Skip to main content

ಹಝ್ರತ್ ಖಲಿರ್ (ಅ) ಒಂದು ತೋಟದಲ್ಲಿ ಕೆಲಸಕ್ಕೆ ನಿಂತಾಗ

ಹಝ್ರತ್ ಖಲಿರ್ (ಅ) ಒಂದು ತೋಟದಲ್ಲಿ ಕೆಲಸಕ್ಕೆ  ನಿಂತಾಗ

*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 553499119


    ▪ *ಒಮ್ಮೆ* ಹಝ್ರತ್ ಖಲಿರ್ (ಅ) ರವರು ಒಂದು ನದಿಯ ಕಿನಾರೆಯಲ್ಲಿ ಹಾದು ಹೋಗುತ್ತಿರುವಾಗ ಒಬ್ಬ ಬಡಪಾಯಿ ಭಿಕ್ಷುಕ ಬಂದು ಹೇಳಿದ. *"ದನಿಯವರೇ.., ನನಗೆ ಹಸಿವಾಗುತ್ತದೆ. ಊಟ ಮಾಡಲು ಹಣ ಇಲ್ಲ. ನನಗೆ ಏನಾದರು ಕೊಡಿ."* ಆಗ ಹಝ್ರತ್ ಖಲಿರ್ (ಅ) ರವರು *"ನನ್ನಲ್ಲಿ ನಿನಗೆ ಕೊಡಲು ಒಂದು ನಯಾ ಪೈಸೆ ಕೂಡ ಇಲ್ಲ. ಏನು ಮಾಡುವುದು..? ನನ್ನಲ್ಲಿರುವುದು ಈ ಶರೀರ ಮಾತ್ರ. ಬೇಕಾದರೆ ನನ್ನನ್ನು ಮಾರಾಟ ಮಾಡಿ ಅದರಿಂದ ಸಿಗುವ ಹಣ ತೆಗೆದುಕೊಳ್ಳು."* ಎಂದು ಉತ್ತರಿಸಿದರು.
   ▪ *ಭಿಕ್ಷುಕ* ಅವರನ್ನು ಬಹಳ ಸಂತೋಷದಿಂದ ದಾಸರನ್ನು ಮಾರಾಟ ಮಾಡುವ ಸಂತೆಯಲ್ಲಿ ಕೊಂಡುಹೋಗಿ ಒಬ್ಬ ರೈತನಿಗೆ ಒಳ್ಳೆಯ ಬೆಲೆಗೆ ಮಾರಾಟ ಮಾಡಿ ಹಣ ಜೇಬಿನಲ್ಲಿ ಹಾಕಿ ಅವನ ಮನೆಯತ್ತ ನಡೆದನು.
   ▪ *ಇತ್ತ* ರೈತನಾದ ಮಾಲಿಕನು ಅವರನ್ನು ತನ್ನ ತೋಟದ ಕೆಲಸಕ್ಕೆ ನೇಮಕ ಮಾಡಿದನು. ನಿಜವಾಗಿ ಅವನಿಗೆ ಇದು ಒಬ್ಬ ಪ್ರವಾದಿಯೆಂದು ತಿಳಿದಿರಲಿಲ್ಲ. ಹಝ್ರತ್ ಖಲಿರ್ (ಅ) ರವರು ತೋಟ ಮತ್ತು ಗದ್ದೆಯಲ್ಲಿ ಬಹಳ ಕಠಿಣವಾದ ಕೆಲಸಗಳನ್ನು ಯಾವುದೇ ಒತ್ತಡವಿಲ್ಲದೆ ಬಹಳ ಚೆನ್ನಾಗಿ ಮಾಡುತ್ತಿದ್ದರು. ಹೀಗಿರುವಾಗ ಒಂದು ದಿನ ಅವರ ಚಲನವಲನಗಳಲ್ಲಿ ಸಂಶಯಗೊಂಡ ಯಜಮಾನ ಅವರಲ್ಲಿ ಕೇಳಿದ. *"ನೀವು ಯಾರು..? ನಿಮ್ಮ ಹೇಸರೇನು..?"* ಆಗ ಹಝ್ರತ್ ಖಲಿರ್ (ಅ) ಹೇಳಿದರು. *"ನನ್ನ ಹೆಸರು ಖಲಿರ್."* ಆಗ ಮಾಲಿಕ ಕೇಳಿದ. *"ಯಾವ ಖಲಿರ್..? ಪ್ರವಾದಿ ಖಲಿರಾ..?"* *"ಹೌದು. ಅದೇ ಖಲಿರ್"* ಎಂದು ಉತ್ತರಿಸಿದರು.
    ▪ *"ಸುಬ್‌ಹಾನಲ್ಲಾಹ್* ಈ ವಾರ್ತೆ ಕೇಳಿದಾಕ್ಷಣ ಯಜಮಾನನು ಅಲ್ಲಾಹನಿಗೆ ಒಂದು ಸುಜೂದು ಮಾಡಿ ಅವರಲ್ಲಿ ಹೇಳಿದನು. *"ನನಗೆ ನೀವು ಖಲಿರ್ ಎಂದು ಗೊತ್ತಿರಲಿಲ್ಲ‌. ಈಗಲೇ ನಿಮ್ಮನ್ನು ಸ್ವತಂತ್ರ ಮಾಡಿದ್ದೇನೆ."*

ಸಂಗ್ರಹ ; ಇಮಾಮ್ ಸ್ವಫೂರಿಯ ನುಝ್‌ಹತುಲ್ ಮಜಾಲಿಸ್ ಎಂಬ ಗ್ರಂಥ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...