಂಬ ಉತ್ತರಕೊಟ್ಟು ಈತನಿಗೆ ಪಾಠ ಕಲಿಸಬೇಕು."*
   ▪ *ಅ‌ಅ್‌ರಾಬಿ* ಭಾಷಣ ಮಾಡಲು ವೇದಿಕೆ ಹತ್ತಿ ಪ್ರಾರಂಭದ ಮಾತುಗಳು ಮುಗಿದ ಕೂಡಲೇ ಕೇಳಿದ. *"ನಾನಿವತ್ತು ನಿಮ್ಮಲ್ಲಿ ಮಾಡುವ ಭಾಷಣದ ವಿಷಯವೇನೆಂದು ನಿಮಗೆ ಏನಾದರು ಗೊತ್ತಿದೆಯಾ..?"*
   ▪ *ಎಲ್ಲರೂ* ಒಟ್ಟಾಗಿ ಹೇಳಿದರು. *"ನಮಗೆ ಗೊತ್ತಿದೆ"* ಆಗ ಅ‌ಅ್‌ರಾಬಿಯು *"ಓಹೋ ಹಾಗೆಯಾ.. ಎಲ್ಲರಿಗೂ ಗೊತ್ತಿರುವ ಒಂದು ವಿಷಯದ ಬಗ್ಗೆ ನಾನ್ಯಾಕೆ ಮಾತನಾಡಬೇಕು.? ನನ್ನಂತಹಾ ಯಾವಾಗಲೂ ಬ್ಯುಸಿಯಿರುವ ಭಾಷಣಗಾರರು ಯಾಕೆ ಸಮಯ ಹಾಳುಮಾಡಬೇಕು.?"* ಎಂದು ಹೇಳಿ ವೇದಿಕೆಯಿಂದ ಹೊರಹೋದನು.
  ▪ *ಮೂರನೇ* ಶುಕ್ರವಾರವೂ ಅ‌ಅ್‌ರಾಬಿಯ ಈ ಖಾಯಿಲೆ ಗುಣವಾಗಿರಲಿಲ್ಲ. ಆದರೆ ಊರಿನ ಜನರು ಮೊದಲೇ ಒಂದು ತೀರ್ಮಾನಕ್ಕೆ ಬಂದಿದ್ದರು. "ಇವತ್ತು ಭಾಷಣ ಮಾಡಲು ನಿಂತು "ಗೊತ್ತಿದೆಯೇ" ಎಂದು ಕೇಳಿದರೆ, ಕೆಲವರು ಗೊತ್ತಿದೆಯೆಂದೂ, ಇನ್ನು ಕೆಲವರು ಗೊತ್ತಿಲ್ಲವೆಂದು ಹೇಳಿ ಈ ಸಲ ನಮಗೆ ಎರಡು ಬಾರಿ ಚಳ್ಳೆಹಣ್ಣು ತಿನ್ನಿಸಿ ನಮ್ಮನ್ನು ಮೂರ್ಖರನ್ನಾಗಿ ಮಾಡಿದ ಈತನಿಗೆ ಸರಿಯಾದ ಪಾಠ ಕಲಿಸಿ ಈತನ ಈ ಖಾಯಿಲೆಯನ್ನು ಗುಣಮಾಡಬೇಕೆಂದು ತೀರ್ಮಾನಿಸಿದರು.
   ▪ *ಮೂರನೇ* ಶುಕ್ರವಾರ ಅ‌ಅ್‌ರಾಬಿ ಎಂದಿನಂತೆ ವೇದಿಕೆ ಹತ್ತಿ ಭಾಷಣ ಶುರುಮಾಡಿದ. ಆರಂಭಿಕ ಮಾತುಗಳ ಬಳಿಕ *"ಮಾನ್ಯರೇ, ಕಳೆದ ಎರಡು ವಾರಗಳಲ್ಲಿ ನನ್ನಿಂದ ಏನಾದರೂ ತಪ್ಪು ಆಗಿದ್ದರೆ ನನಗೆ ಕ್ಷಮೆ ನೀಡಿ. ಇವತ್ತು ಹಾಗೆ ಆಗದು. ಏನಿದ್ದರೂ ಇವತ್ತು ನನ್ನ ವಿಷಯ ಕಳೆದ ಎರಡು ವಾರದ ಹಾಗಲ್ಲ. ಬಹಳ ಗಂಭೀರವಾದ ವಿಷಯ. ಆ ಬಗ್ಗೆ ನಿಮಗೆ ಏನಾದರೂ ಗೊತ್ತಿದೆಯಾ.?"* ಕೂಡಲೇ ಸಭಿಕರಲ್ಲಿ ಕೆಲವರು *"ಗೊತ್ತಿದೆ"* ಎಂದೂ ಮತ್ತೆ ಕೆಲವರು *" ಗೊತ್ತಿಲ್ಲ"* ಎಂಬ ಉತ್ತರ ಕೊಟ್ಟರು.
   ▪ *ಅ‌ಅ್‌ರಾಬಿಯು* "ನಿಮಲ್ಲಿ ಕೆಲವರಿಗೆ ಗೊತ್ತಿರುವುದಾದರೆ, ಗೊತ್ತಿಲ್ಲದವರಿಗೆ ಗೊತ್ತಿರುವವರು ಹೇಳಿಕೊಡಿ. ನನ್ನಂತಹಾ ಖ್ಯಾತ ಭಾಷಣಗಾರರು ಅನಗತ್ಯ ಮಾತನಾಡಿ ಸಮಯ ವ್ಯರ್ಥ ಮಾಡುವುದು ಯಾಕೆ.?" ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತ.
   ▪ *ಒಟ್ಟಿನಲ್ಲಿ* ಅ‌ಅ್‌ರಾಬಿ ಭಾಷಣ ಮಾಡದೆಯೇ ಜನರೆಡೆಯಲ್ಲಿ *ಭಾಷಣಗಾರ* ಎಂಬ ಬಿರುದಿಗೆ ಪಾತ್ರನಾದ.

 ಸಂಗ್ರಹ:  *ತ್ವರಾಯಿಫುಲ್ ಅರಬ್* ಎಂಬ ಗ್ರಂಥ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...