Skip to main content

ದುಬೈ ಪೋಲಿಸ್ ಮೇಧಾವಿ ಶೈಖುನಾ ಕಾಂತಪುರಂ ಉಸ್ತಾದರ ಕಾಣಲು ಬಂದಾಗ..

ದುಬೈ ಪೋಲಿಸ್ ಮೇಧಾವಿ ಶೈಖುನಾ ಕಾಂತಪುರಂ ಉಸ್ತಾದರ ಕಾಣಲು ಬಂದಾಗ...!!


✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ ಸೂಜಾಶರೀಫ್, ‌ರಾಜಸ್ಥಾನ್

     ದಾಈ ಖಲ್ಫಾನ್ ದುಬೈ ಪೋಲೀಸ್ ಪ್ರಮುಖ ಮೇಧಾವಿ. ಯು‌‌.ಎ.ಈಯ ಅತಿ ಪ್ರಮುಖ ಉದ್ಯೋಗಿ. 28 ಲಕ್ಷ ಜನ ಟ್ವಿಟ್ಟರ್ ನಲ್ಲಿ ಬೆಂಬಲಿಗರು(Fans) ಇರುವ ಖಲ್ಫಾನ್ ವಿಭಿನ್ನ, ವ್ಯತಿರಿಕ್ತ, ಜನಪ್ರಿಯ ಸಂಬಂಧಿಸುವಿಕೆ‌, ಹಸ್ತಕ್ಷೇಪ ಜಗತ್ತಿನಲ್ಲೇ ಅತಿ ಸುಪ್ರಸಿದ್ಧವಾಗಿದೆ. ಎಲ್ಲರನ್ನೂ ಚಕಿತಗೊಳಿಸುತ್ತೆ‌ ಇವರ ವ್ಯಕ್ತಿತ್ವ. ಈ ಮನುಷ್ಯನ ಮನಸ್ಸು ಮಲೆಯಾಳಿ ಜನತೆಯ ಮನ ಮೆಚ್ಚಿದ ದಿನವೊಂದಿದೆ. ದಾಈ ಖಲ್ಫಾನ್ ತಂದೆ ಖಲ್ಫಾನ್ ತಮೀಮ್ 20 ವರ್ಷ ಮುಂಚೆ ಸ್ಥಾಪಿಸಿದ ಸಂಸ್ಥೆಯಾಗಿದೆ ಕೊಯಿಲಾಂಡಿಯ ಖಲ್ಫಾನ್ ಇಸ್ಲಾಮಿಕ್ ಸೆಂಟರ್. ಮರ್ಕಝ್ ಅಧೀನದಲ್ಲಿರುವ ಈ ಸಂಸ್ಥೆಯಲ್ಲಿ ಹಿಫ್ಲುಲ್ ಖುರ್'ಆನ್ ಹಾಗೂ ಶರೀಅತ್ ಕಾಲೇಜು ನಡೆಯುತ್ತಿದೆ.

2018 ರ ಎಪ್ರಿಲ್ ತಿಂಗಳಲ್ಲಿ ಈ ಮಹಾ ವ್ಯಕ್ತಿತ್ವ(ಖಲ್ಫಾನ್) ಕೇರಳ ಸಂದರ್ಶಿಸಿದರು. ತಂದೆ ಸ್ಥಾಪಿಸಿದ ಸಂಸ್ಥೆ ಕಾಣಲು, ‌ಅಲ್ಲಿ ಕಲಿಯುವ ಮುದ್ದು ಮಕ್ಕಳ ಕಾಣಲು, ಅವರ ಪ್ರಾರ್ಥನೆಗಳಲ್ಲಿ ಭಾಗಿಯಾಗಲು ಆಗಿತ್ತು ಆ ಭೇಟಿ. ಆದರೆ ಯಾರಿಗೂ ತಿಳಿಸದೆ Surprising ಆಗಿಯಾಗಿತ್ತು ಖಲ್ಫಾನ್ ಅತ್ತ‌ ತಲುಪಿದ್ದು. ಕೊಯಿಲಾಂಡಿ ಸಂಸ್ಥೆಗೆ ಬಂದು ತಲುಪಿದಾಗ ವಿವಿಧ ಬ್ಯಾಚುಗಳಾಗಿ ಮಕ್ಕಳು ಅಚ್ಚುಕಟ್ಟಾಗಿ, ಶಿಸ್ತಿನಿಂದ ಕುಳಿತು ಖುರ್'ಆನ್ ಕಂಠಪಾಠ ಮಾಡುತ್ತಿದ್ದ ಅಪೂರ್ವ ದೃಶ್ಯವಾಗಿತ್ತು ಕಾಣಲು ಸಾಧ್ಯವಾಗಿದ್ದು. ಮತ್ತೊಂದು ಕಡೆ ಶುಭ್ರವಸ್ತ್ರಧಾರಿಗಳಾದ ಮುತ'ಅಲ್ಲಿಂ ವಿದ್ಯಾರ್ಥಿಗಳು ಹದೀಸ್ ಕಿತಾಬ್ ತೆರೆದು ಹದೀಸ್ ಕಲಿಯುತ್ತಿದ್ದ ದೃಶ್ಯ. ‌ದಾಈ ಖಲ್ಫಾನ್ ರ ಮನ ತುಂಬಿಸಿತು ಈ ದೃಶ್ಯ, ಇದೆಲ್ಲಾ ಕಣ್ಣಾರೆ ಕಂಡಾಗ ತನ್ನ ತಂದೆಯ ಪರಲೋಕ ಜೀವನ ಖಂಡಿತಾ ಪ್ರಕಾಶಮಯವಾಗಲಿದೆ ಎಂಬ ಭಾವ ಉಂಟಾಯಿತು ಖಲ್ಫಾನ್ ರ ಮನದಲ್ಲಿ.

ನಂತರ ಮರ್ಕಝ್ ತಲುಪಿದ ಖಲ್ಫಾನ್ ಶೈಖುನಾ ಕಾಂತಪುರಂ ಉಸ್ತಾದ್ ಹಾಗೂ ಉಸ್ತಾದರ ನೇತೃತ್ವದ ಮರ್ಕಝ್ ಸಾರಥಿಗಳು ತನ್ನ ಸ್ವೀಕರಿಸಿದ ರೀತಿ ಕಂಡು ಮನಸೋತರು. ಅದ್ದೂರಿಯ ಸ್ವಾಗತ ನೀಡಿ ಖಲ್ಫಾನ್ ರನ್ನು ಬರಮಾಡಿಕೊಳ್ಳಲಾಯಿತು‌‌. ನಂತರ ಸಾವಿರಾರು ವಿದ್ಯಾರ್ಥಿಗಳ ಸಮ್ಮುಖದಿ ನಡೆದ ಕಾರ್ಯಕ್ರಮದಲ್ಲಿ ಮರ್ಕಝ್ ಕುರಿತು ಮಾತನಾಡಿದ ಡಾ.ಹುಸೈನ್ ಸಖಾಫಿ ಚುಳ್ಳಕ್ಕೋಡ್ ಉಸ್ತಾದರು ನಡೆಸಿದ ಭಾಷಣ ಕೇಳಿ‌ ಸ್ಥಂಭೀ ಭೂತನಾದರು. ಆ ಭಾಷಣದಲ್ಲೇ ಅಂತರ್ಲೀಣವಾಗಿ ಹೋದರು ಖಲ್ಫಾನ್. ಒಂದೇ ಒಂದು ಸಮಯ ಮರ್ಕಝಿನ ವೈಪುಲ್ಯದಲ್ಲಿ ಉಂಟಾದ ಅತಿಶಯೋಕ್ತಿಯೊಂದಿಗೆ ಡಾ.ಹುಸೈನ್ ಸಖಾಫಿ ಚುಳ್ಳಿಕ್ಕೋಡ್ ಉಸ್ತಾದರ ಅರಬಿ ಭಾಷೆಯಲ್ಲಿರುವ ನೈಪುಣ್ಯತೆ ಖಲ್ಫಾನ್ ರನ್ನು ಇನ್ನಷ್ಟು ವಿಸ್ಮಯಗೊಳಿಸಿತು. ಆ‌ ಭಾಷಣ ಕೊನೆಗೊಂಡಾಗ ಪೀಠದತ್ತ ಬಂದು ಹುಸೈನ್ ಸಖಾಫಿ ಉಸ್ತಾದರ ಆಲಿಂಗನ ಮಾಡಿ ಹೇಳಿದರು "ಅರಬಿ ಸ್ವದೇಶಿಗಳಾದ ನಮಗೂ ಇಷ್ಟು ಚೆನ್ನಾಗಿ, ನಿರರ್ಗಳವಾಗಿ,‌ ಸಾಹಿತ್ಯಿಕವಾಗಿ ಮಾತನಾಡಲು ಸಾಧ್ಯವಿಲ್ಲ."

ಎಲ್ಲದಕ್ಕೂ ಸಾಕ್ಷಿಯಾಗಿ ಶೈಖುನಾ ಕಾಂತಪುರಂ ಉಸ್ತಾದ್ ಸಮೀಪದಲ್ಲೇ ಇದ್ದರು. ಉಸ್ತಾದರೊಂದಿಗೆ ದಾಈ ಖಲ್ಫಾನ್ ಹೇಳುತ್ತಾರೆ "ತಾವು ಕಟ್ಟಿ ಬೆಳೆಸಿದ ಜ್ಞಾನ ಸಾಮ್ರಾಜ್ಯ ಅದರ ಮಹತ್ವ ನಾನು ಬಹುತೇಕ ಆಳದಲ್ಲಿ ಮನದಟ್ಟು ಮಾಡುವೆನು. ಅದರ ಮನಮೋಹಕ, ಕೌತುಕಪಡಿಸುವ ಸುಂದರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾದ ಈ ಕಟ್ಟಡಗಳು ಮಾತ್ರವಲ್ಲ, ಜ್ಞಾನ ತಾರೆಗಳಾಗಿ ನೆಲಗೊಂಡ ಇಂದು ವಿಭಿನ್ನ ಕಡೆ, ವಿಭಿನ್ನ ಕ್ಷೇತ್ರದಿ ಕಾರ್ಯನಿರ್ವಹಿಸುತ್ತಿರುವ ಹತ್ತು ಸಾವಿರಕ್ಕೂ ಮಿಕ್ಕ ಸಖಾಫಿ ವಿದ್ವಾಂಸರಾಗಿದ್ದಾರೆ ತಮ್ಮ ಅತ್ಯಮೂಲ್ಯ ನಿಧಿಗಳು, ತಮ್ಮ ಸಂಪತ್ತು, ಆಸ್ತಿ ಎಲ್ಲವೂ ಅವರಾಗಿದ್ದಾರೆ. ಇಹಲೋಕ-ಪರಲೋಕಕ್ಕೂ ವಿವರಿಸಲಾಧ್ಯ, ಇಂತಿಷ್ಟು ಸೀಮಾ ರೇಖೆಯಿಲ್ಲದೆ ಸಂಪಾದಿಸಿದ ತಮ್ಮಷ್ಟು ಭಾಗ್ಯವಂತರು ಇನ್ಯಾರಿದ್ದಾರೆ...

ಅಲ್ಲಾಹು ಶೈಖುನಾ ಉಸ್ತಾದರಿಗೆ ಪರಮಾರೋಗ್ಯದೊಂದಿಗೆ ದೀರ್ಘಾಯುಷ್ಯ ನೀಡಿ ಅನುಗ್ರಹಿಸಲಿ, ‌ಆಮೀನ್..🤲🏻

ಮೂಲ: ಮಲಯಾಳಂ

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...