Skip to main content

ಮೂರ್ಛೆತಪ್ಪಿ ಕುಸಿದು ಬಿದ್ದ ಇಮಾಮ್ ದಾವೂದ್ ಅತ್ವಾಯೀ (ರ)

ಮೂರ್ಛೆತಪ್ಪಿ ಕುಸಿದು ಬಿದ್ದ ಇಮಾಮ್ ದಾವೂದ್ ಅತ್ವಾಯೀ (ರ)

*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 5534991199


▪ *ಪ್ರಖ್ಯಾತ* ಪಂಡಿತ ಮತ್ತು ಸೂಫಿವರ್ಯರಾದ ಶೈಖ್ ದಾವೂದ್ ಅತ್ವಾಯೀ (ರ) ರವರು ಒಮ್ಮೆ ಒಂದು ದಾರಿಯಾಗಿ ಹೋಗುತ್ತಿರುವಾಗ ಥಟ್ಟನೆ ಮೂರ್ಛೆತಪ್ಪಿ ಕುಸಿದು ಬಿದ್ದರು. ನಂತರ ಅವರ ಸಂಗಡಿಗರು ಅವರನ್ನು ಅವರ ಮನೆಗೆ ಎತ್ತಿಕೊಂಡು ಹೋದರು. ಸ್ವಲ್ಪ ಕಳೆದು ಮೂರ್ಛೆ ಮರಳಿ ಬಂದಾಗ ಅಲ್ಲಿ ನೆರೆದಿದ್ದವರಲ್ಲಿ ಒಬ್ಬರು ಮೂರ್ಛೆ ತಪ್ಪಿಹೋದ ಕಾರಣವೇನೆಂದು ಇಮಾಮರಲ್ಲಿ ಕೇಳಿದರು. ಇಮಾಮ್ ದಾವೂದ್ ಅತ್ವಾಯೀ (ರ) ಹೇಳಿದರು. *"ಏನಿಲ್ಲ. ಕೆಲವು ವರ್ಷಗಳ ಮುಂಚೆ ನನ್ನ ಬದುಕಿನಲ್ಲಿ ಒಮ್ಮೆ ಆ ಜಾಗದಲ್ಲಿ ಕುಳಿತು ಒಬ್ಬರನ್ನು  "ಗೀಬತ್" (ಹಿಂದಿನಿಂದ ದೂರುವುದು) ಹೇಳಿದ್ದೆನು. ಇವತ್ತು ನಾನು ಆ ಜಾಗ ತಲುಪಿದಾಗ ಅದರ ನೆನಪಾಗಿ ನಾಳೆ ಪರಲೋಕದಲ್ಲಿ ಅಲ್ಲಾಹುವಿನ ಸನ್ನಿಧಿಯಲ್ಲಿ ವಿಚಾರಣೆ ಮಾಡುವಾಗ ಈ ತಪ್ಪಿಗೆ ಹೇಗೆ ಉತ್ತರ ಕೊಡುವುದು ಎಂಬ ಹೆದರಿಕೆ ಬಂದಾಗ ತಾನರಿಯದೆಯೇ ಮೂರ್ಛೆತಪ್ಪಿ ಬಿದ್ದೆನು."*
   ▪ *ಇಮಾಮ್* ಹಸನುಲ್ ಬಸ್ವರೀ (ರ) ರನ್ನು ಒಬ್ಬರು ಹಿಂದಿನಿಂದ *ಗೀಬತ್* ಹೇಳಿದರು. ಗೀಬತ್ ಹೇಳಿದ ವಿಷಯ ಇಮಾಮರಿಗೆ ತಿಳಿದಾಗ ಗೀಬತ್ ಹೇಳಿದ ವ್ಯಕ್ತಿಗೆ ಬಹಳ ಉತ್ತಮ ದರ್ಜೆಯ ಒಂದು ಪೆಟ್ಟಿಗೆ ಖರ್ಜೂರ ಉಡುಗೊರೆಯಾಗಿ ಕೊಟ್ಟು ಕಳುಹಿಸಿದರು.
   ▪ *ತಪ್ಪು* ಮಾಡಿದ ವ್ಯಕ್ತಿಗೆ ಹದಿಯ ಕಳುಹಿಸಿದ ವಿಷಯ ಜನರು ತಿಳಿದಾಗ ಅದರ ಕಾರಣವೇನೆಂದು ಇಮಾಮ್ ಹಸನುಲ್ ಬಸ್ವರೀ (ರ) ರಲ್ಲಿ ಕೇಳಿದಾಗ ಇಮಾಮರು ಹೇಳಿದರು. *"ಅವನು ನನ್ನನ್ನು ಗೀಬತ್ ಹೇಳಿದಾಗ ಅವನ ಮಾಡಿದ ಸತ್ಕರ್ಮದಿಂದ ಒಂದು ಪಾಲು ನನ್ನ ಖಾತೆಗೆ ಖಾತ್ರಿ (Credit) ಆಗಿದೆ. ಅದಕ್ಕೋಸ್ಕರ ಅದಕ್ಕೆ ಬದಲಾಗಿ ಅವನಿಗೂ ನನ್ನ ಪರವಾಗಿ ಒಂದು ಕಾಣಿಕೆ ಇರಲಿ ಎಂದು ಆ ಉಡುಗೊರೆಯನ್ನು ಕಳುಹಿಸಿದೆನು"*
   ▪ *"ಗೀಬತ್* ಹೇಳುವವರು ಮತ್ತು ಚಾಡಿಹೇಳಿ ಪರಸ್ಪರ ಭಿನ್ನತೆ ಮಾಡುವವರು (ನಮೀಮತ್) ನರಕದ ಕೋತಿಗಳಾಗಿರುತ್ತಾರೆ. ಅಂತೆಯೇ ಸುಳ್ಳು ಹೇಳುವವನು ನರಕದ ನಾಯಿಯೂ ಅಸೂಯೆಗಾರನು ನರಕದಲ್ಲಿ ಹಂದಿಯೂ ಆಗಿರುತ್ತಾನೆ." ಎಂದು ಇಮಾಮ್ ಹಾತಿಮ್ ಅಲ್ ಅಸ್ವಮ್ಮ್ (ರ) ಹೇಳಿರುತ್ತಾರೆ.

ಸಂಗ್ರಹ; ಇಮಾಮ್ ಸ್ವಫೂರಿಯ *ನುಝ್‌ಹತುಲ್ ಮಜಾಲಿಸ್* ಎಂಬ ಗ್ರಂಥ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...